ಇಲ್ಲಿ ದುರ್ಯೋಧನನಿಗೂ ದೇವಾಲಯ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ…!


Team Udayavani, Nov 30, 2018, 6:12 PM IST

temple-new.jpg

ಮಹಾಭಾರತದ ಖಳನಾಯಕ  ದುರ್ಯೋಧನನಿಗೂ ಕೂಡಾ ದೇವಾಲಯ ಕಟ್ಟಿ ಪೂಜಿಸಲಾಗುತ್ತಿದೆ. ದುರ್ಯೋಧನ ಮಹಾಭಾರತದ ಖಳನಾಯಕ. ಆದರೆ ಅವನ ಕುಲದವರು ಇಂದಿಗೂ ಜೀವಂತವಾಗಿದ್ದಾರೆ. ಅವರು ತಮ್ಮ ಮೂಲ ಪುರುಷನಿಗಾಗಿ ದೇವಾಲಯ ನಿರ್ಮಿಸಿದ್ದಾರೆ.

ಉತ್ತರಾಖಂಡದ ಮೋರಿ ಹಳ್ಳಿಯ ಜನರ ದಂತಕಥೆಗಳ ಪ್ರಕಾರ ಅವರು ಕುರುವಂಶದವರು. ಅವರ ಪಾಲಿಗೆ ದುರ್ಯೋಧನ ತಮ್ಮ ಪೂರ್ವಜ ಮಾತ್ರವೇ ಅಲ್ಲ, ಪೂಜಾರ್ಹ ದೇವರು.

ಮೋರಿ ಹಳ್ಳಿಯ ಜಾಖೋಲ್ ಎಂಬಲ್ಲಿ ದುರ್ಯೋಧನನ ಪ್ರಾಚೀನ ದೇವಾಲಯ ನಿರ್ಮಿಸಿದ್ದಾರೆ ಇವರು. ಈ ದೇವಾಲಯದ ಒಳಗೆ ದುರ್ಯೋಧನ ಮಾತ್ರವಲ್ಲದೆ, ಕರ್ಣನ ಮೂರ್ತಿ ಕೂಡ ಇದೆ. ಪಾಂಡವರಂತೆ ದುರ್ಯೋಧನ ಬ್ರಾಹ್ಮಣ ಪಕ್ಷಪಾತಿ ಆಗಿರಲಿಲ್ಲ, ಎಲ್ಲ ಜಾತಿಪಂಗಡಗಳನ್ನು ಮೀರಿ, ಕರ್ಣನನ್ನು ತನ್ನ ಬಂಧುವಾಗಿ ಸ್ವೀಕರಿಸಿದ್ದ ಎಂದು ಮೋರಿ ಜನರಿಗೆ ಅಭಿಮಾನ.

ಈ ದೇವಾಲಯದಲ್ಲಿ ಜನರು ದುರ್ಯೋಧನನಿಗೆ ನಿತ್ಯಪೂಜೆ ಸಲ್ಲಿಸುತ್ತಾರೆ. ಪ್ರತಿವರ್ಷ ಇಲ್ಲಿ ಉತ್ಸವ, ಜಾತ್ರೆ ಕೂಡ ನೆಡೆಯುತ್ತದೆ.

ಮಹಾಭಾರತ ಯುದ್ಧದ ಕೊನೆಯಲ್ಲಿ ದುರ್ಯೋಧನ ತೀರಿಕೊಂಡಾಗ ಇಲ್ಲಿಯವರು ತಮ್ಮ ಬಂಧುವಿಗಾಗಿ ಸಾಮೂಹಿಕ ಶೋಕಾಚರಣೆ ನೆಡಸಿದ್ದರು. ಇವರ ಕಣ್ಣೀರು ಸೇರಿಯೇ ತೋಂಸ್ (ತಮಸ್) ನದಿ ಸೃಷ್ಟಿಯಾಯಿತು ಎನ್ನುತ್ತಾರೆ. ಹೀಗಾಗಿ ಇಲ್ಲಿನ ಜನರಿಗೆ ಈ ನದಿಯ ನೀರು ಪರಮ ಪವಿತ್ರ. ಈ ನೀರನ್ನು ಇವರು ಕುಡಿಯಲು ಬಳಸುವುದಿಲ್ಲ. ದೇವಾಲಯದಲ್ಲಿ ಪಂಚಾಮೃತವಾಗಿ ಮಾತ್ರ ಕೊಡುತ್ತಾರೆ.

ಕೇರಳದ ಪೊರುವಾಝಿ ಪೆರುವಿರುತಿ ಮಲನಾಡಾ ಎಂಬ ದೇವಾಲಯ ಕೂಡ ದುರ್ಯೋಧನನಿಗಾಗಿ ನಿರ್ಮಾಣವಾಗಿದೆ. ದುರ್ಯೋಧನ ಹಿಂದೆ ಈ ದೇವಾಲಯಕ್ಕಾಗಿ ನೂರಾರು ಎಕರೆ ಜಮೀನುದತ್ತಿ ನೀಡಿದ್ದ ಎಂದು ಸ್ಥಳಪುರಾಣ ಹೇಳುತ್ತದೆ.

ದುರ್ಯೋಧನ ಮಾತ್ರವೇ ಯಾಕೆ? ಮಹಾಭಾರತದ ಕುತಂತ್ರಿ ಶಕುನಿಗೂ  ಕೇರಳದಲ್ಲಿ ಒಂದು ದೇವಾಲಯವಿದೆ! ಇದು ಇರುವುದು ತಿರುವನಂತಪುರಂನಿಂದ 65 ಕಿಲೋಮೀಟರ್  ದೂರದಲ್ಲಿರುವ ಕೊಟ್ಟಾರಕ್ಕಾರ ಎಂಬಲ್ಲಿ. ಮಹಾಭಾರತ ಯುದ್ಧ ಮುಗಿದ ಬಳಿಕೆ ಶಕುನಿ ಇಲ್ಲಿ ಆಗಮಿಸಿ, ಇಲ್ಲಿನ ಬೆಟ್ಟಗಳಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದಿದ್ದ ಎನ್ನುತ್ತದೆ ಸ್ಥಳಪುರಾಣ.

ನಿಶಾಂತ್ (ತರಂಗ ನವೆಂಬರ್ 8)

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.