ಹೆಣ್ಣುಗಳು ಸುರಕ್ಷಿತವಾಗಿರಲಿ


Team Udayavani, Dec 31, 2017, 6:40 AM IST

hennugalu.jpg

ನಮ್ಮ ದೇಶ ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ಜಾರಿಗೆ ಬಂದ ಕ್ರಿಸ್ತ ಶಕವನ್ನು ನಾವು ಒಪ್ಪಿ ಮುನ್ನೂರು ವರ್ಷಗಳಾಗಿಬಿಟ್ಟಿವೆ. ಇಷ್ಟು ವರ್ಷಗಳ ಕಾಲ ಡಿಸೆಂಬರ್‌ ಕಳೆದು ಮತ್ತೆ ಜನವರಿ ಪ್ರಾರಂಭವಾಗುವಾಗ ಹೊಸ ವರ್ಷ ಎಂದು ಸಂಭ್ರಮಿಸುವುದು ವಾಡಿಕೆಯಾಗಿಬಿಟ್ಟಿದೆ.  ಅದರಲ್ಲಿ ಯಾವ ಜಾತಿ, ಮತ, ಲಿಂಗ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಪ್ಪಿಕೊಳ್ಳುವ ಅನಿವಾರ್ಯತೆ ಬಂದುಬಿಟ್ಟಿದೆ. ಹಾಗಾಗಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದು ಜನರಿಗೆ ಒಂದು ಹಬ್ಬ. 

ಇತ್ತೀಚೆಗೆ ಕೆಲವರು ಜನವರಿ ಒಂದು ನಮ್ಮ ಹಬ್ಬವಲ್ಲ , ಅದನ್ನು ಆಚರಿಸಬಾರದು ಎಂದು ಹುಕುಂ ಹೊರಡಿಸುತ್ತಿರುವುದರ ಬಗ್ಗೆ ನನಗೆ ಸಹಮತವಿಲ್ಲ. ಏಕೆಂದರೆ, ನಾವು ಪಂಚಾಂಗವನ್ನೂ ಕ್ಯಾಲೆಂಡರನ್ನೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಜಗತ್ತು ಬಹಳ ಬದಲಾಗಿಬಿಟ್ಟಿದೆ. ಕಾಲ ಬದಲಾಗಿದೆ. ಜನಜೀವನ ಬದಲಾಗಿದೆ. ಹಳೆಯ ಪಳೆಯುಳಿಕೆಗಳು ಇನ್ನೂ  ಇದ್ದರೂ ಅವು ಕೇವಲ ಪಳೆಯುಳಿಕೆಗಳಾಗಿ ಇವೆಯೇ ಹೊರತು ಅವುಗಳನ್ನು ಮತ್ತೆ ಜೀವಂತಿಕೆಯ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಅಸಂಗತ. ಹಠ ಮಾಡಿ ಪಳೆಯುಳಿಕೆಗಳೇ ನಮ್ಮ ಬದುಕು ಎಂದು ಸಾಧಿಸಲು ಹೊರಟರೆ ಅದರಿಂದ ಅವನತಿಯೇ ಹೊರತು ಪ್ರಗತಿ ಆಗುವುದಿಲ್ಲ.  ಅದುದರಿಂದ ಹೊಸ ಕ್ಯಾಲೆಂಡರನ್ನು ಕೇವಲ ಕ್ರಿಶ್ಚಿಯನ್‌ ಕ್ಯಾಲೆಂಡರ್‌ ಎಂದು ಮಾತ್ರ ನೋಡದೆ ಅದು ಆಧುನಿಕ ಜಗತ್ತಿನ ಜಾಗತಿಕ ಮಾಪಕ ಎಂದು ಪರಿಗಣಿಸಿ ಮುಂದುವರಿಯುವುದು ಒಳ್ಳೆಯ ಲಕ್ಷಣ. ಇಡೀ ಪ್ರಪಂಚ ಒಪ್ಪಿಕೊಂಡ ಕ್ಯಾಲೆಂಡರನ್ನು ಬಿಟ್ಟು ನಾವು ಮತ್ತೆ ಹಳೆಯ ಹಾಗೂ ಕೆಲವು ನಿರ್ದಿಷ್ಟ ಸಮುದಾಯದವರು  ಮಾತ್ರ ಒಪ್ಪಿಕೊಳ್ಳುವ ಪಂಚಾಂಗವನ್ನೇ ನಂಬಿ ನಡೆದುಕೊಳ್ಳುತ್ತೇವೆ ಎಂದು ಹೊರಟರೆ ಅದರಿಂದ ಸಮಷ್ಟಿ ಸಮಾಜಕ್ಕೆ ತೊಂದರೆಯೇ.

ಹಾಗಾಗಿ, ನಾವು ಜನವರಿಯನ್ನೇ ಹೊಸ ವರ್ಷ ಎಂದು ಪರಿಗಣಿಸೋಣ ಎಂದು ನನ್ನ ಅನಿಸಿಕೆ. 
ಇನ್ನು ಪ್ರತಿ ವರ್ಷ ಪ್ರಾರಂಭವಾದಾಗ ಹಳೆಯ ವರ್ಷದ ನೆನಪುಗಳು ಹೊಸ ವರ್ಷದ ಭರವಸೆಗಳನ್ನು ಒಟ್ಟಿಗೇ ಪುನರಾವಲೋಕಿಸುವುದು ಸಹಜ.  2017 ಅನೇಕ ದುರಂತಗಳನ್ನು ತಂದಿತು, ಜೊತೆಗೆ ಸಂತಸಗಳನ್ನೂ ಕೊಟ್ಟಿತು. ಬರುವ ವರ್ಷ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ.  ಆದರೂ ನಾವು ಈ ವರ್ಷ ಇನ್ನಷ್ಟು ಚೆನ್ನಾಗಿರಲಿ, ಇನ್ನಷ್ಟು ಲಾಭ ತರಲಿ, ಸಂತಸ ಹೆಚ್ಚಲಿ,  ಪ್ರಗತಿಯಾಗಲಿ ಎಂದೆಲ್ಲ  ಆಶಿಸುತ್ತೇವೆ.  ಅದೇ ನಮ್ಮ  ಬದುಕಿನ ರಸ ಗಳಿಗೆಗೆ ಕಾರಣ.  ಸ್ವಸ್ತಿ ವಾಚನದಲ್ಲಿ ಹೇಳುವಂತೆ, ಲೋಕಾ ಸಮಸ್ತಾ ಸುಖೀನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥುವಿ ಸಸ್ಯಶಾಲಿನೀ ದೇಶೋಯಂ ಕ್ಷೊàಭ ರಹಿತಃ  ಎಂದು ಆಶಿಸೋಣ. ದಿನನಿತ್ಯದ ಗೋಳು ಹಿಂಸೆ ಕಡಿಮೆಯಾಗಲಿ.  ಹೆಣ್ಣುಗಳು ಸುರಕ್ಷಿತವಾಗಿರಲಿ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.