ವ್ಯಾಸರಾವ್‌ ಇನ್ನಿಲ್ಲ ; ಕಳಚಿ ಬಿದ್ದ ಸಾಹಿತ್ಯ ಲೋಕದ ಕೊಂಡಿ 


Team Udayavani, Jul 15, 2018, 4:45 PM IST

25dfdsf.jpg

ರವಿ ಕಾಣದನ್ನು ಕವಿ ಕಂಡ ಎನ್ನುವ ಮಾತಿನಂತೆ ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ಅದೆಷ್ಟೋ ಮರೆಯಾದ  ಮೇರು ಸಾಹಿತಿಗಳು  ಅದ್ಭುತ ಗೀತೆಗಳ ಸಾಲುಗಳನ್ನು   ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ಅಂತಹ ಗೀತೆಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗುತಾದ ಭೂತಾಯಿ ಮನಸು. ರಾಜಂಗೂ ರಾಣಿಗೂ ಮುರಿದೊದ್ರೆ ಮನಸು ಅರಮನೆಯಾಗೇನೈತೆ ಸೊಗಸೂ..ಎನ್ನುವ ಶುಭಮಂಗಳ ಚಿತ್ರದ  ಗೀತೆ ಇಂದಿಗೂ ಎಂದೆಂದಿಗೂ ನೆನಪಿನಲ್ಲುಳಿಯುವ ಅದ್ಭುತ ಸಾಹಿತ್ಯವುಳ ಚಿತ್ರಗೀತೆ. ಈ ಗೀತೆಯನ್ನು ಬರೆದ ಎಂ. ಎನ್‌.ವ್ಯಾಸರಾಯರು ಸಾಹಿತ್ಯ ಲೋಕವನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. 

ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವ್ಯಾಸರಾಯರು ಕವಿಯಾಗಿಯೂ,ಕಥೆಗಾರರಾಗಿಯೂ, ಕಾದಂಬರಿಕಾರರಾಗಿ,ಅನುವಾದಕರಾಗಿ  ತನ್ನ ಸಾಹಿತ್ಯ ಸೇವೆ ಸಲ್ಲಿಸಿದವರು. 

ಮೈಸೂರಿನಲ್ಲಿ 1945 ಜನವರಿ 27 ರಂದು ನರಸಿಂಗ ರಾವ್‌, ಸುಶೀಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ವ್ಯಾಸರಾವ್‌ ಅವರು ಬೆಂಗಳೂರು ವಿವಿಯಲ್ಲಿ ಬಿಎ ಪದವಿ ಪಡೆದರು. ಡ್ರಾಮಾಟಿಕ್ಸ್‌ನಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದರು. 

ಅವರಲ್ಲಿದ್ದ ಸಾಹಿತ್ಯದ ಸ್ಪೂರ್ತಿ ಹಲವು ಬರಹಗಳು ಪ್ರಕಟಗೊಳ್ಳುವಂತೆ ಮಾಡಿತ್ತು. ಪತ್ತೇದಾರಿ ಕಾದಂಬರಿಯಿಂದ ಹಿಡಿದು ಪ್ರೇಮಗೀತೆಗಳನ್ನೂ ವ್ಯಾಸರಾಯರು ಬರೆದಿದ್ದರು. ಉತ್ತಮ ವಿಚಾರಗಳನ್ನೊಳಗೊಂಡ ಅವರ ಕಾದಂಬರಿಗಳು ತೆಲುಗು, ಹಿಂದಿ, ಸಿಂಧ್‌ ಮತ್ತು ಆಂಗ್ಲ ಭಾಷೆಗೆ ಭಾಷಾಂತರಗೊಂಡಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿ . 

‘ಬೆಳ್ಳಿ ಮೂಡುವ’ ಕವನ ಸಂಕಲನ,’ಮಳೆಯಲ್ಲಿ ನೆನದ’ ಕಥಾ ಸಂಕಲನ, ‘ಉತ್ತರ ಮುಖಿ’ ನೀಳ್ಗತೆಗಳ ಸಂಕಲನ, ‘ಸ್ಕಾಟ್‌ ಡಬಲ್‌ ಎಕ್ಸ್‌’ , ‘ಅಖಿಲಾ ಮೈ ಡಾರ್ಲಿಂಗ್‌’ ಎನ್ನುವ ಪತ್ತೇದಾರಿ ಕಾದಂಬರಿಗಳು, ಕತ್ತಲಲ್ಲಿ ಬಂದವರು ಎನ್ನುವ ನಾಟಕ ಪ್ರಮುಖವಾದ ಕೃತಿಗಳು. 

ಚೀನಿ, ಸಿಂಧಿ,ಇಂಗ್ಲೀಷ್‌,ಫ್ರೆಂಚ್‌‌, ಉರ್ದು ಕಥೆಗಳನ್ನು ಭಾಷಾಂತರಿಸಿದ ಹೆಗ್ಗಳಿಕೆಯೂ ವ್ಯಾಸರಾವ್‌ ಅವರದ್ದು. ವರನಟ ಡಾ.ರಾಜ್‌ ಕುಮಾರ್‌, ಕವಿ ಜಿ.ಎಸ್‌.ಶಿವರುದ್ರಪ್ಪ , ಡಾ.ಯು.ಆರ್‌.ಅನಂತಮೂರ್ತಿ ಸೇರಿದಂತೆ ಹಲವು ದಿಗ್ಗಜರ ಸಂದರ್ಶನ ನಡೆಸಿದ್ದ ವ್ಯಾಸರಾವ್‌ ಅವರು ತಮ್ಮ ಸಾಹಿತ್ಯ ಪ್ರೌಢಿಮೆಗೆ ಅನುಗುಣವಾಗಿ ಅದ್ಭುತ ಎನಿಸುವಂತ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇತರರ ಸಾಹಿತ್ಯ ದ ಕುರಿತು ಅಪಾರ ಕಾಳಜಿ, ಯುವ ಬರಹಗಾರರಿಗೆ ಪ್ರೇರೆಪಕರಾಗಿದ್ದ ವ್ಯಾಸರಾಯರು ನೂರಾರು ಮಂದಿ ಬರಹಗಾರರ ಕಥೆ, ಸಾಹಿತ್ಯ, ಹಾಸ್ಯ, ಕವನ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ. 

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಿರಿತೆರೆ ಮಾತ್ರವಲ್ಲನೆ ಕಿರುತೆರೆಗೂ ಸಾಹಿತಿಯಾಗಿ ಪರಿಚಿತರಾಗಿದ್ದ ವ್ಯಾಸರಾಯರು 35 ಜನಪ್ರಿಯ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ ರಚಿಸಿದ್ದರು. 

ನೂರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು  ಬರೆದಿದ್ದ  ವ್ಯಾಸರಾಯರ ಹಾಡುಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನೀನಿಲ್ಲದೇ ನನಗೇನಿದೆ.., ಚಂದ ಚಂದ ಸಂಗಾತಿ ನೋಟವೇ ಚಂದ.. ಮೊದಲಾದವು ಜನಪ್ರಿಯತೆಯ ಉತ್ತುಂಗಕ್ಕೇರಿದ ಗೀತೆಗಳು. 

ಶ್ರೇಷ್ಠ ಸಾಹಿತ್ಯಕ್ಕೆ ಸಾಕ್ಷಿ, ಪ್ರೇರಣೆಯಾಗಿದ್ದ ಅವರ ಸಾಹಿತ್ಯವುಳ್ಳ ‘ಮೈಸೂರು ಮಲ್ಲಿಗೆ’, ‘ಆಸ್ಫೋಟ’, ‘ದಂಗೆ ಎದ್ದ ಮಕ್ಕಳು’, ‘ವಾತ್ಸಲ್ಯ ಪಥ’ ಚಿತ್ರಗಳು ಪ್ರಶಸ್ತಿಗೆ ಭಾಜನವಾಗಿವೆ. 

ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳಿಗೆ ವ್ಯಾಸರಾವ್‌ ಅವರು ಭಾಜನರಾಗಿದ್ದರು. 

ಬೆಂಗಳೂರಿನ ನಿವಾಸದಲ್ಲಿ  ಜುಲೈ 15 ರ ಭಾನುವಾರ ಬೆಳ್ಳಂಬೆಳಗ್ಗೆ ಸಾಹಿತ್ಯ ಲೋಕದ ಯಾತ್ರೆ ಮುಗಿಸಿ ವ್ಯಾಸರಾಯರು ಮರೆಯಾಗಿದ್ದಾರೆ. 

ಬಹುಮುಖ ಪ್ರತಿಭೆಯನ್ನು  ಹೊಂದಿದ್ದ ಮೇರು ಸಾಹಿತಿಯ ಅಗಲುವಿಕೆ ಕನ್ನಡ ಸಾರಸ್ವತ ಲೋಕಕ್ಕೆ ,ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಬಹದು.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.