ಇನ್ನೂ ಸಿಕ್ಕಿಲ್ಲ ಕೋಟೆಯಂಗಡಿ-ಕೋಡಿ ಬೆಟ್ಟು ರಸ್ತೆಗೆ ಮುಕ್ತಿ
Team Udayavani, Feb 18, 2019, 1:00 AM IST
ಮಾಳ: ಮಾಳ ಗ್ರಾಮದ ವ್ಯಾಪ್ತಿಗೆ ಸೇರಿದ ಜಿ.ಪಂ. ಅಧೀನಕ್ಕೆ ಒಳಪಟ್ಟ ಸುಮಾರು 1.5 ಕಿ.ಮೀ ರಸ್ತೆ ಹದಗೆಟ್ಟಿದ್ದು ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಾಗಿದೆ.
ಗ್ರಾಮದ ಮುಖ್ಯ ಕೂಡು ರಸ್ತೆ ಇದಾಗಿದ್ದು, ಕುದುರೆಮುಖ ಹೆದ್ದಾರಿಯನ್ನು ಸಂಪರ್ಕಿಸುತ್ತದೆ . ಚೌಕಿಯಂಗಡಿ, ಪೂಂಜಾಜೆ, ನೂರಾಳ್ಬೆಟ್ಟು , ಹೊಸ್ಮಾರಿಗೆ ಸಂಪರ್ಕಿಸುವ ಹತ್ತಿರದ ಒಳದಾರಿಯೂ ಆಗಿದೆ. ಕಾರ್ಕಳ, ಮಾಳ, ಪೂಂಜಾಜೆಗೆ ನಿತ್ಯ ಬಸ್ ಸಂಪರ್ಕ ಇದ್ದರೂ ರಸ್ತೆ ಮಾತ್ರ ತೀರ ಹದಗೆಟ್ಟ ಸ್ಥಿತಿಯಲ್ಲೇ ಇದೆ.
ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ನಿವಾಸಿ ಕಿರಣ್ ಕುಮಾರ್ ಹೆಗೆª ಅವರ ನೇತೃತ್ವದಲ್ಲಿ , ಸಾರ್ವಜನಿಕರ ದೊಡ್ಡ ಸಂಖ್ಯೆಯ ಸಹಿಯುಳ್ಳ ಮನವಿಗಳನ್ನು ಈ ಹಿಂದೆ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ಸಲ್ಲಿಸಲಾಗಿದೆ. ಆದರೂ ಯಾವುದೇ ರೀತಿಯ ಪ್ರಯೊಜನವಾಗಿಲ್ಲ.
ಮಳೆಗಾಲ ಆರಂಭಗೊಂಡರೆ ರಸ್ತೆ ಸಂಪೂರ್ಣ ಹದಗೆಟ್ಟು, ಮೊಣಕಾಲಿನವರೆಗೂ ಕೆಸರು ತುಂಬಿದ ಗದ್ದೆೆಯಂತಾಗುತ್ತದೆ, ಏನೂ ಕಾಣಿಸದ ಪರಿಸ್ಥಿತಿ ರೂಪುಗೊಳ್ಳುತ್ತದೆ. ಈ ರಸ್ತೆಗೆ 3 ವರ್ಷಗಳ ಹಿಂದೆ ಅರ್ಧ ಡಾಮರೀಕರಣ ಮಾಡಲಾಗಿದ್ದು, ಸದ್ಯದ ಸ್ಥಿತಿಯಲ್ಲಿ ಅದೂ ಕಿತ್ತು ಬಂದು ಗುಂಡಿಗಳಾಗುತ್ತಿವೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸ್ಪಂದಿಸಿದಲ್ಲಿ ಹಲವು ವರ್ಷಗಳ ಜನರ ಕಷ್ಟ ಬಗೆಹರಿಯಬಹುದೆಂಬುದು ಇಲ್ಲಿನ ಜನರ ಆಶಯ.
ಶೀಘ್ರ ದುರಸ್ತಿ
ಈ ಬಗ್ಗೆ ಮನವಿಯನ್ನು ಕಳಿಸಿದ್ದು ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಆನುಕೂಲ ಮಾಡಿಕೊಡಲಾಗುವುದು.
– ಉದಯ್ ಎಸ್. ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರು
ಸ್ಪಂದನೆ ಇಲ್ಲ
ಸತತ 3 ವರ್ಷಗಳಿಂದ ಈ ರಸ್ತೆಯ ದುರಸ್ತಿಗಾಗಿ ಹೋರಾಡುತ್ತಾ ಬಂದಿದ್ದು ಇದುವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಈಗಾಗಲೆ ಅರ್ಧ ಆಗಿರುವ ಕಾಮಗಾರಿಯು ಕಿತ್ತು ಹೋಗಿದೆ.
– ಕಿರಣ್ ಹೆಗ್ಡೆ, ಸ್ಥಳೀಯರು ಮಾಳ
– ಪ್ರಶಾಂತ್ ಮುಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ