ಚಿನ್ನ ಕೊಂಡರೆ ಸಾಲದು; ಚಿನ್ನದ ಒಡವೆಗಳ ಜೋಪಾನ ಹೇಗೆ!


Team Udayavani, Sep 15, 2018, 3:37 PM IST

gold-1.jpg

ಆಭರಣ ಧರಿಸುವುದರಿಂದ ನೈಸರ್ಗಿಕ ಸೌಂದರ್ಯ ಇನ್ನೂ ಶೋಭಿಸುತ್ತದೆ. ಭಾರತ ದೇಶದಲ್ಲಿರುವವರಿಗೆ ಚಿನ್ನದ ಮೇಲೆ ವಿಶೇಷವಾದ ವ್ಯಾಮೋಹವಿದೆ. ನಿಮಗೆಲ್ಲಾ ಚಿನ್ನದ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಚಿನ್ನದ ಒಡವೆ ಇದ್ದರೂ ಸಹ ಸಾಲದು. ಎಷ್ಟೇ ಬಡವರಿದ್ದರೂ ಇದ್ದದ್ದರಲ್ಲೇ ಹಣವನ್ನು ಕೂಡಿಟ್ಟುಕೊಂಡು ಚಿನ್ನದ ಒಡವೆ ಮಾಡಿಸಿಕೊಂಡೇ ಇರುತ್ತಾರೆ. ಚಿನ್ನದ ಒಡವೆಗಳನ್ನು ಕೊಂಡು ಬಿಟ್ಟರೆ ಮುಗಿದು ಹೋಗಲ್ಲ ಅವನ್ನು ದೀರ್ಘ‌ಕಾಲದವರೆಗೆ ಜಾಗೃತೆ ಇದ್ದು  ನೋಡಿಕೊಳ್ಳುವುದು ಅಷ್ಟೇ ಮುಖ್ಯ.

ಚಿನ್ನದ ಒಡವೆಗಳ ಜೋಪಾನ ಮಾಡುವಲ್ಲಿ ಕೆಲವು ವಿಧಾನಗಳನ್ನು ಅನುಸರಿಸಿದರೆ ಬಹಳ ಕಾಲದವರೆಗೆ ಅದರ ಅಂದವನ್ನು ಹಾಗೆಯೇ ಇಡಬಹುದು.

1. ಸ್ನಾನ ಮಾಡುವಾಗ ಚಿನ್ನದ ಒಡವೆಗಳನ್ನು ಧರಿಸಬೇಡಿ. ಸೋಪು ಚಿನ್ನಕ್ಕೆ ಹಾನಿಯುಂಟು ಮಾಡುವುದಿಲ್ಲ. ಅದರೆ ಅದು ಕೆಲವು ಕಣಗಳನ್ನು ಬಿಡುತ್ತದೆ. ಅದು ಚಿನ್ನದ ಹೊಳಪನ್ನು ಕ್ರಮೇಣ ಕಡಿಮೆ ಮಾಡುತ್ತದೆ.

2.ಇತರೇ ಕೃತಕ ಆಭರಣಗಳ ಜೊತೆ ಚಿನ್ನದ ಒಡವೆಗಳನ್ನು ಇಡಬೇಡಿ.

3.ಕ್ಲೋರಿನ್‌ಯುಕ್ತ ನೀರಿನಿಂದ ಚಿನ್ನದ ಒಡವೆಗಳನ್ನು ದೂರವಿರಿಸಿ. ಸಾರ್ವಜನಿಕ ಈಜುಕೊಳದಲ್ಲಿ ಈಜುವಾಗ ಚಿನ್ನದ ಒಡವೆಗಳನ್ನು ಧರಿಸಲೇ ಬೇಡಿ. ಯಾಕೆಂದರೆ ಈ ಈಜುಕೊಳಕ್ಕೆ ನೀರಿಗೆ ಕ್ಲೋರಿನ್‌ಯುಕ್ತ ಮಿಶ್ರಣ ಹಾಕುತ್ತಾರೆ. ಇದರಿಂದ ನಿಮ್ಮ ಚಿನ್ನದ ಒಡವೆಗಳು ಕ್ರಮೇಣ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ.

4.ಎಲ್ಲಾ ಒಡವೆಗಳನ್ನು ಒಂದೇ ಡಬ್ಬದಲ್ಲಿ ಹಾಕಿಡಬೇಡಿ. ಇದರಿಂದ ಒಡವೆಗಳು  ಹಾಳಾಗಬಹುದು. ಅದಷ್ಟು ಬೇರೆ-ಬೇರೆ ಡಬ್ಬಿಗಳಲ್ಲಿ ಹಾಕಿಟ್ಟರೆ ಉತ್ತಮ.

5.ಒಡವೆಗಳನ್ನು ಸಂಗ್ರಹಿಸಿಡುವಾಗ ಟಿಶ್ಯೂ ಪೇಪರ್‌ನಲ್ಲಿ ಸುತ್ತಿಟ್ಟರೆ ಅಷ್ಟು ಬೇಗ ಅವು ತಮ್ಮ ಹೊಳಪನ್ನು ಕಳೆದುಕೊಳ್ಳುವುದಿಲ್ಲ.

ಒಡವೆಗಳ ಸ್ವಚ್ಛಗೊಳಿಸಲು ಇಲ್ಲಿವೆ ಕೆಲವೊಂದು ಕ್ರಮಗಳು:

1. ಒಡವೆಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿರಿ. ಸೋಪಿನಿಂದ ಸ್ವಚ್ಛಗೊಳಿಸಬಹುದು .ಟೂತ್‌ ಬ್ರಶ್‌ನಿಂದ ತೊಳೆದರೆ ಒಳ್ಳೆಯದು ಒಡವೆಗಳ ಮೂಲೆ ಮೂಲೆಯಲ್ಲಿರುವ ಕೊಳೆಗಳು ಹೋಗಿ ಬಿಡುತ್ತವೆ.

2.ಗ್ರೀಸ್‌ನಿಂದ ಕೂಡ ಒಡವೆಗಳನ್ನು ಸ್ವಚ್ಛಗೊಳಿಸಬಹುದು.

3.ಅರಸಿನ ನೀರಿನಲ್ಲಿ ಒಡವೆಗಳನ್ನು ಒಂದು ತಾಸಿನವರೆಗೆ ನೆನೆಸಿಟ್ಟು ನಂತರ ಸೋಪಿನಿಂದ ತೊಳೆದರೆ ಚಿನ್ನ ಮೊದಲಿನಂತೆಯೇ ಹೊಳಪಾಗುತ್ತದೆ.

4.ತೀರಾ ಕಂದುಬಣ್ಣಕ್ಕೆ ತಿರುಗಿದ್ದರೆ ಚಿನ್ನವನ್ನು ತೊಳೆಯಲು ವೃತ್ತಿಪರರೇ ಇರುತ್ತಾರೆ ಅವರ ಹತ್ತಿರವೇ ಸ್ವತ್ಛಗೊಳಿಸಬಹುದು.

ಎಚ್ಚರಿಕೆ!

ದಿನನಿತ್ಯ ಹಾಕಿಕೊಳ್ಳುವ ಒಡವೆಗಳನ್ನು ಆಗಾಗ ನಾವು ಸ್ವಚ್ಛಗೊಳಿಸದಿದ್ದರೆ ಚರ್ಮರೋಗ ಬರುವ ಸಾಧ್ಯತೆ ಇರುತ್ತದೆ.

ಉದಾಹರಣೆ: ಕಿವಿಯೋಲೆಗಳನ್ನು ಬಹಳ ದಿನಗಳ ಕಾಲ ಸ್ವಚ್ಛಗೊಳಿಸದಿದ್ದರೆ ಕಿವಿಯ ಚರ್ಮಗಳೆಲ್ಲ ಸುಟ್ಟಂತೆ ಕಾಣುತ್ತದೆ.. ಅದೇ ಮುಂದೆ ಚರ್ಮದ ಕಾಯಿಲೆಗೂ ನಾಂದಿ ಹಾಕಬಹುದು. ಆದ್ದರಿಂದ ಒಡವೆಗಳನ್ನು ಸ್ವಚ್ಛಗೊಳಿಸುವುದು ಉತ್ತಮ ಮಾರ್ಗವಾಗಿದೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.