ಬಲವಾಗಲಿ ಭಾರತ-ರಷ್ಯಾ ಸ್ನೇಹ


Team Udayavani, Jun 1, 2017, 1:44 AM IST

Narendra-Modi-3-600.jpg

ಭಾರತ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷವಾಗಿರುವ ವೇಳೆಯಲ್ಲೇ ರಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ಸಂಬಂಧಗಳನ್ನು ಹೊಸ ಎತ್ತರಕ್ಕೇರಿಸುವ ಭರವಸೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಶ್ಯನ್‌ ಜನರನ್ನುದ್ದೇಶಿಸಿ ಅವರು ಆ ದೇಶದ ಪ್ರಮುಖ ದಿನಪತ್ರಿಕೆ Rossiyskaya Gazettaಕ್ಕೆ ಬರೆದ ಲೇಖನವಿದು. 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೂ ಮುನ್ನವೇ, ನಿರ್ದಿಷ್ಟವಾಗಿ ಹೇಳಬೇಕೆಂದರೆ 13 ಏಪ್ರಿಲ್‌ 1947ರಂದು ಭಾರತ ಮತ್ತು ರಷ್ಯಾ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. ಈ ಮಹತ್ವಪೂರ್ಣ ಮೈಲಿಗಲ್ಲಿನ 70ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ನಾನು ರಷ್ಯಾ ಮತ್ತು ಭಾರತದ ನಾಗರಿಕರಿಗೆ ಶುಭಕೋರುತ್ತೇನೆ. 1947ರಿಂದ ಜಗತ್ತು ನಾಟಕೀಯವಾಗಿ ಬದಲಾಗುತ್ತಾ ಬಂದಿದೆಯಾದರೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮಾತ್ರ ಮೊದಲಿನಿಂದಲೂ ಸ್ಥಿರವಾಗಿಯೇ ಇದೆ. ಅಷ್ಟೇ ಅಲ್ಲದೆ ಅದು ದಿನದಿಂದ ದಿನಕ್ಕೆ ಸದೃಢವಾಗುತ್ತ ಸಾಗುತ್ತಿದೆ. ಈ ಸಂಬಂಧವು ನಂಬಿಕೆ, ಪರಸ್ಪರ ಲಾಭ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿರುವುದು ಇದಕ್ಕೆ ಕಾರಣ.

ಆದಾಗ್ಯೂ ನಮ್ಮ ನಡುವಿನ ಸಂಬಂಧಕ್ಕೆ ಇದಕ್ಕಿಂತಲೂ ದೀರ್ಘ‌ ಇತಿಹಾಸವಿದೆ. 15ನೇ ಶತಮಾನದಲ್ಲಿ ಅಫ‌ನಾಸಿ ನಿಕೀತಿನ್‌ ಎರಡೂ ದೇಶಗಳ ನಡುವೆ ಸಂಪರ್ಕ ಕಲ್ಪಿಸಲು ತಿವಿರ್‌ನಿಂದ ಭಾರತಕ್ಕೆ ಬಂದ. 18ನೇ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ವ್ಯಾಪಾರಿಗಳು ರಷ್ಯಾಕ್ಕೆ ಪ್ರಯಾಣ ಮಾಡಲಾರಂಭಿಸಿದರು ಮತ್ತು ಆಸ್ಟ್ರಾಖಾನ್‌ ನಗರಿಯಲ್ಲಿ ನೆಲೆ ಸ್ಥಾಪಿಸಿದರು. ಬೆಂಗಾಲಿ ಥಿಯೇಟರ್‌ನ ಮತ್ತು ಭಾರತಾಧ್ಯಯನದ ಮಾರ್ಗದರ್ಶಕರೆನಿಸಿಕೊಂಡ ಗೆರ್ರಾಸಿಮ್‌ ಲೇಬೆಡಿವ್‌ ಇದೇ ವೇಳೆಯಲ್ಲೇ ಭಾರತಕ್ಕೆ ಭೇಟಿ ನೀಡಿದರು. ಅವರ ನಂತರ 19ನೇ ಶತಮಾನದ ಮಧ್ಯಭಾಗದಲ್ಲಿ ಐವನ್‌ ಮಿನೈವ್‌ ನಮ್ಮ ದೇಶಕ್ಕೆ ಬಂದು ವೇದ, ಪಾಲಿ ವ್ಯಾಕರಣ ಮತ್ತು ಬೌದ್ಧಾಧ್ಯಯನಗಳನ್ನು ಅಭ್ಯಸಿಸಿದರು. ಭಾರತದಿಂದ ಹಿಂದಿರುಗಿದ ಮೇಲೆ ರಶ್ಯನ್‌ ನಾಗರಿಕರಿಗೆ ಸಂಸ್ಕೃತವನ್ನು ಪರಿಚಯಿಸಿದರು ಐವಾನ್‌. ಈ ಸಂಪ್ರದಾಯವನ್ನು ಮುಂದುವರಿಸಿದ ಸಿರ್ಗಿ ಓಲ್ಡೆನ್‌ಬರ್ಗ್‌ ಮತ್ತು ಫ್ಯೋಡೋರ್‌ನಂಥ ವಿದ್ವಾಂಸರು ನಂತರದ ದಶಕಗಳಲ್ಲಿ ಭಾರತಕ್ಕೆ ಬಂದು ನಮ್ಮ ಮಹಾಕಾವ್ಯಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಅಧ್ಯಯನ ಮಾಡಿ ಅವನ್ನು ರಶ್ಯನ್‌ ಭಾಷೆಗೆ ತರ್ಜುಮೆ ಮಾಡಿದರು. 

ತದನಂತರದ ವರ್ಷಗಳಲ್ಲಿ ರವೀಂದ್ರನಾಥ್‌ ಟಾಗೋರರ ಕಾವ್ಯಗಳು ರಶ್ಯನ್‌ಗೆ ಭಾಷಾಂತರವಾದವು. ಭಾರತದ ಪಿತಾಮಹ ಮಹತ್ಮಾ ಗಾಂಧಿ ಮತ್ತು ರಶ್ಯನ್‌ ಲೇಖಕ ಲಿಯೋ ಟಾಲ್ಸ್‌ಟಾಯ್‌ ಪರಸ್ಪರ ಸಂಪರ್ಕದಲ್ಲಿದ್ದರು. ನಿಕೋಲೈ ರೋರಿಕ್‌ರ ಅಮರ ಕೃತಿಗಳು ಮತ್ತು ಭಾರತಡೆಗಿದ್ದ ಅವರ ಪ್ರೀತಿ, ಇಂದಿಗೂ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿಯೇ ಉಳಿದಿದೆ. ಭಾರತೀಯ ನಾಟಕಗಳು ಮತ್ತು ಚಿಂತನೆಗಳ ಮೇಲೆ ದಾಸ್ತೋವಸ್ಕಿ, ಪುಷ್ಕಿನ್‌, ಚೆಕಾಫ್ರಂಥ ಲೇಖಕರ ಪ್ರಭಾವವಿದೆ. ಯೋಗ, ಭಾರತೀಯ ಸಿನೆಮಾಗಳು, ಹಾಡುಗಳು ಮತ್ತು ನೃತ್ಯಗಳು ಎರಡೂ ದೇಶಗಳ ಜನರನ್ನು ಬೆಸೆದಿವೆ. ಭಾರತವು ಕೈಗಾರಿಕಾ ನೆಲೆಯನ್ನು ಸ್ಥಾಪಿಸಲು ಸೋವಿಯತ್‌ ಒಕ್ಕೂಟ ಸಹಾಯ ಮಾಡಿತ್ತು. ಬೊಕಾರೋ ಮತ್ತು ಭಿಲಾಯ್‌ನಲ್ಲಿನ ಕಾರ್ಖಾನೆಗಳು, ಭಾಕ್ರಾ – ನಂಗಲ್‌ನಲ್ಲಿನ ಹೈಡ್ರೋಎಲೆಕ್ಟ್ರಿಕ್‌ ಡ್ಯಾಮ್‌, ಭಾರತದ ಮೊದಲ ಗಗನಯಾತ್ರಿಯಾಗಿ ಸೋಯುಜ್‌-ಟಿ11ನಲ್ಲಿ ಆಸೀನರಾಗಿದ್ದ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾರ ಚಿತ್ರಗಳು…ಇವೆಲ್ಲವೂ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಅಚ್ಚೊತ್ತಿವೆ.  

ಕಳೆದ 70 ವರ್ಷಗಳಲ್ಲಿ ಭಾರತವು ಬೃಹತ್‌ ಮತ್ತು ವೈವಿಧ್ಯಮಯ ಕೈಗಾರಿಕಾ ನೆಲೆಗಳನ್ನು ಅಭಿವೃದ್ಧಿಪಡಿಸಿದೆ. ನಾವಿಂದು ಪ್ರಪಂಚದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿದ್ದೇವೆ. ಈ ರೀತಿಯ ವೇಗದ ಬೆಳವಣಿಗೆ ಮತ್ತು ಆಶಾವಾದ ಹಿಂದೆಂದೂ ಇಷ್ಟು ಮೇರುಮಟ್ಟದಲ್ಲಿರಲಿಲ್ಲ. ಇತ್ತ ರಷ್ಯಾ ಕೂಡ 1991ರ ಘಟನೆಗಳಿಂದ ಮೈಕೊಡವಿಕೊಂಡು ಎದ್ದು ಇಂದು ಜಾಗತಿಕ ಶಕ್ತಿಯಾಗಿ ಬದಲಾಗಿದೆ. ರಷ್ಯಾದ ಆರ್ಥಿಕತೆ ಆಧುನಿಕ ರೂಪ ಪಡೆದಿದೆ ಮತ್ತು ಅದನ್ನು ಇಂದು ಹೊಸ ತಲೆಮಾರು ಮುನ್ನಡೆಸುತ್ತಿದೆ. 2000ನೇ ಇಸವಿಯಲ್ಲಿ ಭಾರತ ಮತ್ತು ರಷ್ಯಾ ವ್ಯೂಹಾತ್ಮಕ ಸಂಬಂಧಕ್ಕೆ ಸಹಿ ಹಾಕಿದವು. 2010ರಲ್ಲಿ ನಾವು ಈ ಸಂಬಂಧವನ್ನು ವಿಶೇಷ ಸಹಭಾಗಿತ್ವದ ಮಟ್ಟಕ್ಕೆ ಬೆಳೆಸಿದೆವು. ಹಾಗೆಂದು ಈ ದಾಖಲೆಗಳೆಲ್ಲ ಕೇವಲ ಪದಗಳಿಗೆ ಸೀಮತವಾಗಿಲ್ಲ. ಎರಡೂ ರಾಷ್ಟ್ರಗಳ ಸಂಬಂಧದ ಮಹತ್ವಾಕಾಂಕ್ಷಿ ನೀಲನಕ್ಷೆ ಅವುಗಳಲ್ಲಿದೆ. ರಷ್ಯಾದ ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನಗಳು ನಮ್ಮ ರಕ್ಷಣಾ ಪಡೆಗಳ ಮುಖ್ಯ ಭಾಗಗಳಾಗಿವೆ.

ಇನ್ನು ರಷ್ಯಾದ ತೈಲ ಮತ್ತು ಅನಿಲ ಉತ್ಪಾದನಾ ಯೋಜನೆಗಳಾದ ಸಾಖಲಿನ್‌-1, ವಾನ್ಕೋರ್‌ ಮತ್ತು ತಾಸ್‌-ಯೂರ್ಯಾಖ್‌ನಲ್ಲಿ ಭಾರತದ ಹೂಡಿಕೆಗಳು, ಕೂಡಂಕುಲಂನಲ್ಲಿನ ಪವರ್‌ ಪ್ಲ್ರಾಂಟ್‌ ಮತ್ತು ಬ್ರಹ್ಮೋಸ್‌ ಯೋಜನೆಗಳು…ಇವೆಲ್ಲ ನಮ್ಮ ಸಮಕಾಲೀನ ಸಹಭಾಗಿತ್ವದ ಸಂಕೇತಗಳಾಗಿವೆ. ಆರ್ಥಿಕ  ಕ್ಷೇತ್ರದ ವಿಷಯಕ್ಕೆ ಬಂದರೆ ಉತ್ಪಾದನೆಯಲ್ಲಿ ಪರಸ್ಪರ ಹೂಡಿಕೆಗಳನ್ನು ಹೆಚ್ಚಿಸುವ ದಿಕ್ಕಿನತ್ತ ಎರಡೂ ರಾಷ್ಟ್ರಗಳು ಹೆಜ್ಜೆ ಹಾಕುತ್ತಿವೆ. ರಷ್ಯಾದ ಔಷಧ ಉದ್ಯಮಗಳಿಗೆ ಪ್ರಮುಖ ಕೊಡುಗೆ ನೀಡುತ್ತಾ ಬರುತ್ತಿದೆ ಭಾರತ. ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ಈ ಸಾಧನೆಗಳಿಂದ ತೃಪ್ತಿಪಟ್ಟುಕೊಂಡು ಸುಮ್ಮನಾಗಬಾರದು. ಬದಲಾಗಿ ಹೊಸ ಮಾರ್ಗಗಳಿಗಾಗಿ, ಮುನ್ನೋಟಕ್ಕಾಗಿ ಹಾತೊರೆಯಬೇಕು.

ಭಾರತದ ರಾಜ್ಯಗಳು ಮತ್ತು ರಶ್ಯನ್‌ ಪ್ರದೇಶಗಳ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ನಾವು ಬಯಸುತ್ತಿದ್ದೇವೆ. ಯುರೇಷಿಯನ್‌ ಆರ್ಥಿಕ ಒಕ್ಕೂಟದ ಜೊತೆಗಿನ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವತ್ತಲೂ ನಾವು ಪ್ರಯತ್ನಿಸುತ್ತಿದ್ದೇವೆ. ರೈಲ್ವೆ, ಸಂಶೋಧನೆ, ಐಟಿ, ವಜ್ರ ವ್ಯಾಪಾರ ಮತ್ತು ಮೂಲಸೌಕರ್ಯಗಳಂಥ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ. ಇದಷ್ಟೇ ಅಲ್ಲದೆ ಎರಡೂ ದೇಶಗಳ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಮತ್ತು ಬುದ್ಧಿಜೀವಿಗಳು, ಅದರಲ್ಲೂ ಮುಖ್ಯವಾಗಿ ಯುವ ಜನರ ನಡುವಿನ ಸಂಪರ್ಕವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಮತ್ತು ಡಿಜಿಟಲ್‌ ಇಂಡಿಯಾದಂಥ ಕಾರ್ಯಕ್ರಮಗಳಲ್ಲಿ ಜೊತೆಯಾಗಬೇಕೆಂದು ನಾವು ರಶ್ಯನ್‌ ಕಂಪನಿಗಳನ್ನು ಆಹ್ವಾನಿಸುತ್ತೇವೆ.

ನಮ್ಮ ಸಂಬಂಧದ ಮಹತ್ವವು ಕೇವಲ ದ್ವಿಪಕ್ಷೀಯ ವಲಯಕ್ಕಷ್ಟೇ ಸೀಮಿತವಾಗಿಲ್ಲ. ನಮ್ಮ ಪಾಲುದಾರಿಕೆಯು ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲೂ ಕೊಡುಗೆ ನೀಡಿದೆ. ಅಂತಾರಾಷ್ಟ್ರೀಯ ರಾಜಕೀಯ, ಭದ್ರತೆ, ಆರ್ಥಿಕತೆಯ ಸದೃಢತೆಯನ್ನು ಕಾಪಾಡುವಲ್ಲಿ ಭಾರತ ಮತ್ತು ರಷ್ಯಾ ಪ್ರಮುಖ ಪಾತ್ರ ವಹಿಸುತ್ತಿವೆ. ವಿಶ್ವಸಂಸ್ಥೆ, ಬ್ರಿಕ್ಸ್‌, ಜಿ-20, ಪೂರ್ವ ಏಷ್ಯಾ ಶೃಂಗ, ಆರ್‌ಐಸಿ ಮತ್ತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯಂಥ ವೇದಿಕೆಗಳಲ್ಲಿ ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುತ್ತಿವೆ. ಶಾಂಘೈ ಸಹಕಾರ ಸಂಸ್ಥೆಯ ಪೂರ್ಣಾವಧಿ ಸದಸ್ಯರಾಗುವುದನ್ನು ಭಾರತ ಎದುರುನೋಡುತ್ತಿದೆೆ. ಇದು ಸಾಧ್ಯವಾಗಿದ್ದು ರಷ್ಯಾದ ಪೂರ್ಣ ಬೆಂಬಲದಿಂದಾಗಿಯೇ.

ಇಂದು ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಮತ್ತಷ್ಟು ಮುಖ್ಯವಾಗುತ್ತಿದೆ. ಇಂದು ವಿಶ್ವದ ಸಾಂಪ್ರದಾಯಿಕ ಶಕ್ತಿಯ ಸಮತೋಲನ ಸಡಿಲಗೊಳ್ಳುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬದಲಾಗುತ್ತಿರುವ ಈ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ. ಹೀಗಾಗಿ ಅದಕ್ಕೆ ಸುಧಾರಣೆಯ ತೀವ್ರ ಅಗತ್ಯವಿದೆ.  ಇಂದು ಜಗತ್ತಿನಲ್ಲಿ ಹಲವು ಪ್ರಾದೇಶಿಕ ಅಪಾಯಗಳು ಕಾಣಿಸಿಕೊಂಡಿವೆ. ಇದರ ಪರಿಣಾಮ ಇಡೀ ಜಗತ್ತಿಗೆ ತಾಗುತ್ತಿದೆ. ಇಂದು ನಾಗರಿಕ ಸಮಾಜಕ್ಕೆ ಅತಿದೊಡ್ಡ ಅಪಾಯ ಎದುರಾಗಿರುವುದು ಉಗ್ರವಾದದಿಂದ. ಉಗ್ರವಾದ ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತ ಮತ್ತು ಮಾರಕ ರೂಪ ಪಡೆದಿದೆ. ನಮ್ಮ ಜೀವನ ಕ್ರಮಕ್ಕೆ ಸವಾಲೆಸೆಯುತ್ತಿದೆ ಭಯೋತ್ಪಾದನೆ. ಭಾರತ ಮತ್ತು ರಷ್ಯಾ ಜೊತೆಗೂಡಿ ಉಗ್ರವಾದದ ವಿರುದ್ಧ ಹೋರಾಡುತ್ತಿವೆ. ರಷ್ಯಾದೊಂದಿಗೆ ಬಲಿಷ್ಠ ಸಂಬಂಧ ಸ್ಥಾಪಿಸುವ ನೀತಿಗೆ ಭಾರತದಾದ್ಯಂತ ಬೆಂಬಲವಿದೆ. 1947ರಿಂದಲೂ ನಮ್ಮಲ್ಲಿನ ಪ್ರತಿಯೊಂದು ಸರ್ಕಾರವೂ ರಶ್ಯನ್‌ ಸರ್ಕಾರ ಮತ್ತು ಅದರ ಜನರ ಜೊತೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಮುಖ ಆದ್ಯತೆ ಕೊಡುತ್ತಲೇ ಬಂದಿವೆ. ನನ್ನ ಸರ್ಕಾರ ಇದೇ ನೀತಿಯನ್ನು ಮುಂದುವರಿಸುವುದಷ್ಟೇ ಅಲ್ಲ, ಬದಲಾಗಿ, ಎರಡೂ ದೇಶಗಳ ನಡುವಿನ ಸಂಬಂಧವನ್ನು ಹೊಸ‌ ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ. 

ರಷ್ಯಾಕ್ಕೆ ಮೊದಲ ಬಾರಿ ಭೇಟಿ ನೀಡಿದ ಸಂದರ್ಭವನ್ನು ನನಗೆಂದಿಗೂ ಮರೆಯಲಾಗದು. 2001ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರೊಂದಿಗೆ ನಾನು ಈ ದೇಶಕ್ಕೆ ಬಂದಿದ್ದೆ. ರಷ್ಯಾ ದ ಸಾಧನೆಗಳು, ತನ್ನ ದೇಶದ ಇತಿಹಾಸದ ಬಗ್ಗೆ ಅದಕ್ಕಿರುವ ಅರಿವು ಮತು ರಶ್ಯನ್‌ ನಾಗರಿಕರಲ್ಲಿನ ಆತ್ಮಾಭಿಮಾನವನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಅದಾದ ನಂತರ ನಾನು ಈ ದೇಶಕ್ಕೆ ಕೆಲವು ಬಾರಿ ಬಂದಿದ್ದೇನೆ. ಪ್ರತಿಬಾರಿಯೂ, ಭಾರತ ಮತ್ತು ಭಾರತೀಯರ ಬಗ್ಗೆ ರಶ್ಯನ್ನರಿಂದ ಅತೀವ ಸದ್ಭಾವನೆ ಎದುರಾಗುವುದನ್ನು ನೋಡಿದ್ದೇನೆ. 

ಪ್ರಸಿಡೆಂಟ್‌ ಪುಟಿನ್‌ ಅವರು 17ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಕ್ಟೋಬರ್‌ 2016ರಂದು ಗೋವಾಕ್ಕೆ ಬಂದಿದ್ದರು. ಆಗ ಈ ಮಹತ್ವದ ಸಂದರ್ಭವನ್ನು ಆಚರಿಸುವುದಕ್ಕಾಗಿ ನೀಲನಕ್ಷೆಯೊಂದಕ್ಕೆ ಸಹಮತ ವ್ಯಕ್ತಿಪಡಿಸಿದ್ದೆವು. ನಮ್ಮ ಎರಡೂ ರಾಷ್ಟ್ರಗಳ ನಡುವಿನ ಅನನ್ಯ ಸಂಬಂಧದ ಅಭಿವೃದ್ಧಿಗೆ ಶ್ರಮಿಸಿದ, ಕೊಡುಗೆ ನೀಡಿದ ಜ್ಞಾತ ಮತ್ತು ಅಜ್ಞಾತರಿಗೆಲ್ಲ ನಾನು ಗೌರವಾರ್ಪಣೆ ಸಲ್ಲಿಸುತ್ತೇನೆ. ಅವರೆಲ್ಲರ ಕಠಿಣ ಪರಿಶ್ರಮದ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಸಂಬಂಧದಲ್ಲಿ ಅವರಿಗಿದ್ದ ಅಚಲ ನಂಬಿಕೆಯ ಫ‌ಲಾನುಭವಿಗಳು ನಾವು. ಈ ಪರಂಪರೆಯನ್ನು ಬೆಳೆಸಲು ಮತ್ತು ಉತ್ತಮ ಜಗತ್ತಿನ ನಿರ್ಮಾಣಕ್ಕೆ ಕಾರಣವಾಗುವ ಈ ಬಲಿಷ್ಠ ಸಹಭಾಗಿತ್ವದ ಫ‌ಲವನ್ನು ನಮ್ಮ ಯುವ ಜನರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ. ಸುಂದರ ನಗರಿ ಸೇಂಟ್‌ ಪೀಟರ್ಸ್‌ಬರ್ಗ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆಗಿನ ಭೇಟಿಯನ್ನು ನಾನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ.

ಭಾರತ ಮತ್ತು ರಷ್ಯಾದ ಸ್ನೇಹ ದೀರ್ಘಾಯುವಾಗಲಿ!

– ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.