ಜನವರಿ 30- ಗಾಂಧಿ ಪುಣ್ಯತಿಥಿ


Team Udayavani, Jan 28, 2018, 11:40 AM IST

Vaidehi11.jpg

ಮೂರು ರೇಖೆಯಲಿ ಚಿತ್ರ ಬಿಡಿಸಿದರೂ  ಗಾಂಧಿ ಮೂಡಲಿಲ್ಲ ಮೂರು ಮುನ್ನೂರು ಶಬ್ದ ಬರೆದರೂ ಆತನು ಸಿಗಲಿಲ್ಲ  ಮೂರು ಮಂಗಗಳ ಆಡಿ ತೋರಿದರು  ಆತ ಕಾಣಲಿಲ್ಲ

ಮೂರು ಬಣ್ಣಗಳ ಬಳಿದು ತಂದರು ನಕ್ಕಂತಾಯಿತೆ ಉದ್ದ?  ಟೊಪ್ಪಿ ತೊಟ್ಟರೂ ಕಳಚಿ ಇಟ್ಟರೂ  ಆತನೆಲ್ಲಿ ಇದ್ದ?

ಸರ್ತ ಕುಳಿತರು ಚರಕ ಸುತ್ತಿದರೂ ಮಂದಿ ಮಾಗಧವಂದಿ ಖಾದಿ ತೊಟ್ಟರೂ  ಭಾಷಣ ಮಳೆಯಲಿ ತೋಯಿಸಿ ನೆನೆದರೂ  ತಾತನ ಸುಳಿವಿಲ್ಲ. ಉಪವಾಸಕೆ ಹಾ! ಅಪಹಾಸವೆ ಗತಿ ಗಾಂಧಿ ದಕ್ಕಲಿಲ್ಲ  ರಾಮ ರಾಮ ಹೇ ರಾಮ ಪ್ರಾರ್ಥನಾ  ಮಂತ್ರಕುದುರಲಿಲ್ಲ ಯಂತ್ರ ತಂತ್ರಕೂ ಕಂಪ್ಯೂಟರಿಗೂ ವೈಷ್ಣವ ಜನತೋ ಪತಿತ ಪಾವನಕೂ ಭಜನೆ ಹಾರ್ಮನೀ ತಾಳ ತಂಬೂರಿಗೂ ಸಿಗುವ ಸಿದ್ಧನಲ್ಲ 

ಬೋಳುತಲೆ ಮತ್ತು ಬೊಚ್ಚುಬಾಯಿಯೂ ತುಂಡು ಉಡುಗೆ ಜೊತೆ ಮೇಲು ಹೊದಿಕೆಯೂ ದಂಡ ಕನ್ನಡಕ ಧಾಪು ನಡಿಗೆಯೂ ಆಚೆಗೀಚೆಗಿನ ಅನುಯಾಯಿನಿಯರು ನಾಡಿನುತ್ಸವದಿ ಸ್ತಬ್ದ ಚಲಿಸಿದರೂ ಗಾಂಧಿ ನಾಡಿ ಇಲ್ಲ. 

ಹುಡುಕುತ ಹುಡುಕುತ ದೇಶ ತಿರುಗಿದರೂ  ಸಂಶೋಧಿಸುತಾ ಲೋಕ ಅಲೆದರೂ ಆತನು ಸಿಗಲಿಲ್ಲ. 

ನಮ್ಮನೆಯಲ್ಲೇ  ನಮ್ಮೊಳಗಿರುವವ ಆ ಮಹಾತಮ ಜೀವ  ಕದ ತೆರೆದರೆ ಸೈ ಬಂದೇ ಬರುವವ  ಗರುವವೆ ಇಲ್ಲದವ ಕರೆಗೋ ಕೊಡುವವ ಕಂಬನಿ ತಿಳಿವವ  ಎಂದೆಲ್ಲಾ ಖ್ಯಾತನವ  ಎಲ್ಲಿ ಕರಗಿ ಹೋದ?

ಮರುಗಿದನೇ ಅವ ಕರಗಿದನೇ  ಒರಗಿದನೇ ಅವ ಶಾಶ್ವತದಲ್ಲಿ ನಮ್ಮೊಡಲಿನ ಒಳಸಂಚಿನಲಿ? ಒಳಗಿದ್ದೇ ಒಳ ಬೇಗೆಯಲಿ?   ಸರಳ ಕಾಣುವ ಸುಲಭ ಕಾಣುವ ಸರಳ ಸುಲಭವಲ್ಲ ಸರಳ ಮಾತ್ರನೇ? ಮರುಳನು ಗಾಂಧಿ  ಮರುಳು ಸರಳವಲ್ಲ  ಮರುಳೆ,  ಗಾಂಧಿ ಸರಳನಲ್ಲ 

ವೈದೇಹಿ 

ಟಾಪ್ ನ್ಯೂಸ್

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.