ಭಯಾನಕ ದೃಶ್ಯ;ಎದೆಗೇ ಹೊಕ್ಕ ರೆಂಬೆ,ಆದರೂ ಬದುಕುಳಿದ !!
Team Udayavani, Nov 29, 2017, 11:36 AM IST
ಯಲ್ಲಾಪುರ: ಇಲ್ಲಿಯ ಮಂಚಿಕೇರಿ ಗ್ರಾಮದಲ್ಲಿ ನೆಲ್ಲಿಕಾಯಿ ಕೀಳಲೆಂದು ಮರಹತ್ತಿದ ಯುವಕನೊಬ್ಬ ಆಯತಪ್ಪಿ ಬಿದ್ದಾಗ ಆತನ ಪಕ್ಕೆಲುಬಿನಿಂದ ರೆಂಬೆ ಸೀಳಿಕೊಂಡು ಹೊರಬಂದ ಭಯಾನಕ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು,ಇದೀಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.
ಮಹಾಬಲೇಶ್ವರ್ ಸಿದ್ಧಿ (21) ಎಂಬ ಯುವಕ ಮರವೇರಿದಾಗ ಆಯತಪ್ಪಿ ಬಿದ್ದಿದ್ದು, ಕೆಳಗಿದ್ದ ರೆಂಬೆಯೊಂದು ಎಡ ಭಾಗದ ಎದೆಯ ಭಾಗದಪಕ್ಕೆಲುಬನ್ನು ದಾಟಿ ಕೊಂಡು ಹೊರಬಂದಿದೆ. ಸ್ವಲ್ಪ ತಪ್ಪಿದರು ಹೃದಯವನ್ನೇ ಸೀಳಿ ಹೋಗುತ್ತಿತ್ತು.
ಸಕಾಲಕ್ಕೆ ನೆರವಿಗೆ ಆಗಮಿಸಿದ ಸ್ನೇಹಿತರು ರೆಂಬೆಯನ್ನು ಹೊರತೆಗೆಯಲು ಯತ್ನಿಸಿದರಾದೂ ಸಾಧ್ಯವಾಗದೇ ಹೋದಾಗ ಹೊಕ್ಕ ಸ್ಥಿತಿಯಲ್ಲೇ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು. ದೃಶ್ಯ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ವೈದ್ಯರಿಗೆ ರೆಂಬೆಯನ್ನು ಹೊರ ತೆಗೆಯುವುದು ಸವಾಲಾಗಿ ಪರಿಣಮಿಸಿತು. ಅದೃಷ್ಟವಷಾತ್ ಮಹಾಬಲೇಶ್ವರ ಚಿಕಿತ್ಸೆಗೆ ಸ್ಪಂದಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್