ಕ್ಷೇತ್ರ ಮಹಾತ್ಮೆಗಳ ಪರ್ವ;ನಿರಂತರ 7 ದಿನ ಯಕ್ಷೋತ್ಸವದ ಸಂಭ್ರಮ 


Team Udayavani, Dec 23, 2018, 12:32 PM IST

333.jpg

ಯಕ್ಷಗಾನ ರಂಗದಲ್ಲಿ  ಪ್ರಸ್ತುತದಲ್ಲಿ  ಹೆಚ್ಚಾಗಿ ಕ್ಷೇತ್ರ ಮಹಾತ್ಮೆಗಳನ್ನು ಹೆಚ್ಚಾಗಿ ಇಷ್ಟ ಪಡುವ ಅಭಿಮಾನಿಗಳು ಹೆಚ್ಚಿದ್ದಾರೆ. ಬಯಲಾಟ ಮೇಳಗಳು ಪೌರಾಣಿಕ ಪ್ರಸಂಗಳಿಗಿಂತ ಕ್ಷೇತ್ರ ಮಹಾತ್ಮೆಗಳನ್ನು ಆಡುವುದು ಅಭಿಮಾನಕ್ಕೆ ಸಾಕ್ಷಿಯಾಗಿದೆ. 

ಉಡುಪಿ ಜಿಲ್ಲೆಯ ಕುಂಜಾಲಿನ ನೀಲಾವರ ಕ್ರಾಸ್‌ ಬಳಿ ನಿರಂತರ 7 ದಿನಗಳ ಕಾಲ ನಡೆದ ಕ್ಷೇತ್ರ ಮಹಾತ್ಮೆಗಳ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸಿತು. 

ನೀಲಾವರ ಕ್ರಾಸ್‌ ಫ್ರೆಂಡ್ಸ್‌ ಮತ್ತು ರೋಟರಿ ರಾಯಲ್‌ ಬ್ರಹ್ಮಾವರದ ಸಹಭಾಗಿತ್ವದಲ್ಲಿ ಅದ್ಧೂರಿ 7 ದಿನಗಳ ಯಕ್ಷೋತ್ಸವ ಯಶಸ್ವಿಯಾಗಿ ನಡೆದು ಹೊಸ ದಾಖಲೆಗೆ ಪಾತ್ರವಾಯಿತು. 

ಡಿಸೆಂಬರ್‌ 16 ರಂದು ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಸ್ಥಳೀಯ ಪ್ರಸಿದ್ದ ನಾಟಿ ವೈದ್ಯ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯವರು ನೀಲಾವರ ಕ್ಷೇತ್ರ ಮಹಾತ್ಮೆಯನ್ನು  ಕಾಲಮಿತಿಯಲ್ಲಿ  ಸೊಗಸಾಗಿ ಪ್ರದರ್ಶಿಸಿದರು.  

ಮರುದಿನ ಡಿಸೆಂಬರ್‌ 17 ರಂದು ಶನೀಶ್ವರ ಮೇಳ ಆಜ್ರಿ, ಚೋನೆಮನೆ ಇವರಿಂದ ಶ್ರೀ ಶನೀಶ್ವರ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಲಾಯಿತು.

18 ರಂದು ಅಮೃತೇಶ್ವರಿ ಮೇಳ ಕೋಟ ಇವರು ಅಮೃತೇಶ್ವರಿ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಿದರು. 

 19 ರಂದು ಶ್ರೀ ದುರ್ಗಾಪರಮೇಶ್ವರಿ ಮೇಳ ಮೇಗರವಳ್ಳಿ ಅವರು ಮಹಿಮೆದ ಮಹಾಂಕಾಳಿ ಮಹಾತ್ಮೆಯನ್ನು ಆಡಿ ತೋರಿಸಿದರು.

20 ರಂದು ಹಟ್ಟಿಯಂಗಡಿ ಮೇಳದವರು ಸಾಲಿಗೆದ್ದೆ ವೀರ ಕಲ್ಕುಡ ಮಹಾತ್ಮೆ ಯನ್ನು ಪ್ರದರ್ಶಿಸಿದರು.

ಡಿಸೆಂಬರ್‌ 21 ರಂದು ದುರ್ಗಾಪರಮೇಶ್ವರಿ ಮೇಳ ಸೌಕೂರು ಇವರು ಸೌಕೂರು ಕ್ಷೇತ್ರ ಮಹಾತ್ಮೆಯನ್ನು ವೈಭವಯುತವಾಗಿ ಆಡಿ ತೋರಿಸಿದರು.

ಎಲ್ಲಾ ಪ್ರದರ್ಶನಗಳು ಕಾಲಮಿತಿಯಲ್ಲಿ  ನಡುರಾತ್ರಿಯ ವರೆಗೆ ನಡೆದು ಯುವ ಪ್ರೇಕ್ಷಕರಿಗೆ ಭರ್ಜರಿ ಮನ ರಂಜನೆ ನೀಡುವಲ್ಲಿ ಯಶಸ್ವಿಯಾದವು. 

ಯಕ್ಷೋತ್ಸವದ ಕೊನೆಯ ದಿನ ಡಿಸೆಂಬರ್‌ 22 ರಂದು ಶನಿವಾರ ವೀರಭದ್ರಸ್ವಾಮಿ ಮೇಳ ಹಿರಿಯಡಕ ಇವರು ಹಿರಿಯಡಕ ಕ್ಷೇತ್ರ ಮಹಾತ್ಮೆಯನ್ನು ಅದ್ಧೂರಿಯಾಗಿ ಆಡಿ ತೋರಿಸಿದರು.

ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಎರಡೂ ಪ್ರಕಾರಗಳು ಕೂಡಿರುವ ಮೇಳ ಅದ್ದೂರಿಯಾಗಿ ಯಕ್ಷೋತ್ಸವಕ್ಕೆ ಮಂಗಳ ಹಾಡಿತು. 

ಹಲವು ದಿಗ್ಗಜ ಕಲಾವಿದರನ್ನು ರಂಗಕ್ಕೆ ನೀಡಿರುವ ಕುಂಜಾಲಿನ ಪ್ರದೇಶದಲ್ಲಿ 7 ದಿನಗಳ ಕಾಲ ನಡೆದ ಯಕ್ಷೋತ್ಸವ ಹಲವು ಯುವ ಕಲಾವಿದರ ಪ್ರತಿಭೆಯನ್ನು ಹೊರ ಸೂಸಲು ವೇದಿಕೆಯಾಯಿತು. ಸಾವಿರಾರು ಮಂದಿ ಯಕ್ಷಾಭಿಮಾನಿಗಳು ದೂರದ ಊರುಗಳಿಂದಲೂ ಆಗಮಿಸಿ ಯಶಸ್ಸಿಗೆ ಸಹಕರಿಸಿದರು.

ಪುಣ್ಯ ಕ್ಷೇತ್ರಗಳ ಸ್ಥಳ ಮಹಿಮೆ, ದೈವಗಳ ಪ್ರಭಾವ ಏನು ಎನ್ನುವುದನ್ನು ಕಥಾ ಭಾಗಗಳ ಮೂಲಕ ನೂರಾರು ಕಲಾವಿದರು ಪ್ರೇಕ್ಷಕರಿಗೆ ಮನ ಮುಟ್ಟಿಸಿದರು. 

ಕಾರ್ಯಕ್ರಮದ ಸಮಾರೋಪದಂದು ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಿದ್ದು ಕಾರ್ಯಕ್ರಮವನ್ನು  ಇನ್ನಷ್ಟು ಸ್ಮರಣೀಯವಾಗಿಸಿತು.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.