ಮತದಾನ ಜಾಗೃತಿಗೆ ರಾಜ್ಯಾದ್ಯಂತ ಬೈಕ್ ಪ್ರವಾಸ
Team Udayavani, Mar 22, 2019, 1:00 AM IST
ಉಡುಪಿ: ಮತದಾನ ಜಾಗೃತಿಗಾಗಿ ಬೆಂಗಳೂರು ನಿವಾಸಿ ಮೂಲತಃ ತುಮಕೂರಿನವರಾದ ಬಸವರಾಜ ಎಸ್. ಕಲ್ಲುಸಕ್ಕರೆ ಅವರು ರಾಜ್ಯಾದ್ಯಂತ ಬೈಕ್ ಸಂಚಾರ ಕೈಗೊಂಡು ಜನಜಾಗೃತಿ ರೂಪಿಸುತ್ತಿದ್ದಾರೆ.
ಫೆ. 24ರಂದು ಬೆಂಗಳೂರಿನಿಂದ ಹೊರಟಿರುವ ಬಸವರಾಜ ಬುಧವಾರ ರಾತ್ರಿ ಉಡುಪಿಗೆ ಆಗಮಿಸಿ ಗುರುವಾರ ಮಲ್ಪೆ, ಕಾಪು, ಮಣಿಪಾಲ, ಉಡುಪಿ ಮೊದಲಾದೆಡೆ ಸಂಚರಿಸಿದರು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿದ ಬಸವರಾಜ್ ಅವರು ತಮ್ಮ ಕಾರ್ಯೋದ್ದೇಶಗಳನ್ನು ವಿವರಿಸಿದರು.
4 ಸಾವಿರ ಕಿ.ಮೀ. ಪ್ರಯಾಣ
ಇದುವರೆಗೆ 22 ಜಿಲ್ಲೆಗಳಿಗೆ ಬಸವರಾಜ್ ಅವರು ಭೇಟಿ ಕೊಟ್ಟಿದ್ದು ಸುಮಾರು 4,000 ಕಿ.ಮೀ. ಪ್ರಯಾಣ ಮಾಡಿದ್ದಾರೆ. ತಿಂಗಳಾಂತ್ಯದೊಳಗೆ ಉಳಿದ ಜಿಲ್ಲೆಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸಾಗುವರು.
ಮತದಾನ ಜಾಗೃತಿಯ 10,000 ಕರಪತ್ರಗಳನ್ನು ತಮ್ಮ ಖರ್ಚಿನಿಂದ ಮುದ್ರಿ ಸಿದ್ದು ಈಗಾಗಲೇ 6,000 ಕರಪತ್ರಗಳನ್ನು ಜನರಿಗೆ ವಿತರಿಸಿದ್ದಾರೆ. ಗ್ರಾ.ಪಂ. ಕಚೇರಿ, ಕಾಲೇಜುಗಳು, ಬಸ್- ರೈಲು ನಿಲ್ದಾಣ ಹೀಗೆ ಜನಸಂದಣಿ ಇರುವೆಡೆ ಜನರಿಗೆ ಮತದಾನ ಮಾಡಲು ತಿಳಿಸುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಅನುಮತಿ ಪಡೆದುಕೊಂಡಿರುವ ಬಸವರಾಜರಿಗೆ ಹೋದ ಕಡೆ ಉಳಿದುಕೊಳ್ಳಲು ಪ್ರವಾಸಿ ಮಂದಿರದ ವ್ಯವಸ್ಥೆಯನ್ನು ಮಾಡಿ ಕೊಡುತ್ತಾರೆ. ಉಳಿದ ಖರ್ಚನ್ನು ಬಸವರಾಜರೇ ನಿರ್ವಹಿಸುತ್ತಿದ್ದಾರೆ.
ರಾಜೀನಾಮೆ ಕೊಟ್ಟು ಬೈಕ್ ಏರಿದ್ರು!
ಖಾಸಗಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿರುವ 43 ವರ್ಷದ ಬಸವರಾಜ್ ಅವರು ರಜೆ ಸಿಗದ ಕಾರಣ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತದಾನ ಜಾಗೃತಿಯ ಬೈಕ್ ಸಂಚಾರವನ್ನು ಕೈಗೊಂಡರು. ಇದು ಮುಗಿದ ಬಳಿಕ ಬೇರೆಲ್ಲಾದರೂ ಕೆಲಸಕ್ಕೆ ಸೇರುವ ಇರಾದೆ ಬಸವರಾಜರಿಗೆ ಇದೆ. ಗುರುವಾರ ರಾತ್ರಿ ಮಂಗಳೂರಿಗೆ ತೆರಳುವ ಬಸವರಾಜ್ ಶುಕ್ರವಾರ ದ.ಕ. ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರವಾಸವನ್ನು ಮುಂದುವರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ