ಶಾಂತಿಯನ್ನು ಅರಸಿ ಭಾರತಕ್ಕೆ ಬಂದೆ


Team Udayavani, Dec 10, 2017, 11:25 AM IST

russia.jpg

ಪಡುಬಿದ್ರಿ: ಭಾರತೀಯ ಸಂಸ್ಕೃತಿ, ಯೋಗಗಳಿಂದ ಆಕರ್ಷಿತಳಾಗಿ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಪಡೆದು ಕೊಳ್ಳಲು ಮತ್ತು ಶಾಂತಿಯನ್ನು ಅರಸಿ ಭಾರತಕ್ಕೆ ಬಂದಿರುವುದಾಗಿ ರಷ್ಯನ್‌ ಸಿನೆಮಾ ರಂಗದ ಹಾಸ್ಯ ನಟಿ ಅನ್ನಾ ಆರ್ಗವ ಹೇಳಿದರು.

ಕಾಪುನಲ್ಲಿ ಡಾ| ತನ್ಮಯ್‌ ಗೋಸ್ವಾಮಿ ಅವರಿಂದ ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳಲು ಬಂದಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಅನ್ನಾ ಅವರ ಭಾರತ ಪ್ರವಾಸ 12 ದಿನಗಳ ಅವಧಿಯದ್ದಾಗಿದೆ.

ಭಾರತೀಯ ಸಿನೆಮಾ ಅಚ್ಚುಮೆಚ್ಚು
ನನಗೆ ಭಾರತೀಯ ಸಿನೆಮಾ ಅಚ್ಚುಮೆಚ್ಚು. ಈಗಲೂ ಬಾಲಿವುಡ್‌ ಸಿನೆಮಾಗಳಲ್ಲಿ ನಟಿಸುವ ಆಕಾಂಕ್ಷೆಯಿದೆ. ಚಿಕ್ಕಂದಿನಿಂದಲೇ ಹಿಂದಿ ಚಿತ್ರಗಳತ್ತ ಆಕರ್ಷಿತಳಾಗಿದ್ದು, “ಸೀತಾ ಔರ್‌ ಗೀತಾ’ ಸಿನೆಮಾವನ್ನು ಏಳು ಬಾರಿ ವೀಕ್ಷಿಸಿದ್ದೇನೆ. “ಡಿಸ್ಕೋ ಡ್ಯಾನ್ಸರ್‌’ನಂತಹ ಹಳೆಯ ಚಿತ್ರ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದೇನೆ. ಹೊಸ ಪೀಳಿಗೆಯ ಸಿನೆಮಾಗಳಲ್ಲಿ “ಸ್ಲಂ ಡಾಗ್‌ ಮಿಲಿಯನೇರ್‌’ ಬಹಳ ಇಷ್ಟವಾಗಿದೆ. ರಾಜ್‌ಕಪೂರ್‌, ಮಿಥುನ್‌ ಚಕ್ರವರ್ತಿ ತನ್ನ ಮೆಚ್ಚಿನ ನಟರೆಂದು ಅನ್ನಾ ಆರ್ಗವ ಹೇಳಿದರು.

ಜನರನ್ನು ನಗಿಸಿದರೂ ಆತ್ಮಶಾಂತಿಯಿಲ್ಲ
ಭಾರತೀಯರು ಪ್ರಾಕೃತಿಕವಾಗಿಯೇ ಸಹಜ ನಗು ನಗುತ್ತಾರೆ. ಇಲ್ಲಿಗೆ ಬಂದ ಬಳಿಕ ಭಾರತದ ಬಗೆಗೆ ನನ್ನ
ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಪುತ್ರಿಯರಿಬ್ಬರು ಅಭಿನೇತ್ರಿಗಳಾಗಿದ್ದಾರೆ. ಅವರನ್ನೂ ಭಾರತಕ್ಕೆ ಕರೆತರುವ ಇಚ್ಛೆ ಇದೆ. ರಷ್ಯನ್‌ ಸಿನೆಮಾ ರಂಗದಲ್ಲಿ ಹಲವು ವರ್ಷಗಳಿಂದಲೂ ಬಲು ಬೇಡಿಕೆಯ ಹಾಸ್ಯ ನಟಿಯಾಗಿದ್ದು, ವೀಕ್ಷಕರನ್ನು ನಗಿಸುತ್ತಿದ್ದೇನೆ. ಆದರೆ ಸ್ವತಃ ನನಗೆ ಆತ್ಮಶಾಂತಿ ಇರಲಿಲ್ಲ. ಇಲ್ಲಿಗೆ ಬಂದು ಪಂಚಕರ್ಮ ಚಿಕಿತ್ಸೆಯೊಂದಿಗೆ ನಡೆಸಲಾದ ವಿರೇಚನ ಕ್ರಿಯೆಯಿಂದಾಗಿ ಉಲ್ಲಸಿತಳಾಗಿದ್ದೇನೆ ಎಂದರು.

ಶಾಂತಿ, ಸಹಬಾಳ್ವೆಯ ರಾಯಭಾರಿಯಾಗುವೆ
ಬೆಳಗ್ಗೆ ಯೋಗ, ಪಂಚಕರ್ಮ ಚಿಕಿತ್ಸೆ, ಉಪಾಹಾರದ ಬಳಿಕ ಸಮುದ್ರದಲ್ಲಿ ವಿಹಾರ, ಸಂಜೆ ವಿಶೇಷ ಉಪನ್ಯಾಸಗಳ ಶ್ರವಣ – ಇದು ಅನ್ನಾ ದಿನಚರಿ. ಡಿ.10ರಂದು ಭಾರತದಿಂದ ನಿರ್ಗಮಿಸಲಿರುವ ಅನ್ನಾ, ಮುಂದೆ ರಷ್ಯಾದಲ್ಲಿ ಶಾಂತಿ, ಸಹಬಾಳ್ವೆಯ ರಾಯಭಾರಿಯಾಗುವೆ ಎಂದು ಹೇಳಿದ್ದಾರೆ. “ಯೋಗಾಸನಗಳಲ್ಲಿ ಶವಾಸನ ನನಗೆ ಬಹಳ ಇಷ್ಟ’ ಎಂದು ವಿನೋದವಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.