ಬೋಳ ಪಾಲಿಂಗೇರಿ ವೆಂಟೆಡ್ ಡ್ಯಾಂ ಕಾಮಗಾರಿ ಶುರು
Team Udayavani, Mar 21, 2019, 1:00 AM IST
ಬೆಳ್ಮಣ್: ಬೋಳ ಹಾಗೂ ಕಡಂದಲೆ ವ್ಯಾಪ್ತಿಯ ಸುಮಾರು ಸಾವಿರ ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲ 2.75 ಕೋಟಿ ರೂ. ಅಂದಾಜು ವೆಚ್ಚದ ಬೋಳ ಪಾಲಿಂಗೇರಿ ಶಾಂಭವಿ ನದಿ ವೆಂಟೆಡ್ ಡ್ಯಾಂನ ಕಾಮಗಾರಿ ಆರಂಭವಾಗಿದ್ದು ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸೇತುವೆ ಸಹಿತ ಅಣೆಕಟ್ಟು
ಸಣ್ಣ ನೀರಾವಿ ಇಲಾಖೆಯ ಅನುದಾನದಿಂದ ನಡೆಯುವ ಈ ಅಣೆಕಟ್ಟುವಿನ ಜತೆ ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ. ಈ ವರೆಗೆ ಬೋಳದ ಅಂಡಮಾನ್ ಎಂದು ಕರೆಯಲ್ಪಡುತ್ತಿದ್ದ ಅಂಬರಾಡಿಗೆ ಈ ಹಿಂದೆ ಬೋಳದಿಂದ ಸುಮಾರು 5-6 ಕಿ.ಮೀ ದೂರವಿತ್ತು. ಮುಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ಅಂಬರಾಡಿ-ಬಾನಂಗಡಿ ರಸ್ತೆಮೂಲಕ ಕೇವಲ 500 ಮೀ. ನಷ್ಟು ಕ್ರಮಿಸಿ ಅಂಬರಾಡಿ ತಲುಪಬಹುದಾಗಿದೆ. ಬೋಳ ಮುಗುಳಿ ಬ್ರಹ್ಮಲಿಂಗೇಶ್ವರ ದೇಗುಲಕ್ಕೂ ಇದು ಹತ್ತಿರದ ಮಾರ್ಗವಾಗಲಿದೆ.
ಕಡಂದಲೆ-ಬೋಳ ಇನ್ನು ಸದಾ ಹಸಿರು
ಶಾಂಭವಿ ನದಿಯ ಈ ಅಣೆಕಟ್ಟು ಈ ಮಳೆಗಾಲದ ಮೊದಲು ಪೂರ್ತಿಗೊಂಡು ಮುಂದಿನ ಬೇಸಗೆಯಲ್ಲಿ ನೀರು ಸಂಗ್ರಹಿಸಿ ಕಡಂದಲೆ ಹಾಗೂ ಬೋಳದ ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲದು. ಈ ಮೂಲಕ ಈ ಭಾಗದ ಕೃಷಿ ಭೂಮಿ ಸದಾ ಹಸಿರಾಗುವುದರಲ್ಲಿ ಸಂಶಯವಿಲ್ಲ. ಈ ಭಾಗದ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗಲಿದ್ದು ಕುಡಿಯುವ ನೀರಿನ ಸಮಸ್ಯೆಯೂ ದೂರವಾಗಲಿದೆ.
ನಿರ್ವಹಣೆಯೂ ಸರಳ
ಈ ಕಾಮಗಾರಿಯನ್ನು ಕುಂದಾಪುರ ಮೂಲದ ಜಿ.ಗೋಕುಲ ಹೆಗ್ಡೆಯವರು ವಹಿಸಿಕೊಂಡಿದ್ದು ಅಣೆಕಟ್ಟುವಿಗೆ ಕಬ್ಬಿಣದ ಹಲಗೆಗಳನ್ನು ಅಳವಡಿಸ ಲಾಗುವುದಲ್ಲದೆ ನಿರ್ವಹಣೆಯೂ ಸರಳವಾಗಿರುತ್ತದೆ ಎಂದಿದ್ದಾರೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದು ಬಂಡೆಯ ಮೇಲೆಯೇ ಅಣೆಕಟ್ಟು ನಿರ್ಮಿಸಬೇಕಾಗಿರುವುದರಿಂದ ಕಾಮಗಾರಿ ತುಸು ನಿಧಾನಗೊಳ್ಳುವ ಸಾಧ್ಯತೆ ಇದೆ ಎಂದು ಕಾಮಗಾರಿಯ ಮೇಲ್ವಿಚಾರಕ ಗುರುರಾಜ್ ತಿಳಿಸಿದ್ದಾರೆ. ಕಾಮಗಾರಿ ಮುಗಿದ ಕೂಡಲೇ ನೀರು ನಿಲ್ಲಿಸಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ. ಈ ಮೂಲಕ ಬೋಳ ಗ್ರಾಮದ ನೀರಿನ ಬವಣೆಯನ್ನು ನಿವಾರಿಸಲಿದೆ.
ಕೃಷಿಭೂಮಿಗೆ ನೀರು
ಬೋಳ ಪಾಲಿಂಗೇರಿಯ 2.25 ಕೋಟಿ ರೂ. ವೆಚ್ಚದ ಅಣೆಕಟ್ಟು ಗ್ರಾಮದ ಕೃಷಿಭೂಮಿಗೆ ನೀರುಣಿಸಲಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಸಂಕಮಾರು ವಾರ್ಡ್ ಹೊರತು ಪಡಿಸಿ ಎಲ್ಲೂ ನೀರಿನ ಸಮಸ್ಯೆ ಇಲ್ಲ. ಈ ವಾರ್ಡ್ಗೆ ಶಾಂಭವೀ ನದಿಯಲ್ಲಿ ಬಾವಿ ತೋಡಿ ನೀರು ಪೂರೈಸುವ ಬಗ್ಗೆ ಯೋಜನೆ ಇದೆ.
-ಬೋಳ ಸತೀಶ್ ಪೂಜಾರಿ, ಬೋಳ ಗ್ರಾ.ಪಂ. ಅಧ್ಯಕ್ಷ
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ