ಕತೆ: ಚಲಾ ದೇವಿಯ ಸ್ವಯಂವರ


Team Udayavani, Feb 26, 2017, 3:50 AM IST

25SAP-6.jpg

ರಾಜಕುಮಾರಿ ಅಚಲಾ ದೇವಿ ಅಪೂರ್ವ ಸೌಂದರ್ಯವತಿ, ಅವಳನ್ನು ಮೀರಿಸುವ ಸುಂದರಿಯರು ಈ ಭೂಮಿ ಮೇಲೆ ಇರಲಾರರೇನೊ. ಅವಳು ಇದ್ದಲ್ಲೆಲ್ಲಾ ಉಜ್ವಲವಾದ ಕಾಂತಿ ತುಂಬಿರುತ್ತದೆ. ಅವಳ ನಡೆ-ನುಡಿಗಳೆಲ್ಲವೂ ಹೂವಿನಂತೆ ಕೋಮಲ. ಓಹ್‌, ಅವಳ ನಗೆಯೋ, ನಕ್ಕಾಗ ಅರಳುವ ಆ ಸುಂದರ ಮೊಗವೋ, ಕೆನ್ನೆ ಮೇಲಿನ ಗುಳಿಯೋ ಎಲ್ಲವೂ ಸೇರಿ ಕಣ್ಣುಗಳಿಗೆ ಹಬ್ಬದಂತಿರುತ್ತದೆ. ಅವಳ ಕಣ್ಣ ನೋಟವೇ ಒಂದು ಕಾಮನಬಿಲ್ಲಿನಷ್ಟು ಆಕರ್ಷಕ. ಅಪರೂಪದ ರತ್ನದಂತಿರುವ ತನ್ನ ಮಗಳಿಗೆ ಎಂಥ ವರನನ್ನು ಹುಡುಕಿ ತರುವುದೋ ದೇವ, ಗಂಧರ್ವ, ಕಿನ್ನರನೋ? ಪರಾಕ್ರಮಿಯಾದ ಚಕ್ರವರ್ತಿಯೋ? ಲೋಕದಲ್ಲೆ ಅತಿ ಸಿರಿವಂತನೋ? ಜಗದ್ವಿಖ್ಯಾತ ವಿದ್ವಾಂಸನೋ? ಎಂಬ ಯೋಚನೆಯಲ್ಲಿದ್ದ ರಾಜ ವೀರಸೇನಾ ರಾಜಕುಮಾರಿ ಅಚಲಾ ದೇವಿಯ ಸ್ವಯಂವರ ಏರ್ಪಡಿಸಿದ.

ಅಚಲಾದೇವಿಯ ಕೀರ್ತಿಯನ್ನು ಕೇಳಿ ದೂರ ದೂರದ ಊರುಗಳಿಂದ ಸ್ವಯಂವರದಲ್ಲಿ ಭಾಗವಹಿಸಲು ಬಂದವರಲ್ಲಿ ನಾನೂ ಒಬ್ಬ . ಸ್ವಯಂವರ ಏರ್ಪಡಿಸಿದ್ದ ಭವನದ ಒಳಗೆ ನೋಡುತ್ತೇನೆ ಯುವಕರು ಕಿಕ್ಕಿರಿದು ತುಂಬಿದ್ದಾರೆ. ಗದ್ದಲವೋ ಗದ್ದಲ. ನಾನು ಒಂದು ಆಸನದಲ್ಲಿ ಕುಳಿತೆ. ಸ್ವಲ್ಪ ಸಮಯದ ನಂತರ ರಾಜಕುಮಾರಿ ಅಚಲಾ ದೇವಿ ತನ್ನ ತಂದೆ, ತಾಯಿ, ಸಹೋದರರು ಮತ್ತು ಮಂತ್ರಿಗಳೊಂದಿಗೆ ವೇದಿಕೆಯತ್ತ ನಡೆದು ಬಂದಳು. ಸಭಾಂಗಣದ ತುಂಬಾ ಮಿಂಚಿನ ಸಂಚಾರವಾದಂತಾಯಿತು. ಎಲ್ಲರೂ ಮೌನವಾಗಿ ಮಂತ್ರಮುಗ್ಧರಾಗಿ ಅವಳನ್ನೇ ಗಮನಿಸಲಾರಂಭಿಸಿದರು. ಮಂತ್ರಿಯು, “”ರಾಜಕುಮಾರಿ ಅಚಲಾದೇವಿ ಈಗ ತಮ್ಮನ್ನು ವಿವಾಹವಾಗುವ ಆಕಾಂಕ್ಷೆಯಿಂದ ಬಂದಿರುವ ಯುವಕರಿಗೆ ಕೆಲವು ಶರತ್ತುಗಳನ್ನು ತಿಳಿಸಲಿದ್ದಾರೆ” ಎಂದು ಹೇಳಿ ತನ್ನ ಆಸನದಲ್ಲಿ ಕುಳಿತನು. ಸುಕುಮಾರಿ ಅಚಲಾದೇವಿ ನಸು ನಾಚುತ್ತ ಮುಂದೆ ಬಂದು ತನ್ನ ಮಾತನ್ನು ಆರಂಭಿಸಿದಳು.

“”ನನ್ನನ್ನು ವಿವಾಹವಾಗುವ ವರ ನನ್ನ ಮೂರು ಶರತ್ತುಗಳನ್ನು ಪೂರೈಸಲೇಬೇಕು. ಮೊದಲನೆಯದು, ಈಶಾನ್ಯ ದಿಕ್ಕಿನಲ್ಲಿರುವ ಬೃಹತ್‌ ಪರ್ವತ ಪಂಕ್ತಿಗಳನ್ನು ದಾಟಿ ಏಳನೇ ಪರ್ವತ ಸಾಲಿನ ಕೆಳಗಿನ ಕಣಿವೆಯಲ್ಲಿ ಹನ್ನೆರಡು ವರ್ಷವಾದರೂ ಬಾಡದ ಸುವಾಸನೆಯಿಂದ ಕೂಡಿದ ಸುಂದರವಾದ ನೀಲಿ ಹೂಗಳಿರುವ ಬಗ್ಗೆ ಕೇಳಿದ್ದೇನೆ. ಆ ಸುಂದರವಾದ ನೀಲಿ ಪುಷ್ಪವೊಂದನ್ನು ನನ್ನ ಅಂತಃಪುರದಲ್ಲಿರಿಸಲು ತಂದುಕೊಡಬೇಕು”. 

ರಾಜಕುಮಾರಿಯ ಮೊದಲನೇ ಶರತ್ತನ್ನು ಕೇಳಿಯೇ ಸಭಾಂಗಣದಲ್ಲಿದ್ದ ಅರ್ಧದಷ್ಟು ಯುವಕರು ಹೊರ ನಡೆದರು. ಹೊರಡುತ್ತಿರುವವರತ್ತ ನೋಡಿ ಒಂದು ಮುಗುಳ್ನಗೆ ಬೀರುತ್ತ ಅಚಲಾದೇವಿ ತನ್ನ ಎರಡನೆಯ ಶರತ್ತನ್ನು ಹೇಳಲಾರಂಭಿಸಿದಳು. “”ನನ್ನ ಎರಡನೇ ಶರತ್ತೆಂದರೆ ನಮ್ಮ ರಾಜ್ಯದ ದಕ್ಷಿಣ ದಿಕ್ಕಿಗೆ ಇರುವ ಮಹಾಸಾಗರದಲ್ಲಿ ದೊರೆಯುವ ಅಪರೂಪದ ದೊಡ್ಡ ಗಾತ್ರದ ಅಮೂಲ್ಯವಾದ ಮುತ್ತನ್ನು ನನ್ನ ಕಿರೀಟದಲ್ಲಿರಿಸಿಕೊಳ್ಳಲು ತರಬೇಕು. ಮೂರನೆಯ ಶರತ್ತೆಂದರೆ ಆಕಾಶದಿಂದ ಹೊಳೆಯುವ ಸುಂದರವಾದ ನಕ್ಷತ್ರವೊಂದನ್ನು ಮೂಗುತಿಯಾಗಿ ಇರಿಸಿಕೊಳ್ಳಲು ತಂದು ಕೊಡಬೇಕು. ಮೊದಲ ಶರತ್ತು ನಿಮ್ಮ ಶಕ್ತಿ-ಸಾಮರ್ಥ್ಯದ ಪರೀಕ್ಷೆಗಾಗಿ, ಎರಡನೆಯದು ನಿಮ್ಮ ಸಹನೆ ಮತ್ತು ಛಲದ ಪರೀಕ್ಷೆಗಾಗಿ ಮತ್ತು ಮೂರನೆಯದು ಶರತ್ತು ನಿಮ್ಮ ಬುದ್ಧಿವಂತಿಕೆಯ ಪರೀಕ್ಷೆಗಾಗಿ” ಎಂದು ಹೇಳಿ ಮಾತನ್ನು ಮುಗಿಸಿ ರಾಜಕುಮಾರಿ ತನ್ನ ಆಸನದಲ್ಲಿ ಕುಳಿತಳು.

ಯುವಕರಲ್ಲಿ ಗುಸುಗುಸು ಮಾತುಗಳು ಆರಂಭವಾಯಿತು. “”ಅಯ್ಯೋ! ಇವಳ ಶರತ್ತು ಪೂರೈಸಲು ಜೀವಮಾನವಿಡೀ ಕಷ್ಟ ಪಡಬೇಕು, ನನಗಂತೂ ಸಾಧ್ಯವಿಲ್ಲ” ಎಂದು ನನ್ನ ಪಕ್ಕದಲ್ಲಿ ಕುಳಿತಿದ್ದವನು ಹೇಳಿದ. ಮಹಾಮಂತ್ರಿ ಎದ್ದು ನಿಂತು, “”ಈ ಶರತ್ತುಗಳಿಗೆ ಸಿದ್ಧರಿರುವವರು ಮಾತ್ರ ಇಲ್ಲಿ ನಿಲ್ಲಬೇಕು, ಸ್ಪರ್ಧಿಸುವ ಇಚ್ಛೆ ಇಲ್ಲದವರು ಹೊರನಡೆಯಬೇಕು” ಎಂದು ಘೋಷಿಸಿದ. ಅನೇಕ ಯುವಕರು, “”ಅಯ್ಯೋ ಇವಳದ್ಯಾವ ಸೀಮೆ ಶರತ್ತೋ. ಇವಳಿಗೆ ಈ ಜನ್ಮಕ್ಕೆ ಮದುವೆ ಯೋಗವಿಲ್ಲ” ಎಂದೆಲ್ಲ ಹೇಳುತ್ತ¤ ಹೊರ ನಡೆದರು. ನನಗೂ ಅನ್ನಿಸುತ್ತಿದೆ, ಇದೆಲ್ಲ ಬಹಳ ಕಷ್ಟದ ಶರತ್ತುಗಳೆಂದು. ಆದರೆ, ಅಚಲಾದೇವಿಯನ್ನು ವಿವಾಹವಾಗುವ ಅಪೇಕ್ಷೆಯ ಮುಂದೆ ಇಂತಹ ಕಷ್ಟಗಳು ದೊಡ್ಡದಲ್ಲ ಎಂದೂ ಅನ್ನಿಸುತ್ತಿದೆ. ಅದರಲ್ಲೂ ಅವಳ ಮುಖ ನೋಡುತ್ತಿದ್ದರೆ ಹೊರಹೋಗಲು ಕಾಲುಗಳೇ ಸಹಕರಿಸುತ್ತಿಲ್ಲ. ಸುತ್ತಲೂ ನೋಡುತ್ತೇನೆ ನಾನು ಮತ್ತು ಮೊದಲ ಸಾಲಿನಲ್ಲಿ ಕುಳಿತಿರುವ ಯಾವುದೋ ರಾಜ್ಯದ ರಾಜಕುಮಾರ ಇಬ್ಬರೇ ಉಳಿದಿರುವವರು. ಆ ರಾಜಕುಮಾರ ನಾದರೂ ಹಣಬಲ, ಜನಬಲದಿಂದ ಮೊದಲೆರಡು ಶರತ್ತುಗಳನ್ನು ಗೆಲ್ಲಬಲ್ಲನೇನೋ. ಆದರೆ ಮೂರನೆಯ ಅಸಾಧಾರಣ ಶರತ್ತು ಪೂರೈಸಲಾಗುವುದೇ?
.
ಅಚಲಾದೇವಿಯನ್ನು ಪಡೆಯಲೇಬೇಕೆಂಬ ದೃಢ ನಿರ್ಧಾರ ಮಾಡಿ, ಆ ರಾಜಕುಮಾರನಿಗಿಂತ ಮೊದಲೇ ಶರತ್ತುಗಳನ್ನು ಪೂರೈಸಬೇಕೆಂದು ಈಶಾನ್ಯ ದಿಕ್ಕಿನತ್ತ ಹೊರಟೆ. ಬಹಳ ಕಷ್ಟದಿಂದ ಪರ್ವತಗಳನ್ನು ಹತ್ತಿ ಇಳಿಯುತ್ತ ಕೊನೆಗೂ ಏಳನೇ ಬೆಟ್ಟದಾಚೆಗಿನ ಕಣಿವೆಯನ್ನು ತಲುಪಿದೆ. ಬಣ್ಣ ಬಣ್ಣದ ಹೂಗಳಿಂದ ತುಂಬಿದ್ದ ಕಣಿವೆ ಸುವಾಸನೆಯಿಂದ ಆಹ್ಲಾದಕರವಾಗಿದೆ. ಅಲ್ಲಲ್ಲಿ ಅಚಲಾದೇವಿ ಕೇಳಿದ್ದ ಸುಂದರವಾದ ಕಡು ನೀಲಿ ಬಣ್ಣದ ಹೂಗಳೂ ಇವೆ, ಒಂದೆರಡು ನೀಲಿ ಹೂಗಳನ್ನು ಕಿತ್ತುಕೊಂಡು ಮತ್ತೆ ಪರ್ವತ ಪಂಕ್ತಿಗಳನ್ನು ಕಣಿವೆಗಳನ್ನು ದಾಟುತ್ತ¤, ಆಯಾಸದಿಂದ ಉಸಿರುಗರೆಯುತ್ತ ಹಿಂದಿರುಗಿದೆ. ಅರಮನೆಗೆ ಹೋಗಿ ರಾಜಕುಮಾರಿಯ ಕೈಗೆ ಹೂವನ್ನು ನೀಡಿದೆ. ಅವಳೂ ಮುಗುಳ್ನಗುತ್ತ ಮೆಚ್ಚುಗೆಯಿಂದ ಹೂವನ್ನು ಪಡೆದಳು.
ಅಲ್ಲಿಂದ ನೇರವಾಗಿ ದಕ್ಷಿಣ ದಿಕ್ಕಿನತ್ತ ನಡೆದು ಸಮುದ್ರ ತೀರವನ್ನು ತಲುಪಿದೆ. ಸಮುದ್ರದೇವನನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತ ನೀರಿನಲ್ಲಿ ಈಜುತ್ತ¤ ಸ್ವಲ್ಪ ದೂರ ಹೋಗಿ ನಂತರ ಮುಳುಗಿ ದೊಡ್ಡ ಗಾತ್ರದ ಮುತ್ತಿನ ಚಿಪ್ಪನ್ನು ಹುಡುಕಲಾರಂಭಿಸಿದೆ. ಅಬ್ಟಾ! ಏನಾಶ್ಚರ್ಯ. ಮೊದಲ ಬಾರಿ ಮುಳುಗಿದಾಗಲೇ ಬೃಹತ್‌ ಗಾತ್ರದ ಚಿಪ್ಪು ಕಂಡಿತು. ಅದು ಅಂಟಿಕೊಂಡಿದ್ದ ಬಂಡೆಯಿಂದ ಕತ್ತರಿಸಿ ಮೇಲೆ ತಂದು ಅದರೊಳಗಿನ ದೊಡ್ಡದಾಗಿದ್ದ ಸುಂದರವಾದ ಮುತ್ತನ್ನು ತೆಗೆದುಕೊಂಡೆ. ಅಚಲಾದೇವಿಯ ಬಳಿ ಹೋಗಿ ಅಮೂಲ್ಯವಾದ ದೊಡ್ಡ ಗಾತ್ರದ ಮುತ್ತನ್ನು ಅವಳ ಕಿರೀಟದಲ್ಲಿ ಅಲಂಕರಿಸಲು ನೀಡಿದೆ. ಹೊರ ಬರುವಾಗ ನೋಡುತ್ತೇನೆ ನನ್ನ ಪ್ರತಿಸ್ಫರ್ಧಿ ರಾಜಕುಮಾರನೂ ಮುತ್ತನ್ನು ತೆಗೆದುಕೊಂಡು ಅರಮನೆಯತ್ತ ಹೋಗುತ್ತಿದ್ದಾನೆ. “”ಅಯ್ಯೋ, ಇವನೂ ನನ್ನ ಸಮ ಸಮಕ್ಕೆ ಶರತ್ತುಗಳನ್ನು ಪೂರೈಸುತ್ತಿರುವುದನ್ನು ನೋಡಿ ಸ್ವಲ್ಪ ಆತಂಕವಾಗುತ್ತಿದೆ. ಆದರೆ, ಅವನು ನನ್ನನ್ನು ನೋಡಿಯೂ ನೋಡದಂತೆ ಜಂಭದಿಂದ ಹೋಗುತ್ತಿದ್ದಾನೆ, ಎಲಾ ಇವನ ಸೊಕ್ಕೆ!”
ಅಚಲಾ ದೇವಿಯ ಕೊನೆಯ ಶರತ್ತನ್ನು ಪೂರ್ಣಗೊಳಿಸಲು ನನ್ನ ಗುರುಗಳು ಹೇಳಿಕೊಟ್ಟಿರುವ ಮಂತ್ರಗಳ ನೆರವಿನಿಂದ ಗಾಳಿಯಲ್ಲಿ ಮೇಲೆ ಹಾರುತ್ತ ದೇವಲೋಕಕ್ಕೆ ತಲುಪಿದೆ. ಹೇಗಾದರೂ ಚಂದ್ರನ ಮನವೊಲಿಸಿ ಒಂದು ಪುಟ್ಟ ನಕ್ಷತ್ರವನ್ನು ಪಡೆಯಲು ಅವನ ಅರಮನೆಗೆ ಬಂದೆ. ಅಚಲಾದೇವಿಯ ಮೇಲಿನ ನನ್ನ ಪ್ರೀತಿಯನ್ನು ಮೆಚ್ಚಿದ ಚಂದ್ರ ನನಗಾಗಿ ಒಂದು ಪುಟ್ಟದಾದ ಸುಂದರ ನಕ್ಷತ್ರವನ್ನು ಸೃಷ್ಟಿಸಿಕೊಡಲು ಒಪ್ಪಿದ. ಅಚಲಾದೇವಿಯ ಎಲ್ಲಾ ಶರತ್ತುಗಳನ್ನೂ ಪೂರೈಸಿದ ಸಂಭ್ರಮದಲ್ಲಿ ವಜ್ರಕ್ಕಿಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಪುಟ್ಟ ನಕ್ಷತ್ರವನ್ನು ಪಡೆದು ಹಿಂದಿರುಗುತ್ತಿದ್ದೆ. ಏಕೋ ಬಹಳ ಆಯಾಸವಾಗುತ್ತಿದೆ, ತುಂಬಾ ಬಾಯಾರಿಕೆ ಎನಿಸುತ್ತಿದೆ, ಸ್ವಲ್ಪ ದೂರದಲ್ಲೆ ಒಂದು ತೊರೆ ಕಾಣಿಸುತ್ತಿದೆ, ನೀರು ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಅಚಲಾದೇವಿಯ ಬಳಿ ಹೋಗಬಹುದೆನಿಸುತ್ತಿದೆ. ಪ್ರಕಾಶನಮಾನವಾಗಿ ಹೊಳೆಯುತ್ತಿದ್ದ ಮುದ್ದಾದ ಪುಟ್ಟ ನಕ್ಷತ್ರವನ್ನು ದಡದಲ್ಲಿರುವ ಮರದ ಬಳಿ ಇಟ್ಟು ತೊರೆಯ ಬಳಿ ಹೋಗಿ ಬೊಗಸೆಯಲ್ಲಿ ತುಂಬಿ ತುಂಬಿ ನೀರು ಕುಡಿದೆ. ಸ್ವಲ್ಪ ದಣಿವು ಕಡಿಮೆಯಾದಂತೆನಿಸಿತು. ಮುಖಕ್ಕಷ್ಟು ನೀರು ಹಾಕಿಕೊಂಡು ಹಿಂದಿರುಗಿ ನೋಡುತ್ತೇನೆ, ಅಯ್ಯೋ! ಆ ರಾಜಕುಮಾರ ನನ್ನ ನಕ್ಷತ್ರವನ್ನು ಕದ್ದು ಕುದುರೆ ಮೇಲೇರಿ ಹೋಗುತ್ತಿದ್ದಾನೆ. ನನ್ನ ಹೃದಯವೇ ನಿಂತು ಹೋದಂತಾಗುತ್ತಿದೆ. ಅವನ ಹಿಂದೆ ಓದುತ್ತಿದ್ದೇನೆ, ಆ ಪಾಪಿ ವೇಗವಾಗಿ ಕುದುರೆ ಓಡಿಸಿಕೊಂಡು ಮರೆಯಾಗುತ್ತಿದ್ದಾನೆ. “ಅಯ್ಯೋ! ಅಮ್ಮಾ! ಮೋಸ, ಮೋಸ, ಕಳ್ಳ ಕಳ್ಳ’ ಎಂದು ಜೋರಾಗಿ ಚೀರಿದೆ.

“ಮೋಸ, ಮೋಸ, ಕಳ್ಳ, ಕಳ್ಳಾ’ ಎಂದು ಚೀರಿದ ನಾನು ಬೆಚ್ಚಿ ಬಿದ್ದು ಹಾಸಿಗೆಯಿಂದ ಎದ್ದು ಕುಳಿತೆ. ಆಘಾತದಿಂದ ನನ್ನೆದೆ ಏರಿಳಿಯುತ್ತಿದೆ, ಮೈಯೆಲ್ಲಾ ಬೆವರುತ್ತಿದೆ. ಇದುವರೆಗೆ ನಡೆದದ್ದೆಲ್ಲ ಕನಸು ಎಂದು ಅರಿವಾದ ಮೇಲೆ, ನಿಧಾನವಾಗಿ ದಿಂಬಿನ ಪಕ್ಕದಲ್ಲಿದ್ದ ಮೊಬೈಲ್‌ನಲ್ಲಿ ಟೈಮ್‌ ನೋಡಿದೆ. ಇನ್ನೂ ಬೆಳಗಿನ ಜಾವ ನಾಲ್ಕೂ ಹತ್ತು. ನಿಧಾನವಾಗಿ ಯೋಚಿಸಿದಾಗಲೂ ಕನಸನ್ನು ನೆನೆದು ಆತಂಕವೆನಿಸಿ ಮತ್ತೆ ನಿದ್ದೆ ಬಾರದೆ ಎದ್ದು ಬಾಲ್ಕನಿಯಲ್ಲಿ ಕುಳಿತೆ. ಈ ಕನಸೆಲ್ಲÉ ನಾನು ರಾತ್ರಿ ಮಲಗುವ ಮುಂಚೆ ಓದುತ್ತಿದ್ದ ಫ್ಯಾಂಟಸಿ ಕತೆಗಳ ದೆಸೆಯಿಂದ ಇರಬೇಕು. 

“ಕ್ಷಮಿಸಪ್ಪ! ನಮ್ಮ ಕೆಲಸದವಳು ಮನೆಯಲ್ಲಿದ್ದ ಕಸವನ್ನೆಲ್ಲ ಗುಡಿಸಿ ಸುಡುವ ಭರದಲ್ಲಿ !’ ಈಗ ಜ್ವರ ಬಂದಂತೆ ಗರಬಡಿದು ಕೂರುವ ಸ್ಥಿತಿ ಥಾಮಸ್‌ನದಾಗಿತ್ತು. ಆದರೆ, ಆತ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಪುಸ್ತಕವನ್ನು ಮತ್ತೂಮ್ಮೆ ಬರೆದ. ಇದರ ಒಂದೊಂದು ಸಾಲೂ ಹೃದಯದಿಂದ ಧಗಧಗಿಸುತ್ತ ಬಂದು ನನ್ನ ಕೈಯಲ್ಲಿ ಬರೆಯಲ್ಪಟ್ಟಿತು ಎಂದು ಆತ ಆ ಕೃತಿಯಲ್ಲಿ ಹೇಳಿಕೊಂಡಿ¨ªಾನೆ.

ಲಾರ್ಡ್‌ ಬೈರಾನ್‌ ಎಂಬ ಇಂಗ್ಲಿಶ್‌ ಕವಿಯ ಕತೆಯೇ ಬೇರೆ. ಈತ ಸುರಸುಂದರಾಂಗ; ಜೊತೆಗೆ ಅಷ್ಟೇ ಶೃಂಗಾರರಾಜನೂ ಹೌದು. ತನ್ನ ಹದಿಹರೆಯದಲ್ಲೆ ಹಲವು ಅದ್ಭುತ ಕವಿತೆಗಳಿಂದ ಇಂಗ್ಲೆಂಡ್‌ ದೇಶದಲ್ಲಿ ಪ್ರಸಿದ್ಧಿಗೆ ಬಂದ ಬೈರಾನ್‌ ಒಂದೆರಡಲ್ಲ ಹತ್ತುಹಲವು ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದವನು.

ಆದರೂ ಏಕೋ ಮನಸ್ಸಿಗೆ ಸ್ವಲ್ಪವೂ ಸಮಾಧಾನವೆನಿಸುತ್ತಿಲ್ಲ. ಅಚಲಾ ನನ್ನ ಕಲೀಗ್‌, ಹೀಗೆ ಎರಡು ವರ್ಷಗಳಿಂದ ನನ್ನ ಟೀಮ್‌ನಲ್ಲೇ ಕೆಲಸ ಮಾಡುತ್ತಿರುವ ಧಾರವಾಡದ ಹುಡುಗಿ. ಮೊದಲಿನಿಂದಲೂ ನನಗೆ ಅವಳೆಂದರೆ ಒಂದು ಬಗೆಯ ಆಕರ್ಷಣೆ. ಅದು ಪ್ರೀತಿ ಇರಬಹುದು ಅಂತ ನನಗೆ ಇತ್ತೀಚೆಗೆ ಅನ್ನಿಸ್ತಾ ಇದೆ. ಒಂದೇ ಪ್ರಾಜೆಕ್ಟ್‌ನಲ್ಲಿ ಇರುವುದರಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಆದರೆ, ಇದುವರೆಗೂ ನನ್ನ ಮನಸ್ಸನ್ನು ಅವಳೆದುರು ತೆರೆದಿಡಲಾಗಿಲ್ಲ. ಅಚಲಾನ ಕಳ್ಕೊàಳ್ಳೋಕೆ ನಾನು ತಯಾರಿಲ್ಲ. ಇವತ್ತು ಪ್ರಪೋಸ್‌ ಮಾಡಿಯೇಬಿಡುತ್ತೇನೆ. ಅವಳಿಗೆ ರಿಜೆಕ್ಟ್ ಮಾಡೋಕೆ ಯಾವ ಕಾರಣವೂ ಇಲ್ಲ. ಈಗ ಆ ಕನಸನ್ನು ಮತ್ತೆ ಮತ್ತೆ ನೆನೆದು ನಗು ಬರುತ್ತಿದೆ. ಎಂಥ ಬಕ್ವಾಸ್‌ ಕನಸು, ಚಂದ್ರಲೋಕಕ್ಕೆ ಹೋಗಿ ಬಂದ್ನಲ್ಲಾ ನಾನು.

ಬೆಳಗ್ಗೆ ಬೇಗ ರೆಡಿಯಾಗಿ ಕಂಪೆನಿಗೆ ಹೋದ. ಅಚಲಾ ಇನ್ನೂ ಬಂದಿರಲಿಲ್ಲ. ನನಗೆ ಇವತ್ತು ಖಂಡಿತಾ ಕೆಲಸದ ಮೇಲೆ ಗಮನ ಹರಿಸೋದು ಸಾಧ್ಯನೇ ಇಲ್ಲ ಅನಿಸುತ್ತಿದೆ. ಒಬ್ಬೊಬ್ಬರಾಗಿ ನನ್ನ ಟೀಮ್‌ಮೇಟ್‌ಗಳು ಬಂದರೂ ಅಚಲಾ ಇನ್ನೂ ಬಂದಿಲ್ಲ. ಅವಳಿಗೆ ಫೋನ್‌ ಮಾಡಿದರೆ ನಾಟ್‌ ರೀಚೆಬಲ್‌ ಬರ್ತಾ ಇದೆ. ಇದೇನು ಕತೆಯೋ. ಇವಳದ್ದು ಹೋಗಲಿ, ಅವಳ ಗೆಳತಿಯನ್ನಾದರೂ ವಿಚಾರಿಸಬೇಕು. ವೀಕೆಂಡ್‌ ಅಂತ ಮನೆಗೇನಾದರೂ ಹೋಗಿದ್ದಾಳ್ಳೋ, ಕಾವ್ಯಾಳ ಡೆಸ್ಕಿಗೆ ಹೋಗಿ, “ಅಚಲಾ ಯಾಕೆ ಬಂದಿಲ್ಲ ಇನ್ನೂ ಅಂತ’ ಕೇಳಿದ್ದಕ್ಕೆ, “ಸಮರ್ಥ್, ನೀನಿನ್ನೂ ಫೇಸ್‌ಬುಕ್‌ ನೋಡಿಲ್ವಾ? ಸರ್‌ಪ್ರೈಸ್‌ ಇದೆ’ ಎಂದಳು. ಇವಳಿಗೆ ಯಾವಾಗಲೂ ಹುಡುಗಾಟಿಕೆ ನನ್ನ ಪ್ರಶ್ನೆಗೆ ಉತ್ತರ ಹೇಳೆª ಏನೋ ಮಾತಾಡ್ತಾಳೆ ಅಂತ. ನನಗೆ ಸ್ವಲ್ಪ ಕೋಪ ಬಂತು. ಆದರೂ ಸಹಿಸುತ್ತ¤, “ಏನದು ಸರ್‌ಪ್ರೈಸ್‌’ ಎಂದೆ. “ಅಚಲಾ ಎಂಗೇಜ್‌ಮೆಂಟ್‌ ಆಗಿದೆ ನಿನ್ನೆ. ನೋಡು ಅವಳು ನಮ್ಗೆ ಕ್ಲೂನೂ ಕೊಟ್ಟಿಲ್ಲ , ವೆರಿಬ್ಯಾಡ್‌, ನಂಗೂ ಎಫ್ಬಿ ನೋಡಿದಾಗ್ಲೆ ಬೆಳಿಗ್ಗೆ ಗೊತ್ತಾಗಿದ್ದು, ಬರ್ಲಿ ಅವಳು, ಮಾಡ್ತೀನಿ’ ಅಂದಳು. ಇಲ್ಲ , ಇದೇನೋ ತಮಾಷೆ ಇರಬಹುದು, ಅಚಲಾ ನನಗೂ ಹೇಳದೆ ಹೀಗೆ ಮಾಡಲಾರಳು ಎನಿಸುತ್ತಿದೆ.

ನಿಧಾನವಾಗಿ ನನ್ನ ಜಾಗಕ್ಕೆ ಬಂದು ಮೊಬೈಲ್‌ ತೆಗೆದು ಫೇಸ್‌ಬುಕ್‌ ತೆರೆದೆ. ಅಚಲಾಳ ಸ್ಟೇಟಸ್‌- ಗಾಟ್‌ ಎಂಗೇಜ್‌x ಕಣ್ಣಿಗೆ ರಾಚುತ್ತಿದೆ ! ಅದ್ಯಾವನೋ ವಿನಯ್‌ ಅಂತೆ. ಥೂ! ನನ್ನ ಬ್ಯಾಡ್‌ಲಕ್‌. ನೋಡೋಣ ಅವನ್‌ ಮೂತಿ ಹೇಗಿದೆ ಅಂತ ವಿನಯ್‌ ವಿನು ಪ್ರೊಫೈಲ್‌ ಓಪನ್‌ ಮಾಡಿದೆ. ಏನಿದು ನಾನು ಮತ್ತೆ ಕನಸು ಕಾಣಾ¤ ಇಲ್ಲ ತಾನೆ. ಇವನು ಅವನೇ… ಅವನೇ ನನ್ನ ಕನಸಲ್ಲಿ ಸ್ವಯಂವರದಲ್ಲಿದ್ದ ರಾಜಕುಮಾರ. ಇದೇನಾಗುತ್ತಿದೆ ನನ್ನ ನಕ್ಷತ್ರ ಕದ್ದುಕೊಂಡು ಹೋದ ಇವನೇ ಅಚಲಾಳನ್ನು ಮದುವೆ ಆಗ್ತಾ ಇದ್ದಾನೆ.

ಅಚಲಾಗೆ ಪ್ರಪೋಸ್‌ ಮಾಡಲಾಗದೇ ಅವಳನ್ನು ಕಳೆದುಕೊಂಡಿದ್ದ ಬೇಸರವನ್ನೂ ಮೀರಿ ವಿಚಿತ್ರವೆನಿಸುತ್ತಿದೆ. ಅದು ಹೇಗೆ, ಎಂದಿಗೂ ನಾನು ನೋಡದೇ ಇದ್ದ ವ್ಯಕ್ತಿ ಕನಸಿನಲ್ಲಿ ಬಂದು ನನ್ನ ಜೊತೆ ಸ್ವಯಂವರದಲ್ಲಿ ಭಾಗವಹಿಸಿದ, ನನ್ನ ನಕ್ಷತ್ರವನ್ನೂ ಕದ್ದ , ಅಚಲಾ ಅವನೊಂದಿಗೆ ಎಂಗೇಜ್‌ , ಇದು ಹೇಗೆ ಸಾಧ್ಯ? ಎಂಬ ಸೋಜಿಗವೇ ನನ್ನನ್ನು ಆವರಿಸುತ್ತಿದೆ. ನನ್ನ ಕನಸಿನಲ್ಲಿ ಅವನ ಹೆಸರೇನಿತ್ತೆಂದು ತೀವ್ರವಾಗಿ ಯೋಚಿಸುತ್ತಿದ್ದೇನೆ. ಹೂವು, ಮುತ್ತು, ನಕ್ಷತ್ರ , ಚಂದ್ರ, ಅರಮನೆ, ಸಮುದ್ರ, ರಾಜ, ಪರ್ವತ, ಏನೇನೋ ನೆನಪಾಗುತ್ತಿದೆ. 

ಛೇ! ಅವನ ಹೆಸರು ನೆನಪಾಗುತ್ತಲೇ ಇಲ್ಲ.

ಶ್ರುತಿ ಬಿ. ಆರ್‌.

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.