13ರಿಂದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆ


Team Udayavani, Feb 9, 2019, 11:35 AM IST

9-february-19.jpg

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ತಿನಿಂದ ಫೆ.13 ರಿಂದ 17ರವರೆಗೆ ರಾಜ್ಯ ಮಟ್ಟದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆಯನ್ನು ನಗರದ ಸಂತ ಅಂತೋನಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಸಂಚಾಲಕ ಕೂಡ್ಲು ಆನಂದ ಶಾನಭಾಗ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೊಂಕಣಿ ಭಾಷೆ ಹಾಗೂ ಕೊಂಕಣಿ ಸಾಹಿತ್ಯ ಉನ್ನತಿಕರಿಸುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಉ.ಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 10 ತಂಡಗಳು ಭಾಗವಹಿಸಲಿವೆ ಎಂದರು.

ವಿಜೇತರಿಗೆ ಪ್ರಥಮ- 25 ಸಾವಿರ ರೂ., ದ್ವಿತೀಯ- 15 ಸಾವಿರ ರೂ. ಹಾಗೂ ತೃತೀಯ- 10 ಸಾವಿರ ರೂ. ನೀಡಲಾಗುತ್ತಿದೆ. ಏಕಾಂಕ ನಾಟಕದಲ್ಲಿ ಉತ್ತಮ ನಟ, ನಟಿ ಬಹುಮಾನ ಕೂಡಾ ಇದೆ.

ನಮ್ಮ ಜಿಲ್ಲೆಯ ಹೆಮ್ಮೆಯ ಕೊಂಕಣಿ ನಾಟಕಕಾರ ಹೊಸಾಡ ಬಾಬುಟಿ ನಾಯಕರ ಹೆಸರಿನ ವೇದಿಕೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು. 13 ರಂದು ಸಂಜೆ 5ಕ್ಕೆ ಖ್ಯಾತ ಬರಹಗಾರ ಬಹುಭಾಷಾ ಪಂಡಿತ ಶಾ.ಮಂ. ಕೃಷ್ಣರಾಯ ಉದ್ಘಾಟಿಸಲಿದ್ದು ಕೊಂಕಣಿ ಪರಿಶತ್ತಿನ ಜಿಲ್ಲಾಧ್ಯಕ್ನ ನಿತಿನ್‌ ಕಾಸರಕೋಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಾಜ್ಯ ಕೊಂಕಣಿ ಅಕಾಡಮಿ ಸದಸ್ಯ ಸ್ಟೀಪನ್‌ ರೊಡ್ರಿಗಸ್‌ ಹೊನ್ನಾವರ, ಶಿರಸಿ ಸಂತ್‌ ಅಂತೋನಿ ಚರ್ಚಿನ ಧರ್ಮಗುರು ಫಾ| ಜೋನ್‌ ಫರ್ನಾಂಡಿಸ್‌, ಉಪನ್ಯಾಸಕಿ ಡಾ| ಸುಜಾತ ಫಾತರಪೇಕರ್‌ ಹಾಗೂ ಸಾಹಿತಿ ಆರ್‌.ಕೆ. ಹೊನ್ನೆಗುಂಡಿ ಉಪಸ್ಥಿತರಿರಲಿದ್ದಾರೆ.

17ಕ್ಕೆ ನಾಟಕ ಪ್ರದರ್ಶನದ ಬಳಿಕ ಸಮಾರೋಪ ನಡೆಯಲಿದ್ದು, ಶಾ.ಮಂ. ಕೃಷ್ಣರಾಯರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್‌.ಪಿ. ನಾಯ್ಕ, ನಿತಿನ್‌ ಕಾಸರಕೋಡ, ಕೃಷ್ಣಮೂರ್ತಿ ಮೇಸ್ತ, ಅಂತೋನಿ ನರೋನಾ, ಡಾ| ರಾಘವೇಂದ್ರ ಕಾಮತ್‌, ಕೃಷ್ಣಮೂರ್ತಿ ಪೈ ಪಾಲ್ಗೊಳ್ಳುವರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ನಿತಿನ ಕಾಸರಕೋಡ, ಕಾರ್ಯದರ್ಶಿ ಜಗದೀಶ ನಾ., ಶೈಲಜಾ ಮಂಗಳೂರು, ವಾಲ್ಟರ್‌ ಡಿಕೋಸ್ತಾ, ಅಂತೋನಿ ನರೋನಾ, ಸುದರ್ಶನ ಇತರರು ಇದ್ದರು.

ಯಾವಾಗ ಯಾರ ನಾಟಕ?
13ರಂದು ಸದಾಶಿವಗಡದ ಸಿದ್ಧಿವಿನಾಯಕ ಮಹಾಸತಿ ಭಜಕ ಮಂಡಳಿಯಿಂದ ‘ಲಾಖತ್ಗೋ ಏಕ್‌ ನ್ಹವರೋ’, ಮಂಗಳೂರಿನ ಮಾಂಡ ಸೋಬಾನ ಕಲಾಕುಲ ‘ಅಂಟಿಗೋನ’, 14ರ ಸಂಜೆ 5ಕ್ಕೆ ಸಿದ್ದಾಪುರ ಬಿಳಗಿ ಸೀತಾರಾಮಚಂದ್ರ ನಾಟ್ಯ ಸೇವಾ ಸಂಘದ ‘ಕೆಲ್ಲಿಲೋ ಖಾತ್ತಾ’, 15ಕ್ಕೆ ಧಾರವಾಡದ ಪ್ರಜ್ವಲ್‌ ಹವ್ಯಾಸಿ ಸಂಘದಿಂದ ‘ಪಾರ್ವತಿ ಬಾಯಿಲೆ ಪಂಚಸೂತ್ರ’, ಮಂಗಳೂರಿನ ಲೋಗೋಸ್‌ ಥೇಯೆಟರ ಟ್ರೂಪ್‌ನ ‘ಸಳ್ಗಿ’, 16ರ ಸಂಜೆ 5ಕ್ಕೆ ಹೊನ್ನಾವರದ ಸಾಂತ ಪ್ರಾನ್ಸಿಸ್‌ ಆಸಿಸಿ ಚರ್ಚ್‌ನ ‘ಬಾಂದಾಸಾಂತ್ಲಿ ಬಚಾವಿ’, ಸಿಂಪನಿ ತಂಡದಿಂದ ಚಾರ್‌ ದಿಸಾಚೋ ಸಂಸಾರ್‌, 17ರ ಸಂಜೆ 5ಕ್ಕೆ ಸಾಂತ ಪ್ರಾನ್ಸಿಸ್‌ ಕಲಾ ಮೇಳದಿಂದ ಪೆಟ್ಲಿ ದಿವ್ಲಿ ವಾರ್ಯಾಕ ಸಾಂಪ್ಡಾತಾನಾ, ಆನಂದ ಕಾಮತ್‌ ವಾಸುದೇವ ಭಟ್ಟ ಮಾಮಾಲೆ ಜೋತಿಷ್‌ ನಡೆಯಲಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.