ಕ್ಷೇತ್ರ ಉಳಿಸಿಕೊಂಡ ಶಿವರಾಮ ಹೆಬ್ಬಾರ್‌ 


Team Udayavani, May 16, 2018, 12:41 PM IST

15kwr01b.jpg

ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ 2018 ರ ಚುನಾವಣೆಯಲ್ಲಿ ಅರಬೈಲ್‌ ಶಿವರಾಮ ಹೆಬ್ಬಾರ್‌ ಎರಡನೇ ಬಾರಿಯೂ ಗೆಲ್ಲುವ ಮೂಲಕ ಬಿಜೆಪಿ ಗಂಡುಮೆಟ್ಟಿನ ನೆಲದಲ್ಲಿ ಪುನಃ ಝೇಂಡಾ ಊರಿದರು. ಮಾಜಿ ಶಾಸಕ ವಿ.ಎಸ್‌. ಪಾಟೀಲ್‌ ಮತ್ತು ಹೆಬ್ಟಾರ್‌ ನಡುವಿನ ತೀವ್ರ ಪೈಪೋಟಿ ನಡುವೆಯೂ ಕೂದಳೆಲೆ ಅಂತರದಲ್ಲಿ ಹೆಬ್ಟಾರ್‌ ಗೆಲುವು ಸಾಧಿಸಿ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ಸಮರ್ಪಿಸಿದ್ದಾರೆ. ಗೆಲ್ಲಲೇಬೇಕಾದ ಬಿಜೆಪಿ ಮುಖಂಡರೊಳಗಿನ ಭಿನ್ನಾಭಿಪ್ರಾಯ ಸೋಲಿಗೆ ತಳ್ಳಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಂಗಳವಾರ ಬೆಳಗ್ಗೆಯಿಂದಲೇ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ದೂರದರ್ಶನ ಜಾಲತಾಣಗಳ ವೀಕ್ಷಣೆ ಮೂಲಕ ಜನ ತಿಳಿದುಕೊಳ್ಳುತ್ತಿದ್ದರು. ಪಟ್ಟಣದ ವಿವಿಧ ಅಂಗಡಿ ಮುಗ್ಗಟ್ಟುಗಳ ಮುಂದೆ ದೂರದರ್ಶನ ವೀಕ್ಷಿಸಲು ಜನ ಜಮಾಯಿಸಿದ್ದರು. ಕುತೂಹಲದ ವಿದ್ಯಮಾನವನ್ನು ದೂರರ್ಶನ, ಮೊಬೈಲ್‌, ಸಾಮಾಜಿಕ ಜಾಲತಾಣಗಳ ಮಾಹಿತಿ ರವಾನಿಸಿಕೊಳ್ಳುತ್ತಿದ್ದರು. ಪ್ರತಿ ಕ್ಷಣವೂ ರೋಚಕವಾಗಿದ್ದು, ಎಣಿಕೆಯ ಅರ್ಧದವರೆಗೆ ಬಿಜೆಪಿ ಅಭ್ಯರ್ಥಿ ವಿ.ಎಸ್‌. ಪಾಟೀಲ್‌ ಭಾರೀ ಮುನ್ನಡೆ ಸಾಧಿಸಿದ್ದರು. ಇದರಿಂದ ಕಾರ್ಯಕರ್ತರಲ್ಲಿ ಅಮಿತ ಉತ್ಸಾಹ ಗೋಚರಿಸಿತ್ತು. ಮುಂಡಗೋಡ ಭಾಗದ ಮತ ಎಣಿಕೆ ಶುರುವಾಗುತ್ತಿದ್ದಂತೆ ಶಿವರಾಮ ಹೆಬ್ಟಾರ ಮುನ್ನಡೆ ಸಾ ಧಿಸುತ್ತಲೇ ನಡೆದರು. ಕೊನೆಗೆ ಬನವಾಸಿ ಭಾಗದಲ್ಲಿ ಬಿಜೆಪಿ ಗೆಲುವಾಗಬೇಕಿತ್ತಾದರೂ ಕೊನೇಘಳಿಗೆಯಲ್ಲಿ ಏರು-ಪೇರು ಕಂಡಿದ್ದು, ಕೊನೆಗೆ ಅಲ್ಪ ಮತದಿಂದ (1483 ಮತ ) ಗೆಲುವು ಸಾಧಿಸಿ ವಿಜಯದ ನಗೆ ಬೀರಿದ್ದಾರೆ. ಈ ಮೂಲಕ ಕ್ಷೇತ್ರವನ್ನು ಹೆಬ್ಟಾರ ಉಳಿಸಿಕೊಂಡಿದ್ದರೆ.

ಇತ್ತ ಕಾಂಗ್ರೆಸ್‌ ಬಿಜೆಪಿಯ ಕೆಲವರನ್ನು ತಣ್ಣಗೆ ಮಾಡಿದಂತೆ ಜೆಡಿಎಸ್‌ನ ಕೆಲವರನ್ನು ಮುಷ್ಠಿಗೆ ತೆಗೆದುಕೊಳ್ಳುವ ಮೂಲಕ ಅವರ ಮತವನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಫಲ ದೊರೆತಿದೆ. ಹೆಬ್ಟಾರರು ಯಲ್ಲಾಪುರ ತಾಲೂಕನ್ನು ಕಡೆಗಣಿಸಿ ಮುಂಡಗೋಡ ಮತ್ತು ಬನವಾಸಿಯಲ್ಲೇ ಕೇಂದ್ರೀಕರಿಸಿ ಮಾಡಿದ ಪ್ರಯತ್ನಕ್ಕೆ ಲಾಭ ಸಿಕ್ಕಿದೆ.

ಸಂಭ್ರಮ:ಯಲ್ಲಾಪುರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಮ ಹೆಬ್ಟಾರ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟ್ಟಣದ ಅಂಬೇಡ್ಕರ್‌ ಸರ್ಕಲ್‌ ಬಳಿ ಪಟಾಕಿ ಸಿಡಿಸಿ, ಪಟ್ಟಣದ ವಿವಿಧೆಡೆ ಮೆರವಣಿಗೆ ನಡೆಸಿ ಹೆಬ್ಟಾರ್‌ ಗೆಲುವಿಗೆ ಸಂಭ್ರಮಿಸಿದರು.

ಹೆಬ್ಟಾರ ಯಾರು:ಶೇವಾRರಿನ ಮಹಾಬಲೇಶ್ವರ ಹೆಬ್ಟಾರ್‌ ಅವರ ಅಷ್ಟಮ ಪುತ್ರರಾಗಿ ಜನಿಸಿದ ಇವರು ಹೊನ್ನಾವರದ ಧರ್ಮಶಾಲಾದಲ್ಲಿಯೇ ಪ್ರಾಥಮಿಕ ಶಾಲೆ ಮುಗಿಸಿದರು. ಶಿಕ್ಷಣ ಮುಗಿಸಿದ ನಂತರ ಶಿವರಾಮ ಹೆಬ್ಟಾರ್‌ 1979 ರಲ್ಲಿ ಸ್ವಂತ ಲಾರಿ ಖರೀದಿಸಿ, ಚಾಲಕರಾಗಿಯೂ ಶ್ರಮಪಡುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಸಂಘಟನೆಯಲ್ಲಿಯೂ ತೊಡಗಿದ್ದರು.

ಇವರ ನಾಯಕತ್ವ ಗುಣವನ್ನು ಕಂಡವರು ಇವರನ್ನು ಪ್ರಥಮವಾಗಿ ಎಪಿಎಂಸಿ ಚುನಾವಣೆಯಲ್ಲಿ ಇಡಗುಂದಿ ಭಾಗದ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸುವ ಮೂಲಕ ರಾಜಕೀಯಕ್ಕೆ ಕರೆ ತಂದರು. ರಾಜಕೀಯ ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡಿರುವ ಶಿವರಾಮ ಹೆಬ್ಟಾರ್‌, ಜನತಾ ಪಕ್ಷದಿಂದ ಬಿಜೆಪಿ ಸೇರಿ, ಬಿಜೆಪಿಯಲ್ಲಿ ಆರು ಜಿಲ್ಲಾಧ್ಯಕ್ಷರಾಗಿ ರಾಜಕೀಯ ಅನುಭವ ಪಡೆದರು. ಜಿಲ್ಲೆಯ ಉದ್ದಗಲಕ್ಕೂ ಓಡಾಡಿ, ಘಟಾನುಘಟಿಗಳ ಒಡನಾಟದ ಮೂಲಕ ಸಂಘಟನೆ ಮೂಲ ತಿಳಿದುಕೊಂಡರು. ನಂತರ ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ,ಎಪಿಎಂಸಿ ಅಧ್ಯಕ್ಷರಾಗಿ, ವಿವಿಧ ಸಹಕಾರಿ ಸಂಘಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ ಸೇರಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾರ್ಗರೇಟ್‌ ಆಳ್ವಾ ಮುಂತಾದ ನಾಯಕರಿಗೆ ನಿಕಟರಾಗಿ, ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಮುಳುಗುತ್ತಿರುವ ಹಡಗಿನಂತಿದ್ದ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸಿದರು.

 ನೂತನವಾಗಿ ಹುಟ್ಟಿದ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಳೆದ 2008ರ ಚುನಾವಣೆಯಲ್ಲಿ ಕೇವಲ 2500 ಮತಗಳ ಅಂತರದಿಂದ ಸೋಲು ಕಂಡರು. ಸೋಲಿನಿಂದ ಧೃತಿಗೆಡದೇ 2013 ರಲ್ಲಿ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದರು.

ಸೋಲು ನಮಗೆ ನಿರೀಕ್ಷೆಯೇ ಇರಲಿಲ್ಲ. ಆದರೆ ಕೂದಲೆಳೆ ಅಂತರದಲ್ಲಿ ಸೋಲಾಗಿದೆ. ಸೋಲಿನ ಬಗ್ಗೆ ಜಿಜಾ`ಸೆ ಉಂಟಾಗಿದ್ದು ಇದರ ಒಳಗುಟ್ಟು ಬಹಿರಂಗಗೊಳ್ಳದೇ ಇರದು. ಏನಿದ್ದರೂ ಕ್ಷೇತ್ರದ ಜನ ನನಗೇ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ನಾನೆಂದೂ ಮರೆಯುವುದಿಲ್ಲ ಅಭಿನಂದಿಸುತ್ತೇನೆ.
 ವಿ.ಎಸ್‌. ಪಾಟೀಲ್‌, ಬಿಜೆಪಿ ಅಭ್ಯರ್ಥಿ

ಗೆಲುವು ನನ್ನದೇ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದೆ. ಅಭಿವೃದ್ಧಿ ಮಾಡಿದ ನನ್ನನ್ನು ಜನಾಶೀರ್ವಾದ ಮಾಡಿ ನನ್ನನ್ನೇ ಗೆಲ್ಲಿಸಿ ಪುನಃ ಕ್ಷೇತ್ರದ ಅಭಿವೃದ್ಧಿ ಬಯಸಿದ್ದಾರೆ. ಕ್ಷೇತ್ರದ ಜನತೆಗೆ ಋಣಿಯಾಗಿದ್ದೇನೆ.
 ಶಿವರಾಮ ಹೆಬ್ಟಾರ್‌ ಅರಬೈಲ್‌ ಯಲ್ಲಾಪುರ ಶಾಸಕ

ಗೆಲುವಿಗೆ ಕಾರಣವೇನು?
ಹಿಂದಿನ ಬಾರಿ 13 ಅಭ್ಯರ್ಥಿಗಳು ಕಣದಲ್ಲಿದ್ದು ಶಿವರಾಮ ಹೆಬ್ಟಾರ್‌ ಕಳೆದ ಬಾರಿ 58025 ಮತ ಪಡೆದು 24,452 ಭಾರೀ ಮತಗಳ ಅಂತರದಲ್ಲಿ ಗೆಲು ಸಾಧಿಸಿದ್ದರು. ವಿ.ಎಸ್‌. ಪಾಟೀಲ್‌ (ಬಿಜೆಪಿ) 33533. ಮತ ಪಡೆದಿದ್ದರು. ಈ ಸಲ ಜೆಡಿಎಸ್‌ ಅಭ್ಯರ್ಥಿ ಎ. ರವೀಂದ್ರ 6263 ಮತ ಪಡೆದರೂ ವಿ.ಎಸ್‌. ಪಾಟೀಲ್‌ ತನ್ನ ಮತದ ಪ್ರಮಾಣವನ್ನು ಬಲವಾಗಿ ಹೆಚ್ಚಿಸಿಕೊಳ್ಳುವ ಮೂಲಕ ಮುನ್ನೆಡೆದರೂ ಸೋಲು ಕಂಡಿದ್ದಾರೆ. ಈ ಸಲ ಕ್ಷೇತ್ರದಲ್ಲಿ 1421 ಮತಗಳು ನೋಟಾಗಳೇ ಬಿದ್ದಿವೆ.

ಸೋಲಿಗೆ ಕಾರಣವೇನು?
ಪ್ರಾರಂಭದ ದಿನದಲ್ಲಿ ಹೆಬ್ಟಾರ್‌ ಗೆಲುವು ನಿಶ್ಚಿತವೆಂದುಕೊಳ್ಳಲಾಗಿತ್ತು. ಆದರೆ ಪಾಟೀಲ್‌ಗೆ ಟಿಕೇಟ್‌ ಸಿಗುತ್ತಿದ್ದಂತೆ ಕ್ಷೇತ್ರದಲ್ಲಿ ಚುನವಣೆಯೂ ಸಮೀಪಿಸುತ್ತಿದ್ದಂತೆ ಪಾಟೀಲರೇ ಗೆಲ್ಲುವ ಲಕ್ಷಣ ಕಂಡುಬಂತು.ಇದಕ್ಕೆ ಕಾಂಗ್ರೆಸ್‌ ಗಟ್ಟಿಯಾಗಿ ಪ್ರತಿತಂತ್ರವನ್ನು ಹೂಡಿತು. ಕಾಂಗ್ರೆಸ್‌ ಕೆಲ ಬಿಜೆಪಿ ನಾಯಕರ ಕೈ ಕಟ್ಟಿಸಿತು. ಅಷ್ಟೇ ಅಲ್ಲ ಟಿಕೇಟ್‌ ಹಂಚಿಕೆಯ ಗೊಂದಲವೂ ಕಾರಣವಾಗಿದ್ದು ಹಿಂದೆಂದೂ ಇಲ್ಲದ ಗೊಂದಲ ಬಿಜೆಪಿಯಲ್ಲಿ ಸೃಷ್ಟಿಯಾಯಿತು. ಬಿಜೆಪಿಗೆ ಬಿಜೆಪಿಯವರೇ ಕೆಲವರು ಮುಳುವಾಗಿದ್ದಂತೂ ಎಲ್ಲರ ಬಾಯಿಯಲ್ಲಿ ಬರುವ ಸತ್ಯವಾಗಿದೆ.

ಟಾಪ್ ನ್ಯೂಸ್

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್‌

D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್‌

1-asdadad

Government ನೀತಿಗಳಿಂದಾಗಿ ಯಕ್ಷಗಾನ ಕ್ಷೇತ್ರ ಇಂದು ಕಷ್ಟಕ್ಕೆ ಸಿಲುಕಿದೆ:ಡಾ.ಜಿ.ಎಲ್.ಹೆಗಡೆ

Sirsi: ಶಾಸಕ ಶಿವರಾಮ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ…

Sirsi: ಶಾಸಕ ಶಿವರಾಮ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ…

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.