ಸಿದ್ದಾಪುರಕ್ಕೆ ಮಾವಿನಗುಂಡಿ ಕಸ ತರದಂತೆ ಠರಾವು 


Team Udayavani, Sep 6, 2018, 4:10 PM IST

6-september-20.jpg

ಸಿದ್ದಾಪುರ: ಪಟ್ಟಣ ಪಂಚಾಯತ್‌ ಘನತ್ಯಾಜ್ಯ ಘಟಕಕ್ಕೆ ತಾಲೂಕಿನ ಮಾವಿನಗುಂಡಿಯ ಕಸವನ್ನು ಇನ್ನುಮುಂದೆ ತರದಂತೆ ತೀರ್ಮಾನಿಸಲಾಗಿದ್ದು, ಈ ಕುರಿತು ಪ.ಪಂ ಅಧ್ಯಕ್ಷೆ ಸುಮನಾ ಸತೀಶ ಕಾಮತ್‌ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಠರಾಯಿಸಲಾಯಿತು. ಸಭೆಯಲ್ಲಿ ಸದಸ್ಯ ಕೆ.ಜಿ. ನಾಯ್ಕ ವಿಷಯ ಪ್ರಸ್ತಾಪಿಸಿ, ತಾಲೂಕಿನ ಮಾವಿನಗುಂಡಿಯಲ್ಲಿಯ ಕಸಗಳನ್ನು ಪಪಂ ವಾಹನದಲ್ಲಿ ಇಲ್ಲಿಯ ಸಿಬ್ಬಂದಿ ಹೋಗಿ ತರುತ್ತಿದ್ದಾರೆ. ಇದನ್ನು ತರುವುದಕ್ಕೆ ಯಾರು ಹೇಳಿದ್ದಾರೆ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಈ ಬಗ್ಗೆ ಒಂದು ಸಭೆಯಲ್ಲಿ ಶಿರಸಿ ಎಸಿಯವರು ಮೌಖಿಕವಾಗಿ ಸೂಚಿಸಿದ್ದರು. 15 ದಿನಕ್ಕೆ ಒಮ್ಮೆ ಹೋಗಿ ತರುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಕೆ.ಜಿ. ನಾಯ್ಕ ಪಟ್ಟಣ ಪಂಚಾಯತದಲ್ಲಿಯೇ ಸರಿಯಾಗಿ ಕಸಗಳ ನಿರ್ವಹಣೆ ಮಾಡಲು ಆಗುತ್ತಿಲ್ಲ. ಮೊದಲು ನಾವು ಸರಿಪಡಿಸಿಕೊಂಡು ನಂತರ ಬೇರೆಯವರ ಕೆಲಸ ಮಾಡಬೇಕು. ಮೇಲಾಧಿಕಾರಿಗಳು ಹೇಳಿದ್ದಾರೆ ಎಂದು ಎಲ್ಲವನ್ನು ಮಾಡಲು ಆಗುವುದಿಲ್ಲ. ಅವರು ಅಧಿಕೃತ ಆದೇಶ ನೀಡಿಲ್ಲ ಎಂದ ಮೇಲೆ ಮತ್ತೆ ಯಾಕೆ ಪಟ್ಟಣ ಪಂಚಾಯತ್‌ ವಾಹನವನ್ನು ಮಾವಿನಗುಂಡಿ ಕಸ ವಿಲೆವಾರಿಗೆ ಕಳುಹಿಸಿದ್ದಿರಿ ಎಂದರು. ಈ ಕುರಿತು ಎಲ್ಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಇನ್ನು ಮುಂದೆ ಮಾವಿನಗುಂಡಿಯ ಕಸವನ್ನು ಪಟ್ಟಣ ಪಂಚಾಯತದಿಂದ ತರದಿರುವಂತೆ ಸಭೆಯು ಠರಾವಿಸಿತು.

ಜಮಾ ಖರ್ಚು ವಿಷಯದ ಕುರಿತು ವಿವರವನ್ನು ನೀಡಿದಾಗ ವಾಹನಗಳ ಇಂಧನ ಹಾಕಿಸಿರುವ ಹಣ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚಾಗಿರುವ ಬಗ್ಗೆ ಚರ್ಚೆ ನಡೆಯಿತು. ಈ ಹಿಂದೆ ಕಡಿಮೆಯಾಗುತ್ತಿತ್ತು. ಈಗ ಇಂಧನದ ಖರ್ಚು ಹೆಚ್ಚಾಗಿದೆ. ಈ ಬಗ್ಗೆ ವಿವರವನ್ನು ಕೇಳಿದರು. ಆ ಕುರಿತು ಮುಂದಿನ ಸಭೆಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ಕೆ.ಜಿ. ನಾಗರಾಜ ಸೂಚಿಸಿದರು. ಪಪಂ ಆದಾಯವನ್ನು ಹೆಚ್ಚಿಸುವುದು ಕಷ್ಟ, ಕಾರಣ ಖರ್ಚನ್ನು ಕಡಿಮೆ ಮಾಡುವಂತೆ ಕೆ.ಜಿ. ನಾಯ್ಕ ಸೂಚಿಸಿದರು.

ಮನೆ ತೆರಿಗೆ ಮತ್ತು ಅಂಗಡಿಯ ಬಾಡಿಗೆ ಹಾಗೂ ಅಂಗಡಿಯ ನೆಲ ಬಾಡಿಗೆಗಳು ವಸೂಲಿ ಆಗದೆ ಇರುವ ಕುರಿತು ಕೇಳಲಾಗಿ ಸುಮಾರು 50 ಲಕ್ಷಕ್ಕೂ ಅಧಿಕ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಅದನ್ನು ವಸೂಲಿ ಮಾಡುವಂತೆ ಸಭೆಯೂ ಸೂಚಿಸಿದೆ. ದಾರಿ ದೀಪಗಳು ಎಲ್ಲಾ ಕಡೆಗಳಲ್ಲಿ ನೇತಾಡುತ್ತಿದೆ. ಸರಿಯಾಗಿ ಜೋಡಿಸಿಲ್ಲ ಎಂದು ಕೆ.ಜಿ.ನಾಗರಾಜ ಆರೋಪಿಸಿದರು. ಟ್ಯೂಬ್‌ಗಳೂ ಕಳಪೆಯದಾಗಿದೆ. ಮೂರು-ನಾಲ್ಕು ದಿನಕ್ಕೆ ಹಾಳಾಗುತ್ತಿದೆ, ಬದಲಾಯಿಸುತ್ತಿದ್ದಾರೆ ಎಂದು ಗುರುರಾಜ ಶಾನಭಾಗ ಹೇಳಿದರು. ಈ ಬಗ್ಗೆ ಸದಸ್ಯರಾದ ಮಾರುತಿ ಕಿಂದ್ರಿ, ರವಿಕುಮಾರ ನಾಯ್ಕ ಕೂಡ ಆಕ್ಷೇಪಿಸಿದರು. ಈ ವಿಷಯದ ಬಗ್ಗೆ ಸಿಬ್ಬಂದಿಯನ್ನು ಸಭೆಗೆ ಕರೆದು ಸರಿಯಾಗಿ ನಿರ್ವಹಣೆ ಮಾಡುವಂತೆ ಎಚ್ಚರಿಸಲಾಯಿತು.

ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ಟಿ.ನಾಯ್ಕ, ಸದಸ್ಯರಾದ ಸುರೇಶ ನಾಯ್ಕ , ಪುಷ್ಪಾ ಗೌಡರ, ಚಂದ್ರಮ್ಮ, ಮೋಹಿನಿ ನಾಯ್ಕ, ಪುಷ್ಪಲತಾ ನಾಯ್ಕ, ನಾಮನಿರ್ದೇಶಿತ ಸದಸ್ಯರಾದ ಜೈಜಗದೀಶ ಎ.ನಾಯ್ಕ, ಕೆ.ಟಿ.ಹೊನ್ನೆಗುಂಡಿ,ಗಣೇಶ ಶಾನಭಾಗ, ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

ಫಲಾನುಭವಿಗಳ ಆಯ್ಕೆ
2018-19 ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ ಮಂಜೂರಾದ ಕಾಮಗಾರಿಗಳ ನಿರ್ವಹಣೆಗೆ ಸ್ವೀಕೃತಿ ಟೆಂಡರ್‌ಗಳಿಗೆ ಮಂಜೂರಾತಿ ನೀಡಲಾಯಿತು. ಅರೆಂದೂರು ಮೂಲ ಸ್ಥಾವರದಲ್ಲಿರುವ 75 ಎಚ್‌ಪಿ ಸಾಮರ್ಥ್ಯದ ಪಂಪ್‌ ಮೋಟಾರು ಚಾಲನೆ ಮಾಡುವ ಬಿಡಿಭಾಗಗಳ ಬದಲಾವಣೆ ಮಾಡಿ ದುರಸ್ತಿ ಮಾಡುವ ಬಗ್ಗೆ ತೀರ್ಮಾನಿಸಿಲಾಯಿತು. 2018-19ನೇ ಸಾಲಿನ ಎಸ್‌ಎಫ್‌ಸಿ ನಿಧಿ ಮತ್ತು ಪಟ್ಟಣ ಪಂಚಾಯತ್‌ ನಿಧಿಯ ಶೇ. 24.10,7.25. ಶೇ.3 ರ ಯೋಜನೆಯಡಿಯಲ್ಲಿ ವ್ಯಕ್ತಿಗತ ಸೌಲಭ್ಯದ ಕುರಿತು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಯಿತು.

ಟಾಪ್ ನ್ಯೂಸ್

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.