ಹಳ್ಳಿ ಹಿಂಡುತ್ತಿದೆ ಮದ್ಯ -ಮಟ್ಕಾ 


Team Udayavani, Aug 30, 2018, 4:43 PM IST

30-agust-23.jpg

ಹೊನ್ನಾವರ: ಕುಟುಂಬವನ್ನು ಸರ್ವನಾಶದತ್ತ ತಳ್ಳುವ, ಹಳ್ಳಿಗಳನ್ನು ಹಿಂಡುವ ಮದ್ಯ, ಮಟ್ಕಾ, ಜುಗಾರಿಯನ್ನು ವಿರೋಧಿಸಿ ಇಲ್ಲಿನ ಮಹಿಳೆಯರು ಈಗ ಜಾಗೃತರಾಗುತ್ತಿದ್ದಾರೆ. ನಾಲ್ಕಾರು ಹಳ್ಳಿಗಳ ಮಹಿಳೆಯರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಜನ ವಾರ್ಷಿಕ ಅಧಿಕೃತವಾಗಿ 25 ಕೋಟಿ ರೂ. ಮತ್ತು ಅನಧಿಕೃತವಾಗಿ 25 ಕೋಟಿ ರೂ. ಮದ್ಯ ಕುಡಿಯುತ್ತಿದ್ದಾರೆ.

ಸಾಧಾರಣವಾಗಿ ಸಹಿಸಿಕೊಳ್ಳುವ ಗುಣವುಳ್ಳ ಮಹಿಳೆಯರು ಹಳ್ಳಿಯ ವಾತಾವರಣ ಅಸಹನೀಯವಾಗುತ್ತಿರುವುದರಿಂದ ಬೆಳಗ್ಗೆ ಬಸ್‌ ಏರಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಬಂದು ಪ್ರತಿಭಟನೆ ಆರಂಭಿಸುತ್ತಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಆಗಾಗ ಜಂಟಿಯಾಗಿ ದಾಳಿ ನಡೆಸುವುದು ನಿಂತು ಹೋಗಿದೆ. ಪೊಲೀಸ್‌ ಅಧಿಕಾರಿಗಳು ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಚುನಾವಣೆ, ಬಂದೋಬಸ್ತ್, ನೆರೆ ತಾಲೂಕಿನ ಕರ್ತವ್ಯ ಹೀಗೆ ಪೊಲೀಸರಿಗೆ ಪುರಸೊತ್ತು ಇಲ್ಲ. ಅಬಕಾರಿಯವರಿಗೆ ಇದೆಲ್ಲ ಬೇಕಾಗಿಲ್ಲ. ಆಗೊಮ್ಮೆ ಈಗೊಮ್ಮೆ ನಾಲ್ಕಾರು ಬಾಟಲಿ ಗೋವಾ ಮದ್ಯ ಹಿಡಿದು ವರದಿ ಮಾಡಿ ಪತ್ರಿಕೆಯಲ್ಲಿ ಬರೆಸಿಕೊಂಡರೆ ಅವರ ಕೆಲಸ ಮುಗಿಯಿತು. ಆದ್ದರಿಂದ ಈಗ ಗೂಡಂಗಡಿಗಳಲ್ಲೂ, ಗಿಡಗಂಟಿಗಳ ಪೊದೆಗಳಲ್ಲಿ ಮದ್ಯ ಸಿಗುತ್ತಿದೆ. ಮಟ್ಕಾ ಚೀಟಿಯುಗದಲ್ಲಿ ಒಂದಿಷ್ಟು ಚೀಟಿ, ನಗದು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಈಗ ಮೊಬೈಲ್‌ ಯುಗದಲ್ಲಿ ಬುಕ್ಕಿಂಗ್‌, ಪೇಮೆಂಟ್‌ ಎಲ್ಲವೂ ಮೊಬೈಲ್‌ನಿಂದ ನಡೆಯುತ್ತದೆ. ಪೊಲೀಸರಿಗೆ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತಿಲ್ಲ. ಚೌತಿ ಹಬ್ಬ ಹತ್ತಿರ ಬಂದಂತೆ ಜುಗಾರಿ ಮಂಡಗಳು ಹಳೆ ಕಟ್ಟಡಗಳಲ್ಲಿ ಜೋರಾಗುತ್ತವೆ. ಊರ ಪ್ರಮುಖರ ಆಶ್ರಯ ಇರುವುದರಿಂದ ಪೊಲೀಸರಿಗೆ ಸುದ್ದಿ ಹೋಗುವುದಿಲ್ಲ.

ತಾಲೂಕಿನ ನೂರಾರು ಸ್ಥಳಗಳಲ್ಲಿ ಮದ್ಯ, ಬಿಯರ್‌ ಮಾರಾಟವಾಗುತ್ತದೆ. ಶಾಲೆ, ಕಾಲೇಜು ಮೈದಾನ, ಖಾಲಿ ಸ್ಥಳಗಳಲ್ಲಿ ಬೆಳಗಾಗುವಷ್ಟರಲ್ಲಿ ಬಾಟಲಿಗಳ ರಾಶಿ ಬಿದ್ದಿರುತ್ತದೆ. ಲಿವರ್‌ ಕೆಟ್ಟು ಆಸ್ಪತ್ರೆಗೆ ಹೋಗುವವರ ಸಂಖ್ಯೆ, ಗುಣವಾಗದವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಕುಡುಕರನ್ನು ಕಟ್ಟಿಕೊಂಡ ಹೆಂಗಸರು ಮತ್ತು ಅವರ ಮಕ್ಕಳ ಗೋಳು ಅಸಹನೀಯ.

ಕೇವಲ 10 ಅಂಗಡಿ ಮಾತ್ರ ಅಧಿಕೃತ
ತಾಲೂಕಿನಲ್ಲಿ ವರ್ಷಕ್ಕೆ ಅಧಿಕೃತವಾಗಿ 25 ಕೋಟಿ ರೂ. ಗಳು ಸರ್ಕಾರಿ ಮಾನ್ಯತೆ ಪಡೆದ ಮದ್ಯ ಮಾರಾಟವಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಕಳ್ಳಬಟ್ಟಿ, ಗೋವಾ ಮದ್ಯ ಸೇರಿ ಮಾರಾಟವಾಗುತ್ತದೆ. ಅಧಿಕೃತವಾಗಿ ತಾಲೂಕಿನಲ್ಲಿ ಕೇವಲ 10 ಅಧಿಕೃತ ಅಂಗಡಿಗಳಿವೆ. ಇಲ್ಲಿ ದಿನಕ್ಕೆ ಸರಾಸರಿ 160 ಪೆಟ್ಟಿಗೆ ಮದ್ಯದಂತೆ ವರ್ಷಕ್ಕೆ 58,400 ಪೆಟ್ಟಿಗೆ ಮದ್ಯ ಮತ್ತು ದಿನಕ್ಕೆ 90ರಂತೆ 32,850 ಬಿಯರ್‌ ಬಾಟಲಿಗಳು ಅಧಿಕೃತವಾಗಿ ಮಾರಾಟವಾಗುತ್ತವೆ. ಸೆಚೆಟ್ಸ್‌ ಮತ್ತು ಗೋವಾ, ಕಳ್ಳಬಟ್ಟಿ ಸೇರಿದರೆ ಲೆಕ್ಕ ಇಟ್ಟವರಿಲ್ಲ.

ನಡೆಯಬೇಕಿದೆ ಸಾಮಾಜಿಕ ಜಾಗೃತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಂಟ್‌ ಇಗ್ನೇಷಿಯಸ್‌ ಆಸ್ಪತ್ರೆ ಮದ್ಯಪಾನ ನಿವಾರಣ ಶಿಬಿರಗಳನ್ನು ಸತತ ನಡೆಸುತ್ತಿದ್ದರೂ ಶಿಬಿರಕ್ಕೆ ಹೋದವರಲ್ಲಿ ಹೆಚ್ಚಿನವರು ಕುಡಿತ ಬಿಟ್ಟರು, ಕೆಲವರು ಪುನಃ ಆರಂಭಿಸಿದರು. ಸರ್ಕಾರದ ಶಿಸ್ತುಕ್ರಮದ ಜೊತೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪರಿಸ್ಥಿತಿ ಗಂಭೀರವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮದ್ಯ, ಗುಟ್ಕಾ, ಮಟ್ಕಾಗಳನ್ನು ನಿಯಂತ್ರಿಸದಿದ್ದರೆ ಹಳ್ಳಿಗಳು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. 

ಜೀಯು ಹೊನ್ನಾವರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.