ಯಕ್ಷಗಾನದಿಂದ ಕನ್ನಡ ಭಾಷೆ ಉಳಿವು
Team Udayavani, Nov 24, 2018, 5:50 PM IST
ಹೊನ್ನಾವರ: ಹೊಸಾಕುಳಿ ಉಮಾಮಹೇಶ್ವರ ಯಕ್ಷಗಾನ ಕಲಾವರ್ಧಕ ಸಂಘದ 39ನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣಿ ತಾಳಮದ್ದಲೆ ಕೂಟಗಳ ಸಮಾರೋಪ ಸಮಾರಂಭ ನಡೆಯಿತು.
ಯಕ್ಷಗಾನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ ನಾಯ್ಕ ಮುಗ್ವಾರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ| ಎನ್. ಆರ್. ನಾಯಕ ಮಾತನಾಡಿ ಕನ್ನಡ ಭಾಷೆ ಶುದ್ಧವಾಗಿ ಉಳಿದದ್ದು ಯಕ್ಷಗಾನದಲ್ಲಿ ಮಾತ್ರ. ಯಕ್ಷಗಾನ ಇರುವ ತನಕ ಕನ್ನಡ ಉಳಿಯುತ್ತದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘದ ಪ್ರಯತ್ನ ಪ್ರಶಂಸನೀಯ ಎಂದರು. ಮುಖ್ಯಅತಿಥಿ ಎಂ.ಆರ್. ಹೆಗಡೆ ಕಾನಗೋಡ, ಕಲಾವಿದರು ಯಕ್ಷಗಾನ ಪಾವಿತ್ರ್ಯತೆ ಉಳಿಸಿಕೊಂಡು ಹೋಗಬೇಕು ಎಂದರು. ಕ್ಷಗಾನ ಕಲಾವಿದ ಈಶ್ವರ ಭಟ್ಟ ಅಂಸಳ್ಳಿ ಸನ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಎಸ್.ಎಂ. ಹೆಗಡೆ ಮುಡಾರೆ ಮಾತನಾಡಿದರು. ಸಂಘದ ಅಧ್ಯಕ್ಷ ಡಾ| ಜಿ.ಕೆ. ಹೆಗಡೆ ಹರಿಕೇರಿ ಸ್ವಾಗತಿಸಿದರು. ಸಂಸ್ಥಾಪಕ ಅಧ್ಯಕ್ಷ ಯು.ಎಸ್. ಹೆಗಡೆ ತಗಟಗೇರಿ ವಂದಿಸಿದರು.
ಪಾದುಕಾ ಕಿರೀಟಿ ತಾಳಮದ್ದಳೆಯಲ್ಲಿ ಭಾಗವತರಾಗಿ ಸುಬ್ರಾಯ ಭಾಗವತ ಕಪ್ಪೇಕೇರಿ, ಮದ್ದಲೆ ವಾದಕರಾಗಿ ಪಿ.ಕೆ. ಹೆಗಡೆ ಹರಿಕೇರಿ, ಮಂಜುನಾಥ ಭಂಡಾರಿ ಕರ್ಕಿ, ಚಂಡೆ ವಾದಕರಾಗಿ ಕೃಷ್ಣಯಾಜಿ ಇಡಗುಂಜಿ, ಶ್ರೀರಾಮನ ಪಾತ್ರದಲ್ಲಿ ವಿಷ್ಣು ಭಟ್ಟ ನೀಲಕೋಡ, ಲಕ್ಷ್ಮಣನಾಗಿ ಈಶ್ವರ ಭಟ್ಟ ಅಂಸಳ್ಳಿ, ಭರತನಾಗಿ ಡಾ| ಜಿ.ಕೆ. ಹೆಗಡೆ ಹರಿಕೇರಿ, ವಸಿಷ್ಠನಾಗಿ ಪ್ರಭಾಕರ ಹೆಗಡೆ ಚಿಟ್ಟಾಣಿ ಭಾಗವಹಿಸಿ ರಂಜಿಸಿದರು. ಗೋವಿಂದ ಭಟ್ಟ ನೀಲಕೋಡ ನಿರೂಪಿಸಿದರು. ಸಂಘದ ಆಡಳಿತ ಸದಸ್ಯರಾದ ಜಿ.ಎಂ. ಹೆಗಡೆ, ಶಿವಪ್ಪನ್ ಹೆಬ್ಟಾರ್ತಕೇರಿ ಹಾಗೂ ಗಜಾನನ ಹೆಗಡೆ ಗುಡ್ಡೇಬಾಳ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ