ದೇಶದಿಂದಲೇ ದೇಸಿ !


Team Udayavani, Jun 3, 2018, 6:00 AM IST

ss-11.jpg

ಈ ಊರಿನಲ್ಲಿ ಇದ್ದೂ ಇದ್ದೂ ಬೇಜಾರಾಗಿದೆ. ಎಲ್ಲಾದರೂ ಹೋಗೋಣ ಅಂತನ್ನಿಸುತ್ತದೆ’ ಎಂದು ಅವರಿವರು ಆಡುವ ಮಾತನ್ನು ಕೇಳುತ್ತಲೇ ಇರುತ್ತೇವೆ. ಹಾಗೆ, ಕೆಲವರು ಎದ್ದು ಹೊರಟೇಬಿಡುತ್ತಾರೆ. ಮತ್ತೆ ಒಂದೆರಡು ದಿನಗಳಲ್ಲಿಯೇ ಮರಳಿಬರುತ್ತಾರೆ ಮತ್ತು ಎಲ್ಲರ ಜೊತೆಗೂ ಹೇಳುತ್ತಿರುತ್ತಾರೆ : “ಈ ನಮ್ಮೂರೇ ಅಡ್ಡಿಯಿಲ್ಲ. ಆ ಊರಿಗಿಂತ’

ರಾಮಾಯಣ ಮಹಾಕಾವ್ಯದಲ್ಲಿ ಹೇಳಿರುವಂತೆ, ಲಂಕಾಪಟ್ಟಣ ಅದ್ಭುತವಾದ, ಸುಸಜ್ಜಿತವಾದ ಒಂದು ನಗರ. ಬಹುಶಃ ರಾವಣ ಎಂಥ ದೃಢಮನಸ್ಕನೆಂದರೆ ತನ್ನ ಕಠಿಣವಾದ ಪರಿಶ್ರಮದಿಂದ ಸುವರ್ಣ-ಲಂಕೆಯ ಪ್ರಜೆಗಳಿಗೆ ಅತುಲ್ಯ ಸುಖೀಜೀವನವನ್ನು ಕಲ್ಪಿಸಿದ್ದ. ಹನುಮಂತನು ಲಂಕಾಪಟ್ಟವನ್ನು ಪ್ರವೇಶಿಸುವಾಗ ಅಲ್ಲಿನ ವಾಸ್ತುವೈಭವದ ಕಟ್ಟಡಗಳನ್ನು , ಹಾದಿ-ಬೀದಿಗಳ ಸೊಗಸನ್ನು ನೋಡಿ ಬೆರಗುಗೊಂಡಿದ್ದ. ರಾವಣ ಸಂಹಾರದ ಬಳಿಕ, ಶ್ರೀರಾಮಚಂದ್ರನು ಲಂಕೆಯಲ್ಲಿಯೇ ಉಳಿಯುತ್ತೇನೆ ಎಂದು ಹೇಳುತ್ತಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ವಿಭೀಷಣನಿಗೆ ರಾಜ್ಯದಾಸೆ ಎಳ್ಳಿನಿತೂ ಇರಲಿಲ್ಲ. ಆದರೆ, ಶ್ರೀರಾಮಚಂದ್ರ ತಮ್ಮನಾದ ಲಕ್ಷ್ಮಣನನ್ನು ಕರೆದುಹೇಳುತ್ತಾನೆ, “”ಈ ಸುವರ್ಣ ಲಂಕೆ ಎಂಬುದು ನನ್ನ ತಾಯಿ ಮತ್ತು ತಾಯ್ನಾಡಿಗಿಂತ ದೊಡ್ಡದಲ್ಲ. ನಾವು ಹೊರಡೋಣ” 

ಕೆಲವೆಡೆ ಅಣೆಕಟ್ಟು ನಿರ್ಮಾಣ, ಕೈಗಾರಿಕ ಕ್ರಾಂತಿಗಳಿಗಾಗಿ ಜನರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುತ್ತಾರೆ. ಒಂದು ಊರಿನ ಜೊತೆಗೆ ಜನರ ಭಾವನೆ ಎಷ್ಟೊಂದು ತೀವ್ರವಾಗಿರುತ್ತದೆ ಎಂಬುದು ದ್ವೀಪದಂಥ ಸಿನೆಮಾ ನೋಡಿದವರಿಗೆ ಗೊತ್ತೇ ಇದೆ. ತಮ್ಮೂರಿನ ಕಲ್ಲು, ಮರ, ಹಕ್ಕಿ, ಹಾದಿ, ಬೀದಿ, ಮಂದಿರ ಎಲ್ಲವೂ ಅವರ ಜೀವನದ ಭಾಗಗಳೇ. ತವರೂರಿನ ಜೊತೆಗೆ ಎಂಥ ತಾದಾತ್ಮ ಸಾಧಿಸಿರುತ್ತಾರೆಂದರೆ, ಕೆಲವರು ಕಲ್ಲುಗಳನ್ನು ಮಾತನಾಡಿಸುತ್ತಾರೆ, ಹೂವುಗಳನ್ನು ನೋಡಿ ನಗುತ್ತಾರೆ, ಮರದ ಕೆಳಗೆ ಧ್ಯಾನಿಸುತ್ತಾರೆ, ಪ್ರಾಣಿಗಳಿಗೆ ಮನುಷ್ಯರ ಹೆಸರು ಇಡುತ್ತಾರೆ. ಕಾಲ-ದೇಶ ಎಂಬ ಯುಗ ಪದಗಳ ಜೊತೆಗಿರುವ ದೇಶ ಎಂಬುದು ಒಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಭಾಗ. ದೇಶ ಎಂಬುದನ್ನು ಸ್ಪೇಸ್‌, ಜಾಗ, ಊರು, ನಾಡು ಎಂಬಂಥ ಯಾವ ಅರ್ಥದಲ್ಲಿಯೂ ಬಳಸಬಹುದು. ದೇಶದಿಂದಲೇ ದೇಸಿ, ದೇಶದಿಂದಲೇ ದೇಸಿಗ !

ಇತ್ತೀಚೆಗೆ ಪತ್ರಿಕೆಗಳಲ್ಲಿ ಬರುವ ಜನಪ್ರಿಯ ಧಾಟಿಯ ಕತೆಗಳ ವಸ್ತುಗಳನ್ನು ಗಮನಿಸಿ. ಊರಿನಲ್ಲಿ ಇಳಿಹರೆಯದ ತಂದೆ, ತಾಯಿ ಇಬ್ಬರೇ ಇರುತ್ತಾರೆ. ಮಕ್ಕಳೆಲ್ಲ ವಿದೇಶದಲ್ಲಿರುತ್ತಾರೆ. ಕೆಲವೊಮ್ಮೆ ಇರುವ ಒಬ್ಬನೇ ಒಬ್ಬ ಮಗ ದೂರದೇಶದಲ್ಲಿ ಹೆಚ್ಚು ಪಗಾರದ ಉದ್ಯೋಗಕ್ಕೆ ಅಂಟಿಕೊಂಡು ವೃದ್ಧರಾದ ತಂದೆ-ತಾಯಿಗಳನ್ನು ಸರಿಯಾಗಿ ನೋಡುವುದಿಲ್ಲ. ಬಹುಶಃ ಜಾಗತೀಕರಣದ, ಐಟಿ ಕ್ರಾಂತಿಯ ಬಳಿಕ ಈ ಬೆಳವಣಿಗೆ ಅಧಿಕವಾಗಿದೆ ಅಂತನ್ನಿಸುತ್ತದೆ. 

ಇದು ಎಲ್ಲರೂ ಅಲ್ಲಲ್ಲಿ ಓದಿರಬಹುದಾದ ಕತೆಯೇ : ಒಬ್ಟಾಕೆ ವೃದ್ಧೆ ಒಂದು ಮೊಬೈಲ್‌ ಅಂಗಡಿಗೆ ಹೋಗಿ, “”ಈ ಮೊಬೈಲ್‌ ಹಾಳಾಗಿದೆಯ ನೋಡಪ್ಪ” ಎನ್ನುತ್ತಾಳೆ. ಅಂಗಡಿಯವನು ಅದನ್ನು ಪರಿಶೀಲಿಸಿ, “”ಸರಿಯಾಗಿದೆ” ಎನ್ನುತ್ತಾನೆ. ಆಕೆ ಕೇಳುತ್ತಾಳೆ, “”ಮತ್ತೇಕೆ ಒಂದು ತಿಂಗಳಿನಿಂದ ಇದಕ್ಕೆ ನನ್ನ ಮಗನ ಫೋನ್‌ ಬರುವುದಿಲ್ಲ?” 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.