ಹೊಳೆಗಳಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ


Team Udayavani, Feb 17, 2019, 12:30 AM IST

1502kpt1e-1.jpg

ಕಟಪಾಡಿ: ಪಾಪನಾಶಿನಿ, ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಕಟಪಾಡಿ, ಕೋಟೆ, ಉದ್ಯಾವರ, ಕುರ್ಕಾಲು, ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.  

ಈ ಹೊಳೆಗಳಲ್ಲಿ ಸಮುದ್ರದಿಂದ ಒಳನುಗ್ಗುವ ಉಪ್ಪುನೀರು ಇದ್ದು, ಪರಿಸರದಲ್ಲೂ ಸಿಹಿ ನೀರು ಅಲಭ್ಯತೆ ಇದೆ. ಸೂಕ್ತವಾದ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಿದಲ್ಲಿ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂಬ ಜನಾಭಿಪ್ರಾಯಕ್ಕೂ ಮನ್ನಣೆ ಸಿಗದೆ ಯೋಜನೆಗಳು ಕಾರ್ಯರೂಪಕ್ಕಿಳಿಯುತ್ತಿಲ್ಲ. 

ಕಟಪಾಡಿ ಗ್ರಾ.ಪಂ. 
ಯೇಣಗುಡ್ಡೆ, ಮೂಡಬೆಟ್ಟು ಗ್ರಾಮಗಳನ್ನೊಳ ಗೊಂಡ ಕಟಪಾಡಿ ಗ್ರಾ.ಪಂ.ನಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸುವುದು ಮಾಮೂಲಿಯಾಗಿದೆ.  ಬೇಸಗೆಯಲ್ಲಿ ಪಡುಏಣಗುಡ್ಡೆ, ಜೆ.ಎನ್‌.ನಗರ, ಕಜಕೊಡೆ, ನಾಯ್ಕರ ತೋಟ, ಚೊಕ್ಕಾಡಿ, ದುರ್ಗಾನಗರ, ಶಿವಾನಂದ ನಗರ, ವಿದ್ಯಾನಗರ, ಸರಕಾರಿಗುಡ್ಡೆ, ಪೊಸಾರ್‌ ಕಂಬಕಟ್ಟ, ಸಾಣತೋಟ, ಗೋಕುಲ ಪ್ರದೇಶಗಳು ನೀರಿನ ಸಮಸ್ಯೆ ಹೆಚ್ಚಾಗಿ ಕಾಡುವ ಭಾಗಗಳಾಗಿವೆ. ಇಲ್ಲೆಲ್ಲ ಟ್ಯಾಂಕರ್‌ ನೀರು ಪೂರೈಕೆಗೆ ಈಗ ಪಂಚಾಯತ್‌ ಸಿದ್ಧಗೊಳ್ಳುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಎಸ್‌.ವಿ.ಎಸ್‌. ಶಾಲೆಯ ಬಳಿ ಕೊಳವೆ ಬಾವಿ ರಚಿಸಲಾಗಿದೆ. ಗರಡಿ ರಸ್ತೆ ಬಳಿ 1 ಕೊಳವೆ ಬಾವಿ ರಚಿಸಲಾಗಿದೆ. ಶಂಕರಪುರ ಎಸ್‌ ಸಿ ಕಾಲನಿಯಲ್ಲಿ ಕೊಳವೆ ಬಾವಿ ಹಾಗೂ ಟ್ಯಾಂಕ್‌ ರಚನೆ ಮಾಡಲಾಗಿದೆ. ಚೊಕ್ಕಾಡಿ ಪ್ರದೇಶಕ್ಕೆ ಕೊಳವೆ ಬಾವಿ, ಪೈಪ್‌ಲೈನ್‌ ವಿಸ್ತರಣೆ, ದುರ್ಗಾನಗರದಲ್ಲಿ ಹೆಚ್ಚುವರಿ ಕೊಳವೆ ಬಾವಿ ತೋಡಲಾಗಿದೆ. 

ಕೋಟೆ ಗ್ರಾ.ಪಂ.  
ಮಟ್ಟು ಮತ್ತು ಕೋಟೆ ಎಂಬ 2 ಗ್ರಾಮಗಳಿರುವ ಈ ಗ್ರಾ.ಪಂ.ನಲ್ಲಿ ಉಪ್ಪು ನೀರಿನ ಬಾಧೆ ಇದೆ. ಇಲ್ಲಿನ ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೆ„ಲ್‌, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್‌, ಕಿನ್ನಿಗುಡ್ಡೆ, ಕೋಟೆಬೆ„ಲು, ಕಂಡಿಗೆ, ಪೂೆಂಕುದ್ರು ಭಾಗದಲ್ಲಿ  ಕಳೆದ ಬಾರಿ ಟ್ಯಾಂಕರ್‌ ನೀರು ಸರಬರಾಜಾಗಿತ್ತು. ಈ ಬಾರಿ ನೀರಿನ ಕೊರತೆ ತೀವ್ರವಾಗಿದೆ.

ಉದ್ಯಾವರ ಗ್ರಾ.ಪಂ.  
ಈ ಭಾಗದಲ್ಲಿ ಗಡಸು ನೀರು ಲಭ್ಯವಾಗುತ್ತಿದ್ದು ಮನೆ ಬಳಕೆಗೆ ಉಪುೂàಗಿಸಿಲು ಅಡ್ಡಿಯಿಲ್ಲ. ಆದರೆ ಕುಡಿಯುವ ನೀರಿನ ಕೊರತೆ ಇದೆ. ಗುಡ್ಡೆಯಂಗಡಿಯಲ್ಲಿ ಪ.ಜಾತಿ ಕಾಲೊನಿಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನೂ ನಿರ್ಮಿಸಲಾಗಿದೆ. ಮಠದಕುದ್ರುವಿನಲ್ಲಿ 4 ಲಕ್ಷ 50 ಸಾವಿರ ರೂ. ವೆಚ್ಚದಲ್ಲಿ ಪೈಪ್‌ಲೈನ್‌  ಕಾಮಗಾರಿಗಾಗಿ ಮಂಜೂರಾತಿಗೊಂಡಿದೆ. ಕುಜುಂಬಕುದ್ರು ಪ್ರದೇಶ ದಲ್ಲಿ ಪೈಪ್‌ಲೈನ್‌, ಪಿತ್ರೋಡಿಯಲ್ಲಿ ಹೊಸ ಬಾವಿ ರಚನೆ ಪ್ರಗತಿಯಲ್ಲಿದೆ. ಪಿತ್ರೋಡಿ, ಬೊಳೆjಯಲ್ಲಿ ನೀರು ಶುದ್ಧೀಕರಣ ಘಟಕ ಜಿ.ಪಂ. ಮತ್ತು ಗ್ರಾ.ಪಂ. ವತಿಯಿಂದ ಸ್ಥಾಪಿಸಲಾಗುತ್ತಿದೆ. 
 
ಮಣಿಪುರ ಗ್ರಾ.ಪಂ.  
ಮರ್ಣೆ ಮತ್ತು ಮಣಿಪುರ ಗ್ರಾಮವನ್ನೊಳ ಗೊಂಡ ಇಲ್ಲಿನ ಗ್ರಾ.ಪಂ.ನಲ್ಲಿ ಹೊಳೆಗೆ ಅಳವಡಿಸಲಾದ ಅಣೆಕಟ್ಟೆಯಿಂದಾಗಿ ತುಸು ಸಿಹಿನೀರು ಲಭ್ಯ. ಆದರೆ ಅದು ಹೆಚ್ಚು ಸುಸ್ಥಿತಿಯಲ್ಲಿಲ್ಲದೆ ಇರುವುದು ಸಮಸ್ಯೆಯಾಗಿದೆ. ಮಣಿಪುರ ವೆಸ್ಟ್‌, ಕೋಟೆ, ಗುಜ್ಜಿ, ದೇವಳ ಗುಜ್ಜಿ, ಕೊಡಂಗಳ, ಮರ್ಣೆ, ಪಟ್ಲ, ಫ್ರೆಂಡ್ಸ್‌ ಸರ್ಕಲ್‌ ಜಂಕ್ಷನ್‌ ಭಾಗಕ್ಕೆ ಹೆಚ್ಚು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕುಂತಳನಗರ ಕಲ್ಮಂಜೆ ಭಾಗದಲ್ಲಿ ಎಸ್‌.ಸಿ. ಮತ್ತು ಎಸ್‌.ಟಿ. ಕಾಲನಿಗೆ ಕುಡಿಯುವ ಶುದ್ಧ ನೀರಿನ ಘಟಕ ಮತ್ತು ಮಣಿಪುರದ ಮೂಡು ಕಲ್ಮಂಜೆ ಮತ್ತು ಮಣಿಪುರ ದೇವಳ ಗುಜ್ಜಿ ಭಾಗದಲ್ಲಿ ಶುದ್ಧೀಕರಣ ಘಟಕವನ್ನು ಅಳವಡಿಸಿಕೊಳ್ಳಲಾಗಿದೆ. 

ಕುರ್ಕಾಲು ಗ್ರಾ.ಪಂ.
ಈ ಗ್ರಾ.ಪಂ.ನ 2ನೇ ವಾರ್ಡು, 4, 5, 6 ನೇ ವಾರ್ಡುಗಳ ನಾಯ್ಕರ ತೋಟ, ಅಚ್ಚಡ, ಕುಂಜಾರುಗಿರಿ ಭಾಗದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕಾಗಿ 4 ಬೋರ್‌ವೆಲ್‌, 8 ಬಾವಿಗಳ ನೀರನ್ನು ಬಳಸಿಕೊಂಡು 3 ಓವರ್‌ಹೆಡ್‌ ಟ್ಯಾಂಕಿಯ ಮೂಲಕ ನೀರಿನ ಸರಬರಾಜು ಆಗುತ್ತದೆ. ಮೆನ್ನಲಾ ಎಂಬಲ್ಲಿ ಜಿಲ್ಲಾ ಪಂಚಾಯ ತ್‌ 20 ಲಕ್ಷ ರೂ. ಅನುದಾನದಡಿ ತೆರೆದ ಬಾವಿ ನಿರ್ಮಿಸಿ ಪಂಪು ಅಳವಡಿಸಿ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪಾಜೈ ಬಳಿ ಜಿ.ಪಂ. 20 ಲಕ್ಷ ರೂ. ಅನುದಾನದಲ್ಲಿ ತೆರೆದ ಬಾವಿ ಪಂಪು ಅಳವಡಿಸಲಾಗಿದೆ. 50 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕುಂಜಾರುಗಿರಿಯಲ್ಲಿ ಕೆ.ಆರ್‌.ಐಡಿಎಲ್‌. ಮೂಲಕ ಅಳವಡಿಸಲಾಗಿದೆ.

ಟ್ಯಾಂಕರ್‌ ನೀರು ಅನಿವಾರ್ಯ 
ಮಟ್ಟು ಭಾಗದಲ್ಲಿ ಕುಡಿಯುವ ನೀರಿನ ಮೂಲ ಇಲ್ಲ. ಉಪ್ಪು ನೀರಿನ ಸಮಸ್ಯೆ ಇದೆ. ಮಟ್ಟು ಭಾಗಕ್ಕೆ ವರ್ಷವಿಡೀ ಕುಡಿಯುವ ನೀರಿನ ಸರಬರಾಜು ಮಾಡಬೇಕಾಗುತ್ತದೆ. ಉತ್ತಮ ಮಳೆಯಾಗದಿದ್ದರೆ ಟ್ಯಾಂಕರ್‌ ನೀರು ಸರಬರಾಜು ಅನಿವಾರ್ಯ. 
– ಸುರೇಖಾ,ಪಿ.ಡಿ.ಒ.ಕೋಟೆ ಗ್ರಾ.ಪಂ.

ಲಭ್ಯ ನೀರಿನ ಹಂಚಿಕೆ
ಕುಡಿಯುವ ನೀರಿನ ಸರಬರಾಜು ಸರಿಯಾಗಿ ಮಾಡಲಾಗುತ್ತಿದೆ. ಇದ್ದ ನೀರಿನ ಮೂಲವನ್ನು ಬಳಸಿಕೊಂಡು ಕುಡಿಯುವ ನೀರನ್ನು ಹಂಚಿಕೆ ಮಾಡಲಾಗುತ್ತದೆ. 
– ಚಂದ್ರಕಲಾ, 
ಪಿ.ಡಿ.ಒ ಕುರ್ಕಾಲು ಗ್ರಾ.ಪಂ.

– ವಿಜಯ ಆಚಾರ್ಯ,ಉಚ್ಚಿಲ

ಟಾಪ್ ನ್ಯೂಸ್

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.