16ಕ್ಕೆಹಿಂದೂಸ್ಥಾನಿ ಸಂಗೀತ ವಿಶೇಷ ಕಾರ್ಯಕ್ರಮ


Team Udayavani, Sep 12, 2018, 4:53 PM IST

12-sepctember-23.jpg

ಹೊನ್ನಾವರ: ಯಕ್ಷಗಾನ, ಜಾನಪದ ಸಂಗೀತಗಳ ಮನೆಯಾಗಿದ್ದ ಉತ್ತರ ಕನ್ನಡದಲ್ಲಿ ಶಾಸ್ತ್ರೀಯ ಸಂಗೀತದ ಅರಿವಿಲ್ಲದ ಕಾಲದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಅಂಕುರಾರ್ಪಣೆ ಮಾಡಿ, ಜೀವನದ ಇತರ ಎಲ್ಲ ಮುಖ್ಯ ವಿಷಯಗಳಿಗಿಂತ ಸಂಗೀತಕ್ಕೆ ಆದ್ಯತೆ ನೀಡಿ, ಹಿಂದುಸ್ಥಾನಿ ಸಂಗೀತದ ಬೆಳವಣಿಗೆಗೆ ಕಾರಣರಾದವರು ಕಲ್ಭಾಗ ಗೋವಿಂದ ಹೆಗಡೆಯವರು. ಅವರ ನೆನಪಿಗೆ ಗುರುನಮನ ಕಾರ್ಯಕ್ರಮ ಸೆ.16 ರಂದು ಕಲ್ಭಾಗದ ಮನೆಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ರಾತ್ರಿ 8ರ ವರೆಗೆ ನಾದಾರಾಧನೆ ನಡೆಸಿ, ಕುಟುಂಬದ 11 ಕಲಾವಿದರು ಮತ್ತು ಅತಿಥಿ ಕಲಾವಿದರು ಗುರುಗೌರವ ಸಲ್ಲಿಸಲಿದ್ದಾರೆ. ಗೋವಿಂದ ಹೆಗಡೆಯವರ ಮಗ ಪಂ| ಪರಮೇಶ್ವರ ಹೆಗಡೆ, ಪಂ| ಗೋಪಾಲಕೃಷ್ಣ ಹೆಗಡೆ, ವಿನಾಯಕ ಹೆಗಡೆ, ಶ್ರೀಧರ ಹೆಗಡೆ ಮಾತ್ರವಲ್ಲ ಹೆಣ್ಣು ಮಕ್ಕಳಾದ ಪಾರ್ವತಿ, ನಾಗವೇಣಿ, ಗೌರಿ, ಶಾರದಾಂಬಾ, ಉಮಾಂಬಾ, ಅಳಿಯ ರಾಮ ಹೆಗಡೆ, ಕೆರೆಮನೆ ಹಾಡಲಿದ್ದಾರೆ. ಸೊಸೆ ಭಾರತಿ ಗೋಪಾಲಕೃಷ್ಣ ಹೆಗಡೆ ಸಿತಾರ ನುಡಿಸುವರು. ಗೋಪಾಲಕೃಷ್ಣ ಹೆಗಡೆಯವರ ಮಗ ಓಂಕಾರ ಉತ್ತಮ ತಬಲಾ ಪಟುವಾಗಿದ್ದು ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಹೀಗೆ ಇಡೀ ಕುಟುಂಬ ರಾಜ್ಯದ ನಾನಾಭಾಗಗಳಲ್ಲಿ, ವಿನಾಯಕ ಹೆಗಡೆ ಅಮೇರಿಕಾದಲ್ಲಿ ಸಂಗೀತ ಮತ್ತು ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಗೋವಿಂದ ಹೆಗಡೆಯವರ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಸಂಗೀತ ಕಲಿಸಿದ ಗುರು ಎಸ್‌.ಎಂ. ಭಟ್‌ ಕಟ್ಟಿಗೆ, ಖ್ಯಾತ ಸಂಗೀತ ಸಂಘಟಕ ಎಸ್‌.ಶಂಭು ಭಟ್‌ ಮತ್ತು ಪ್ರಾಚಾರ್ಯ ಇಂದೂಧರ ಪೂಜಾರ ಉಪಸ್ಥಿತಿಯಲ್ಲಿ ನಾದನಮನ ನಡೆಯಲಿದೆ.

ಗೋವಿಂದ ಹೆಗಡೆಯವರು ಎಸ್‌. ಎಂ. ಭಟ್‌, ಚಂದ್ರಶೇಖರ ಪುರಾಣಿಕ ಮಠ, ಅಶೋಕ ಹುಗ್ಗಣ್ಣನವರ್‌ ಮೊದಲಾದ ಹಿರಿಯ ಕಲಾವಿದರನ್ನು ಮನೆಯಲ್ಲಿ ಉಳಿಸಿಕೊಂಡು ಮಕ್ಕಳಿಗೆ ಸಂಗೀತ ಪಾಠ ಹೇಳಿಸಿದರು. ಗೋವಿಂದ ಹೆಗಡೆಯವರಿಂದ ಸ್ಫೂರ್ತಿಗೊಂಡ ಆ ಕಾಲದ ಹಲವರು ಹಿಂದುಸ್ಥಾನಿ ಸಂಗೀತದ ಆರಾಧಕರಾದರು.

ಕಾರ್ಯಕ್ರಮದಲ್ಲಿ ಪಂಡಿತ ಪರಮೇಶ್ವರ ಹೆಗಡೆ, ಡಾ| ಅಶೋಕ ಹುಗ್ಗಣ್ಣವರ್‌, ರಾಘವೇಂದ್ರ ಉಪಾಧ್ಯಾಯ, ಶಾರದಾ ಭಟ್‌, ಕೆ.ಆರ್‌. ಶ್ರೀಲತಾ, ರಾಮ ಹೆಗಡೆ ಕೆರೆಮನೆ, ಸಹಿತ ತಬಲಾದಲ್ಲಿ ಗುರುರಾಜ, ಜಿ.ಕೆ. ಹೆಗಡೆ, ಬಾಲಚಂದ್ರ ಹೆಬ್ಟಾರ, ಅನಂತಮೂರ್ತಿ, ಸಂವಾದಿನಿಯಲ್ಲಿ ಗೌರೀಶ ಯಾಜಿ, ಮಾರುತಿ ನಾಯ್ಕ, ವಾಸುದೇವ ಸಾಮಂಣಕರ್‌ ಸಹಿತ 25ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ತಂದೆಯ ಆಶಯದಂತೆ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕಲಾವಿದರಾಗಿ ಕಲಾಕುಟುಂಬವನ್ನು ವಿಸ್ತರಿಸುತ್ತಾ ಹಿಂದುಸ್ಥಾನಿ ಸಂಗೀತಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ. ಇದಕ್ಕೆಲ್ಲಾ ಕಾರಣರಾದ ಮಹಾಗುರು ಗೋವಿಂದ ಹೆಗಡೆ ಮತ್ತು ಗಣಪಿ ಹೆಗಡೆ ಇವರ ನೆನಪಿನ ಕಾರ್ಯಕ್ರಮ ವಿರಳವಾದದ್ದು. ಕಲಾಪ್ರೇಮಿಗಳು ಬರಬೇಕು ಎಂದು ಕಲ್ಭಾಗ ಕುಟುಂಬ ಬಯಸಿದೆ.

ಜೀಯು, ಹೊನ್ನಾವರ

ಟಾಪ್ ನ್ಯೂಸ್

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.