ಚೌವತ್ತಿ ಚೌತಿ; ಕೆಸರಕೊಪ್ಪ ಕೆಸರಕೊಪ್ಲ ಆಯ್ತು
Team Udayavani, Dec 5, 2018, 3:06 PM IST
ಶಿರಸಿ: ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಮಾಹಿತಿ ನೀಡಬೇಕು ಎಂಬ ಕಾರಣಕ್ಕೆ ಹೆದ್ದಾರಿ ಪಕ್ಕ ಹಾಕಲಾದ ಊರುಗಳ ವಿವರದ ಹೆಸರಿನಲ್ಲೂ ಮನಸ್ಸಿಗೆ ಬಂದಂತೆ ಬರೆದು ನಿಲ್ಲಿಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಮುಖ ಊರುಗಳ ಹೆಸರುಗಳನ್ನು ಹೆದ್ದಾರಿ ದಾರಿಯಲ್ಲಿ ದಾಖಲಿಸುವದು ವಾಡಿಕೆ. ಆದರೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ಈ ಊರುಗಳ ಹೆಸರನ್ನು ಸರಿಯಾಗಿ ದಾಖಲಿಸಬೇಕಿತ್ತು.
ಆದರೆ, ಕೆಲವೊಂದು ಊರುಗಳ ಹೆಸರನ್ನು ತಪ್ಪಾಗೊ ಬರೆದು ತಪ್ಪೇ ಸರಿಯಾದ ಹೆಸರು ಎಂಬಂತೆ ಬಿಂಬಿಸಿದ್ದಾರೆ. ಯಲ್ಲಾಪುರ ಹೆದ್ದಾರಿಯ ಚೌವತ್ತಿಯನ್ನು ಚೌತಿ ಎಂದು ಕನ್ನಡದಲ್ಲಿ ಬರೆದಿದ್ದಾರೆ. ಸಿದ್ದಾಪುರ ಹೆದ್ದಾರಿಯ ಕೆಸರಕೊಪ್ಪವನ್ನು ಕೆಸರಕೊಪ್ಲ ಎಂದು ಬರೆದಿದ್ದಾರೆ. ತ್ಯಾಗಲಿ ತ್ಯಾಗಳಿ ಆಗಿದೆ. ಆಂಗ್ಲ ಅಕ್ಷರಗಳು ಸರಿಯಾಗಿದ್ದರೂ ಕನ್ನಡದ ಅಕ್ಷರ ದೋಷದಿಂದ ಕೂಡಿದೆ. ಯಾರಿಗೋ ಫಲಕ ಬರೆಯಲು ಗುತ್ತಿಗೆ ಕೊಟ್ಟ ಅಧ್ವಾನದಿಂದ ಊರುಗಳ ಹೆಸರಿಗೇ ಮಸಿ ಬಳಿಯುವ ಕಾರ್ಯವನ್ನು ಸರಕಾರದ ಇಲಾಖೆಯೇ ಮಾಡಿದಂತೆ ಆಗಿದೆ. ಇನ್ನಾದರು ಇದನ್ನು ಸರಿ ಮಾಡಿಸುವ ಕಾರ್ಯಕ್ಕೆ ಇಲಾಖೆಗಳ ಅಧಿಕಾರಿಗಳೂ ಹೋಗದಿರುವದು ಅವರಿಗೆ ಕನ್ನಡದ ಮೇಲೆ ಇರುವ ಪ್ರೇಮಕ್ಕೂ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ