ಯಲ್ಲಾಪುರ : ಬಸ್ ಮೇಲೆ ಕುಸಿದ ಗುಡ್ಡ ; ಪ್ರಯಾಣಿಕರು ಪಾರು
Team Udayavani, Aug 14, 2018, 9:31 AM IST
ಯಲ್ಲಾಪುರ: ಇಲ್ಲಿನ ಅರೆಬೈಲ್ ಘಾಟ್ನಲ್ಲಿ ಭಾರೀ ಮಳೆಗೆ ಗುಡ್ಡವೊಂದು ಕುಸಿದು ಖಾಸಗಿ ಬಸ್ ಮೇಲೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಷಾತ್ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ರಸ್ತೆಗೆ ಗುಡ್ಡ ಕುಸಿದು ಬಿದ್ದ ಕಾರಣ ಹುಬ್ಬಳ್ಳಿ -ಅಂಕೋಲಾ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಪರ್ಕ ಸ್ಥಗಿತಗೊಂಡು ವಾಹನ ಸವಾರರು ಪರದಾಡಬೇಕಾಯಿತು.
ಜೆಸಿಬಿ ಯಂತ್ರದೊಂದಿಗೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಣ್ಣು ತೆರವು ಮಾಡಿಸಿ ಸಂಪರ್ಕಕ್ಕೆ ಅನುಕೂಲ ಮಾಡಿ ಕೊಟ್ಟಿರುವ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಂಭ ದ್ರೋಣ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಹಲವೆಡೆ ಗುಟ್ಟ ಕುಸಿದ ಬಗ್ಗೆ ವರದಿಯಾಗಿದೆ.