ಮತ್ತೆ ಮತ್ತೆ ಹೊಸವರ್ಷ  


Team Udayavani, Jan 7, 2018, 6:15 AM IST

Ananthanag11BB.jpg

ಹೊಸವರ್ಷದ ಆಗಮನವನ್ನು ಕಳೆದ ರವಿವಾರ “ಸಾಪ್ತಾಹಿಕ ಸಂಪದ’ದಲ್ಲಿ ಜಯಂತ ಕಾಯ್ಕಿಣಿ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದರು. ಅದರ ಕುರಿತ  ಈ ಪ್ರತಿಸ್ಪಂದನ ಹೊಸವರ್ಷದ ಸಂಭ್ರಮವನ್ನು ಈ ರವಿವಾರಕ್ಕೂ ದಾಟಿಸಿದೆ.

ಪ್ರಿಯ ಜಯಂತ, 
ಕಳೆದ ವಾರದ ಉದಯವಾಣಿ “ಸಾಪ್ತಾಹಿಕ ಸಂಪದ’ದ ನಿನ್ನ ಕವಿತೆ “ಕಾರ್ಯಕ್ರಮ’ವನ್ನು ಮತ್ತೆ ಮತ್ತೆ ಓದುತ್ತ ನನ್ನ ಹೊಸವರ್ಷ ನಿಜಕ್ಕೂ ಹೊಸದಾಗುತ್ತಿದೆ. ಪರಿಪಕ್ವವಾದ ಅಷ್ಟೇ ಆಳವಾದ ಪ್ರತಿಭೆ ಇದರಲ್ಲಿ ಪ್ರತಿಫ‌ಲಿಸಿದೆ. ದಿನನಿತ್ಯದ ಹುಲುವಿವರಗಳಲ್ಲೇ ನೀನು ಅದ್ಭುತವನ್ನು ಮನಗಾಣುವ ರೀತಿ ವಿಶೇಷವಾದದ್ದು. ಅಡಿಗರ “ಮೋಹನ ಮುರಲಿ’ ಸೆಳೆಯುವ “ತೀರ’ ಒಂದು ಬಗೆಯದಾದರೆ, ನಿನ್ನ ಈ ಕವಿತೆಯಲ್ಲಿ ಸೆಳೆಯುವ “ಸಮುದ್ರ’ ಇನ್ನೊಂದು ಬಗೆಯದು. ಅಲೆ ಅಲೆಯಾಗಿ ಕರೆಯುವಂಥಾದ್ದು. ಮೂರರಲ್ಲಿ ಎರಡು ಸಾಲು ಸಮುದ್ರ, ಒಂದು ಸಾಲು ಭೂಮಿ ! ನಿನ್ನ ಕವಿತೆ ಹೇಳುತ್ತದೆ, “ಹುಷಾರು! ಹುಷಾರು!’. ವಾಹ್‌ ವಾಹ್‌ ಅಂತೇನೆ ನಾನು. ಸಮುದ್ರವೇ ಒಂದು ಇಡಿ. ಭೂಮಿ ಅನ್ನೋದು ಮಾನವ, ಪಶು, ವಿಹಗ, ಜಂತು, ವೃಕ್ಷ ಮತ್ತು ಪಾಷಾಣಗಳಿಗೆ ಸಿಕ್ಕ ಒಂದು ಅವಕಾಶ. ಪ್ರಜ್ಞಾಪೂರ್ವಕವಾಗಿಯೋ ಸುಪ್ತಪ್ರಜ್ಞಾಪೂರ್ವಕವಾಗಿಯೋ ನೀನೊಂದು ಮಾಸ್ಟರ್‌ ಪೀಸನ್ನು ರಚಿಸಿರುವಿ. ಆಶಯ ಮತ್ತು ಆಕೃತಿ ಅಂತೆಲ್ಲ ಹೇಳುತ್ತಾರೆ. ನೀನಂತೂ ಕಾವ್ಯ ಮತ್ತು ಗದ್ಯದ ನಡುವಿನ ಸೂಕ್ಷ್ಮ ಗೆರೆಯನ್ನು ಅಳಿಸಿಬಿಟ್ಟಿರುವಿ. ಲೆಕ್ಕಣಿಕೆಯನ್ನು ಚಲಿಸುವ ನಿನ್ನ ಕೈಗಳಿಗೆ ಇನ್ನೂ ಹೆಚ್ಚಿನ ಕಸುವನ್ನು ಹಾರೈಸುತ್ತೇನೆ. ಜೈ ಹೋ!

– ನಿದ್ದೆಯಲ್ಲಿರುವ ಮಗು ದೇವರೊಂದಿಗೆ ಸಂಭಾಷಿಸುತ್ತಿರುವ‌ ಕ್ಷಣ ಹೊಸತೇ.
– ಮುಂಜಾವ ಹೂವನ್ನು ಅರಳಿಸುವ ಮೂಲಕ ಭೂಮಿ ಆಕಾಶವನ್ನು ನೋಡಿ ನಗುತ್ತಿರುವ ಕ್ಷಣ ಹೊಸತೇ.
– ಜಗವೆಲ್ಲ ನಿದ್ದೆಯಲ್ಲಿರುವಾಗ ಮೂಡಲಮನೆಯಲ್ಲಿ ಸೂರ್ಯ ಇದ್ದಕ್ಕಿದ್ದಂತೆ ಎದ್ದು ಕುಳಿತುಕೊಳ್ಳುತ್ತಿರುವ ಕ್ಷಣ ಹೊಸತೇ.
– ಪ್ರತಿದಿನ ಬೆಳಗನ್ನು ಬೆರಗಿನಿಂದ ಕಾಣುವ ಕಣ್ಣುಗಳು ತೆರೆಯುತ್ತಿರುವ ಕ್ಷಣ ಹೊಸತೇ.
– ಇಷ್ಟೆಲ್ಲ ಹೊಸತಿರುವಾಗ  ಹೊಸವರ್ಷದ ಸಂಭ್ರಮ ಮುಗಿಯಲುಂಟೆ?
 

– ಅನಂತನಾಗ್‌

ಟಾಪ್ ನ್ಯೂಸ್

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.