ಚಿನ್ನ ಖರೀದಿಸೋಣ, ಆದರೆ ಚಿನ್ನದ ಬಗ್ಗೆ ನಮಗೆ ಗೊತ್ತಿರುವುದೆಷ್ಟು ?


Team Udayavani, Aug 6, 2018, 8:00 AM IST

gold-jewellery-700.jpg

ಸಮಾಜದ ಎಲ್ಲ ವರ್ಗದ ಜನರು ಚಿನ್ನವನ್ನು ಇಷ್ಟಪಡುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಲೋಕಿಸಿದರೆ ಹೊಳೆಯುವ ಹಳದಿ ಲೋಹವೆಂಬ ಚಿನ್ನವು ಭಾರತೀಯರ ಬದುಕಿನಲ್ಲಿ  ಹಾಸುಹೊಕ್ಕಾಗಿರುವುದನ್ನು ತಿಳಿಯಬಹುದು. ಹಾಗಿದ್ದರೂ ಚಿನ್ನ, ಅದರ ಭಾವನಾತ್ಮಕ ಮತ್ತು ಹೂಡಿಕೆ ಮೌಲ್ಯ, ಪರಿಶುದ್ಧತೆ, ವ್ಯಾವಹಾರಿಕ ಮಾಹಿತಿ, ಇತ್ಯಾದಿಗಳ ಬಗ್ಗೆ  ನಮಗೆ ತಿಳಿದಿರುವುದು ಅತ್ಯಲ್ಪವೇ. 

ಚಿನ್ನ ನಿಜಕ್ಕೂ ಒಂದು ಉತ್ತಮ ಹೂಡಿಕೆಯ ಮಾಧ್ಯಮ ಹೌದೇ ಅಲ್ಲವೇ ಎಂಬ ಬಗ್ಗೆ ಹೂಡಿಕೆ ತಜ್ಞರಲ್ಲಿ ಸದಾ ಕಾಲ ಚರ್ಚೆ ನಡೆಯುತ್ತಲೇ ಇರುವುದನ್ನು ನಾವು ಕಾಣುತ್ತೇವೆ. ನಿಮಗಿದು ಆಶ್ಚರ್ಯವಾದೀತು : ಅನೇಕ ಹೂಡಿಕೆ ಪರಿಣತರ ದೃಷ್ಟಿಯಲ್ಲಿ ಚಿನ್ನ ಒಂದು ಉತ್ತಮ ಹೂಡಿಕೆ ಮಾಧ್ಯಮ ಅಲ್ಲವೇ ಅಲ್ಲ ! 

ಇನ್ನೂ ಅನೇಕ ಹೂಡಿಕೆ ತಜ್ಞರ ದೃಷ್ಟಿಯಲ್ಲಿ ಚಿನ್ನ ಒಂದು ಉತ್ತಮ ಹೂಡಿಕೆ ಮಾಧ್ಯಮ. ಈ ಭಿನ್ನಾಭಿಪ್ರಾಯ, ದ್ವಂದ್ವ ಯಾವತ್ತೂ ಇದ್ದದ್ದೇ. ಹಾಗಾಗಿ ಇವರಲ್ಲಿ ಯಾರನ್ನು ನಂಬಬೇಕು, ಯಾರನ್ನೂ ನಂಬಬಾರದು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಸಹಜವಾಗಿಯೇ ಇರುತ್ತದೆ; ಅದೇನಿದ್ದರೂ ಜನರು ಚಿನ್ನ ಖರೀದಿಸುವದನ್ನು ನಿಲ್ಲಿಸುವುದಿಲ್ಲ ! 

ಇದಕ್ಕೆ  ಜನರು ಕೊಡುವ ಮುಖ್ಯ ಕಾರಣವೆಂದರೆ ಚಿನ್ನ ಖರೀದಿಸುವುದು ಸುಲಭ; ಮಾರುವುದೂ ಸುಲಭ. ಚಿನ್ನವನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಾ ಹೋದರೆ ಅದನ್ನು ತೆರಿಗೆ ಹೊರೆಯಿಂದ ರಕ್ಷಿಸಬಹುದು, ಇತ್ಯಾದಿ. 

ಅನೇಕ ಜನರ ದೃಷ್ಟಿಯಲ್ಲಿ  ಚಿನ್ನದ ಮೇಲಿನ ಹೂಡಿಕೆ ಮೌಲ್ಯ ಎಂತಹ ವಿಷಮ ಸಂದರ್ಭದಲ್ಲೂ  ಹಣದುಬ್ಬರಕ್ಕೆ ಕೊರೆದು ಹೋಗುವುದಿಲ್ಲ. ಚಿನ್ನದ ಧಾರಣೆ  ಶೇರು ಧಾರಣೆಯಂತೆ ಪ್ರಪಾತಕ್ಕೆ ಬೀಳುವುದಿಲ್ಲ; ಏಕಾಏಕಿ ಬಾನೆತ್ತರಕ್ಕೂ ಜಿಗಿಯುವುದಿಲ್ಲ; ಆದುದರಿಂದ ಚಿನ್ನದ ಮೇಲಿನ ಹೂಡಿಕೆಗೆ ಯಾವತ್ತೂ ಮೋಸ ಇಲ್ಲ. ಅದೊಂದು ಆಪದ್ಧನ !

ಹಾಗಿದ್ದರೂ ಹಣಕಾಸು ಪರಿಣತರ ದೃಷ್ಟಿಯಲ್ಲಿ ಜನರು ಚಿನ್ನ ಖರೀದಿಸುವುದು ಒಂದು ವ್ಯರ್ಥ ಆರ್ಥಿಕ ಚಟುವಟಿಕೆ; ಚಿನ್ನದ ಮೇಲೆ ಹಾಕುವ ಹಣವನ್ನು ವ್ಯಾಪಾರ – ವಹಿವಾಟಿನ ಮೇಲೆ ಹಾಕಿದರೆ, ಅದರಿಂದ ಉದ್ಯಮ ಬೆಳೆಯುತ್ತದೆ; ಲಾಭ ಬರುತ್ತದೆ; ಸಂಪತ್ತು ಹೆಚ್ಚುತ್ತದೆ, ಒಂದಷ್ಟು ಮಂದಿಗೆ ಉದ್ಯೋಗ ಸಿಗತ್ತದೆ. 

ಜನರು ಚಿನ್ನವನ್ನು ಹೆಚ್ಚೆಚ್ಚು ಖರೀದಿಸಿದರೆ ಸರಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ ಎನ್ನುವುದು ಸತ್ಯ. ಜನರು ಖರೀದಿಸಿಡುವ ಚಿನ್ನ ಅಥವಾ ಚಿನ್ನಾಭರಣ ಬ್ಯಾಂಕ್ ಲಾಕರ್ ಸೇರಿ ನಿಷ್ಕ್ರಿಯವಾಗುವ ಸಂಪತ್ತು. ಆದ ಕಾರಣ ಅದು ಯಾವುದೇ ಹುಟ್ಟುವಳಿ ತರುವುದಿಲ್ಲ; ಜನರಿಗಾಗಿ ಸರಕಾರ ಡಾಲರ್ ವ್ಯಯಿಸಿ ಚಿನ್ನವನ್ನು ಆಮದಿಸಿ ದೇಶೀಯ ಮಾರುಕಟ್ಟೆಗೆ ಒದಗಿಸಬೇಕಾಗುತ್ತದೆ.

ಇದರಿಂದ ಸರಕಾರದ ಕೈಯಲ್ಲಿರುವ ಅಮೂಲ್ಯ ಡಾಲರ್ ವ್ಯರ್ಥವಾಗಿ ವ್ಯಯವಾಗುತ್ತದೆ. ವಿದೇಶದಿಂದ ಆಮದಾಗುವ ಬಹುಪಾಲು ಚಿನ್ನವನ್ನು ಜನರು ಆಭರಣದ ಉದ್ದೇಶಗಳಿಗಾಗಿ ಬಳಸುತ್ತಾರೆ.  ಇದು ಕೇವಲ ಸೌಂದರ್ಯವರ್ಧಕ ಸೊತ್ತಾದೀತೇ ಹೊರತು ಆರ್ಥಿಕ ಪ್ರಗತಿಗೆ ಕಾಣಿಕೆ ನೀಡುವುದಿಲ್ಲ ಎನ್ನುವುದು ಸರಕಾರದ ವಾದ.

ಅಂತೆಯೇ ಸರಕಾರ ಪೇಪರ್ ಗೋಲ್ಡ್ ರೂಪದಲ್ಲಿ  ಗೋಲ್ಡ್ ಬಾಂಡ್ ಯೋಜನೆಯನ್ನು ಜನರ ಮುಂದಿಟ್ಟಿದೆ. ಇದರಡಿ ಹೂಡಿಕೆದಾರರು ತಲಾ 4 ಕಿಲೋ ಚಿನ್ನವನ್ನು ಖರೀದಿಸಬಹದು. ಚಿನ್ನದ ಮಾರುಕಟ್ಟೆ ಧಾರಣೆ ಏರಿದಂತೆ ಇದರ ಮೌಲ್ಯವೂ ಏರುತ್ತದೆ. ಮೇಲಾಗಿ ವರ್ಷಕ್ಕೆ ಶೇ.2.50 ಬಡ್ಡಿ ಸಿಗುತ್ತದೆ ಮತ್ತು ಬಾಂಡ್ ಮೇಲಿನ ಗಳಿಕೆ ಆದಾಯ ತೆರಿಗೆಯಿಂದ ಮುಕ್ತವಾಗಿದೆ.  ಇದಲ್ಲದೆ ಹೂಡಿಕೆದಾರರಿಗಾಗಿ ಚಿನ್ನದ ಬೆಂಗಾವಲಿರುವ ಮ್ಯೂಚುವಲ್ ಫಂಡ್ ಗಳು ಕೂಡ ಇವೆ. 

ಇದೆಲ್ಲ ಸರಿ. ಆದರೆ ಚಿನ್ನದ ಮೇಲಿನ ಪ್ರೀತಿ ಇರುವಂತೆಯೇ ನಾವು ಖರೀದಿಸುವ ಚಿನ್ನಾಭರಣದ ಬಗ್ಗೆಯೂ ನಮಗೆ ಒಂದಿಷ್ಟು ಅಗತ್ಯ ಮಾಹಿತಿ ಇರುವುದು ಅಗತ್ಯ. ಅವುಗಳನ್ನು ನಾವಿಲ್ಲಿ ಸಂಕ್ಷಿಪ್ತವಾಗಿ ಗುರುತಿಸಬಹುದು. 

ಚಿನ್ನದ ಪರಿಶುದ್ಧತೆ ಎಂದರೇನು ? ಚಿನ್ನದ ಪರಿಶುದ್ಧತೆಯನ್ನು ಕ್ಯಾರೆಟ್‌ ನಲ್ಲಿ ಅಳೆಯಲಾಗುತ್ತದೆ. ಅವು ಹೀಗಿವೆ : 

* 24 ಕ್ಯಾರೆಟ್ : 99.99%

* 23 ಕ್ಯಾರೆಟ್ : 95.80%

* 22 ಕ್ಯಾರೆಟ್ : 91.66% 

* 21 ಕ್ಯಾರೆಟ್ ; 87.50%

* 18 ಕ್ಯಾರೆಟ್ : 75.00%

* 14 ಕ್ಯಾರೆಟ್ : 58.30%

22 ಕ್ಯಾರೆಟ್ ಅಂದರೆ 91.66 ಶುದ್ಧ ಚಿನ್ನ: ಉಳಿದ ಭಾಗ ಲೋಹ

24 ಕ್ಯಾರೆಟ್ ಚಿನ್ನವನ್ನು 22 ಕ್ಯಾರೆಟ್‌ ಗೆ ಪರಿವರ್ತಿಸಲು ಬೇಕಿರುವ ಲೋಹ ತಾಮ್ರ ಮತ್ತು ಬೆಳ್ಳಿ.

ಭಾರತದಲ್ಲಿ ಚಿನ್ನಾಭರಣ ತಯಾರಿಗೆ ವ್ಯಾಪಕವಾಗಿ 22 ಕ್ಯಾರೆಟ್ ಬಳಸಲಾಗುತ್ತದೆ.

ವಜ್ರಾಭರಣಗಳ ತೆರೆದ ಸೆಟ್ಟಿಂಗ್ ಗೆ 18 ಕ್ಯಾರೆಟ್ ಚಿನ್ನ ಬಳಸಲಾಗುತ್ತದೆ; ಮುಚ್ಚಿದ ವಜ್ರಾಭರಣಗಳ ಸೆಟ್ಟಿಂಗ್ ಗ 22 ಕ್ಯಾರೆಟ್ ಬಳಸಲಾಗುತ್ತದೆ.

ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ನಿಂದ ಸ್ಥಾಪಿಸಲ್ಪಟ್ಟ ಹಾಲ್ ಮಾರ್ಕಿಂಗ್ ಸೆಂಟರ್ಗಳು ಚಿನ್ನಾಭರಣಗಳನ್ನು ಪ್ರಮಾಣೀಕರಿಸುತ್ತವೆ.

ಚಿನ್ನಾಭರಣ ತಯಾರಿಯಲ್ಲಿ ಸತು ವನ್ನು ಸೋಲ್ಡರ್ ಗೆ ಬಳಸಲಾಗುತ್ತದೆ.

ಕ್ಯಾಡ್ಮಿಯಂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ) ಯಿಂದ ನಿಷೇಧಿತವಾಗಿರುವ ಲೋಹ. ಕ್ಯಾಡ್ಮಿಯಂ ಬಳಸಿ ಸೋಲ್ಡರ್ ಮಾಡುವಾಗ ಹೊರ ಸೂಸಲ್ಪಡುವ ಧೂಮವು ಕ್ಯಾನ್ಸರ್ ಕಾರಕ.

 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.