ಇದು ವರ್ಣರಂಜಿತ ಬಣ್ಣದ ದಪ್ಪ ನೀರಿನ ಉಪ್ಪಿನ  ಸರೋವರ!


Team Udayavani, Nov 9, 2018, 5:01 PM IST

salt-river.jpg

ಉಪ್ಪು ಬೆರೆತ  ಸರೋವರದ ಈ ನೀರಿನ ಸ್ನಾನದಿಂದ ಹಲವು ರೋಗಗಳು ಗುಣವಾಗುತ್ತವೆಯಾದರೂ ಸರಿಯಾದ ಸಾರಿಗೆ ಸಂಪರ್ಕವಿಲ್ಲದ ಕಾರಣ ಪೆನಿನ್ಸುಲಾದ ಕಪ್ಪು ಕಡಲಿನ ಸಮೀಪವಿರುವ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಅದೊಂದು ಬೃಹದಾಕಾರದ ಸರೋವರ. ಹಾಗೆಂದು ನೀರು ಕುಡಿದು ದಣಿವಾರಿಸಿಕೊಳ್ಳಲು ಹೋದರೆ ದಪ್ಪವಾದ ಉಪ್ಪು ನೀರು ಬಾಯಿಗೆ ಹೋಗಿ ನಾಲಗೆ ದಪ್ಪವಾಗುತ್ತದೆ. ಇದರ ನೀರು ಕಡು ಬೇಸಿಗೆಯಲ್ಲಿ ರಕ್ತದಂತೆ ಕೆಂಪಗಾದರೆ, ವಸಂತಕಾಲದಲ್ಲಿ ಗುಲಾಬಿ ಬಣ್ಣದಿಂದ ಆಕರ್ಷಿಸುತ್ತದೆ. ನಿಸರ್ಗ ಕುಂಚ ಹಿಡಿದು ಬಣ್ಣ ಬಳಿದಂತೆ ಕಾಣಿಸುವ ವಿಲಕ್ಷಣ ಸರೋವರ ಕ್ರೈಮಿಯಾದ ಕರ್ಚ್ ಪೆನಿನ್ಸುಲಾದ ಕಪ್ಪು ಕಡಲಿನ ಕರಾವಳಿಯಲ್ಲಿ ಕಂಡು ಬರುತ್ತವೆ. ನಾಲ್ಕು ಕಿಲೋಮೀಟರ್ ಉದ್ದವಾಗಿ ಐನೂರು ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಈ ಕೊಯಾಶ್ಸ್ಕೊಯ್ ಸರೋವರದ ಅಗಲ ಎರಡು ಕಿಲೋಮೀಟರ್. ಆದರೆ ಗರಿಷ್ಟ ಆಳವಿರುವುದು ಕೇವಲ ಒಂದು ಮೀಟರ್ ಮಾತ್ರ!

ವರ್ಣರಂಜಿತ ಸರೋವರ

ಸರೋವರ ತಲುಪುವ ದಾರಿ ಅಷ್ಟೊಂದು ಸಲೀಸಲ್ಲ. ಕರ್ಚ್ ನಿಂದ 35 ಕಿಲೋಮೀಟರ್ ದೂರದಲ್ಲಿರುವ ಮಾರೆವ್ಹಾ ಎಂಬಲ್ಲಿಗೆ ಹೋಗಿ ಕಾಲ್ನಡಿಗೆಯಲ್ಲಿ ಯಕೊವೆನ್ಕೋವೊ  ಗ್ರಾಮವನ್ನು ಸೇರಬೇಕು. ಮತ್ತೆ ಕರಾವಳಿಯುದ್ದಕ್ಕೂ ಐದು ಕಿಲೋಮೀಟರ್ ನಡಿಗೆಯಲ್ಲಿ ಕ್ರಮಿಸಿದಾಗ ಬಹು ದೂರದಿಂದಲೇ ವರ್ಣರಂಜಿತವಾಗಿ ಗಮನ ಸೆಳೆಯುವ ಕೊಯಾಶ್ಸ್ಕೊಯ್ ಸರೋವರವನ್ನು ತಲುಪಬಹುದು.

ಒಂದು ಕಾಲದಲ್ಲಿ ಸರೋವರವಿರುವ ಭಾಗ ಕಪ್ಪು ಸಮುದ್ರದ ಭಾಗವಾಗಿತ್ತು. ಲಕ್ಷಾಂತರ ವರ್ಷಗಳ ಪೂರ್ವದಲ್ಲಿ ಸಮುದ್ರವು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿ ಅದು ಮೂರು ಕಿಲೋಮೀಟರ್ ದೂರ ಹೋಯಿತು. ಹೀಗಾಗಿ ಇಲ್ಲಿ ನಿಂತ ನೀರಿನಲ್ಲಿ ಉಪ್ಪಿನ ಅಗಣಿತ ಕಣಜವೇ ಉಳಿದುಕೊಂಡಿತು. ಒಂದು ಲೀಟರ್ ನೀರಿನಲ್ಲಿ ಉಪ್ಪಿನ ರುಚಿಯಿರುವ ಸೋಡಿಯಮ್ ಕ್ಲೋರೈಡ್ ಅರ್ಧ ಕಿಲೋ ಪ್ರಮಾಣದಲ್ಲಿದೆ ಎಂದು ಪ್ರಯೋಗಗಳು ಹೇಳುತ್ತವೆ. ನೀರಿನಲ್ಲಿ ಬೀಟಾ ಕೊರೊಟಿನ್ ಅಂಶವಿರುವ ಕಾರಣ ಅದು ಅಚ್ಚ ಗುಲಾಬಿ ಮತ್ತು ರಕ್ತ ವರ್ಣದಿಂದ ಹೊಳೆಯುತ್ತದೆ ಎಂಬುದು ತಜ್ಞರ ಅಭಿಮತ.

 ಈ ಸರೋವರದ ದಡದಲ್ಲಿ ಸ್ವಲ್ಪ ಹೊತ್ತು ನಿಂತರೆ ಸಾಕು, ಕಡಲಿನೆಡೆಯಿಂದ ಬೀಸುವ ಗಾಳಿಯ ಮೂಲಕ ಉಪ್ಪಿನ ದಪ್ಪ ಕಣಗಳು ನಮ್ಮ ಮೈಯನ್ನು ಆವರಿಸುತ್ತವೆ. ಧರಿಸಿದ ಉಡುಪು ಉಪ್ಪಿನ ಪೊರೆಯಿಂದ ಮುಚ್ಚಿಕೊಳ್ಳುತ್ತದೆ. ಮೈಯ ತೆರೆದ ಭಾಗದ ತ್ವಚೆಯಲ್ಲಿ ಹೆಪ್ಪುಗಟ್ಟಿದ ಉಪ್ಪನ್ನು ಕಾಣಬಹುದು. ಬೀಸಿ ಬರುವ ಗಾಳಿ ಉಪ್ಪಿನ  ತೇವಾಂಶದಿಂದ ಕೂಡಿರುತ್ತದೆ. ನೀರು ಎಷ್ಟೇ ಉಪ್ಪಾಗಿದ್ದರೂ ಅದರಲ್ಲಿ ಹೇರಳವಾಗಿ ಸಿಗಡಿ ಮತ್ತು ಹಲವು ಜಾತಿಯ ಜಲಚರಗಳು ಬದುಕಿಗೊಂಡಿವೆ.ಇಂಥ   ನೀರಿನಲ್ಲಿ ಬೆಳೆಯಬಲ್ಲ ಪಾಚಿಯೂ ನೀರನ್ನು ಆವರಿಸಿಕೊಂಡು ಸೃಷ್ಟಿಗೆ ಪೂರಕವಾಗಿ ಬೆಳೆಯುತ್ತಿದೆ.

 ಬಿಸಿಲಿಗೆ ಪ್ರತಿ ಕ್ಷಣವೂ ಸರೋವರದ ನೀರು ಆವಿಯಾಗುತ್ತಲೇ ಇರುತ್ತದೆ. ಅಲ್ಲಲ್ಲಿ ಉಪ್ಪು ಗಟ್ಟಿಯಾಗಿ ಸ್ಫಟಿಕ ಶಿಲೆಯ ಬಂಡೆಗಳಂತೆ ಕಾಣಿಸಿಕೊಳ್ಳುತ್ತದೆ. ಉಪ್ಪಿಗೆ ನಾಸಿಕಾಗ್ರ ಕೆರಳಿಸುವ ಪರಿಮಳವೂ ಇದೆ. ಕನ್ನಡಿಯ ಹಾಗೆ ಪರಿಶದ್ಧವಾದ ಈ ಉಪ್ಪನ್ನು ಯಾವುದೇ ಬಳಕೆಗೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ ಇಲ್ಲಿಗೆ ವಾಹನಗಳು ಬರಲು ಸುಗಮವಾದ ರಸ್ತೆಯಿಲ್ಲ. ಹೀಗಾಗಿ ಸರೋವರದ ನೀರಿನಲ್ಲಷ್ಟೇ ಅಲ್ಲ, ದಡದಲ್ಲಿಯೂ ಬಲು ದೂರದ ತನಕ ಉಪ್ಪಿನ ಎತ್ತೆತ್ತರವಾದ ಬಂಡೆಗಳನ್ನು ನೋಡಬಹುದು. ವಾಹನ ಸೌಲಭ್ಯ ಇಲ್ಲದ ಕಾರಣ ಸರೋವರ ವೀಕ್ಷಣೆಗೆ ಬರುವ ಪ್ರವಾಸಿಗಳ ಸಂಖ್ಯೆಯೂ ಬೆರಳೆಣಿಕೆಯಷ್ಟಿದೆ.

ಬೆರಗುಗೊಳಿಸುವ ವರ್ಣ ಚಿತ್ತಾರದ ಸರೋವರವನ್ನು 1988 ರಲ್ಲಿ ಸರಕಾರ ಸಂರಕ್ಷಿಸಬೇಕಾದ ನೈಸರ್ಗಿಕ ಚೋದ್ಯಗಳ ಪಟ್ಟಿಗೆ ಸೇರಿಸಿ ಅದರ ರಕ್ಷಣೆಯ ಬಗೆಗೆ ಕಾಳಜಿ ವಹಿಸಿದೆ. ಉಪ್ಪು ಬೆರೆತ ಇದರ ನೀರಿನ ಸ್ನಾನ ಹಲವು ವಿಧದ ರೋಗಗಳನ್ನು ಗುಣಪಡಿಸುತ್ತದೆಯೆಂಬ ನಂಬಿಕೆಯಿದೆ.

• ಶ್ಯಾಮ್ (ತರಂಗ ಸೆಪ್ಟಂಬರ್13ರ ಸಂಚಿಕೆಯಲ್ಲಿ ಪ್ರಕಟಿತವಾದದ್ದು)

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.