ಸ್ನಾನಗಳಲ್ಲಿ ಎಷ್ಟು ವಿಧ ಇದೆ ಗೊತ್ತಾ? ಈ ಸ್ನಾನಗಳ ವೈಶಿಷ್ಠ್ಯವೇನು…


Team Udayavani, Apr 17, 2018, 11:31 AM IST

bathing.jpg

ಸ್ನಾನ ಎಂದರೆ ನಮಗೆ ಗೋಚರಕ್ಕೆ, ಬರುವುದು ಮೈತೊಳೆದುಕೊಳ್ಳುವ ಕೊಳೆ ಹೋಗಲೆಂದು ಮಾಡುವ ಪ್ರಕ್ರಿಯೆ ಮಾತ್ರ. ಆದರೆ ಆಧ್ಯಾತ್ಮದ ವಿಚಾರದಲ್ಲಿ ಸ್ನಾನಕ್ಕೆ ಮಹತ್ವವಾದ ಸಂಪ್ರದಾಯವಿದೆ ಹಾಗೂ ಶಾಸ್ತ್ರನೀತಿ ಇದೆ.

ಮೊದಲಿಗೆ  ಆಧ್ಯಾತ್ಮಿಕ ಸ್ನಾನಗಳಲ್ಲಿ ಎಷ್ಟು ವಿಧವಿದೆ ಎಂದು ತಿಳಿದುಕೊಳ್ಳೋಣ :

7 ವಿಧದ ಆಧ್ಯಾತ್ಮಿಕ ಸ್ನಾನ
1 ಮಂತ್ರ ಸ್ನಾನ 
2 ಭೌಮ ಸ್ನಾನ
3 ಆಗ್ನೇಯಸ್ನಾನ
4 ವಾಯುವ್ಯಸ್ನಾನ 
5 ದಿವ್ಯ ಸ್ನಾನ 
6 ವರುಣ ಸ್ನಾನ
7 ಮಾನಸ ಸ್ನಾನ 

ಮಂತ್ರ ಸ್ನಾನ :
 ಕೆಲವು ಮಂತ್ರಗಳನ್ನು ಉಚ್ಚರಿಸಿಕೊಂಡು ಜಲವನ್ನು ತಲೆಗೆ, ಎದೆಗೆ ಹಾಗೂ ಪಾದಗಳಿಗೆ  ಪ್ರೋಕ್ಷಿಸಿಕೊಳ್ಳುವುದು ಮಂತ್ರಸ್ನಾನ 

ಭೌಮಸ್ನಾನ : 
ಭೌಮ ವೆಂದರೆ ಭೂಮಿ ಅಂದರೆ ಮೃತಿಕೆ ಎಂಬುದಾಗಿದೆ , ತುಳಸಿ ಗಿಡ ವಿರುವ ಅಥವಾ ಗೋಪದ ಸ್ಪರ್ಶದ ಮಣ್ಣು ಅಂದರೆ ಹಸು ಓಡಾಡಿದ ಜಗದ ಮಣ್ಣು, ಈ ಮೃತಿಕೆಯನ್ನು  ಮೈಗೆ ಹಚ್ಚಿಕೊಂಡು ಮಾಡುವ ಸ್ನಾನವೇ  ಭೌಮಸ್ನಾನವಾಗಿದೆ.

ಆಗ್ನೇಯಸ್ನಾನ:  
ಹೋಮ ಹವನ ಮಾಡಿದ ಭಸ್ಮವನ್ನು ಸರ್ವಾಂಗಗಳಿಗೆ ಲೇಪಿಸಿಕೊಂಡು ಮಾಡುವ ಸ್ನಾನವೇ ಆಗ್ನೇಯ ಸ್ನಾನವಾಗಿದೆ. 

ವಾಯುವ್ಯಸ್ನಾನ : 
ಹಸುವಿನ ಸಗಣಿಯಿಂದ ಸಣ್ಣ ಬಿಲ್ಲೆಗಳಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿ ಬೆರಣಿಯನ್ನು ಪುಡಿಮಾಡಿ ಅದನ್ನು ಲೇಪಿಸಿಕೊಂಡು ಮಾಡುವ ಸ್ನಾನವೇ ವಾಯವ್ಯ ಸ್ನಾನ. 

ದಿವ್ಯ ಸ್ನಾನ:  
ಪ್ರಕೃತಿದತ್ತವಾದ ಮಳೆ ಹನಿಗಳಿಂದ ಮಿಂದೇಳುವ ಪ್ರಕಾರವೇ ದಿವ್ಯಸ್ನಾನ.

ವರುಣಸ್ನಾನ :
ಕೋಪ, ತಟಾಕ ನದಿಗಳಲ್ಲಿ ಮುಳುಗಿ ಮಾಡುವ ಸ್ನಾನವು ವರುಣ ಸ್ನಾನವೆಂದು ಹೇಳಲಾಗಿದೆ. ಇದು ನಾವು ನೀವು ನಿತ್ಯ ಸ್ನಾನವನ್ನು ಹೀಗೆ ಮಾಡಬೇಕು ಎಂಬುದು ಶಾಸ್ತ್ರ ನಿಯಮ. ಈಗಿನ ಸನ್ನಿವೇಶವನ್ನು ಅರಿತು ಹಿರಿಯರು ಸೂಚಿಸಿದಂತೆ ಈಗ ನಾವು ಮಾಡುತ್ತಿರುವ ಸ್ನಾನವನ್ನು ವರುಣ ಸ್ನಾನವೆಂದು ಪರಿಗಣಿಸಿದೆ. ಪ್ರಸ್ತುತವಾಗಿ ನಾವು ಮಾಡುತ್ತಿರುವ ಸ್ನಾನವನ್ನು ಜಲಸ್ನಾನವೆಂದು ಸಹ ಕರೆಯಬಹುದು . ಈ ವರುಣ ಸ್ನಾನಕ್ಕೆ ಅವಗಾಹನ ಸ್ನಾನ ಎಂಬುದಾಗಿಯೂ ಕರಿಯುತ್ತಾರೆ.

ಮಾನಸ ಸ್ನಾನ : ಭಗವಂತ ರೂಪವಾದ ಪುಂಡರೀಕಾಕ್ಷನ ಸ್ಮರಣೆಯೇ ಮಾನಸ ಸ್ನಾನ . ಈ ಪುಂಡರೀಕಾಕ್ಷನ ಚಿಂತನೆ ಹೇಗಿರಬೇಕೆಂದರೆ ನಮ್ಮ ಕಣ್ಣುಗಳು ಮುಚ್ಚಿದೊಡನೆ ಆ ಭಗವಂತನ ರೂಪವು ನಮ್ಮ ಕಣ್ಣ ಮುಂದೆ ಬರುವಂತೆ ಚಿಂತಿಸಿದಾಗ ಮಾತ್ರ ಮಾನಸ ಸ್ನಾನ ಪೂರ್ಣವಾಗುತ್ತದೆ.

ಹೀಗೆ ಸ್ನಾನ ಮಾಡುವಾಗ ಕೆಲವು ನಿಯಮಗಳು ಸಹ ಶಾಸ್ತ್ರ ಸಮ್ಮತವೇ ಸರಿ. ಕೂದಲನ್ನು ಬಿಚ್ಚಿಡಬಾರದು, ಮೊಣಕಾಲು ತಾಕುವಷ್ಟು ಜಲದಲ್ಲಿ ನಿಲ್ಲಬೇಕು ಅಥವಾ ಕುಳಿತುಕೊಳ್ಳಬಹುದು. ಸಂಕಲ್ಪಿಸಿ ಜಲವನ್ನು ನಮಸ್ಕರಿಸಿ ಪೂರ್ವಾಭಿಮುಖವಾಗಿ ಅಥವಾ ಪ್ರವಾಹಭಿಮುಖವಾಗಿ ಮೂರಾವರ್ತಿ ಮುಳುಗಿ ದೇಹವನ್ನು ತಿಕ್ಕಿಕೊಂಡು ಪುನಃ ಸ್ನಾನ ಮಾಡಬೇಕು. ನಂತರ ಜಲವನ್ನು ಹಿಡಿದು ಮಂತ್ರಸ್ನಾನವನ್ನು ಮಾಡುವುದು ಉತ್ತಮ.

ನಿತ್ಯ ಸ್ನಾನ : 
ಒಂದು ನದಿಯಲ್ಲಿ ಸ್ನಾನ ಮಾಡುವಾಗ ಬೇರೆ ನದಿಯ ಸ್ಮರಣೆ ಸಲ್ಲದು , ಹಾಗೂ  ಕೆರೆ, ಹೊಳೆಗಳು ಇಲ್ಲದ ಪಕ್ಷದಲ್ಲಿ ಮನೆಯಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು, ತಣ್ಣೀರಿನಿಂದ ಮಾಡಬಾರದು. ಶುರುವಿಗೆ ಒಂದು ಪಾತ್ರೆಯಲ್ಲಿ ತಣ್ಣೀರು ಹಿಡಿದು ಅದರ ಮೇಲೆ ಬಿಸಿನೀರು ಹಾಕಿ ಕೆಲವು ಮಂತ್ರಗಳಿಂದ ಅಭಿಮಂತ್ರಿಸಿ ಪಠಿಸುತ್ತ ಸ್ನಾನ ಮಾಡಬೇಕು.  ಹೀಗೆ ಸ್ನಾನ ಮಾಡಲು ಉಪಯೋಗಿಸಿದ ವಸ್ತ್ರದಿಂದ ಅಥವಾ ಬರಿಗೈಯಿಂದ ಮೈಯನ್ನು ಒರೆಸಬಾರದು, ಒಣಗಿದ ಶುಭ್ರವಾದ ಹತ್ತಿಯ ಬಟ್ಟೆಯಿಂದ ಒರೆಸಬೇಕು. ಹೀಗೆ ನಿತ್ಯದ ಪ್ರಾತಃಕಾಲದಲ್ಲಿ ಸ್ನಾನ ಮಾಡಬೇಕು.

ನೈಮಿತ್ತಿಕ ಸ್ನಾನ 
ಸೂತಕ, ಹಡೆದವಳು, ಶವ ಇತ್ಯಾದಿಗಳ ಸ್ಪರ್ಶವಾದರೆ ಸ್ನಾನಮಾಡಬೇಕು. ಈ ನೈಮಿತ್ತಿಕ ಸ್ನಾನವನ್ನು ರಾತ್ರಿಯಲ್ಲಾದರೂ ಸಹ ಮಾಡಬೇಕು. ಹಾಗೂ ನೈಮಿತ್ತಿಕಸ್ನಾನವನ್ನು ಬಿಸಿನೀರಿನಿಂದ ಮಾಡಬಾರದು ತಣ್ಣೀರಿಂದಲೇ ಮಾಡಬೇಕು.

ಕಾಮ್ಯಸ್ನಾನ :
ಅಮಾವಾಸ್ಯೆ, ವ್ಯತೀಪಾತ ಯೋಗ, ರಥಸಪ್ತಮಿ, ಮೊದಲಾದ ದಿನಗಳಲ್ಲಿ ಮಾಡುವ ಸ್ನಾನ ಹಾಗೂ ಕಾರ್ತಿಕ ಸ್ನಾನ, ಮಾಘ ಸ್ನಾನಾದಿಗಳು, ಪರ್ವಕಾಲದ ಸ್ನಾನಗಳಿಗೆ ಕಾಮ್ಯ ಸ್ನಾನವೆಂದು ಹೇಳಲಾಗುತ್ತದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.