ಬಜೆ ಹಿನ್ನೀರು ಬಳಕೆ ನಿರ್ಬಂಧ: ರೈತ ಕಂಗಾಲು


Team Udayavani, Feb 16, 2019, 12:35 AM IST

baje.jpg

 ವಿಶೇಷ ವರದಿ – ಮಣಿಪಾಲ: ಉಡುಪಿ ನಗರಕ್ಕೆ ನೀರುಣಿಸುವ ಬಜೆ ಅಣೆಕಟ್ಟಿನ ಹಿನ್ನೀರನ್ನು ಬಳಸುವ ರೈತರು ಮಾತ್ರ ಜಿಲ್ಲಾಡಳಿತದ ನೀರು ಬಳಕೆ ನಿರ್ಬಂಧ ದಿಂದ ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಣೆಕಟ್ಟಿ ನಿಂದಾಗುವ ನೆರೆಯಿಂದಾಗಿ ಕಾರ್ತಿ ಬೆಳೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಕೊಳಕೆ ಬೆಳೆಯನ್ನಾದರೂ ಮಾಡಿ ಬದುಕು ಸಾಗಿಸುತ್ತಿರುವ ಇಲ್ಲಿನ ರೈತರಿಗೆ, ಭತ್ತ ಹಾಳಾಗುವ ಈ  ಕಾಲದಲ್ಲಿ ಪಂಪ್‌ ಮೂಲಕ ಸ್ವರ್ಣೆಯ ಹಿನ್ನೀರಿನ ಬಳಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದರಿಂದ ಬೆಳೆ ಕರಟುವ ಭೀತಿ ಎದುರಾಗಿದೆ. ಫೆಬ್ರವರಿ ಕೊನೆಯವರೆಗಾದರೂ ನೀರು ಕೊಡಿ ಎಂದು ಅಂಗಲಾಚುತ್ತಿರುವ ರೈತರ ಮೊರೆಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ವಿಪರ್ಯಾಸ. ಜತೆಗೆ ತೆಂಗು, ಕಂಗು, ಬಾಳೆ, ತರಕಾರಿ ಸಹಿತ ಉಪಬೆಳೆಗಳೂ ಒಣಸುವ ಭೀತಿ ಎದುರಾಗಿದೆ. 

ಯಾವಾಗಿನಿಂದ ಸಮಸ್ಯೆ?
ಉಡುಪಿ ನಗರಕ್ಕೆ ನೀರು ಪೂರೈಸಲು ಸ್ವರ್ಣಾ ನದಿಗೆ ಬಜೆ ಎಂಬಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಅದು 1974ರಿಂದ 
ಆರಂಭಗೊಂಡಿತ್ತು. ಇದಕ್ಕಿಂತ ಮೊದಲು ಇಲ್ಲಿನ ರೈತರು ಪ್ರಕೃತಿದತ್ತ ಸ್ವರ್ಣೆಯ  ಹಿನ್ನೀರಿನಿಂದ ಕೃಷಿ ಮಾಡುತ್ತಿದ್ದರು. ಅಣೆಕಟ್ಟಿನ ಬಳಿಕ ನೀರನ್ನು ಪಂಪ್‌ ಮಾಡಿ ಕೃಷಿಗೆ ಬಳಸಲಾಗು ತ್ತಿದೆ. ಬಜೆ 2ನೇ ಹಂತ 2003-04 ರಿಂದ ಆರಂಭಿಸಿದ್ದು 2007ರಲ್ಲಿ ಇದು ಕಾರ್ಯಾರಂಬಿಸಿತ್ತು. ಉಡುಪಿ ನಗರಕ್ಕೆ ನೀರಿನ ಕೊರತೆ ಉಂಟಾಗುವ ಹಿನ್ನೆಲೆಯಲ್ಲಿ ಜನವರಿ ಬಳಿಕ ಪಂಪ್‌ ಮೂಲಕ ಕೃಷಿಗೆ ನೀರನ್ನು ತೆಗೆಯದಂತೆ ಕೃಷಿಕರಿಗೆ 2007ರಲ್ಲಿ ಆದೇಶಿಸಲಾಗಿತ್ತಾದರೂ ಈ ವರ್ಷ ಫೆಬ್ರವರಿ ಮೊದಲ ದಿನವೇ ಪಂಪ್‌ಸೆಟ್‌ಗೆ ವಿದ್ಯುತ್‌ ಸ್ಥಗಿತಗೊಳಿಸಲಾಗಿದೆ. 

ಪಂಪ್‌ ಸೆಟ್‌ಗೆ ವಿದ್ಯುತ್‌ ಕಡಿತ 
ಬಜೆ ಹಿನ್ನೀರಿನ ಆಶ್ರಯದಲ್ಲಿ ಸುಮಾರು 180 ಎಕರೆ ಭತ್ತ ಕೃಷಿ ಇದ್ದು ಫೆಬ್ರವರಿಯಲ್ಲಿ ಭತ್ತದಲ್ಲಿ ಹಾಲು ಆಗುವ ಸಮಯವಾಗಿದೆ. ಆದರೆ ಫೆಬ್ರವರಿ ಆರಂಭದಲ್ಲೇ ಪಂಪ್‌ಸೆಟ್‌ಗಳಿಗೆ ನೀಡಲಾಗಿರುವ ತ್ರೀ ಫೇಸ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ನೀರನ್ನೇ ಅವಲಂಭಿಸಿದ್ದ ಕೃಷಿಕರ ಗದ್ದೆಗಳು ಒಣಗಲು ಆರಂಭಿಸಿದ್ದು ಫ‌ಸಲು ಬರುವಾಗಲೇ ಕರಟಲು ಆರಂಭಿಸಿದೆ. ಫೆಬ್ರವರಿ ಕೊನೆಯವರೆಗಾದರೂ ನೀರು ಕೊಟ್ಟು ನಮ್ಮ ಬೆಳೆ ಉಳಿಸಿ ಎಂಬ ರೈತರ ಬೇಡಿಕೆಗೆ ಅಧಿಕೃತರಿಂದ ಯಾವ ಸ್ಪಂದನೆಯೂ ದೊರೆತಿಲ್ಲ.

ಕಾರ್ತಿ ಇಲ್ಲ; ಕೊಳಕೆಯೂ ನಷ್ಟ!
ಮಳೆಗಾಲದಲ್ಲಿ ಡ್ಯಾಂ ನೀರು ಗದ್ದೆ ಮತ್ತು ಕೆಲವರ ಮನೆವರೆಗೆ ತುಂಬುವುದರಿಂದ ಈ ಅಚ್ಚುಕಟ್ಟು ಪ್ರದೇಶದಲ್ಲಿ ಕಾರ್ತಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಇಲ್ಲಿನ ರೈತರು ಅನಿವಾರ್ಯವಾಗಿ ಹಿನ್ನೀರಿನಿಂದ ಕೊಳಕೆ  ಬೆಳೆ ಮಾಡಿಕೊಳ್ಳುತ್ತಿದ್ದಾರೆ. ಈಗ ಪಂಪ್‌ಸೆಟ್‌ಗೆ ವಿದ್ಯುತ್‌ ಸ್ಥಗಿತಗೊಳಿಸಿದ್ದರಿಂದ ಕೊಳಕೆಯೂ ಒಣಗುತ್ತಿದೆ. ಒಟ್ಟಿನಲ್ಲಿ ಉಡುಪಿಗೆ ನೀರು ಸಿಗುವುದಕ್ಕಾಗಿ ಕಾರ್ತಿ ಬೆಳೆ ತ್ಯಾಗ ಮಾಡಿದ ಇಲ್ಲಿನ ರೈತರಿಗೆ ಈಗ ಕೊಳಕೆಯೂ ಮಾಡದಂತಾಗಿದೆ.

ಬದಲಿ ವ್ಯವಸ್ಥೆ ಇಲ್ಲ
ಹಿನ್ನೀರನ್ನು ಬಳಸುತ್ತಿರುವ ರೈತರಿಗೆ ಕೃಷಿಗೆ ಬಾವಿ, ಕೆರೆ ಅಥವಾ ಬೇರೆ ನೀರಿನ ವ್ಯವಸ್ಥೆ ಇಲ್ಲ. ಹೆಚ್ಚುವರಿ ಬಾವಿ ತೋಡಲು ಖರ್ಚು ಮಾಡುವಷ್ಟು ಅನುಕೂಲವೂ ರೈತರಿಗೆ ಇಲ್ಲ. ಸರಕಾರ ನೀಡುವ ನೆರವು ವಾಸ್ತವದಲ್ಲಿ ಅನುಷ್ಠಾನಕ್ಕೆ ಸಾಲದು. ಬೆಳೆ ನಷ್ಟವಾದರೆ ಸಾಲ ಶೂಲದಲ್ಲಿರುವ ರೈತರ ಸ್ಥಿತಿ ಮತ್ತಷ್ಟು ಕಂಗೆಡಲಿದೆ. 

ಡ್ಯಾಂನಿಂದ ನೀರು ಸೋರಿಕೆ 
ಮೊದಲ ಹಂತದ ಡ್ಯಾಂನಲ್ಲಿ ಒಂದು ಗೇಟ್‌ ಮುರಿದಿದ್ದರಿಂದ ಡಿಸೆಂಬರ್‌ ವರೆಗೂ ನೀರು ಪೋಲಾಗುತ್ತಿತ್ತು. ಬಳಿಕ ಅಲ್ಲಿ ಮರಳಿನ ಗೋಣಿ ಚೀಲಗಳನ್ನು ಹಾಕಿದ್ದು ಅದರಲ್ಲೂ ನೀರು ಸೋರಿ ಪೋಲಾಗುತ್ತಿದೆ. ಇದು ನಿರ್ವಹಣೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಇದನ್ನು ತಡೆಯದ ಅಧಿಕಾರಿಗಳು  ತಮಗೆ ನೀರು ಬಳಸಲು ತಡೆಯೊಡ್ಡುತ್ತಿದ್ದಾರೆ. 

ಸ್ಪಂದಿಸಿ 
ಫೆಬ್ರವರಿ ಕೊನೆಯ ವರೆಗಾದರೂ ನೀರು ಕೊಟ್ಟರೆ ಬೆಳೆ ಉಳಿಯಬಹುದು. ಕನಿಷ್ಠ ಎರಡು ದಿನವಾದರೂ ನೀರು ಕೊಡಬೇಕು. ಜಿಲ್ಲಾಡಳಿತ ಮಾನವೀಯ ಅಂತಃಕರಣದಿಂದ ಸ್ಪಂದಿಸಬೇಕು.
– ನಾರಾಯಣ ಪೂಜಾರಿ, ಹಿನ್ನೀರಿನ ಕೃಷಿಕ, ಗ್ರಾ.ಪಂ. ಸದಸ್ಯ

ಟಾಪ್ ನ್ಯೂಸ್

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.