ಹಸಿರು ಹೊನ್ನಿನ ಹೈಗುಂದದಲ್ಲಿ ದುರ್ಗಾಂಬಾ ಸನ್ನಿಧಿ


Team Udayavani, Aug 31, 2018, 5:09 PM IST

31-agust-22.jpg

ಹೊನ್ನಾವರ: ಶರಾವತಿ ನದಿ ಮಧ್ಯೆ ಇರುವ 100ಎಕರೆ ವಿಸ್ತೀರ್ಣದ ಹೈಗುಂದ ನಡುಗಡ್ಡೆ ಹಸಿರು ಹೊನ್ನಿನಿಂದ ಶೋಭಿಸುತ್ತಿದೆ. 

ಗ್ರಾಮದೇವತೆ ದುರ್ಗಾಂಬಾ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.  ಮಯೂರವರ್ಮ ಬ್ರಾಹ್ಮಣರಿಗೆ ವಿದೇಶಿ ದಾಳಿಯಿಂದ ರಕ್ಷಣೆ ಪಡೆದು ಯಜ್ಞ, ಜಾಗಾದಿಗಳನ್ನು ನಡೆಸಿಕೊಂಡು ಹೋಗಲು ಈ ನಡುಗಡ್ಡೆಯನ್ನು ಉಂಬಳಿಯಾಗಿ ಕೊಟ್ಟಿದ್ದ, ಬಹುಕಾಲ ಇಲ್ಲಿ ಯಜ್ಞ, ಯಾಗಾದಿಗಳು ನಡೆದಿದ್ದವು ಎಂಬುದಕ್ಕೆ ಗುಹೆ, ಭಿನ್ನವಾದ ಮೂರ್ತಿಗಳು, ಯಜ್ಞಕುಂಡ ಈಗಲೂ ಕಾಣಸಿಗುತ್ತವೆ. ಹೈಗರ ಗುಂದ ಹೈಗುಂದವಾಯಿತು. ನೆರೆಯಿಂದ ಪ್ರತಿಬಾರಿ ಸಂಕಟಪಡುತ್ತಿದ್ದ ಈ ನಡುಗಡ್ಡೆಯ ಬ್ರಾಹ್ಮಣರು ಒಬ್ಬೊಬ್ಬರಾಗಿ ಊರು ಬಿಟ್ಟಿದ್ದರು. ಪ್ರತಿವರ್ಷ ನೆರೆ ತರುವ ಕೆಂಪು ಮಣ್ಣು, ಒಣಗಿದ ಎಲೆಗಳ ರಾಶಿಯಿಂದಾಗಿ ಗೊಬ್ಬರವಿಲ್ಲದೆ ಸಮೃದ್ಧ ಬೆಳೆ ಬರುತ್ತಿತ್ತು. ಇಲ್ಲಿಯ ಬೆಲ್ಲ ಪ್ರಸಿದ್ಧವಾಗಿತ್ತು. ಈಗ ಎರಡು ಬ್ರಾಹ್ಮಣ ಕುಟುಂಬಗಳು, 63 ಶ್ರಮಜೀವಿ ರೈತ ಕುಟುಂಬಗಳು ಈ ನಡುಗಡ್ಡೆಯಲ್ಲಿದೆ. 1980ರ ನೆರೆ ಈ ಊರನ್ನು ಸಂಪೂರ್ಣ ಮುಳುಗಿಸಿ ಮನೆಗಳ ಮೇಲೆ 6ಅಡಿ ನೀರು ಹರಿದು ಹೋಗಿತ್ತು. ಆಗ ಹೆಚ್ಚಿನವರು ಊರು ಬಿಟ್ಟಿದ್ದರು. ಈ ವರ್ಷದ ನೆರೆ ಗದ್ದೆ, ತೋಟಗಳನ್ನು ಹಾಯ್ದು ಹೋಗಿದೆ. ನೆರೆ ಇಳಿದ ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಮಂಕಾಳ ವೈದ್ಯ ಶಾಸಕರಾಗಿದ್ದಾಗ ಹೈಗುಂದಕ್ಕೆ ಸೇತುವೆ ನಿರ್ಮಾಣವಾಗಿದೆ. ಸುತ್ತಲೂ ನೀರು ಗುಡ್ಡ, ಬೆಟ್ಟಗಳಿಂದ ಆವೃತವಾದ ಈ ಊರು ಸುಂದರ. ಇಲ್ಲಿಯ ಪ್ರಕೃತಿಗೆ ಪೂರಕವಾಗಿ ದುರ್ಗಾಂಬಾ ದೇವಸ್ಥಾನವಿದೆ. ಶ್ರಾವಣ ಮಾಸದಲ್ಲಿ ದೇವಿಗೆ ದಿನಕ್ಕೊಂದು ಅಲಂಕಾರ, ಒಂದು ದಿನ ಮಲ್ಲಿಗೆ ಮೈತುಂಬಿದರೆ, ವರಮಹಾಲಕ್ಷ್ಮೀ ವ್ರತದ ದಿನ ದೇವಿಗೆ ಅರಶಿಣದ ಅಲಂಕಾರ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ, ಸ್ಪಟಿಕದಂತಹ ಶರಾವತಿ ಪ್ರವಾಹ ಹರಿಯುತ್ತಿರುವಾಗ ಎತ್ತರದಲ್ಲಿ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಮಯ ಕಳೆಯುವುದು ಅಪ್ಯಾಯಮಾನ.

ಟಾಪ್ ನ್ಯೂಸ್

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.