ಮಲೆನಾಡು ಗಿಡ್ಡ ತಳಿಯ ಹಾಲುಶ್ರೇಷ್ಠ 


Team Udayavani, Mar 23, 2019, 10:32 AM IST

23-march-15.jpg

ಹೊನ್ನಾವರ: ರೈತರು ಒರಟು ಮತ್ತು ಮೃದು ಸ್ವಭಾವದ ಮಲೆನಾಡ ಗಿಡ್ಡ ತಳಿಯಲ್ಲಿ ಆಯ್ದುಕೊಂಡು ಬೆಳೆಸಬೇಕಾದ ಅಗತ್ಯವಿದೆ. ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂದು ಅಲೌಕಿಕವಾದ, ವೈಜ್ಞಾನಿಕವಾಗಿ ಸಿದ್ಧಪಟ್ಟು. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಗೃಹಿಣಿಯರು ಬೇಡವೇ ಬೇಡ ಎನ್ನುತ್ತಾರೆ.  ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ.

ಬೇಲಿ ಮುರಿದು ತೋಟಕ್ಕೆ ನುಗ್ಗಿ, ಎಲೆ ಬಳ್ಳಿ ತಿಂದು ಹಾಕುವ, ಅಟ್ಟಿಸಿಕೊಂಡು ಹೋದರೆ ಛಂಗನೆ ನೆಗೆದು ಮಾಯವಾಗುವ ಆ ತಳಿ ಬೇರೆ ಮನೆಯ ಮುರುಕು ಬೇಲಿ ದಾಟಿದರೂ ಬೈಗುಳ ತಪ್ಪಿದ್ದಲ್ಲ ಎನ್ನುತ್ತಾರೆ.

ಆದರೆ ಮರುಳು ಮಾಡುವ ಮಲೆನಾಡು ಗಿಡ್ಡ ತಳಿಯ ದನಗಳು ವಶೀಲಿ ಮಾಡಿ ವಸೂಲಿ ಮಾಡುವುದನ್ನು ಕಂಡು ನಗದವರಿಲ್ಲ. ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಹೊಟ್ಟೆ ತುಂಬ ಆಹಾರ ಕೊಟ್ಟು, ಹಾಲು ಕರೆದು, ಮೈ ತೊಳೆದು, ಕಾಲಾಡಿಕೊಂಡು ಬರಲಿ ಎಂದು ಬಿಡುತ್ತಾರೆ. ಈ ದನಗಳು ಹೊಟ್ಟೆ ತೂಗಾಡಿಸುತ್ತ ನೇರ ಪೇಟೆ ಸುತ್ತ ತೊಡಗುತ್ತವೆ. ಕಿರಾಣಿ ಅಂಗಡಿ ಎದುರು ಹೋಗಿ ನಿಲ್ಲುತ್ತವೆ. ಹಿಂಡಿ ಕೊಟ್ಟರೆ ಮಾತ್ರ ತಿನ್ನುತ್ತವೆ. ಬಿಸ್ಕಿಟ್‌ ಅಥವಾ ಇನ್ನೇನು ಕೊಟ್ಟರೂ ಅದನ್ನು ಮೂಸಿ ಬಿಟ್ಟು, ಹಿಂಡಿ ಕೊಡುವವರೆಗೆ ಅಂಗಡಿ ಎದುರು ನಿಲ್ಲುತ್ತವೆ. ಒಂದಾದ ಮೇಲೆ ಇನ್ನೊಂದು ಅಂಗಡಿ, ಬಾಳೆಹಣ್ಣು ಅಂಗಡಿ. ಹೀಗೆ ತನಗೆ ಬೇಕಾದ ಆಹಾರ ಕೊಡುವ ಅಂಗಡಿಗಳ ಎದುರು ಮಾತ್ರ ನಿಲ್ಲುವ, ನಿತ್ಯ ನಿಗದಿತ ಸಮಯಕ್ಕೆ ಬಂದು ನಿಲ್ಲುವ ದನಗಳು ಮಧ್ಯಾಹ್ನ ಬಿಸಿಯಾದ ನೆಲದ ಮೇಲೆ ಮಲಗಿ ತಿಂದಿದ್ದನ್ನು ಜೀರ್ಣ ಮಾಡಿಕೊಂಡು ಸಂಜೆ ಎರಡನೇ ಸುತ್ತು ವಸೂಲಿ ಮುಗಿಸಿ ಮನೆಗೆ ಹೋಗುತ್ತದೆ. ಹಾಯದ, ಒದೆಯದ ಈ ಹಸುಗಳನ್ನು ಕಂಡು ಹಿಂಡಿ ಕೊಟ್ಟ ಅಂಗಡಿಕಾರರಿಗೂ ಖುಷಿ. ದನ ಬರದಿದ್ದರೆ ಬೇಜಾರು. ಈ ಹಸುಗಳು ಹೊತ್ತಿಗೆ ಅರ್ಧ, ಒಂದು ಲೀಟರ್‌ ಹಾಲು ಕೊಡುತ್ತದೆ. ಇಂತಹ ವಶೀಲಿ ಮಾಡಿ ವಸೂಲು ಮಾಡುವ ದನಗಳ ತಳಿಯನ್ನು ಗುರುತಿಸಿ, ಸಾಕಿ ಬೆಳೆಸಬೇಕಾಗಿದೆ. ಇವುಗಳ ಗಂಡು ಸಂತತಿಯನ್ನು ಗದ್ದೆ ಹೂಡಲು ಕೊಡದೆ ಉಳಿಸಿಕೊಡಬೇಕಾಗಿದೆ. ಈ ಮಾರ್ಗದಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ.

ಸಹವಾಸ ಬೇಡ ಎನ್ನುತ್ತಾರೆ ಜನ
ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂಬುವುದು ವೈಜ್ಞಾನಿಕವಾಗಿ ಸತ್ಯ. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಮಾತ್ರವಲ್ಲ, ಕರೆಯಲು ಕೂತರೆ ಲೋಟ ಹಾರಿಹೋಗುವಂತೆ ಒದೆಯುವ, ಕೈ ಬಳೆಗಳನ್ನು ಪುಡಿಗಟ್ಟಿಸುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ. ಆದರೆ ಇದನ್ನು ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಇದೇ ಅವರಿಗೊಂದು ಖುಷಿ.

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.