ಯಕ್ಷಗಾನ ಪ್ರಶಸ್ತಿಗೆ ‘ಸಂಖ್ಯಾ’ ಗ್ರಹಣ!


Team Udayavani, Dec 14, 2018, 3:17 PM IST

14-december-16.gif

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಘೋಷಿಸಿದ 2017ರ ಪ್ರಶಸ್ತಿ ಪ್ರದಾನಕ್ಕೆ ಮುಹೂರ್ತ ಫಿಕ್ಸ್‌ ಆಗದೇ ಇರುವ ಬೆನ್ನಲ್ಲೇ ಇದೀಗ 2018ರ ವರ್ಷ ಮುಗಿಯುತ್ತ ಬಂದರೂ ಪ್ರಸಕ್ತ ಸಾಲಿನ ಪ್ರಶಸ್ತಿ ಇನ್ನೂ ಪ್ರಕಟವಾಗಿಲ್ಲ.

2017ರ ಪ್ರಶಸ್ತಿ ಘೋಷಣೆಗೆ ವಿಧಾನ ಸಭೆ ಚುನಾವಣೆ, ಸದಸ್ಯರ ನೇಮಕಾತಿ ವಿಳಂಬಗಳು ಕಾರಣವಾಗಿದ್ದರೆ ಅದರ ಪ್ರದಾನಕ್ಕೆ ಸಚಿವೆ ಜಯಮಾಲರ ದಿನಾಂಕ ಹೊಂದಾಣಿಕೆ ಆಗದೇ ಇರುವದು ವಿಳಂಬವಾಗಿದೆ. ಇನ್ನೊಂದೆಡೆ ಸರ್ಕಾರ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಗೊಳಿಸಿ ಸಲ್ಲಿಸಿದ ನೂತನ ಪ್ರಸ್ತಾವನೆಗೆ ಇನ್ನೂ ಅಧಿಕೃತ ಮುದ್ರೆ ಬೀಳದೇ ಇರುವುದು 2018ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆಗೂ ಮೀನಮೇಷ ಎಣಿಸಲಾಗುತ್ತಿದೆ.

ಯಕ್ಷಗಾನ ಅಕಾಡೆಮಿ ಕಳೆದ ಬಜೆಟ್‌ನಲ್ಲಿ ಬಯಲಾಟ ಅಕಾಡೆಮಿಯಿಂದ ಬೇರೆಯಾಗಿತ್ತು. ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿ 10ರ ಸಂಖ್ಯೆಯಲ್ಲಿದ್ದ ಪ್ರಶಸ್ತಿಯನ್ನೂ ಹಿಸ್ಸೆ ಮಾಡಲಾಯಿತು. ಯಕ್ಷಗಾನ ಅಕಾಡೆಮಿಗೆ 5 ಗೌರವ ಪ್ರಶಸ್ತಿ ಹಾಗೂ ಒಂದು ಪಾರ್ತಿಸುಬ್ಬ ಪ್ರಶಸ್ತಿಯನ್ನಷ್ಟೇ 2017ನೇ ಸಾಲಿನಲ್ಲಿ ಘೋಷಿಸಿತು. ಪಾರ್ತಿ ಸುಬ್ಬ 1 ಲಕ್ಷ ರೂ. ಆದರೆ, ಗೌರವ ಪ್ರಶಸ್ತಿ 50 ಸಾ.ರೂ. ಆಗಲಿದೆ.

ಆದರೆ, ಯಕ್ಷಗಾನ, ಮೂಡಲಪಾಯ, ಗೊಂಬೆಯಾಟದಂತಹ ಅಪರೂಪದ ಹಾಗೂ ಇನ್ನೂ ಸರ್ಕಾರದ ಪ್ರೋತ್ಸಾಹ ಬೇಕಾದ ಕಲಾ ಪ್ರಕಾರದಲ್ಲಿ ಐದಾರು ದಶಕಗಳ ಕಾಲ ನಿರಂತರವಾಗಿ ಕಾರ್ಯ ಮಾಡಿದ ಸಾಧಕರಿಗೆ, ಕಲಾವಿದರಿಗೆ ಪ್ರಶಸ್ತಿ ಕೊಡಬೇಕಾದದ್ದು ಅವರ ಕಲಾರ್ಹತೆ ದೃಷ್ಟಿಯಲ್ಲಿ ಕೂಡ ಅಕಾಡೆಮಿ ಜವಾಬ್ದಾರಿ. ಆದರೆ, ಪ್ರಶಸ್ತಿ ಕೇವಲ ಐದು ಇದ್ದರೆ ಇರುವ ಸಾವಿರಾರು ಕಲಾವಿದರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಈ ಕಾರಣದಿಂದ ಅಕಾಡೆಮಿ ಕಳೆದ ಆಗಸ್ಟ್‌ನಲ್ಲಿ ನೂತನ ಪ್ರಸ್ತಾವನೆ ಕಳುಹಿಸಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಅನುಮತಿ ಕೊಡುವಂತೆ ಹಾಗೂ ಸರ್ಕಾರಕ್ಕೆ ವಿಶೇಷ ಹೊರೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದೆ.

ಇಲ್ಲಿ ಮಾತ್ರ ಕಡಿಮೆ: ನಾಟಕ ಅಕಾಡೆಮಿ ಗೌರವ ಪ್ರಶಸ್ತಿ 10, ವಾರ್ಷಿಕ ಪ್ರಶಸ್ತಿ 25, ಜಾನಪದ ಅಕಾಡೆಮಿ ಜಿಲ್ಲೆಗೊಂದು ವಾರ್ಷಿಕ ಪ್ರಶಸ್ತಿ (30), ಸಂಗೀತ ಅಕಾಡೆಮಿ ವಾರ್ಷಿಕ ಪ್ರಶಸ್ತಿ 16, ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ 10 ಹೊಂದಿದೆ. ಆದರೆ ತೆಂಕು, ಬಡಗು, ಬಡಾ ಬಡಗಿ, ಮೂಡಲಪಾಯ, ಘಟ್ಟದ ಕೋರೆ, ಕೇಳಿಕೆ, ಗೊಂಬೆಯಾಟ, ತಾಳಮದ್ದಲೆ, ಯಕ್ಷಗಾನದಲ್ಲಿ ಹಿಮ್ಮೇಳ, ಮುಮ್ಮೇಳ, ಮುಮ್ಮೇಳದಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ, ಪುಂಡು ವೇಷ, ಹಿಮ್ಮೇಳದಲ್ಲಿ ಭಾಗವತರು, ಮದ್ದಲೆ, ಚಂಡೆಯವರು, ಸಾಹಿತ್ಯ ರಚನೆ ಹೀಗೆ ವಿಭಾಗಗಳು ಹತ್ತು ಹಲವು. ಒಂದೊಂದು ವಿಭಾಗದಲ್ಲಿ ಒಬ್ಬರಿಗೆ ಅಂದರೂ 5 ಪ್ರಶಸ್ತಿ ಯಾವುದಕ್ಕೂ ಸಾಲದು. ಅಕಾಡೆಮಿ ಕಲಾವಿದರನ್ನು ತಲುಪುವದು ಕೇವಲ ಪ್ರಶಸ್ತಿಗಳ ಮೂಲಕ ಮಾತ್ರ. ರಾಜ್ಯ ಮಟ್ಟದಲ್ಲಿ ಸರ್ಕಾರ ಗುರುತಿಸಬೇಕಾದ ಕಾರ್ಯ ಕೂಡ ಇರುತ್ತವೆ. ಅದರ ಜೊತೆಗೆ ಕನಿಷ್ಠ 25 ವಾರ್ಷಿಕ ಪ್ರಶಸ್ತಿ ನೀಡಬೇಕು.

ಕಾರಣ ಇದೇ!: ಯಕ್ಷಗಾನ ಅಕಾಡೆಮಿ 2018ರ ಪ್ರಶಸ್ತಿ ಘೋಷಣೆ ಮಾಡದೇ ಹಿಂದೇಟು ಹಾಕುವದಕ್ಕೂ ಸರ್ಕಾರ ಪ್ರಶಸ್ತಿ ಸಂಖ್ಯೆ ನಿಗದಿಗೊಳಿಸದೇ ಇರುವುದು ಕಾರಣ ಎನ್ನಲಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆ ಆಗದಂತೆ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಬದ್ಧವಾಗಿದೆ. ತಲಾ 25 ಸಾವಿರ ರೂ.ಗಳ ಹೆಚ್ಚುವರಿ ವಾರ್ಷಿಕ ಪ್ರಶಸ್ತಿಗಾಗಿ ಸರ್ಕಾರದ ಅನುಮತಿಗೆ ಅಕಾಡೆಮಿ ಕಾಯುತ್ತಿದೆ. ಈ ಮೂಲಕ ಕಲೆಯ ಅನಾವರಣದಲ್ಲಿ ತೊಡಗಿಕೊಂಡವರಿಗೆ ಬೆಂಬಲ ಕೊಡಬೇಕು ಎಂಬುದು ಯಕ್ಷಗಾನ ಪ್ರಿಯರ ಒತ್ತಾಸೆಯಾಗಿದೆ.

ಗೌರವ ಪ್ರಶಸ್ತಿ ಜತೆಗೆ ಹತ್ತು ವಾರ್ಷಿಕ ಪ್ರಶಸ್ತಿಗಳಿಗೆ ಅನುಮತಿ ಕೇಳಿದ್ದೇವೆ. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇಲ್ಲ. ಅಕಾಡೆಮಿ ಅನುದಾನದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅನುಮತಿ ಬಳಿಕ ಪ್ರಶಸ್ತಿ ಘೋಷಣೆ ಮಾಡುತ್ತೇವೆ.
 ಪ್ರೊ. ಎಂ.ಎ.ಹೆಗಡೆ,
ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಕನಿಷ್ಟ 10 ಯಕ್ಷಶ್ರೀ ಪ್ರಶಸ್ತಿ ನೀಡಲು ಅವಕಾಶ ನೀಡುವಂತೆ ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನಿಜ. ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ.
ಬಲವಂತರಾವ್‌ ಪಾಟೀಲ,
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 

ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.