ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಅಂಗಡಿ ತೆರವು
Team Udayavani, Jan 21, 2018, 11:50 AM IST
ಉಡುಪಿ: ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಪಕ್ಕದಲ್ಲಿದ್ದ ಅಂಗಡಿ, ಮಳಿಗೆಯನ್ನು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆಣತಿಯಂತೆ ಶುಕ್ರವಾರ ತೆರವುಗೊಳಿಸಲಾಗಿದೆ.
ಶೀರೂರು ಶ್ರೀಗಳು ಯಾತ್ರಿ ನಿವಾಸದಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ವಿವರಗಳನ್ನು ಪಡೆದು ಕೊಂಡರು. ಅನಂತರದಲ್ಲಿ ತಗಡುಶೀಟು ಹಾಕಿ ನಿರ್ಮಿಸಿದ್ದ ಬಟ್ಟೆ ಅಂಗಡಿ, ಕರಕುಶಲ ಮಾರಾಟ ಅಂಗಡಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಸೊತ್ತುಗಳಿರುವಾಗಲೇ ಜೆಸಿಬಿ ಮೂಲಕ ತೆರವುಗೊಳಿ ಸಲಾಯಿತು. ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎನ್ನಲಾಗಿದೆ.
ಶೀರೂರು ಶ್ರೀಗಳು ಮಾತನಾಡಿ, ಅಭಿವೃದ್ಧಿಗಾಗಿ 12 ವರ್ಷಗಳ ಹಿಂದೆಯೇ ಶ್ರೀಕೃಷ್ಣ ಮಠ ಪರಿಸರ ಟ್ರಸ್ಟ್ ರಚಿಸಲಾಗಿದೆ. ಟ್ರಸ್ಟ್ಗೆ ತಾನು 2.5 ಎಕರೆ ಜಾಗವನ್ನು ದಾನ ನೀಡಿದ್ದೇನೆ. ಆ ಜಾಗದಿಂದ ಕೃಷ್ಣ ಮಠಕ್ಕೆ ಯಾವುದೇ ಲಾಭವಾಗಿಲ್ಲ. ಪೇಜಾವರ ಮಠದ ಹೆಸರು ಹೇಳಿಕೊಂಡು ಅನ್ಯ ವ್ಯಕ್ತಿಗಳು ಅವ್ಯವಹಾರ ಮಾಡಿಕೊಂಡು ಅವರೇ ಲಾಭ ಮಾಡಿಕೊಳ್ಳುತ್ತಿದ್ದರು. ಪೇಜಾವರ ಶ್ರೀಗಳ ಹೆಸರಿನಲ್ಲಿ ಅವರ ನಿಕಟವರ್ತಿಗಳು ಅಷ್ಟ ಮಠದ ಟ್ರಸ್ಟ್ ಗೆ ಸೇರಿದ ಜಾಗವನ್ನು ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದಾರೆ. ಮಠಕ್ಕೆ ಸರಿಯಾದ ಲೆಕ್ಕ ಕೊಡದೆ ಕಳ್ಳ ವ್ಯವಹಾರ ಮಾಡುತ್ತಿದ್ದರು ಎಂದರು.
ಅಕ್ರಮಗಳನ್ನು ನೋಡಿ ಸುಮ್ಮನಿರುವ ಜಾಯಮಾನ ನನ್ನದಲ್ಲ. ಪರ್ಯಾಯ ಪೀಠದಲ್ಲಿ ಪೇಜಾವರ ಶ್ರೀಗಳು ಇರುವವರೆಗೆ ಸುಮ್ಮನಿದ್ದೆ. ಈಗ ಶೇ. 5ರಷ್ಟು ಸರಿ ಮಾಡಿದ್ದೇನೆ. ಮುಂದೆ ಬಾಕಿಯದ್ದನ್ನು ಸರಿ ಮಾಡುತ್ತೇನೆ ಎಂದು ತಿಳಿಸಿದರು. “ಕಟ್ಟಡ ಅನಧಿಕೃತವಲ್ಲ. ಮೆಸ್ಕಾಂ ವಿದ್ಯುತ್ ಸಂಪರ್ಕ, ನಗರಸಭೆ ಪರವಾನಿಗೆ ಇದೆ. ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಅಧಿಕೃತ ಪತ್ರವಿದೆ’ ಎಂದು ವಿಷ್ಣುಮೂರ್ತಿ ಹೇಳಿದ್ದಾರೆ.
ಸಮಸ್ಯೆ ಬಗೆಹರಿದಿದೆ: ಎರಡೂ ಕಡೆಯವರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯವಿತ್ತು. ಈಗ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದ್ದಾರೆ.
ಟ್ರಸ್ಟ್ಗೆ ನಷ್ಟವಾಗಿಲ್ಲ: ಪೇಜಾವರ ಶ್ರೀ
ಈ ಕುರಿತು ಪೇಜಾವರ ಶ್ರೀಗಳವರನ್ನು “ಉದಯವಾಣಿ’ ಸಂಪರ್ಕಿಸಿದಾಗ “ಹಿಂದೆಯೇ ಈ ಜಾಗ ಬೇಡವೆಂದು ತಿಳಿಸಿದ್ದೆ. ನೋಡಿಕೊಳ್ಳಲು ಅನುಕೂಲವಾಗುತ್ತದೆಂದು ಇತರ ಟ್ರಸ್ಟಿಗಳೂ ತಿಳಿಸಿದ್ದರಿಂದ ನಮ್ಮ ಆಪ್ತ ಕಾರ್ಯದರ್ಶಿ ವಿಷ್ಣುವಿಗೆ ಸ್ಥಳಬಾಡಿಗೆಗೆಂದು ಸ್ಥಳವನ್ನು ಕೊಟ್ಟೆವು. ನಾವು 15 ವರ್ಷಗಳಿಂದ ಆತನಿಗೆ ಕೊಡಬೇಕಾದ ವೇತನವನ್ನು ಇದಕ್ಕೆ ಹೊಂದಾಣಿಕೆ ಮಾಡುತ್ತಿದ್ದೇವೆ. ಈ ಸಂಬಳದ ಬಾಬ್ತು ತಿಂಗಳಿಗೆ 10,000 ರೂ.ನಂತೆ ಒಟ್ಟು 18 ಲ.ರೂ.ಗಳನ್ನು ಟ್ರಸ್ಟ್ಗೆ ಕೊಟ್ಟಿದ್ದೇವೆ. ಇದಲ್ಲದೆ ಟ್ರಸ್ಟ್ ಗೆ ಹೆಚ್ಚಿಗೆ ಕೊಟ್ಟಿದ್ದೇವೆ. ಇದರ ಬಾಬ್ತು ಇಷ್ಟು. ಈ ಮೊತ್ತವನ್ನು ಯಾತ್ರಿ ನಿವಾಸದ ಕಟ್ಟ ಡಕ್ಕೆ ಬಳಸಲಾಗುತ್ತಿದೆ. ಆದ್ದರಿಂದ ಟ್ರಸ್ಟ್ಗೆ ನಷ್ಟ ವಾಗಿಲ್ಲ. ಆದರೂ ಅನಾವಶ್ಯಕ ಗಲಾಟೆ, ಘರ್ಷಣೆ ಬೇಡವೆಂದು ಅಂಗಡಿ ಜಾಗವನ್ನು ಬಿಟ್ಟುಕೊಡಲು ತಿಳಿಸಿದ್ದು, ಆತನೂ ಒಪ್ಪಿದ್ದಾನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ