ಪೇಜಾವರ ಶ್ರೀಗಳಿಗೆ ಬೆನ್ನು ನೋವು, ವಿಶ್ರಾಂತಿ
Team Udayavani, Jan 21, 2018, 11:03 AM IST
ಉಡುಪಿ: ಪರ್ಯಾಯ ಪೀಠದಿಂದ ನಿರ್ಗಮಿಸಿದಾಕ್ಷಣ ಮಿಂಚಿನ ಸಂಚಾರ ಪ್ರಾರಂಭಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ದೇಹಾಯಾಸ ತಡೆ ಉಂಟು ಮಾಡಿದೆ. ಮಂತ್ರಾಲಯದಿಂದ ಕರ್ನೂಲಿಗೆ ಶುಕ್ರವಾರ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕ ಉಂಟಾದ ಜಂಪ್ ಶ್ರೀಪಾದರಿಗೆ ದೈಹಿಕ ನೋವು ಉಂಟು ಮಾಡಿದ್ದು, ಅವರು ಶನಿವಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಉಡುಪಿ ಪೇಜಾವರ ಮಠಕ್ಕೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೈದರಾಬಾದ್ ಮೂಲದ ಚಾಲಕ ಚಲಾಯಿಸುತ್ತಿದ್ದ ಶ್ರೀಗಳಿದ್ದ ವಾಹನ ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಕರ್ನೂಲಿನ ಬಳಿ ಸೇತುವೆಯೊಂದರ ಸನಿಹ ಇದ್ದ ರಸ್ತೆಯುಬ್ಬು ಚಾಲಕನ ಅರಿವಿಗೆ ಬಾರದೆ ಹಠಾತ್ ಏರಿಳಿದಿತ್ತು. ಹಠಾತ್ ಆದ ಕಾರಣ ಶ್ರೀಪಾದರು ಆಸನದಿಂದ ಬಿದ್ದು ನೋವು ಕಾಣಿಸಿಕೊಂಡಿತ್ತು. ಒಡನೆಯೇ ಕರ್ನೂಲಿನ ಆಸ್ಪತ್ರೆಗೆ ತೆರಳಿ ಪರೀಕ್ಷಿಸಲಾಯಿತು. ಬೆನ್ನು ಹುರಿ ನೋವು ಇದೆ, ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದರು.
ಬಳಿಕ ಶ್ರೀಪಾದರು ಹೈದರಾಬಾದ್ನಿಂದ ಮಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸಿ, ಸದ್ಯ ಉಡುಪಿ ಪೇಜಾವರ ಮಠದ ವಿಜಯಧ್ವಜ ಛತ್ರದ ತಳ ಅಂತಸ್ತಿನಲ್ಲಿ ವಿಶ್ರಾಂತಿ ಮತ್ತು ನೋವು ನಿವಾರಕ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಪಾದರು ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದು, ವೈದ್ಯರು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳಲು ಮತ್ತು 15 ದಿನಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!