ಆಂಗ್ಲಭಾಷೆಗೆ ಅನುವಾದಗೊಂಡ ತುಳು ಕಾದಂಬರಿ


Team Udayavani, Feb 25, 2018, 8:15 AM IST

s-4.jpg

ತುಳುವಿನ ಮಹತ್ವದ ನಾಟಕಕಾರ, ಕಾದಂಬರಿಕಾರ ಡಾ. ಡಿ.ಕೆ.ಚೌಟರ ತುಳು ಕಾದಂಬರಿ ಮಿತ್ತಬೈಲ್‌ ಯಮುನಕ್ಕೆ  ಇದೀಗ ಮಿತ್ತಬೈಲ್‌ ಯಮುನಕ್ಕ  ಎ ಟೇಲ್‌ ಆಫ್ ಎ ಲ್ಯಾಂಡ್‌ಲಾರ್ಡ್ಸ್ ಹೌಸ್‌ಹೋಲ್ಡ್‌ ಎಂದು ಆಂಗ್ಲಭಾಷೆಗೆ ಅನುವಾದಗೊಂಡು ಬಿಡುಗಡೆಯಾಗಿದೆ. 

ತುಳು ಸಾಹಿತ್ಯ ಪುನರುಜ್ಜೀವನದ ಎರಡನೆಯ ಕಾಲಘಟ್ಟಕ್ಕೆ ಸೇರಿರುವ ಡಿ.ಕೆ. ಚೌಟ ಅವರು ತಮ್ಮ ಕರಿಯವಜ್ಜೆರೆನ ಕತೆಕುಲು, ಪಿಲಿಪತ್ತಿ ಗಡಸ್‌, ಪತ್ತ್ ಪಜ್ಜೆಲು, ಮೂಜಿಮೊಟ್ಟು ಮೂಜಿ ಲೋಕ ಮೊದಲಾದ ತುಳುಕೃತಿಗಳ ಮೂಲಕ ತುಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಮಿತ್ತಬೈಲ್‌ ಯಮುನಕ್ಕೆ  ಅವರ ಮಹತ್ವದ ತುಳು ಕಾದಂಬರಿ. ಎಸ್‌.ಯು. ಪಣಿಯಾಡಿ ಪ್ರಶಸ್ತಿ ವಿಜೇತ ಈ ಕಾದಂಬರಿಯು ಈಗಾಗಲೇ ಕನ್ನಡಕ್ಕೆ ಅನುವಾದಗೊಂಡಿದ್ದು, ತುಳು ಮಾತ್ರವಲ್ಲ , ಕನ್ನಡ ಓದುಗರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. 

ಆಧುನಿಕ ಕಾಲಘಟ್ಟದ 69 ಕವಿಗಳ 114 ತುಳು ಕವನಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಲ್ಯಾಡ್ಲ್ ಇನ್‌ ಎ ಗೋಲ್ಡನ್‌ ಬೌಲ್‌ ಸಂಪುಟವನ್ನು ಪ್ರಕಟಿಸಿರುವ ಬಿ. ಸುರೇಂದ್ರ ರಾವ್‌ ಮತ್ತು ಕೆ. ಚಿನ್ನಪ್ಪ ಗೌಡ ಈ ಕಾದಂಬರಿಯನ್ನು ಅತ್ಯಂತ ಸಮರ್ಪಕವಾಗಿ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಈ ಕೃತಿಯು ವಿಸ್ತಾರವಾದ ಪ್ರಸ್ತಾವನೆ ಮತ್ತು ಸಾಂಸ್ಕೃತಿಕ ಪದಕೋಶವನ್ನು ಹೊಂದಿದ್ದು, ಎ. ಕೆ. ರಾಮಾನುಜನ್‌ ಹೇಳುವ ಅನುವಾದದ ಚೌಕಟ್ಟು ಹೊಂದಿರಬೇಕಾದ ಲಕ್ಷಣಗಳಿಗೆ ಅನುಸಾರವಾಗಿ ಅನುವಾದಗೊಂದಿದೆ. ಕುಂಬಳೆ ಸೀಮೆಯ ಸುಮಾರು 150 ವರ್ಷಗಳ ಕಾಲಾವಧಿಯ ಕೃಷಿ, ಸಂಸ್ಕೃತಿ ಮತ್ತು ರಾಜಕೀಯ ಪಲ್ಲಟಗಳನ್ನು ಈ ಕಾದಂಬರಿ ಬಹಳ ಎಚ್ಚರದಿಂದ ದಾಖಲಿಸಿದೆ. ಚಾರಿತ್ರಿಕ ಕಾಲಘಟ್ಟದ ಗುತ್ತುಕೇಂದ್ರಿತ ಬಂಟ ಸಮಾಜದ ಕೌಟುಂಬಿಕ ಬಿಕ್ಕಟ್ಟುಗಳನ್ನು ಬಿಚ್ಚಿಡುತ್ತ ಒಳಗಿನ ಮತ್ತು ಹೊರಗಿನ ಸಮಾಜಶಾಸ್ತ್ರೀಯ ಶಕ್ತಿಗಳು ಗುತ್ತಿನ ನಿರ್ಮಾಣ, ಪತನ ಮತ್ತು ಮರುಕಟ್ಟುವಿಕೆಗೆ ಕಾರಣವಾಗುವ ಬಹುಮುಖೀ ನೆಲೆಗಳನ್ನು ಕಾದಂಬರಿಕಾರರು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಸ್ಥಳೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜೊತೆಗೆ ಗಾಂಧೀ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಗಾಂಧೀ ಚಿಂತನೆಗಳ  ಪ್ರಭಾವವನ್ನು ಈ ಕಾದಂಬರಿಯಲ್ಲಿ ಸೆರೆಹಿಡಿಯಲಾಗಿದೆ. ಕಾಸರಗೋಡು, ಮಂಜೇಶ್ವರ, ಕುಂಬಳೆ ಸೀಮೆಯು ಆಧುನಿಕತೆಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಈ ಭಾಗದ ಜನರ ಸಂಭ್ರಮ ಮತ್ತು ಸಂಕಟಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ವಿಮರ್ಶಕ ಸಿ. ಎನ್‌. ರಾಮಚಂದ್ರನ್‌ ಹೇಳುವಂತೆ- “ಗಂಡಸಿನ ಕ್ರೌರ್ಯ ಮತ್ತು ಹೆಣ್ಣಿನ ಶೋಷಣೆಯನ್ನು ಎದೆ ನಡುಗುವ ಹಾಗೆ ಈ ಕಾದಂಬರಿ ಪ್ರಸ್ತುತಪಡಿಸುತ್ತದೆ’. 

“ಈ ಕಾದಂಬರಿಗೆ ಪುರಾಣದ ಗುಣ ಮತ್ತು ವ್ಯಾಪ್ತಿ ಇದೆ. ಹೋರಾಟ, ಮಹತ್ವಾಕಾಂಕ್ಷೆ, ಅಸಹನೆ, ತಾಯ್ತನದ ಪ್ರೀತಿ- ಇವುಗಳು ಮುಖಾಮುಖೀಯಾಗುವ ಸಂಕೀರ್ಣ ಜಗತ್ತನ್ನು ಈ ಕಾದಂಬರಿಯಲ್ಲಿ ಕಾಣಬಹುದು’ ಎಂದು ಯು.ಆರ್‌. ಅನಂತಮೂರ್ತಿ ಹೇಳಿ¨ªಾರೆ. “ತುಳುವ ಜಗತ್ತಿನ ಜಾನಪದ ಮತ್ತು ಚಾರಿತ್ರಿಕ ಅನುಭವಗಳನ್ನು ಸೆರೆ ಹಿಡಿಯುವ ಈ ಕಾದಂಬರಿಯಲ್ಲಿ ಹಿಂಸೆ ಮತ್ತು ಅಹಿಂಸೆಗಳ ಪರಸ್ಪರ ಮುಖಾಮುಖೀಯಿದೆ. ಶಕ್ತಿ ರಾಜಕೀಯದ ಪರಿಣಾಮಗಳನ್ನು ಚಿಕಿತ್ಸಕವಾಗಿ ಮತ್ತು ವಿಮಶಾìತ್ಮಕವಾಗಿ ಈ ಕಾದಂಬರಿಯು ವಿವೇಚಿಸುತ್ತದೆ’ ಎಂದು ಬಿ. ಎ. ವಿವೇಕ ರೈ ಅವರು ಅಭಿಪ್ರಾಯಪಟ್ಟಿದ್ದಾರೆ. 

ಕಾದಂಬರಿಯ ಕಥನಶಕ್ತಿ ಮತ್ತು ಕಾದಂಬರಿಕಾರರ ರಾಜಕೀಯ ಸೂಕ್ಷ್ಮ ಸಂವೇದನೆಯನ್ನು ಗಮನಿಸಿ, ಇದರ ಅನುಭವವು ಜಗತ್ತಿನ ಇಂಗ್ಲಿಶ್‌ ಓದುಗರಿಗೆ ಆಗಲಿ ಎಂಬ ಆಶಯದಿಂದ ಹಲವು ಸವಾಲುಗಳ ನಡುವೆಯೂ ಈ ಕಾದಂಬರಿಯನ್ನು ಅನುವಾದ ಮಾಡಿರುವುದಾಗಿ ಅನುವಾದಕರು ಹೇಳಿಕೊಂಡಿದ್ದಾರೆ. 

ಮಿತ್ತಬೈಲ್‌ ಯಮುನಕ್ಕ
(ಎ ಟೇಲ್‌ ಆಪ್‌ ಲ್ಯಾಂಡ್‌ಲಾರ್ಡ್ಸ್‌ ಹೌಸ್‌ಹೋಲ್ಡ್‌)
ತುಳುಮೂಲ: ಡಿ. ಕೆ. ಜೌಟ
ಇಂಗ್ಲಿಶ್‌ ಅನುವಾದ : ಬಿ. ಸುರೇಂದ್ರ ರಾವ್‌, ಕೆ. ಚಿನ್ನಪ್ಪ ಗೌಡ
ಪ್ರ.: ಆಕೃತಿ ಆಶಯ ಪಬ್ಲಿಕೇಶನ್ಸ್‌ , ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-1    ಸಂಪರ್ಕ :  9448254976

ಸಿರಿ

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.