ಸಚಿವ ಹೆಗಡೆಯಷ್ಟು ನೀಚ ರಾಜಕಾರಣಿ ಇನ್ನೊಬ್ಬನಿಲ್ಲ: ಅಸ್ನೋಟಿಕರ್
Team Udayavani, Jun 30, 2018, 2:47 PM IST
ಕಾರವಾರ: ಸಚಿವ ಅನಂತ್ ಕುಮಾರ್ ಹೆಗಡೆಯಷ್ಟು ನೀಚ ರಾಜಕಾರಣಿ ಕರ್ನಾಟಕದಲ್ಲೂ ಇಲ್ಲ, ದೇಶದಲ್ಲೂ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಏಕವಚನದಲ್ಲೇ ನಿಂದಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ನೋಟಿಕರ್ ‘ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ ಧ್ವಜ ನಾನು ಹಾರಿಸಿದ್ದು ಎಂದು ಆರ್ಎಸ್ಎಸ್ನವರ ಬಳಿ ಹೇಳಿಕೊಂಡು 5 ಬಾರಿ ಸಂಸದನಾಗಿದ್ದಾನೆ. ಅವನಿಗೆ ಅಮಿತ್ ಶಾ ಮಿನಿಸ್ಟರ್ ಮಾಡಿದ್ರು. ಈಗ ಅವನಿಗೆ ಉಂಡ ತುತ್ತು ಹೊರಗೆ ತೆಗೆಯಲಿಕ್ಕೆ ಆಗುವುದಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಇವನು ಈ ಚುನಾವಣೆಯಲ್ಲಿ ಕಾಗೇರಿಗೆ ವಿರೋಧ ಮಾಡಿದ್ದಾನೆ . ಬಿಜೆಪಿ ಕಾರ್ಯಾಲಯದಲ್ಲಿ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರ್ಗೆ ಹೊಡೆದಿದ್ದಾನೆ. ಅಂತವನ ಕುರಿತಾಗಿ ಮಾತನಾಡುವಂತದ್ದು ಸರಿಯಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ