ಕಳವೆಯಲ್ಲಿ ಅಡವಿ ಅಡುಗೆ ನೆನಪು


Team Udayavani, Feb 15, 2019, 12:18 PM IST

15-february-19.jpg

ಶಿರಸಿ: ಶತಮಾನಗಳ ಹಿಂದೆ ಮಲೆನಾಡು, ಕರಾವಳಿಯ ತಾಯಂದಿರು ಅಡುಗೆ ತಯಾರಿಯಲ್ಲಿ ಬಳಸುತ್ತಿದ್ದ ಸಸ್ಯಗಳ ಮರು ನೆನಪು ಮಾಡುವ ವಿಶೇಷ ಕಾರ್ಯಕ್ರಮ ತಾಲೂಕಿನ ಕಳವೆಯಲ್ಲಿ ಏರ್ಪಾಟಾಗಿದೆ. ಪಶ್ಚಿಮ ಘಟ್ಟದ 100ಕ್ಕೂ ಹೆಚ್ಚು ಸಸ್ಯ ಬಳಸಿ ತಂಬುಳಿ, ಕಷಾಯ, ಚಟ್ನಿ, ಸಾಂಬಾರ್‌, ಕಟ್ನೆ, ಸಾಸ್ಮೆ, ಅಮ್ಟಿ , ಫಲ್ಯ, ಬಂಪು ತಯಾರಿಗಳ ಪ್ರಾತ್ಯಕ್ಷಿಕೆ ನಡೆಸುವರು.

ಕರಾವಳಿ, ಮಲೆನಾಡಿನ 25 ಮಹಿಳೆಯರು ಎರಡು ದಿನದಲ್ಲಿ 75 ರೀತಿಯ ಅಡುಗೆಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಿದರಕ್ಕಿ ಅನ್ನ, ಮರ ಬಾಳೆಕಾಯಿ ದೋಸೆ, ಕಾಡರಿಶಿನದ ಮಣ್ಣಿ ಮುಂತಾದ ಹಲವು ಅಡುಗೆ ತಯಾರಿ ನಡೆಯಲಿದೆ.

ಭವಿಷ್ಯದಲ್ಲಿ ನಮ್ಮ ಕಾಡಿನ ಕರಡಿ ಸೊಪ್ಪು, ಒಂದೆಲಗ, ಬಿಳಿ ಕೌರಿ, ಶಿವಣೆ, ದಾಲ್ಚಿನ್ನಿ, ಬಲಗಣೆ, ಬಿಳಿಮತ್ತಿ, ಅಮೃತಬಳ್ಳಿ, ಮಸೆ, ಏಕನಾಯಕ ಮುಂತಾದ ಹಲವು ಸಸ್ಯಗಳನ್ನು ಕೃಷಿಯಲ್ಲಿ ಅಭಿವೃದ್ಧಿಗೊಳಿಸಲು ಅವಕಾಶಗಳಿವೆ. ಚಹಾ, ಕಾಫಿ  ಬಳಕೆಗೆ ಬರುವ ಪೂರ್ವದಲ್ಲಿದ್ದ 60ಕ್ಕೂ ಹೆಚ್ಚು ಕಷಾಯಗಳನ್ನು ಈಗಾಗಲೇ ಗುರುತಿಸಲಾಗಿದೆ. ಕುನ್ನೇರಲು, ಏಕನಾಯಕನ ಎಲೆ ಕಷಾಯಗಳು ಚಹಾದಷ್ಟೇ ಮಹತ್ವ ಹೊಂದಿದ್ದರೂ ಮಲೆನಾಡು ಮರೆಯುತ್ತಿದೆ. ನೀರನ್ನು ಕಡಿಮೆ ಬಳಸಿ ಬೆಳೆಯುವ ಈ ಸಸ್ಯಗಳು ಬರಗಾಲದಲ್ಲಿ ಆಹಾರ ಸುಸ್ಥಿರತೆ ಆಧಾರವಾಗಿವೆ. ಇವು ಭವಿಷ್ಯದಲ್ಲಿ ಪರಿಸರ ಸ್ನೇಹಿ ಅಭ್ಯುದಯದ ದಾರಿಯಾಗಬಹುದು ಎಂಬ ಆಶಯ ಉಂಟಾಗಿದೆ.

ಅಡುಗೆ ಪ್ರಾತ್ತಕ್ಷಿಕೆ ಜೊತೆಯಲ್ಲಿ ತಜ್ಞ ಸಲಹೆಗಳನ್ನು ನೀಡಲು ವೈದ್ಯರು ಭಾಗವಹಿಸುವರು. ಚಿಕ್ಕಮಗಳೂರಿನ ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯರಾದ ಡಾ| ಭಾನು, ಸಾಗರದ ಡಾ| ಪತಂಜಲಿ, ಗೋಕರ್ಣದ ವೇದಶ್ರವ ಶರ್ಮಾ, ಜೊಯಿಡಾ ಗುಂದದ ಖ್ಯಾತ ನಾಟಿ ವೈದ್ಯ ಶ್ರೀಧರ ದೇಸಾಯಿ, ಶಿರಸಿಯ ಜಿ.ಎಸ್‌. ಹೆಗಡೆ ಲಕ್ಕಿಸವಲು ಸಸ್ಯ ಬಳಕೆ ಕುರಿತು ಮಾಹಿತಿ ನೀಡುವರು. ಕರ್ನಾಟಕ ಅರಣ್ಯ ಇಲಾಖೆ ಶಿರಸಿ ವಿಭಾಗದ ವಿವಿಧ ಅರಣ್ಯ ನರ್ಸರಿ ಹಾಗೂ ಯೂಥ್‌ ಫಾರ್‌ ಸೇವಾ ಸಂಸ್ಥೆಯ ಉಮಾಪತಿ ಕೆ.ವಿ. ಸಹಕಾರದೊಂದಿಗೆ ಅಡುಗೆಗೆ ಬಳಸುವ ಸಸ್ಯ ಪ್ರದರ್ಶನ ನಡೆಯಲಿದೆ.

ಅಡವಿ ಅಡುಗೆ ಕಾರ್ಯಕ್ರಮ ಫೆ.16, 17 ಶಿರಸಿ ತಾಲೂಕಿನ ಕಳವೆಯ ಕಾನ್ಮನೆಯಲ್ಲಿ ನಡೆಯಲಿದೆ. ಮೆಗ್ಸೆàಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹರೀಶ್‌ ಹಂದೆ 16ರ ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಿರಸಿ ಉಪ ಅರಣ್ಯ  ರಕ್ಷಣಾಧಿಕಾರಿ ಎನ್‌.ಡಿ. ಸುದರ್ಶನ್‌, ಯಲ್ಲಾಪುರ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್‌.ಎನ್‌. ಹೆಗಡೆ ಗೋರ್ಸಗದ್ದೆ, ಸಾಮಾಜಿಕ ಕಾರ್ಯಕರ್ತ ಆರ್‌.ಎಸ್‌. ಹೆಗಡೆ ಹರಗಿ ಭಾಗವಹಿಸುವರು. ಕಳವೆ ಗ್ರಾಮದ ಈರಾ ನಾರಾಯಣ ಗೌಡ ಅಧ್ಯಕ್ಷತೆ ವಹಿಸುವರು. ಸೆಲ್ಕೋ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್‌ ಹೆಗಡೆ ಉಪಸ್ಥಿತರಿರುವರು ಎಂದು ಸಂಘಟಕ ಶಿವಾನಂದ ಕಳವೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.