ಹಳ್ಳಿ ಹಿಂಡುತ್ತಿದೆ ಮದ್ಯ -ಮಟ್ಕಾ 


Team Udayavani, Aug 30, 2018, 4:43 PM IST

30-agust-23.jpg

ಹೊನ್ನಾವರ: ಕುಟುಂಬವನ್ನು ಸರ್ವನಾಶದತ್ತ ತಳ್ಳುವ, ಹಳ್ಳಿಗಳನ್ನು ಹಿಂಡುವ ಮದ್ಯ, ಮಟ್ಕಾ, ಜುಗಾರಿಯನ್ನು ವಿರೋಧಿಸಿ ಇಲ್ಲಿನ ಮಹಿಳೆಯರು ಈಗ ಜಾಗೃತರಾಗುತ್ತಿದ್ದಾರೆ. ನಾಲ್ಕಾರು ಹಳ್ಳಿಗಳ ಮಹಿಳೆಯರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಜನ ವಾರ್ಷಿಕ ಅಧಿಕೃತವಾಗಿ 25 ಕೋಟಿ ರೂ. ಮತ್ತು ಅನಧಿಕೃತವಾಗಿ 25 ಕೋಟಿ ರೂ. ಮದ್ಯ ಕುಡಿಯುತ್ತಿದ್ದಾರೆ.

ಸಾಧಾರಣವಾಗಿ ಸಹಿಸಿಕೊಳ್ಳುವ ಗುಣವುಳ್ಳ ಮಹಿಳೆಯರು ಹಳ್ಳಿಯ ವಾತಾವರಣ ಅಸಹನೀಯವಾಗುತ್ತಿರುವುದರಿಂದ ಬೆಳಗ್ಗೆ ಬಸ್‌ ಏರಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಬಂದು ಪ್ರತಿಭಟನೆ ಆರಂಭಿಸುತ್ತಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಆಗಾಗ ಜಂಟಿಯಾಗಿ ದಾಳಿ ನಡೆಸುವುದು ನಿಂತು ಹೋಗಿದೆ. ಪೊಲೀಸ್‌ ಅಧಿಕಾರಿಗಳು ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಚುನಾವಣೆ, ಬಂದೋಬಸ್ತ್, ನೆರೆ ತಾಲೂಕಿನ ಕರ್ತವ್ಯ ಹೀಗೆ ಪೊಲೀಸರಿಗೆ ಪುರಸೊತ್ತು ಇಲ್ಲ. ಅಬಕಾರಿಯವರಿಗೆ ಇದೆಲ್ಲ ಬೇಕಾಗಿಲ್ಲ. ಆಗೊಮ್ಮೆ ಈಗೊಮ್ಮೆ ನಾಲ್ಕಾರು ಬಾಟಲಿ ಗೋವಾ ಮದ್ಯ ಹಿಡಿದು ವರದಿ ಮಾಡಿ ಪತ್ರಿಕೆಯಲ್ಲಿ ಬರೆಸಿಕೊಂಡರೆ ಅವರ ಕೆಲಸ ಮುಗಿಯಿತು. ಆದ್ದರಿಂದ ಈಗ ಗೂಡಂಗಡಿಗಳಲ್ಲೂ, ಗಿಡಗಂಟಿಗಳ ಪೊದೆಗಳಲ್ಲಿ ಮದ್ಯ ಸಿಗುತ್ತಿದೆ. ಮಟ್ಕಾ ಚೀಟಿಯುಗದಲ್ಲಿ ಒಂದಿಷ್ಟು ಚೀಟಿ, ನಗದು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಈಗ ಮೊಬೈಲ್‌ ಯುಗದಲ್ಲಿ ಬುಕ್ಕಿಂಗ್‌, ಪೇಮೆಂಟ್‌ ಎಲ್ಲವೂ ಮೊಬೈಲ್‌ನಿಂದ ನಡೆಯುತ್ತದೆ. ಪೊಲೀಸರಿಗೆ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತಿಲ್ಲ. ಚೌತಿ ಹಬ್ಬ ಹತ್ತಿರ ಬಂದಂತೆ ಜುಗಾರಿ ಮಂಡಗಳು ಹಳೆ ಕಟ್ಟಡಗಳಲ್ಲಿ ಜೋರಾಗುತ್ತವೆ. ಊರ ಪ್ರಮುಖರ ಆಶ್ರಯ ಇರುವುದರಿಂದ ಪೊಲೀಸರಿಗೆ ಸುದ್ದಿ ಹೋಗುವುದಿಲ್ಲ.

ತಾಲೂಕಿನ ನೂರಾರು ಸ್ಥಳಗಳಲ್ಲಿ ಮದ್ಯ, ಬಿಯರ್‌ ಮಾರಾಟವಾಗುತ್ತದೆ. ಶಾಲೆ, ಕಾಲೇಜು ಮೈದಾನ, ಖಾಲಿ ಸ್ಥಳಗಳಲ್ಲಿ ಬೆಳಗಾಗುವಷ್ಟರಲ್ಲಿ ಬಾಟಲಿಗಳ ರಾಶಿ ಬಿದ್ದಿರುತ್ತದೆ. ಲಿವರ್‌ ಕೆಟ್ಟು ಆಸ್ಪತ್ರೆಗೆ ಹೋಗುವವರ ಸಂಖ್ಯೆ, ಗುಣವಾಗದವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಕುಡುಕರನ್ನು ಕಟ್ಟಿಕೊಂಡ ಹೆಂಗಸರು ಮತ್ತು ಅವರ ಮಕ್ಕಳ ಗೋಳು ಅಸಹನೀಯ.

ಕೇವಲ 10 ಅಂಗಡಿ ಮಾತ್ರ ಅಧಿಕೃತ
ತಾಲೂಕಿನಲ್ಲಿ ವರ್ಷಕ್ಕೆ ಅಧಿಕೃತವಾಗಿ 25 ಕೋಟಿ ರೂ. ಗಳು ಸರ್ಕಾರಿ ಮಾನ್ಯತೆ ಪಡೆದ ಮದ್ಯ ಮಾರಾಟವಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಕಳ್ಳಬಟ್ಟಿ, ಗೋವಾ ಮದ್ಯ ಸೇರಿ ಮಾರಾಟವಾಗುತ್ತದೆ. ಅಧಿಕೃತವಾಗಿ ತಾಲೂಕಿನಲ್ಲಿ ಕೇವಲ 10 ಅಧಿಕೃತ ಅಂಗಡಿಗಳಿವೆ. ಇಲ್ಲಿ ದಿನಕ್ಕೆ ಸರಾಸರಿ 160 ಪೆಟ್ಟಿಗೆ ಮದ್ಯದಂತೆ ವರ್ಷಕ್ಕೆ 58,400 ಪೆಟ್ಟಿಗೆ ಮದ್ಯ ಮತ್ತು ದಿನಕ್ಕೆ 90ರಂತೆ 32,850 ಬಿಯರ್‌ ಬಾಟಲಿಗಳು ಅಧಿಕೃತವಾಗಿ ಮಾರಾಟವಾಗುತ್ತವೆ. ಸೆಚೆಟ್ಸ್‌ ಮತ್ತು ಗೋವಾ, ಕಳ್ಳಬಟ್ಟಿ ಸೇರಿದರೆ ಲೆಕ್ಕ ಇಟ್ಟವರಿಲ್ಲ.

ನಡೆಯಬೇಕಿದೆ ಸಾಮಾಜಿಕ ಜಾಗೃತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಂಟ್‌ ಇಗ್ನೇಷಿಯಸ್‌ ಆಸ್ಪತ್ರೆ ಮದ್ಯಪಾನ ನಿವಾರಣ ಶಿಬಿರಗಳನ್ನು ಸತತ ನಡೆಸುತ್ತಿದ್ದರೂ ಶಿಬಿರಕ್ಕೆ ಹೋದವರಲ್ಲಿ ಹೆಚ್ಚಿನವರು ಕುಡಿತ ಬಿಟ್ಟರು, ಕೆಲವರು ಪುನಃ ಆರಂಭಿಸಿದರು. ಸರ್ಕಾರದ ಶಿಸ್ತುಕ್ರಮದ ಜೊತೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪರಿಸ್ಥಿತಿ ಗಂಭೀರವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮದ್ಯ, ಗುಟ್ಕಾ, ಮಟ್ಕಾಗಳನ್ನು ನಿಯಂತ್ರಿಸದಿದ್ದರೆ ಹಳ್ಳಿಗಳು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. 

ಜೀಯು ಹೊನ್ನಾವರ

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.