ಚತುಷ್ಪಥ ಅವಾಂತರ: ಪಡುಬಿದ್ರಿ ಪೇಟೆ ಜಲಾವೃತ
Team Udayavani, May 30, 2018, 11:49 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದ ಅರೆಬರೆ ಕಾಮಗಾರಿಯಿಂದಾಗಿ ಮಳೆ ನೀರು ಹರಿದುಹೋಗಲು ಸಾಧ್ಯವಾಗದೇ ಪಡುಬಿದ್ರಿ ಪೇಟೆ ಜಲಾವೃತವಾಯಿತು. ಕಾರ್ಕಳ ರಸ್ತೆಯ ಕೆಲವು ವ್ಯವಹಾರ ಮಳಿಗೆಗಳಿಗೆ ನೀರು ನುಗ್ಗಿತು.
ಪಡುಬಿದ್ರಿ ಪೇಟೆ ಸಹಿತ ಇಕ್ಕೆಲಗಳ ಸುಮಾರು 3 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಸಮೀಪದ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.
ಎರ್ಮಾಳು, ಉಚ್ಚಿಲ, ಪಲಿಮಾರು, ಹೆಜಮಾಡಿ ಗಳಲ್ಲೂ ತಗ್ಗು ಪ್ರದೇಶಗಳಲ್ಲಿ ನೆರೆನೀರು ನಿಂತಿದೆ. ಪಡುಹಿತ್ಲು ಸೇಸಿ ಪಂಬದ ಅವರ ಮನೆಯೊಳಕ್ಕೆ ನೀರು ಸೇರಿದ್ದು ಅವರನ್ನು ಸಂಬಂಧಿಕರ ಮನೆಗೆ ವರ್ಗಾಯಿಸಲಾಗಿದೆ. ನಡಿಪಟ್ಣದ ಮುಟ್ಟಳಿವೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಈ ನೆರೆ ಹಾವಳಿಗೆ ಕಾರಣ ಎನ್ನಲಾಗಿದೆ. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪಡುಬಿದ್ರಿ ಗ್ರಾಮ ಲೆಕ್ಕಿಗ ಶ್ಯಾಮ್ಸುಂದರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು