ನಿರ್ವಹಣೆಯಿಲ್ಲದೇ ಬಳಲುತ್ತಿವೆ ಸರ್ಕಾರಿ ಶಾಲೆಗಳು!


Team Udayavani, Dec 17, 2018, 3:33 PM IST

17-december-14.gif

ಶಿರಸಿ: ಒಂದು ಕಾಲಕ್ಕೆ ವಿದ್ಯಾರ್ಜನೆ ಕೇಂದ್ರವಾಗಿದ್ದ ಸರಕಾರಿ ಶಾಲೆಗಳಿಗೆ ಮಕ್ಕಳೇ ಇಲ್ಲದೇ ಇದೀಗ ಅನಾಥವಾಗಿದ್ದು, ನಿರ್ವಹಣೆ ಕೂಡ ಇಲ್ಲದೇ ಬಳಲುವ ಸಂಗತಿ ಶಿಕ್ಷಣಾಭಿಮಾನಿಗಳ ನೋವಿಗೆ ಕಾರಣವಾಗಿದೆ. ಒಂದರಿಂದ ನಾಲ್ಕು ತರಗತಿ ನಡೆಸುತ್ತಿದ್ದ ಗ್ರಾಮೀಣ ಭಾಗದ ಕೆಲ ಕಿರಿಯ ಪ್ರಾಥಮಿಕ ಶಾಲೆಗಳು, ಒಂದೆರಡು ಹಿರಿಯ ಪ್ರಾಥಮಿಕ ಶಾಲೆಗಳೂ ಮಕ್ಕಳ ಕೊರತೆ ಎದುರಿಸಿ ಬಾಗಿಲು ಹಾಕಿದ್ದವು. ಅಲ್ಲಿದ್ದ ಬೆಂಚ್‌, ಖುರ್ಚಿ, ದಾಖಲೆ, ಕಂಪ್ಯೂಟರ್‌ಗಳು ಸಮೀಪದ ಕೇಂದ್ರ ಶಾಲೆಗೆ ವರ್ಗಾವಣೆಗೊಂಡಿದ್ದವು.

ಆದರೆ, ಕಟ್ಟಡ? ಅದರ ನಿರ್ವಹಣೆ ಮಾತ್ರ ಯಾರಿಗೂ ಸಂಬಂಧವೇ ಇಲ್ಲದಂತಾಗಿದೆ. ಶೌಚಾಲಯಗಳು ಹಾಳಾಗುತ್ತಿವೆ. ನೀರಿನ ಟಾಕಿ, ಕರೆಂಟ್‌, ಎಲ್ಲವೂ ಅನಾಥವಾಗಿವೆ. ತಿಂಗಳಿಗೆ ಬಿಡಿ, ವರ್ಷಕ್ಕೊಮ್ಮೆ ಕೂಡ ಬಾಗಿಲು ತೆರೆಯುವವರು ಇಲ್ಲವಾಗಿದೆ. ಪಂಚಾಯ್ತಿಯಲ್ಲಿ ಬೀಗದ ಚಾವಿ ಇದ್ದರೂ ಅವರಿಗೂ ಅದರ ಬಳಕೆ ಹೇಗೆ ಎಂಬ ಆಸಕ್ತಿ ಇಲ್ಲದೇ ಬಿಕೋ ಎನ್ನುತ್ತಿವೆ.

ಸೋತ ಶಾಲೆಗಳು: ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕೃಷಿ ಬಿಟ್ಟು ನಗರಕ್ಕೆ ಉದ್ಯೋಗಕ್ಕೆ ವಲಸೆ ಹೋಗಿದ್ದು, ಯುವಕರಿಗೆ ವಿವಾಹವಾಗದೇ ಇರುವದು, ಇರುವ ತಂದೆ ತಾಯಿಗಳಿಗೂ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಇರುವ ಮಕ್ಕಳಿಗೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಕೂಡ ಇರುವ ಒಂದೆರಡು ಮಕ್ಕಳೂ ಪೇಟೆ ಸೇರಿದ್ದಾರೆ.

ಸರಕಾರಿ ಶಾಲಾ ಶಿಕ್ಷಕರಿಗೂ ಹೊರಗಿನ ಕೆಲಸದ ಹೊರೆಯೇ ಅ ಧಿಕ ಇದೆ. ಅವರನ್ನು ಶಾಲೆಯಲ್ಲೇ ಇಟ್ಟರೆ ಮಾತ್ರ ಅವರಿಗೆ ಶಿಕ್ಷಣದಲ್ಲಿ ಲಕ್ಷ್ಯ ಹಾಕಲು ಸಾಧ್ಯ. ಅದಾವುದೂ ಆಗಿಲ್ಲ. ಈ ಕಾರಣದಿಂದ ಸರಕಾರಿ ಗ್ರಾಮೀಣ ಶಾಲೆಗಳು ಸೋಲಲು ಕಾರಣವಾಗಿದೆ ಎನ್ನುತ್ತಾರೆ ಕೆಲ ಪಾಲಕರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 16 ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ಅದರಲ್ಲೂ ಸಂಪೂರ್ಣ ಬಂದ್‌ ಆಗುವ ಹಂತದಲ್ಲಿ ಆರು ಶಾಲೆಗಳಿವೆ. ಜ್ಞಾನಾರ್ಜನೆ ಮಾಡುವ ಕೊಠಡಿಗಳು ಅನಾಥವಾಗಿವೆ. ಆಟವಾಡುವ ಅಂಗಳಗಳು ಹುಲ್ಲುಗಿಡಗಳಿಂದ ಆವರಿಸಿವೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೂಕಾರ, ಕಾನ್ಮನೆ, ಹಂಜಕ್ಕಿ, ಕಲಗಾರ, ಮತ್ತೀಹಳ್ಳಿ, ಹಂಚಳ್ಳಿ, ಶಿರಸಿ ತಾಲೂಕಿನ ಬೆಟ್ಟಕೊಪ್ಪ, ಮಾವಿನಕೊಪ್ಪ, ಹಳಿಯಾಳದ ಮಂಗಳವಾಡ, ಬಂಗೂರನಗರ, ಜೊಯಿಡಾದ ಬೋರಿ, ಕರಿಯಾರಿ, ಯಲ್ಲಾಪುರದಲ್ಲಿ 2 ಶಾಲೆಗಳು ಬಾಗಿಲು ಎಳೆದುಕೊಂಡಿವೆ. ಆದರೆ ಜೊಯಿಡಾದಲ್ಲಿ 2 ಮತ್ತು ಹಳಿಯಾಳದಲ್ಲಿ 1 ಶಾಲೆಗಳು ಹೊಸದಾಗಿ ಆರಂಭಗೊಂಡಿವೆ ಎಂಬುದು ವಿಶೇಷ. ಹಳಿಯಾಳದ ಮಂಗಳವಾಡ, ಬಂಗೂರನಗರ ಮರಾಠಿ ಶಾಲೆಗಳು ಸಂಪೂರ್ಣ ಬಂದ್‌ ಆಗಿವೆ.

ಶಾಲೆಗಳು ಅನಾಥವಾಗದಂತೆ ನೋಡಿಕೊಳ್ಳುವ ಹಾಗೂ ಅವುಗಳನ್ನು ನಿರ್ವಹಿಸುವ ಹೊಣೆ ಯಾರದ್ದು ಎಂಬುದನ್ನು ನಿಗದಿಗೊಳಿಸಬೇಕಾಗಿದೆ. ಬಾಗಿಲು ಹಾಕಿದ ಶಾಲೆಗಳಲ್ಲಿ ಗ್ರಾಪಂ ಗ್ರಂಥಾಲಯ ಅಥವಾ ಅಂಗನವಾಡಿ ನಡೆಸಲು ಅವಕಾಶ ಇದೆ.
ಸಿ.ಎಸ್‌. ನಾಯ್ಕ, ಉಪ ನಿರ್ದೇಶಕ
ಶಿರಸಿ ಶೈಕ್ಷಣಿಕ ಜಿಲ್ಲೆ

ಆಯಾ ಗ್ರಾಮಗಳಿಗೇ ಆಯಾ ಶಾಲಾ ಉಸ್ತುವಾರಿ ನೀಡಬೇಕು. ಅವರು ಯುವಕ ಸಂಘಗಳ ಚಟುವಟಿಕೆ ಅಥವಾ ಸ್ವ ಸಹಾಯ ಸಂಘಗಳ ಸಭೆಗಳಿಗೂ ಬಳಸಿಕೊಳ್ಳಲು ಅನುಮತಿ ನೀಡುವಂತಾಗಬೇಕು.
 ಕೆ.ಕೆ.ಹೆಗಡೆ, ಪಾಲಕ

„ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.