ಮಹಾರಾಷ್ಟ್ರದತ್ತ ತೆರಳಲು ಮೀನುಗಾರರು ಹಿಂದೇಟು


Team Udayavani, Feb 24, 2019, 1:00 AM IST

maharastra.jpg

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣದ ಬಳಿಕ ರಾಜ್ಯ ಕರಾವಳಿಯ ಮೀನುಗಾರರು ಮಹಾರಾಷ್ಟ್ರದತ್ತ¤ ತೆರಳಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯ ಮೀನು ಮಾರುಕಟ್ಟೆಯೂ ಕಳೆಗುಂದಿದೆ.

ಒಂದೆಡೆ ಮೀನು ಕೊರತೆ ಉದ್ಭವಿಸಿ ಮಾರುಕಟ್ಟೆಯಲ್ಲಿ ಲಭ್ಯ ಮೀನಿನ ದರ ದುಬಾರಿಯಾಗಿದ್ದರೆ, ಮತ್ತೂಂದೆಡೆ ಮೀನುಗಾರರು ಕನಿಷ್ಠ ಸಂಪಾದನೆಗೂ ಸಂಕಷ್ಟ ಎದುರಿಸುವಂತಾಗಿದೆ. ದೋಣಿಗಳೆಲ್ಲಾ ದಡ ಸೇರಿವೆ.

ಸುವರ್ಣ ತ್ರಿಭುಜ ಬೋಟ್‌ ಪ್ರಕರಣದ ಮೊದಲು 1000 ದಿಂದ 1200 ರಷ್ಟು ದೋಣಿಗಳು ಮಹಾರಾಷ್ಟ್ರದತ್ತ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದವು.ಯಾಕೆಂದರೆ ಕರ್ನಾಟಕ, ಗೋವಾದ ಸಮುದ್ರದಲ್ಲಿ ಆಳದ ಪ್ರದೇಶಗಳು (ಗುಂಡಿ ಪ್ರದೇಶದಲ್ಲಿ ಸಿಗುವ ಮೀನುಗಳ ಪ್ರಮಾಣ ಹೆಚ್ಚು)ಸಿಗಬೇಕೆಂದರೆ ಸುಮಾರು 20 ರಿಂದ 24 ನಾಟಿಕಲ್‌ ಮೈಲು ದೂರ ಸಾಗಬೇಕು. ಮಹಾರಾಷ್ಟ್ರ ಪ್ರದೇಶದಲ್ಲಿ 12 ನಾಟಿಕಲ್‌ ಮೈಲ್‌ ಸಾಗಿದರೆ ಸಾಕು. ಹತ್ತರಿಂದ ಹನ್ನೊಂದು ದಿನಗಳ ಮೀನುಗಾರಿಕೆಯಲ್ಲಿ ಸುಮಾರು 5ರಿಂದ 7 ಲಕ್ಷ ರೂ. ಮೌಲ್ಯದ ಮೀನು ಸಿಗುತ್ತಿತ್ತು. ಇದಕ್ಕಾಗಿ ಕೆಲವೊಮ್ಮೆ ಆ ಭಾಗದ ಮೀನುಗಾರರ ಕಿರುಕುಳ, ಅಧಿಕಾರಿಗಳಿಂದ ದಂಡ ಇತ್ಯಾದಿ ಸಂಕಷ್ಟವನ್ನೂ ಎದುರಿಸಬೇಕಾಗುತ್ತಿತ್ತು. ಈಗ ಬೋಟ್‌ ನಾಪತ್ತೆ ಬಳಿಕ ಆ ಭಾಗಕ್ಕೆ ತೆರಳುವವರು ಕಡಿಮೆ ಎನ್ನುತ್ತಾರೆ ಕೆಲವರು.

ಪಸೀìನ್‌ ಮೀನುಗಾರಿಕೆ ಸ್ಥಗಿತ
ಅತ್ತ ದಡದಲ್ಲಿ ಶೇ. 30 ರಷ್ಟು ಆಳ ಸಮುದ್ರ ಮೀನುಗಾರಿಕೆಯ ಬೋಟುಗಳು ಲಂಗರು ಹಾಕಿದ್ದರೆ, ಇತ್ತ
ಮೀನಿನ ಅಲಭ್ಯತೆಯಿಂದ ಪಸೀìನ್‌ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಡೀಸೆಲ್‌ ದರದ ಹೊರೆಗೂ ಸಿಗುವ ಮೀನಿನ ಪ್ರಮಾಣಕ್ಕೂ ಸರಿಹೊಂದದೇ ನಷ್ಟವಾಗುತ್ತಿದೆ. ಜತೆಗೆ ಸಣ್ಣಟ್ರಾಲ್‌ದೋಣಿ, ತ್ರಿಸೆವೆಂಟಿ ಬೋಟ್‌ಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂಬುದು ಹಲವರ ಕೊರಗು.

ಮೀನಿನ ದರ ಹೆಚ್ಚಳ
ಇದರ ಬೆನ್ನಿಗೇ ರಾಜ್ಯದ ಬಂದರುಗಳಲ್ಲದೇ, ಕೇರಳ ಹಾಗೂ ತಮಿಳುನಾಡಿನ ಬಂದರುಗಳಲ್ಲೂ ಸಾಕಷ್ಟು ಮೀನುಗಳು ಲಭ್ಯವಾಗುತ್ತಿಲ್ಲ. ಪ್ರತಿಕೂಲ ಹವಾಮಾನ, ಮೀನು ಇಳುವರಿಯ ಕುಸಿತವೂ ಮೀನು ಅಭಾವಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಮೀನಿನ ದರ ವಿಪರೀತ ಏರಿಕೆಯಾಗಿದೆ.

ಬೋಟಿನಿಂದ ನೇರ ವ್ಯಾಪಾರಸ್ಥರಿಗೆ ರಖಂ ಆಗಿ ಮಾರಾಟವಾಗುವ ದರ ತಿಂಗಳ ಹಿಂದೆ ದೊಡ್ಡ ಬಂಗುಡೆಗೆ ಕೆ.ಜಿ.ಗೆ 90 ರೂ. ಇತ್ತು. ಅದೀಗ 130ರಿಂದ 140 ರೂ. ಇದೆ. 60ರೂ. ಇದ್ದ ಸಣ್ಣ ಬಂಗುಡೆಗೆ 80ರೂ., 2ಕೆಜಿ. ಮೇಲ್ಪಟ್ಟ ತೂಕದ ಅಂಜಲ್‌ ಮೀನಿಗೆ 650ರಿಂದ 700ರೂ., ಅದಕ್ಕಿಂತ ಕಡಿಮೆ ತೂಕದ್ದಕ್ಕೆ 500ರಿಂದ 550 ರೂ. ದರವಿದೆ. ಹಿಂದೆ 110 ರೂ. ಇದ್ದ ಅಡೆಮೀನಿಗೆ 150ರೂ. ಆಗಿದೆ.

700 ರೂ. ಇದ್ದ ಬಿಳಿ ಪಾಂಪ್ರಟ್‌ಗೆ 1000 ರೂ., 400ರೂ. ಕಪ್ಪು ಪಾಂಪ್ರಟ್‌ 500 ರಿಂದ 550 ರೂ. ಗೆ ಏರಿದೆ. ಈ ಹಿಂದೆ ಕೆ. ಜಿ 30 ರೂ.ಗಿಂತ ಹೆಚ್ಚಾಗದ ಸಣ್ಣಗಾತ್ರದ ರಾಣಿ ಮೀನು 55ರೂ. ವರೆಗೆ ಏರಿಕೆ ಕಂಡಿದೆ. ಪಟ್ಟೆರಾಣಿಗೆ 80 ರಿಂದ 90 ರೂ. ಇದೆ.

ಕರಾವಳಿಯಲ್ಲಿ ಮೀನಿನ ಅಭಾವದ ಜತೆಗೆ ಇಂಧನ ದರ ಹೊರೆಯೂ ಹೆಚ್ಚಿದೆ. ಕೆಲವು ಬೋಟ್‌ಗಳು ಕನಿಷ್ಟ ಸಂಪಾದನೆ ಇಲ್ಲದೆ ನಷ್ಟ ಎದುರಿಸುತ್ತಿವೆ. ಮೀನಿನ ಇಳುವರಿ ಕಡಿಮೆಯಾಗಿದ್ದರಿಂದ ಸಣ್ಣಪುಟ್ಟ ಮೀನಿಗೂ ಬೇಡಿಕೆ ಬಂದಿದೆ.
– ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ದೇಶದ ಕರಾವಳಿ ಭಾಗದ ಎಲ್ಲ ಬಂದರುಗಳಲ್ಲಿ ಮೀನಿನ ಕೊರತೆ ಇದೆ. ಕೇರಳದಲ್ಲಿ ಹೆಚ್ಚು ಮೀನು ಮಾರುಕಟ್ಟೆ ಇರುವ ಕಾರಣ ಮಲ್ಪೆ ಬಂದರಿನ ಶೇ. 90ರಷ್ಟು ಮೀನು ಅಲ್ಲಿಗೆ ರವಾನೆಯಾಗುತ್ತದೆ. ಈಗ ಅಲ್ಲಿಯೂ ಮೀನಿನ ಪ್ರಮಾಣ ಕುಸಿದಿದೆ.
– ಸಾಧು ಸಾಲ್ಯಾನ್‌, ಅಧ್ಯಕ್ಷರು ಮಲ್ಪೆ ಮೀನು ವ್ಯಾಪಾರಸ್ಥರ ಸಂಘ

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.