“ಈ” ಖ್ಯಾತ ನಟರು ಶ್ಯಾಮ್ ಬೆನಗಲ್ ನಿರ್ದೇಶನದಲ್ಲಿ ಅರಳಿದ ಪ್ರತಿಭೆಗಳು!


Team Udayavani, Aug 2, 2018, 1:58 PM IST

ananth-nag.jpg

ಜಾತಿ ವ್ಯವಸ್ಥೆ, ಆದರ್ಶವಾದ, ವರ್ಗ, ಅಂತಸ್ತು, ಸಂಪ್ರದಾಯದ ಚೌಕಟ್ಟಿನೊಳಗೆ ನಡೆಯುವ ನೈತಿಕ, ಅನೈತಿಕ ಜಟಾಪಟಿಯ ನಡುವೆ ನಡೆಯುವ ಕಥೆ ಅಂಕುರ್ ಸಿನಿಮಾದ್ದು. ಜಾತಿ ವ್ಯವಸ್ಥೆಯಲ್ಲಿನ ಶೋಷಣೆ, ಆಧುನಿಕ ಶಿಕ್ಷಣ ಪಡೆದ ನಾಯಕ,

ದಲಿತ ಯುವತಿ ಜೊತೆಗಿನ ಅನೈತಿಕ ಸಂಬಂಧದ ಸುತ್ತ ಸಾಗುವ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿದ್ದು ನಟ ಅನಂತ್ ನಾಗ್ ಮತ್ತು ಶಬಾನಾ ಅಜ್ಮೀ. ಹೌದು ಇಬ್ಬರನ್ನೂ ಸಿನಿ ಪ್ರಪಂಚಕ್ಕೆ ಪರಿಚಯಿಸಿದ ಸಿನಿಮಾ ಕೂಡಾ ಇದಾಗಿದೆ.   ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದವರು ಉಡುಪಿ ಮೂಲದ ಶ್ಯಾಮ್ ಬೆನಗಲ್!

ಅನಂತ್ ನಾಗ್ ಕೂಡಾ ಉತ್ತರ ಕನ್ನಡದ ಭಟ್ಕಳದ ನಾಗರಕಟ್ಟೆಯಲ್ಲಿ ಜನಿಸಿದವರು. ತಮ್ಮ 7ನೇ ತರಗತಿ ವಿದ್ಯಾಭ್ಯಾಸದ ನಂತರ ಮುಂಬೈಗೆ ಪ್ರಯಾಣ. ಅಲ್ಲಿ 11ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ಆ ಸಂದರ್ಭದಲ್ಲಿಯೇ ಕೊಂಕಣಿ, ಕನ್ನಡ, ಮರಾಠಿ ಭಾಷೆಯ ನಾಟಕಗಳಲ್ಲಿ ಅಭಿನಯಿಸಲು ನಾಗ್ ಅವರನ್ನು ಆಯ್ಕೆ ಮಾಡುತ್ತಿದ್ದರು. ಹೀಗೆ ಮೊತ್ತ ಮೊದಲ ಬಾರಿಗೆ ರಂಗಕರ್ಮಿ ಪ್ರಭಾಕರ್ ಮುದುರ್ ಹಾಗೂ ವೆಂಕಟರಾವ್ ಅವರು ಚೈತನ್ಯ ಮಹಾಪ್ರಭು ನಾಟಕದಲ್ಲಿ ಅನಂತ್ ನಾಗ್ ಗೆ ಪುರೋಹಿತನ ಪಾತ್ರ ಮಾಡುವ ಅವಕಾಶ ಕೊಟ್ಟಿದ್ದರು. ಅಲ್ಲಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಅನಂತ್ ನಾಗ್ ಗಿರೀಶ್ ಕಾರ್ನಾಡ್ ಅವರ ನಾಟಕದಲ್ಲಿಯೂ ಪಾತ್ರ ನಿರ್ವಹಿಸಿದ್ದರು.

ಸಿನಿ ಪ್ರಪಂಚಕ್ಕೆ ಕಾಲಿಟ್ಟ ನಾಗ್…ಶ್ಯಾಮ್ ಬೆನಗಲ್ ಮೋಡಿ!

1973ರಲ್ಲಿ ಕನ್ನಡದ ಸಂಕಲ್ಪ ಚಿತ್ರದಲ್ಲಿ ನಟನೆ ಪ್ರಾರಂಭ. ಖ್ಯಾತ ರಂಗಕರ್ಮಿ ಸತ್ಯದೇವ್ ದುಬೆ ಅವರು ಅನಂತ್ ನಾಗ್ ಅವರನ್ನು ಶ್ಯಾಮ್ ಬೆನಗಲ್ ಗೆ ಪರಿಚಯಿಸಿಕೊಟ್ಟಿದ್ದರು. 1974ರಲ್ಲಿ ಶ್ಯಾಮ್ ಬೆನಗಲ್ ತಮ್ಮ ಅಂಕುರ್ ಸಿನಿಮಾದಲ್ಲಿ ಅನಂತ್ ನಾಗ್ ಅವರನ್ನು ನಾಯಕ ನಟನನ್ನಾಗಿ ಪರಿಚಯಿಸಿದ್ದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ಯಾಮ್ ಬೆನಗಲ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೆನಗಲ್ ನವರು. ಇವರ ಕುಟುಂಬ ಸಿಕಂದರಾಬಾದ್ ಗೆ ವಲಸೆ ಹೋಗಿತ್ತು. 1934ರ ಡಿಸೆಂಬರ್ 14ರಂದು ಶ್ಯಾಮ್ ಸುಂದರ್ ಬೆನಗಲ್ ಜನನ. ತಮ್ಮ 12ನೇ ವಯಸ್ಸಿನಲ್ಲಿಯೇ ಫೋಟೋಗ್ರಾಫರ್ ತಂದೆ ಶ್ರೀಧರ್ ಬಿ ಬೆನಗಲ್ ಅವರ ಕ್ಯಾಮೆರಾ ಹಿಡಿದು ಮೊದಲ ಸಿನಿಮಾ ಮಾಡಿದ್ದರು! ಉಸ್ಮಾನಿಯಾ ವಿವಿಯಿಂದ ಎಂಎ ಪದವಿ ಪಡೆದಿದ್ದರು.

1959ರಲ್ಲಿ ಮುಂಬೈ ಮೂಲದ ಜಾಹೀರಾತು ಏಜೆನ್ಸಿಯಲ್ಲಿ ಕಾಪಿ ರೈಟರ್ ಆಗಿ ವೃತ್ತಿ ಆರಂಭಿಸಿದ್ದರು. ತದನಂತರ ಜಾಹೀರಾತು ಏಜೆನ್ಸಿಯ ಕ್ರಿಯೇಟಿವ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಗುಜರಾತಿ ಭಾಷೆಯಲ್ಲಿ 1962ರಲ್ಲಿ ಮೊದಲ ಡಾಕ್ಯುಮೆಂಟರಿ ತಯಾರಿಸಿದ್ದರು. ಸುಮಾರು 70 ಡಾಕ್ಯುಮೆಂಟರಿ ಹಾಗೂ ಕಿರುಚಿತ್ರಗಳನ್ನು ಶ್ಯಾಮ್ ಬೆನಗಲ್ ನಿರ್ಮಿಸಿದ್ದರು.

ಹಿಂದಿ ಸಿನಿಮಾದಲ್ಲಿ ಅನಂತ್ ನಾಗ್ ಅವರನ್ನು ಪರಿಚಯಿಸಿದ್ದು ಶ್ಯಾಮ್ ಬೆನಗಲ್. ಅಂಕುರ್ ಸಿನಿಮಾ ಮೂಲಕ ಅನಂತ್ ನಾಗ್ ಮತ್ತು ಶಬಾನಾ ಅಜ್ಮಿಯ ಪ್ರತಿಭೆ ಜಗಜ್ಜಾಹೀರಾಗಿತ್ತು. ಇದು ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತ್ತು. ಶ್ಯಾಮ್ ಬೆನಗಲ್ ಗೆ ಆಗ 37 ವರ್ಷ.

ಶ್ಯಾಮ್ ಬೆನಗಲ್ ಗರಡಿಯಲ್ಲಿ ಅನಂತ್ ನಾಗ್ ಅವರು ನಿಶಾಂತ್, ಭೂಮಿಕಾ, ಕೊಂಡುರಾ, ಕಲಿಯುಗ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ಈ ದಿಗ್ದರ್ಶಕ ನಿರ್ದೇಶಕ ಆರಿಸಿಕೊಂಡ ಕೆಲವು ಕಲಾವಿದರು ಮುಂದೆ ಖ್ಯಾತ ನಟರಾಗಿ ಹೆಸರು ಮಾಡಿದರು. ಅವರಲ್ಲಿ ಅನಂತ್ ನಾಗ್, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಓಂಪುರಿ, ಕುಲ್ ಭೂಷಣ್ ಖರಬಂದಾ ಪ್ರಮುಖರು.

ಚರಣದಾಸ್ ಚೋರ್ ಎಂಬ ಮಕ್ಕಳ ಚಿತ್ರ ನಿರ್ಮಿಸಿದ್ದರು. ನಿಶಾಂತ್, ಭೂಮಿಕಾ, ಮಂಥನ್, ಜುನೂನ್, ಕಲಿಯುಗ್, ಆರೋಹಣ್, ಮಂಡಿ, ತ್ರಿಕಾಲ್, ಮಮ್ಮೊ, ಜುಬೈದಾ, ಸರ್ದಾರಿ ಬೇಗಂ ನಂತಹ ಅದ್ಭುತ ಸಿನಿಮಾಗಳು ಬೆನಗಲ್ ನಿರ್ದೇಶನದಲ್ಲಿ ಮೂಡಿಬಂದಿದ್ದವು. ಮೆಗಾ ಧಾರವಾಹಿ ಯಾತ್ರಾ ಮರೆಯಲಾರದ ಚಿತ್ರ. ಆ ನೆಲೆಯಲ್ಲಿಯೇ ಶ್ಯಾಮ್ ಬೆನಗಲ್ ಚಿತ್ರಗಳನ್ನು ದೃಶ್ಯ ಕಾವ್ಯ ಎಂದು ಬಣ್ಣಿಸುತ್ತಾರೆ.

1988ರಲ್ಲಿ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ಆಧರಿಸಿ ಭಾರತ್ ಏಕ್ ಖೋಜ್ ಎಂಬ ಧಾರವಾಹಿ ನಿರ್ದೇಶಿಸಿದ್ದರು. 2009ರಲ್ಲಿ 31ನೇ ಮಾಸ್ಕೋ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಜ್ಯೂರಿ ಸದಸ್ಯರಾಗಿದ್ದರು. ಈಗ ಫೆಡರೇಶನ್ ಆಫ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಶ್ಯಾಮ್ ಬೆನಗಲ್ ಕಾರ್ಯನಿರ್ವಹಿಸುತ್ತಿದ್ದಾರೆ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.