ಪುಟ್ಟಕತೆಗಳು


Team Udayavani, Feb 18, 2018, 8:15 AM IST

a-27.jpg

ಮನುಷ್ಯ
ಅರ್ಧ ತುಂಬಿದ್ದ ನೀರಿನ ಪಾತ್ರೆಯನ್ನು ನೋಡಿ ಒಬ್ಟಾತ ನುಡಿದ, “”ಈ ಪಾತ್ರೆ ಅರ್ಧ ಖಾಲಿಯಾಗಿದೆ, ನಾನು ನಿರಾಶಾವಾದಿ!”
ಇನ್ನೊಬ್ಬ ಹೆಮ್ಮೆಯಿಂದ ಕೂಗಿದ, “”ಈ ಪಾತ್ರೆ ಅರ್ಧ ತುಂಬಿದೆ, ನಾನು ಆಶಾವಾದಿ!” ಮೂರನೆಯವ ಆ ಪಾತ್ರೆಯ ನೀರನ್ನು ಬಾಯಾರಿದ ಮಗುವಿಗೆ ಉಣಿಸುತ್ತ ಪಿಸುನುಡಿದ, “”ನಾನು ಮನುಷ್ಯ!”

ಭಯ
ಸಾಯಂಗೃಹನನ್ನು ಕೇಳಿದೆ, “”ಸ್ಮಶಾನವೇಕೆ ಭಯ ಹುಟ್ಟಿಸುತ್ತದೆ?”
ಆತ ತಿರುಗಿ ಪ್ರಶ್ನಿಸಿದ, “”ಸಮುದ್ರದ ನೀರೇಕೆ ಇಷ್ಟೊಂದು ಉಪ್ಪು?”
“”ನದಿಗಳೆಲ್ಲವೂ ತಮ್ಮ ತಮ್ಮ ಉಪ್ಪನ್ನು ತೊರೆದ ಜಾಗವದು”
“”ಹಾಗೆಯೇ ಸತ್ತವರೆಲ್ಲರೂ, ತಮ್ಮ ತಮ್ಮ ಸಾವಿನ ಭಯವನ್ನು ತೊರೆದ ಜಾಗವಿದು!”

ಗ್ರಂಥ
ಖನ್ನತೆಯಿಂದ ಬಳಲುತ್ತಿದ್ದ ಒಬ್ಟಾತ, ಗುರುವಿನ ಬಳಿ ತನ್ನ ಸಮಸ್ಯೆಯನ್ನು ತೋಡಿಕೊಂಡ.
ಗುರು ಆತನಿಗೆ ಧರ್ಮಗ್ರಂಥವೊಂದನ್ನು ನೀಡಿ, ಅದನ್ನು ಪ್ರತಿನಿತ್ಯವೂ ಪೂಜಿಸಿದರೆ ಸಮಸ್ಯೆ ಪರಿಹಾರವಾಗುತ್ತದೆಂದು ಸೂಚಿಸಿದ.
ಅದರಂತೆಯೇ ಆತ ಆ ಗ್ರಂಥವನ್ನು ಪೂಜಾಗೃಹದಲ್ಲಿಟ್ಟು, ಗಂಧ, ಆರತಿಗಳಿಂದ ದಿನವೂ ಪೂಜಿಸಿದ.
ಆದರೂ ಯಾವ ಫ‌ಲವೂ ಕಾಣದಿ¨ªಾಗ ಮತ್ತೆ ಗುರುವಿನ ಬಳಿ ನಡೆದು ಧರ್ಮಗ್ರಂಥವನ್ನು ದೂರಿದ. 
ಗುರು ವಿಷಾದದ ನಗೆ ನಕ್ಕು ನುಡಿದ, “”ಹುಚ್ಚಾ! ನೀನು ಒಂದು ದಿನವೂ ಆ ಗ್ರಂಥವನ್ನು ಪೂಜಿಸಲಿಲ್ಲ!”

ಅನುಭವ
ಪಂಡಿತ ಹೇಳಿದ, “”ನಮ್ಮ ಇಂದ್ರಿಯಗಳ ಅನುಭವಕ್ಕೆ ನಿಲುಕದ ಸಂಗತಿಗಳೆಲ್ಲವೂ ಮಿಥ್ಯೆ!”
ರಸಿಕ ಕೇಳಿದ, “”ಅನುಭವವೆಂದರೇನು?”

ಪ್ರೀತಿ
ಪರಮ ಕ್ರೂರಿಯೊಬ್ಬ ಝೆನ್‌ ಗುರುವಿನ ಅಡಿಯಲ್ಲಿ ತನ್ನ ಕತ್ತಿಯನ್ನಿರಿಸಿ ನುಡಿದ, “”ಎಲ್ಲವನ್ನು ಬಿಟ್ಟು ಬರುತ್ತೇನೆ, ನನಗೆ ವೈರಾಗ್ಯವನ್ನು ಬೋಧಿಸಿ!”
“”ನೀನು ಇಲ್ಲಿಯವರೆಗೆ ಯಾರನ್ನಾದರೂ ಪ್ರೀತಿಸಿರುವೆಯಾ?”, ಕೇಳಿದನು ಗುರು.
“”ಇಲ್ಲ”
“”ಮೊದಲು ಪ್ರೀತಿಸು ಮಗೂ, ಎಲ್ಲವನ್ನು ಬಿಡುವ ಮುನ್ನ ಏನಾದರೂ ಇರಬೇಕಲ್ಲವೆ?”

ಕನ್ನಡಿ
ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ರಾಜಕುಮಾರ, ಕತ್ತಲ ಕೋಣೆಯನ್ನು ಸೇರಿ, ತನ್ನ ದುಃಸ್ಥಿತಿಗೆ ಮರುಗುತ್ತ ಅನೇಕ ವರ್ಷಗಳನ್ನು ಸವೆಸಿದನು. ಹೀಗಿರಲೊಂದು ದಿನ ಕನ್ನಡಿಗಳನ್ನು ಮಾರುವವಳೊಬ್ಬಳು ಅರಮನೆಯೆದುರಿನ ಬೀದಿಯಲ್ಲಿ ಹಾಡುತ್ತ ಸಾಗಿದಳು. ಕುತೂಹಲದಿಂದ ಕಿಟಕಿಯನ್ನು ತೆರೆದ ರಾಜಕುಮಾರನಿಗೆ, ಆಕೆ ಹೊತ್ತ ಕನ್ನಡಿಗಳಲ್ಲಿ ತನ್ನ ಬೆನ್ನ ಹಿಂದೆ ಹುದುಗಿದ್ದ ರೆಕ್ಕೆಗಳ ಪ್ರತಿಬಿಂಬ ಕಾಣಿಸಿತು. 

ರಾಜಕುಮಾರ ಆನಂದದಿಂದ ಆಕೆಯನ್ನು ಅಪ್ಪಿದ, ತತ್‌ಕ್ಷಣವೇ ಶಾಪವನ್ನು ಕಳೆದುಕೊಂಡ ಕನ್ನಡಿ ಮಾರುವವಳು ಕಿನ್ನರಿಯಾದಳು.
ಇನ್ನೀಗ ಇಬ್ಬರೂ ಒಂದಾಗಿ ಬಾನಿಗೇರಿದರು, ಮೇಲೆ ಹಾರಿದರು!

ಅಡ್ಡದಾರಿ
ಸಾಧಕನನ್ನು ಕೇಳಿದೆ, “”ಗೆಲುವು ಸಾಧಿಸಲು ಅಡ್ಡ ದಾರಿ ಇದೆಯೆ?”
“”ಇದೆ”
“”ಯಾವುದು?”
“”ಸೋಲು!”

ಅರ್ಥ
ಶಿಷ್ಯ: ಬದುಕೆಂದರೇನು?
ಗುರು: ಅರ್ಥವಾಗದ್ದನ್ನು ಅರ್ಥವಾದಂತೆ ನಟಿಸುವುದು.
ಶಿಷ್ಯ: ಅರ್ಥವಾಯಿತು!

ಗುಡಿ
ದೇವರಿಲ್ಲ ಎಂದು ಆತ ನಾಲ್ಕು ಜನರೆದುರು ಸಾರಿ ಹೇಳಿದ.
ಮೊದಲನೆಯವ ಒಪ್ಪಿದನು.
ಎರಡನೆಯವ ನಕ್ಕನು.
ಮೂರನೆಯವ ನಿಂದಿಸಿದನು.
ನಾಲ್ಕನೆಯವ ಕೊಂದನು.
ಈಗ ಮೊದಲನೆಯವ ಸತ್ತವನಿಗೊಂದು ಗುಡಿ ಕಟ್ಟಿಸಿದನು!

ದಾರಿ
ದಟ್ಟವಾದ ಕಾಡಿನಲ್ಲಿ ಬುದ್ಧಿ ಮತ್ತು ಹೃದಯ ದಾರಿ ತಪ್ಪಿದವು.
ಬುದ್ಧಿ ತನಗೆ ತೋಚಿದ ದಿಕ್ಕಿನಲ್ಲಿ ಓಡಿತು.
ಹೃದಯ ಕಾಡಿನ ಸೌಂದರ್ಯಕ್ಕೆ ಮರುಳಾಗಿ ಕದಲದೆ ನಿಂತಿತು.
ಹೀಗಿರಲೊಂದು ದಿನ ಬುದ್ಧಿ ಮತ್ತು ಹೃದಯ ಒಂದನ್ನೊಂದು ಸಂಧಿಸಿದವು. ಈಗ ಕಾಡ ನಡುವಿನ ಕಾಲುದಾರಿ ಸ್ಪಷ್ಟವಾಗಿ ಗೋಚರಿಸಿತು.

ಸಾವು
ಚಿರಂಜೀವಿಯಾಗುವ ವರವನ್ನು ಪಡೆದ ಆತ ಅನೇಕ ವರ್ಷಗಳನ್ನು ಸುಖದಿಂದ ಸವೆಸಿದನು. ಆದರೆ, ವೇಗವಾಗಿ ಓಡುತ್ತಿದ್ದ ಕಾಲದೊಂದಿಗೆ ಓಡಲಾಗದೆ, ಒಂದೆಡೆ ತಟಸ್ಥನಾಗಿ ನಿಂತನು.
ನಿಂತ ಮರುಕ್ಷಣವೇ ಆತ ಸತ್ತಿರುವನೆಂದು ಘೋಷಿಸಿದ ಜಗತ್ತು, ಅವನ ಅಂತ್ಯಕ್ರಿಯೆಯನ್ನು ನೆರವೇರಿಸಿತು! 

ಸವಿರಾಜ ಆನಂದೂರು

ಟಾಪ್ ನ್ಯೂಸ್

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.