ಹಾಸ್ಯದ ಹೊನಲು…ನಟ ಮುಸುರಿಯ “ಆ ನಗುವಿನ” ಶೈಲಿ ಮರೆಯಲು ಸಾಧ್ಯವೇ?


Team Udayavani, Oct 4, 2018, 1:17 PM IST

krishna-musuri.jpg

ಕನ್ನಡ ಚಿತ್ರರಂಗದ ಮರೆಯಲಾರದ ಹಾಸ್ಯ ನಟರಲ್ಲಿ “ಮುಸುರಿ ಕೃಷ್ಣಮೂರ್ತಿ” ಕೂಡಾ ಒಬ್ಬರು. ಮುಸುರಿಯ ನಗು, ಕುಹಕದ ಧ್ವನಿ, ನಟನೆಯನ್ನು ಇಷ್ಟಪಡದವರು ಯಾರು. ಇಂದಿಗೂ ಅವರ ಸಿನಿಮಾ ನೋಡಿದರೆ ಮುಸುರಿ, ಬಾಲಣ್ಣ, ದಿನೇಶ್, ನರಸಿಂಹರಾಜು, ಧೀರೇಂದ್ರ ಗೋಪಾಲ್,ಉಮೇಶ್ ನಟನೆ ಕಣ್ಣ ಮುಂದೆ ಹಾದು ಹೋಗುತ್ತದೆ. ಕೃಷ್ಣಮೂರ್ತಿ ಅವರು ಬಾಲಕನಾಗಿದ್ದಾಗಲೇ ಹಾಡು ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.

ಕೃಷ್ಣ ಮೂರ್ತಿ ಅವರು ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೇ ಇವರ ಅದ್ಭುತ ನಟನೆಯನ್ನು ಕಂಡ ಅಂದಿನ ಕನ್ನಡ ಚಿತ್ರರಂಗದ ಹೆಸರಾಂತ ಗೀತರಚನೆಕಾರರಾಗಿದ್ದ ಕಣಗಾಲ್ ಪ್ರಭಾಕರ್ ಶಾಸ್ತ್ರಿ (ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಹೋದರ) ಅವರು ತಮ್ಮ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ನಟನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರಂತೆ.

ಹೀಗೆ ಗುಬ್ಬಿ ವೀರಣ್ಣ ನಾಟಕ ಕಂಪನಿ, ನಂತರ ಮಾಸ್ಟರ್ ಹಿರಣ್ಣಯ್ಯ ತಂದೆ ಕೆ.ಹಿರಣ್ಣನ್ಯನವರ ನಾಟಕ ಮಂಡಳಿ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ನಟಿಸಿ ಬೇಷ್ ಎನ್ನಿಸಿಕೊಂಡಿದ್ದರು ಕೃಷ್ಣಮೂರ್ತಿ. 1943ರಲ್ಲಿ ಪಿಟೀಲು ಚೌಡಯ್ಯನವರು ನಿರ್ಮಿಸಿದ್ದ ವಾಣಿ ಸಿನಿಮಾದ ಮೂಲಕ ಕೃಷ್ಣಮೂರ್ತಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆಗ ಅವರು 13 ವರ್ಷದ ಹುಡುಗ! ವಾಣಿ ಸಿನಿಮಾದ ನಂತರ ಬರೋಬ್ಬರಿ ಹತ್ತು ವರ್ಷಗಳ ಕಾಲ ಕೃಷ್ಣಮೂರ್ತಿಯವರಿಗೆ ಯಾವ ಅವಕಾಶವೂ ಒದಗಿ ಬಂದಿಲ್ಲವಾಗಿತ್ತಂತೆ. ಈ ಸಂದರ್ಭದಲ್ಲಿ ಅವರು ತಮ್ಮದೇ “ಅಂಬಾ ಪ್ರಸಾದ ನಾಟಕ ಮಂಡಳಿ ಸಂಸ್ಥೆ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿ ಜೀವನ ಸಾಗಿಸಿದ್ದರಂತೆ. ಆದರೆ ಅಲ್ಲಿನ ಭಾರೀ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೇ 1966ರಲ್ಲಿ ನಾಟಕ ಕಂಪನಿಯನ್ನು ಮುಚ್ಚಿ ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿದ್ದರಂತೆ.

ಕೃಷ್ಣಮೂರ್ತಿ ಅವರು “ಮುಸುರಿ” ಆಗಿದ್ದೇಗೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ನಟನ ಹೆಸರಿನ ಹಿಂದೆ ಒಂದೊಂದು ಕಥೆ ಇರುತ್ತೆ. ಚಿತ್ರರಂಗಕ್ಕೆ ಬರುವ ಮೊದಲು ಇರುವ ಹೆಸರು ಚಿತ್ರರಂಗದಲ್ಲಿ ಖ್ಯಾತರಾಗುತ್ತಿದ್ದಂತೆಯೇ ಹೊಸ ಹೆಸರು ಅಂಟಿಕೊಳ್ಳುತ್ತದೆ. ಆದರೆ ಕೃಷ್ಣಮೂರ್ತಿ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲೇ ತಮ್ಮ ಪ್ರತಿಭೆಯಿಂದಲೇ “ಮುಸುರಿ” ಹೆಸರನ್ನು ಸಂಪಾದಿಸಿಕೊಂಡಿದ್ದರು. ಪ್ರಸಿದ್ಧ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಂದಿನ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮ್ಮುಖದಲ್ಲಿ ಕೃಷ್ಣಮೂರ್ತಿ ಅವರು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಈ ಹಾಡನ್ನ ಮಹಾರಾಜ ನಾಲ್ವಡಿ ಅವರು ತುಂಬಾ ಮೆಚ್ಚಿಕೊಂಡು ಮುಸುರಿ ಸುಬ್ರಹ್ಮಣ್ಯ ಅವರ ಜೊತೆ ಹೋಲಿಕೆ ಮಾಡಿ ಬಹುಪರಾಕ್ ಹೇಳಿದ್ದರಂತೆ. ಬಳಿಕ ಎಲ್ಲರೂ ಅವರನ್ನು ಮುಸುರಿ ಕೃಷ್ಣಮೂರ್ತಿ ಎಂದೇ ಕರೆಯತೊಡಗಿದ್ದರಂತೆ.!

ಹೀಗೆ ಹಾಡು, ನಾಟಕ, ಸಿನಿಮಾದಲ್ಲಿ ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿದ್ದ ಕೃಷ್ಣಮೂರ್ತಿ 1953ರಲ್ಲಿ ಮಂಗಳಾ ಗೌರಿ, ಕನ್ಯಾದಾನ ಸಿನಿಮಾಗಳಲ್ಲಿ ಪ್ರಮುಖ ನಟರಾಗಿ ನಟಿಸಿ ಜನಪ್ರಿಯರಾಗತೊಡಗಿದ್ದರು. ಆ ಕಾಲದ ಪ್ರಸಿದ್ಧ ನಿರ್ದೇಶಕರಾದ ಶಂಕರ್ ಸಿಂಗ್, ಬಿ.ವಿಠಲಾಚಾರ್ಯ, ಬಿಆರ್ ಪಂತುಲು ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲ ಖ್ಯಾತ ಗೀತರಚನೆಕಾರ, ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಪದ್ಯ ಬರೆಯುವುದನ್ನು ಕಲಿತಿದ್ದರು. ನಾಟಕ, ಸಿನಿಮಾ, ನಾಟಕ ಬಳಿಕ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದ ಮುಸುರಿ ಕೃಷ್ಣಮೂರ್ತಿ ಅವರು ಹಾಸ್ಯ ನಟನಾಗಿ, ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು.

1978ರಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪಡುವಾರಳ್ಳಿ ಪಾಂಡವರು ಸಿನಿಮಾದಲ್ಲಿನ ಕನೆಕ್ಷನ್ ಕಾಳಪ್ಪ ಪಾತ್ರ ಮುಸುರಿ ಕೃಷ್ಣಮೂರ್ತಿ ಅವರು ಹೆಚ್ಚು ಜನಪ್ರಿಯರಾಗಿದ್ದರು. ಅದೇ ರೀತಿ 1980ರಲ್ಲಿ ಬಿಡುಗಡೆ ಕಂಡಿದ್ದ ಧರ್ಮ ಸೆರೆಯಲ್ಲಿ ಮುಸುರಿ ಅವರ ಅಭಿನಯ ಈಗಲೂ ನಿಮ್ಮಲ್ಲಿ ನಗು, ಸಿಟ್ಟು ತರಿಸುತ್ತೆ. ಗುರುಶಿಷ್ಯರು, ಅಂತ, ನನ್ನ ದೇವರು, ಹಾಲು ಜೇನು, ಕವಿರತ್ನ ಕಾಳಿದಾಸ ಸೇರಿದಂತೆ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರ ಮನದಲ್ಲಿ ತಮ್ಮ ನಟನೆಯ ಛಾಪನ್ನು ಅಚ್ಚೊತ್ತಿಬಿಟ್ಟಿರುವುದು ಸುಳ್ಳಲ್ಲ.

1981ರಲ್ಲಿ ಯಶಸ್ವಿನಿ ಎಂಟರ್ ಪ್ರೈಸಸ್ ಎಂಬ ಸಿನಿಮಾ ನಿರ್ಮಾಣ ಕಂಪನಿಯನ್ನು ಕೃಷ್ಣಮೂರ್ತಿ ಅವರು ಆರಂಭಿಸಿದ್ದರು. ನಂಬರ್ 5 ಎಕ್ಕಾ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಶ್ರೀನಾಥ್, ಜಯಮಾಲಾ ಅಭಿನಯಿಸಿದ್ದರು. ಸಿನಿಮಾ ನಿರ್ಮಾಪಕರಾದ ನಂತರವೂ ಮುಸುರಿ ಅವರು ಸಿನಿಮಾಗಳಲ್ಲಿ ನಟಿಸಿದ್ದರು. 1985ರಲ್ಲಿನ ವೀರಾಧಿ ವೀರ ಮುಸುರಿ ಅವರ ಕೊನೆಯ ಚಿತ್ರ. 55ನೇ(1985) ವಯಸ್ಸಿನಲ್ಲಿಯೇ  ಮುಸುರಿ ಅವರು ಇಹಲೋಕ ತ್ಯಜಿಸಿದ್ದರು. ಮಕ್ಕಳಾದ ಗುರುದತ್ ಮುಸುರಿ, ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.