ಬಹುಪಯೋಗಿ ನಿಂಬೆ  ಹಣ್ಣಿನಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ…?

ನಿಂಬೆ ರಸ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.

Team Udayavani, Sep 8, 2022, 6:14 PM IST

ಬಹುಪಯೋಗಿ ನಿಂಬೆ  ಹಣ್ಣಿನಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ…?

ನಿಂಬೆ ಹಣ್ಣು ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ! ಈ ನಿಂಬೆ ಹಣ್ಣು ಮಿಟಮಿನ್‌ ಸಿ ಯ ಸಮೃದ್ಧ ಆಗರ. ಅಡುಗೆಯಲ್ಲಿ ಆರೋಗ್ಯಕ್ಕೆ , ಸೌಂದರ್ಯಕ್ಕೆ  ಹೀಗೆ ಹತ್ತು ಹಲವು ವಿಧಗಳಲ್ಲಿ  ನಿಂಬೆ ಅತ್ಯುಪಯುಕ್ತ.

ನಿಂಬೆ ಸಾರು:

ಒಂದು ಚಮಚ ಅಕ್ಕಿ, ಒಂದು ಚಮಚ ಗೋಧಿ , ಒಂದು ಗಂಟೆ ನೆನೆಸಿಡಿ. ಬಳಿಕ ಸ್ವಲ್ಪ ತೆಂಗಿನ ತುರಿ, 4 ಹಸಿ ಮೆಣಸು, ಬೆಲ್ಲ, ಉಪ್ಪು, 2 ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿ ಬೆರಸಿ ಎಲ್ಲವನ್ನು ನೆನೆಸಿದ ಅಕ್ಕಿ ಮತ್ತು ಗೋಧಿಯೊಂದಿಗೆ ನಯವಾಗಿ ಅರೆಯಬೇಕು. ಬಳಿಕ ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಂದು ನಿಂಬೆರಸ ಬೆರಸಬೇಕು.ತುಪ್ಪದಲ್ಲಿ ಸಾಸಿವೆ , ಕರಿಬೇವು ,ಇಂಗು , ಮೆಣಸಿನ  ಒಗ್ಗರಣೆ ನೀಡಬೇಕು.

ನಿಂಬೆ -ಪುದೀನಾ ಸಾರು

ಎರಡು ಮುಷ್ಠಿಯಷ್ಟು ಪುದೀನಾ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಕಾವಲಿಯಲ್ಲಿ ತುಪ್ಪ 2 ಚಮಚ , ಸ್ವಲ್ಪ ಕೊತ್ತಂಬರಿ,1ಚಮಚ ಜೀರಿಗೆ, 3 ಹಸಿ ಮೆಣಸು , 3 ಚಮಚ ತೆಂಗಿನ ತುರಿ ,ಒಂದು ಚಮಚ ಮೆಂತ್ಯೆ ಹುರಿದು ಬಳಿಕ ಪುದೀನಾ ಎಲೆ ಸೇರಿಸಿ ಬಾಡಿಸಿ ಎಲ್ಲವನ್ನು ರುಬ್ಬಿ ನೀರು ಸೇರಿಸಿ ತೆಳ್ಳಗೆ ಮಾಡಿ ಉಪ್ಪು ಬೆರಸಿ ಕುದಿಸಿ. ಸಾಸಿವೆ, ಕರಿಬೇವು, ಒಣಮೆಣಸು, ಇಂಗಿನ ಒಗ್ಗರಣೆ ಹಾಕಿ ನಂತರ ಅರ್ಧ ನಿಂಬೆ ರಸ ಬೆರಸಿ ಸ್ವಲ್ಪ ಬೆಲ್ಲ ಸೇರಿಸಿರಿ.

ನಿಂಬೆ -ಖರ್ಜೂರ ಚಟ್ನಿ

ಒಂದು ಕಪ್‌ ಖರ್ಜೂರ,ಒಂದು ನಿಂಬೆ ರಸ ಹಿಂಡಿ 5-6 ಮೆಣಸಿನಕಾಯಿ ರುಚಿಗೆ ಉಪ್ಪು ಬೆರಸಿ ಚೆನ್ನಾಗಿ ರುಬ್ಬಿರಿ.  ಈ ಚಟ್ನಿ ರುಚಿಕರವೂ,ಪೌಷ್ಟಿಕವೂ ಹೌದು.

ಆರೋಗ್ಯ ರಕ್ಷಕ ನಿಂಬೆ ಹಣ್ಣು

1. ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.

2. ಕೈಕಾಲಿನ ಚರ್ಮ ಒಡೆದು ಬಿರುಕು ಬಿಟ್ಟಿದರೆ ನಿಂಬೆಯ ಹೋಳಿನಿಂದ ತಿಕ್ಕಿ ಸುಮಾರು 25 ರಿಂದ 30 ನಿಮಿಷದ ಬಳಿಕ ತೊಳೆದು ಹಾಲಿನ ಕೆನೆ ಲೇಪಿಸಿ ತಿಕ್ಕಬೇಕು.

3. ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.

4. ನೆಗಡಿ, ಕೆಮ್ಮು, ಕಫ‌ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ, ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಕಫ‌ ನಿವಾರಣೆಯಾಗುವುದು.

5.ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.

6.ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ,ಅರಸಿನ ಪುಡಿ,ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.

7. ಬೊಜ್ಜು  ಕರಗಿಸಲು ಒಂದು ಕಪ್‌ ಬಿಸಿ ನೀರಿಗೆ ಅರ್ಧ ನಿಂಬೆರಸ ಬೆರಸಿ ನಿತ್ಯ ಖಾಲಿ ಹೊಟ್ಟೆಗೆ ಕುಡಿದು ಒಂದು ಗಂಟೆ ಬಳಿಕ ಹೊಟ್ಟೆ ಖಾಲಿ ಬಿಡಬೇಕು.

ಸೌಂದರ್ಯವರ್ಧಕ  ನಿಂಬೆ ಹಣ್ಣು

1. ಪುದೀನಾ ರಸದೊಂದಿಗೆ ನಿಂಬೆರಸ ಬೆರಸಿ ತಿಕ್ಕಿದರೆ ಮೊಡವೆ ನಿವಾರಕ.

2.ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.

3.ನಿಂಬೆ ರಸ ,ಜೇನು ಬೆರಸಿ ಪಾನಕದಂತೆ ಕುಡಿದರೆ ಚರ್ಮ ,ಕೂದಲುಗಳಿಗೆ ಉತ್ತಮ.

4.ನಿಂಬೆಯ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಒಣಗಿಸಿ ಪುಡಿ ಮಾಡಿ ಕಡಲೆ ಹಿಟ್ಟಿನೊಂದಿಗೆ ಬೆರಸಿಡಬೇಕು ಇದನ್ನು ನಿತ್ಯವು ಹಾಲಿನ ಕೆನೊಂದಿಗೆ ಮುಖಕ್ಕೆ ಲೇಪಿಸಿ ಸ್ನಾನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

5.ಊಟದ ಬಳಿಕ ನಿಂಬೆರಸಯುಕ್ತ ಬಿಸಿ ನೀರಲ್ಲಿ ಕೈ ತೊಳೆದರೆ ಕೈಯ ಜಿಡ್ಡು ನಿವಾರಣೆಯಾಗುತ್ತದೆ.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.