ಹಸಿರು ಹೊನ್ನಿನ ಹೈಗುಂದದಲ್ಲಿ ದುರ್ಗಾಂಬಾ ಸನ್ನಿಧಿ


Team Udayavani, Aug 31, 2018, 5:09 PM IST

31-agust-22.jpg

ಹೊನ್ನಾವರ: ಶರಾವತಿ ನದಿ ಮಧ್ಯೆ ಇರುವ 100ಎಕರೆ ವಿಸ್ತೀರ್ಣದ ಹೈಗುಂದ ನಡುಗಡ್ಡೆ ಹಸಿರು ಹೊನ್ನಿನಿಂದ ಶೋಭಿಸುತ್ತಿದೆ. 

ಗ್ರಾಮದೇವತೆ ದುರ್ಗಾಂಬಾ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.  ಮಯೂರವರ್ಮ ಬ್ರಾಹ್ಮಣರಿಗೆ ವಿದೇಶಿ ದಾಳಿಯಿಂದ ರಕ್ಷಣೆ ಪಡೆದು ಯಜ್ಞ, ಜಾಗಾದಿಗಳನ್ನು ನಡೆಸಿಕೊಂಡು ಹೋಗಲು ಈ ನಡುಗಡ್ಡೆಯನ್ನು ಉಂಬಳಿಯಾಗಿ ಕೊಟ್ಟಿದ್ದ, ಬಹುಕಾಲ ಇಲ್ಲಿ ಯಜ್ಞ, ಯಾಗಾದಿಗಳು ನಡೆದಿದ್ದವು ಎಂಬುದಕ್ಕೆ ಗುಹೆ, ಭಿನ್ನವಾದ ಮೂರ್ತಿಗಳು, ಯಜ್ಞಕುಂಡ ಈಗಲೂ ಕಾಣಸಿಗುತ್ತವೆ. ಹೈಗರ ಗುಂದ ಹೈಗುಂದವಾಯಿತು. ನೆರೆಯಿಂದ ಪ್ರತಿಬಾರಿ ಸಂಕಟಪಡುತ್ತಿದ್ದ ಈ ನಡುಗಡ್ಡೆಯ ಬ್ರಾಹ್ಮಣರು ಒಬ್ಬೊಬ್ಬರಾಗಿ ಊರು ಬಿಟ್ಟಿದ್ದರು. ಪ್ರತಿವರ್ಷ ನೆರೆ ತರುವ ಕೆಂಪು ಮಣ್ಣು, ಒಣಗಿದ ಎಲೆಗಳ ರಾಶಿಯಿಂದಾಗಿ ಗೊಬ್ಬರವಿಲ್ಲದೆ ಸಮೃದ್ಧ ಬೆಳೆ ಬರುತ್ತಿತ್ತು. ಇಲ್ಲಿಯ ಬೆಲ್ಲ ಪ್ರಸಿದ್ಧವಾಗಿತ್ತು. ಈಗ ಎರಡು ಬ್ರಾಹ್ಮಣ ಕುಟುಂಬಗಳು, 63 ಶ್ರಮಜೀವಿ ರೈತ ಕುಟುಂಬಗಳು ಈ ನಡುಗಡ್ಡೆಯಲ್ಲಿದೆ. 1980ರ ನೆರೆ ಈ ಊರನ್ನು ಸಂಪೂರ್ಣ ಮುಳುಗಿಸಿ ಮನೆಗಳ ಮೇಲೆ 6ಅಡಿ ನೀರು ಹರಿದು ಹೋಗಿತ್ತು. ಆಗ ಹೆಚ್ಚಿನವರು ಊರು ಬಿಟ್ಟಿದ್ದರು. ಈ ವರ್ಷದ ನೆರೆ ಗದ್ದೆ, ತೋಟಗಳನ್ನು ಹಾಯ್ದು ಹೋಗಿದೆ. ನೆರೆ ಇಳಿದ ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಮಂಕಾಳ ವೈದ್ಯ ಶಾಸಕರಾಗಿದ್ದಾಗ ಹೈಗುಂದಕ್ಕೆ ಸೇತುವೆ ನಿರ್ಮಾಣವಾಗಿದೆ. ಸುತ್ತಲೂ ನೀರು ಗುಡ್ಡ, ಬೆಟ್ಟಗಳಿಂದ ಆವೃತವಾದ ಈ ಊರು ಸುಂದರ. ಇಲ್ಲಿಯ ಪ್ರಕೃತಿಗೆ ಪೂರಕವಾಗಿ ದುರ್ಗಾಂಬಾ ದೇವಸ್ಥಾನವಿದೆ. ಶ್ರಾವಣ ಮಾಸದಲ್ಲಿ ದೇವಿಗೆ ದಿನಕ್ಕೊಂದು ಅಲಂಕಾರ, ಒಂದು ದಿನ ಮಲ್ಲಿಗೆ ಮೈತುಂಬಿದರೆ, ವರಮಹಾಲಕ್ಷ್ಮೀ ವ್ರತದ ದಿನ ದೇವಿಗೆ ಅರಶಿಣದ ಅಲಂಕಾರ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ, ಸ್ಪಟಿಕದಂತಹ ಶರಾವತಿ ಪ್ರವಾಹ ಹರಿಯುತ್ತಿರುವಾಗ ಎತ್ತರದಲ್ಲಿ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಮಯ ಕಳೆಯುವುದು ಅಪ್ಯಾಯಮಾನ.

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.