ಹಳ್ಳಿ ಹಿಂಡುತ್ತಿದೆ ಮದ್ಯ -ಮಟ್ಕಾ
Team Udayavani, Aug 30, 2018, 4:43 PM IST
ಹೊನ್ನಾವರ: ಕುಟುಂಬವನ್ನು ಸರ್ವನಾಶದತ್ತ ತಳ್ಳುವ, ಹಳ್ಳಿಗಳನ್ನು ಹಿಂಡುವ ಮದ್ಯ, ಮಟ್ಕಾ, ಜುಗಾರಿಯನ್ನು ವಿರೋಧಿಸಿ ಇಲ್ಲಿನ ಮಹಿಳೆಯರು ಈಗ ಜಾಗೃತರಾಗುತ್ತಿದ್ದಾರೆ. ನಾಲ್ಕಾರು ಹಳ್ಳಿಗಳ ಮಹಿಳೆಯರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಜನ ವಾರ್ಷಿಕ ಅಧಿಕೃತವಾಗಿ 25 ಕೋಟಿ ರೂ. ಮತ್ತು ಅನಧಿಕೃತವಾಗಿ 25 ಕೋಟಿ ರೂ. ಮದ್ಯ ಕುಡಿಯುತ್ತಿದ್ದಾರೆ.
ಸಾಧಾರಣವಾಗಿ ಸಹಿಸಿಕೊಳ್ಳುವ ಗುಣವುಳ್ಳ ಮಹಿಳೆಯರು ಹಳ್ಳಿಯ ವಾತಾವರಣ ಅಸಹನೀಯವಾಗುತ್ತಿರುವುದರಿಂದ ಬೆಳಗ್ಗೆ ಬಸ್ ಏರಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದು ಪ್ರತಿಭಟನೆ ಆರಂಭಿಸುತ್ತಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಆಗಾಗ ಜಂಟಿಯಾಗಿ ದಾಳಿ ನಡೆಸುವುದು ನಿಂತು ಹೋಗಿದೆ. ಪೊಲೀಸ್ ಅಧಿಕಾರಿಗಳು ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಚುನಾವಣೆ, ಬಂದೋಬಸ್ತ್, ನೆರೆ ತಾಲೂಕಿನ ಕರ್ತವ್ಯ ಹೀಗೆ ಪೊಲೀಸರಿಗೆ ಪುರಸೊತ್ತು ಇಲ್ಲ. ಅಬಕಾರಿಯವರಿಗೆ ಇದೆಲ್ಲ ಬೇಕಾಗಿಲ್ಲ. ಆಗೊಮ್ಮೆ ಈಗೊಮ್ಮೆ ನಾಲ್ಕಾರು ಬಾಟಲಿ ಗೋವಾ ಮದ್ಯ ಹಿಡಿದು ವರದಿ ಮಾಡಿ ಪತ್ರಿಕೆಯಲ್ಲಿ ಬರೆಸಿಕೊಂಡರೆ ಅವರ ಕೆಲಸ ಮುಗಿಯಿತು. ಆದ್ದರಿಂದ ಈಗ ಗೂಡಂಗಡಿಗಳಲ್ಲೂ, ಗಿಡಗಂಟಿಗಳ ಪೊದೆಗಳಲ್ಲಿ ಮದ್ಯ ಸಿಗುತ್ತಿದೆ. ಮಟ್ಕಾ ಚೀಟಿಯುಗದಲ್ಲಿ ಒಂದಿಷ್ಟು ಚೀಟಿ, ನಗದು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಈಗ ಮೊಬೈಲ್ ಯುಗದಲ್ಲಿ ಬುಕ್ಕಿಂಗ್, ಪೇಮೆಂಟ್ ಎಲ್ಲವೂ ಮೊಬೈಲ್ನಿಂದ ನಡೆಯುತ್ತದೆ. ಪೊಲೀಸರಿಗೆ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತಿಲ್ಲ. ಚೌತಿ ಹಬ್ಬ ಹತ್ತಿರ ಬಂದಂತೆ ಜುಗಾರಿ ಮಂಡಗಳು ಹಳೆ ಕಟ್ಟಡಗಳಲ್ಲಿ ಜೋರಾಗುತ್ತವೆ. ಊರ ಪ್ರಮುಖರ ಆಶ್ರಯ ಇರುವುದರಿಂದ ಪೊಲೀಸರಿಗೆ ಸುದ್ದಿ ಹೋಗುವುದಿಲ್ಲ.
ತಾಲೂಕಿನ ನೂರಾರು ಸ್ಥಳಗಳಲ್ಲಿ ಮದ್ಯ, ಬಿಯರ್ ಮಾರಾಟವಾಗುತ್ತದೆ. ಶಾಲೆ, ಕಾಲೇಜು ಮೈದಾನ, ಖಾಲಿ ಸ್ಥಳಗಳಲ್ಲಿ ಬೆಳಗಾಗುವಷ್ಟರಲ್ಲಿ ಬಾಟಲಿಗಳ ರಾಶಿ ಬಿದ್ದಿರುತ್ತದೆ. ಲಿವರ್ ಕೆಟ್ಟು ಆಸ್ಪತ್ರೆಗೆ ಹೋಗುವವರ ಸಂಖ್ಯೆ, ಗುಣವಾಗದವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಕುಡುಕರನ್ನು ಕಟ್ಟಿಕೊಂಡ ಹೆಂಗಸರು ಮತ್ತು ಅವರ ಮಕ್ಕಳ ಗೋಳು ಅಸಹನೀಯ.
ಕೇವಲ 10 ಅಂಗಡಿ ಮಾತ್ರ ಅಧಿಕೃತ
ತಾಲೂಕಿನಲ್ಲಿ ವರ್ಷಕ್ಕೆ ಅಧಿಕೃತವಾಗಿ 25 ಕೋಟಿ ರೂ. ಗಳು ಸರ್ಕಾರಿ ಮಾನ್ಯತೆ ಪಡೆದ ಮದ್ಯ ಮಾರಾಟವಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಕಳ್ಳಬಟ್ಟಿ, ಗೋವಾ ಮದ್ಯ ಸೇರಿ ಮಾರಾಟವಾಗುತ್ತದೆ. ಅಧಿಕೃತವಾಗಿ ತಾಲೂಕಿನಲ್ಲಿ ಕೇವಲ 10 ಅಧಿಕೃತ ಅಂಗಡಿಗಳಿವೆ. ಇಲ್ಲಿ ದಿನಕ್ಕೆ ಸರಾಸರಿ 160 ಪೆಟ್ಟಿಗೆ ಮದ್ಯದಂತೆ ವರ್ಷಕ್ಕೆ 58,400 ಪೆಟ್ಟಿಗೆ ಮದ್ಯ ಮತ್ತು ದಿನಕ್ಕೆ 90ರಂತೆ 32,850 ಬಿಯರ್ ಬಾಟಲಿಗಳು ಅಧಿಕೃತವಾಗಿ ಮಾರಾಟವಾಗುತ್ತವೆ. ಸೆಚೆಟ್ಸ್ ಮತ್ತು ಗೋವಾ, ಕಳ್ಳಬಟ್ಟಿ ಸೇರಿದರೆ ಲೆಕ್ಕ ಇಟ್ಟವರಿಲ್ಲ.
ನಡೆಯಬೇಕಿದೆ ಸಾಮಾಜಿಕ ಜಾಗೃತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ ಮದ್ಯಪಾನ ನಿವಾರಣ ಶಿಬಿರಗಳನ್ನು ಸತತ ನಡೆಸುತ್ತಿದ್ದರೂ ಶಿಬಿರಕ್ಕೆ ಹೋದವರಲ್ಲಿ ಹೆಚ್ಚಿನವರು ಕುಡಿತ ಬಿಟ್ಟರು, ಕೆಲವರು ಪುನಃ ಆರಂಭಿಸಿದರು. ಸರ್ಕಾರದ ಶಿಸ್ತುಕ್ರಮದ ಜೊತೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪರಿಸ್ಥಿತಿ ಗಂಭೀರವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮದ್ಯ, ಗುಟ್ಕಾ, ಮಟ್ಕಾಗಳನ್ನು ನಿಯಂತ್ರಿಸದಿದ್ದರೆ ಹಳ್ಳಿಗಳು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ.
ಜೀಯು ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ