ಮೌನ ಮೋಹಿ ರುಮ್ಸ್


Team Udayavani, May 7, 2017, 3:45 AM IST

SAPT-2.jpg

ತನ್ನೊಡಲ ಮೇಲಿನ ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಹಿಮಾಚಲ ಪ್ರದೇಶದಲ್ಲಿದ್ದೂ, ಪ್ರವಾಸಿ ಸ್ಥಳವಾಗೇನು ಗುರುತಿಸಿಕೊಳ್ಳದ ರುಮ್ಸ್ ಎಂಬ ಹೆಸರಿನ ಊರು ನಮ್ಮ ಕಣ್ಣಿಗೆ ಕಟ್ಟಿಕೊಡುವ ತರಹೇವಾರಿ ದೃಶ್ಯಗಳ ಮೂಲಕವೇ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹಮಾr ಪಾಸ್‌ಗೆ ಚಾರಣ ಕೈಗೊಳ್ಳಲು ದೇಶದ ವಿವಿಧೆಡೆಯಿಂದ ಆಗಮಿಸುವ ಚಾರಣಿಗರನ್ನು ಮೊದಲೇ ಬರಮಾಡಿಕೊಳ್ಳುವ ರುಮ್ಸ್ ಗ್ರಾಮ, ಹಾಗೆ ಬರುವವರನ್ನು ಮುದಗೊಳಿಸದೆ ಬೀಳ್ಕೊಡಲಾರದು.

ನಡಿಗೆಯನ್ನೇ ನೆಚ್ಚಿಕೊಂಡವರೆ ಹೆಚ್ಚಿರುವ ಈ ಊರಿನ ಕಡಿದಾದ ರಸ್ತೆಗಳಲ್ಲಿ ವಾಹನಗಳು ಕಾಣಸಿಗುವುದೇ ಅಪರೂಪ. ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವ ಸೇಬಿನ ಮರಗಳಲ್ಲಿನ ಹಣ್ಣುಗಳಷ್ಟೆ ಸುಂದರವಾಗಿರುವ ಅಲ್ಲಿನ ಜನರೂ ನೆನಪಿನಲ್ಲಿ ಉಳಿಯುವ ಚಿತ್ರಗಳಾಗುತ್ತಾರೆ.

ಸೇಬಿನ ಮರಗಳಂತೆ ಅಲ್ಲಲ್ಲಿ ಗಾಂಜಾ ಗಿಡಗಳು ಕೂಡ ಎದುರುಗೊಳ್ಳುತ್ತವೆ. ಅಪರೂಪಕ್ಕೊಮ್ಮೆಯಾದರೂ ಅಮಲಿನ ಮಹಲಿನಲ್ಲಿ ತೇಲಿಯೇ ಬಿಡೋಣವೆಂದುಕೊಳ್ಳುವ ಕೆಲವು ಚಾರಣಿಗರು, ಹಮಾr ಪಾಸ್‌ ಹಾದಿ ಹಿಡಿಯುವ ಮುನ್ನ ಗಾಂಜಾ ಹೊಗೆ ಹೀರಿ ಹಿಮಾಚಲದ ಚಳಿಗೆ ತತ್ತರಿಸುವ ಮೈ ಬೆಚ್ಚಗಾಗಿಸಿಕೊಳ್ಳುತ್ತಾರೆ. ಸ್ಥಳೀಯರೇನು ಪೊಲೀಸರ ಕಣ್ತಪ್ಪಿಸಿ ಗಾಂಜಾ ಗಿಡಗಳನ್ನು ಬೆಳೆಯುವ ಉಸಾಬರಿಗೆ ಹೋಗುವುದಿಲ್ಲ. ನಮ್ಮಲ್ಲಿ ಕಳೆ ಗಿಡಗಳು ಬೆಳೆಯುವಂತೆ ಇಲ್ಲಿ ಗಾಂಜಾ ಗಿಡಗಳು ತಮ್ಮ ಪಾಡಿಗೆ ತಾವು ಬೆಳೆದು ನಿಲ್ಲುತ್ತವಂತೆ. ಆಗಾಗ ಪೊಲೀಸರು ಕೂಡ ತಮ್ಮ ಕೈಲಾಗುವಷ್ಟು ಗಾಂಜಾ ಗಿಡಗಳನ್ನು ನಾಶ ಮಾಡುತ್ತಾರಂತೆ. 

ಪ್ರವಾಸಿ ಸ್ಥಳವೆಂಬ ಹಣೆಪಟ್ಟಿ ಹೊತ್ತುಕೊಂಡಿರದ ಕಾರಣ ರುಮುವಿನಲ್ಲಿ ಪ್ರವಾಸಿಗರು ಅಪೇಕ್ಷಿಸುವ ಯಾವ ಮೂಲಭೂತ ಸೌಲಭ್ಯಗಳೂ ದೊರೆಯಲಾರವು. ಹಮಾrಪಾಸ್‌ಗೆ ತೆರಳುವ ಚಾರಣಿಗರಿಗೆ ಮಾರ್ಗದರ್ಶಿಗಳಾಗಿ ದುಡಿಯುವ ಇಲ್ಲಿನ ಕೆಲ ಸ್ಥಳೀಯರು, ತಮ್ಮ ಮನೆಗಳಲ್ಲಿ ಕೆಲಕಾಲ ವಿಶ್ರಮಿಸಲು ಅನುವು ಮಾಡಿಕೊಡುತ್ತಾರೆ.

ರುಮ್ಸ್ ಗ್ರಾಮದಲ್ಲಿ ಕಣ್ಣಾಡಿಸಿದಲ್ಲೆಲ್ಲ ಕಾಣಸಿಗುವ ಗಿರಿ ಕಂದರಗಳು, ಮಂಜು ಮತ್ತು ಸೂರ್ಯನ ದೆಸೆಯಿಂದ ಹೊದ್ದುಕೊಳ್ಳುವ ನಾನಾ ರೂಪಗಳು ಅವಿಸ್ಮರಣೀಯ. ಕುಲು ಜಿಲ್ಲೆಗೆ ಸೇರುವ ರುಮ್ಸ್ ಗ್ರಾಮ, ಜಿಲ್ಲಾ ಕೇಂದ್ರದಿಂದ 21 ಕಿ.ಮೀ. ದೂರದಲ್ಲಿದೆ. ರುಮ್ಸ್ ತಲುಪಲು ಶಿಮ್ಲಾದಿಂದ 131 ಕಿ.ಮೀ. ಪಯಣಿಸಬೇಕಾಗುತ್ತದೆ.

ಎಚ್‌.ಕೆ. ಶರತ್‌
ಚಿತ್ರ: ನಿಖೀಲ್‌ ಪಿ.

ಟಾಪ್ ನ್ಯೂಸ್

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.