ಏನೆಂದು ಹೆಸರಿಡಲಿ?


Team Udayavani, Jun 24, 2018, 6:00 AM IST

ss-7.jpg

ಹೆಸರಿನಲ್ಲೇನಿದೆ!? ಎಂಬುದು ಶೇಕ್ಸ್‌ಪಿಯರ್‌ನ ಪ್ರಸಿದ್ಧ ವಾಕ್ಕು. ನನಗೋ ಹೆಸರೆಂದರೆ ; ಬಾಲ್ಯದಿಂದ ಮುಗಿಯಲಾರದ ಬೆರಗು. ಹುಟ್ಟಿದ ಊರು, ಮನೆಯ ಹಿತ್ತಲಲ್ಲಿ ಅರಳುವ ತರಹವೇವಾರಿ ಹೂ, ತವರೂರ ದಾರಿಯ ಮುಂದಿನ ತಿಟ್ಟೆ, ದೊಗರಿನ ದಿಬ್ಬ, ಜುಳುಜುಳು ಹರಿಯುವ ನೀರ ತೊರೆ, ಮರ್ಮರಿಸುವ ಕಾಡಿನ ಮರ ಗಿಡ, ನಭೋಮಂಡಲದಲ್ಲಿ ಹೊಳೆವ ಗ್ರಹ ನಕ್ಷತ್ರ- ಯಾವುದಕ್ಕೆ ಹೆಸರಿಲ್ಲ ಹೇಳಿ? ಈ ಎಲ್ಲವಕ್ಕೆ ಹೆಸರಿಟ್ಟವರಾರು? ಆ ಇಟ್ಟ ಹೆಸರ ಶತಮಾನಗಳ ಕಾಲ ಹೊತ್ತು ತಂದವರಿಗೆ ಅದರ ಅರ್ಥ ಕಾಡಲಿಲ್ಲವೆ?

ನಾಮಪದಕ್ಕೆ ಅರ್ಥವಿರಲೇಬೇಕೆಂದಿಲ್ಲ ಎನ್ನುತ್ತದೆ ವ್ಯಾಕರಣ. ಆದರೆ ನನಗೋ ಪ್ರತಿಯೊಂದು ಹೆಸರಲ್ಲಿ ಒಂದೇ ಅಲ್ಲ, ಬಹು ಅರ್ಥಗಳೇ ಕಾಣುತ್ತವೆ. ಪ್ರತಿ ಊರ ಹೆಸರುಗಳಲ್ಲಿ ಯಾರೋ ಅಡಗಿ ಕುಳಿತಂತೆ ಭಾಸವಾಗುವುದೇಕೋ? ನನ್ನ ತಾತನ ಊರಾದ ದಾವಣಗೆರೆ ತಾಲ್ಲೂಕಿನ “ಕುಕ್ವಾಡ’ ಹೋಲುವ “ಕುಪ್ವಾರ’ ಕಾಶ್ಮೀರದಲ್ಲೂ ಇರುವುದು ಬೆರಗಲ್ಲವೆ? ನಾನು ಆಡಿ ಬೆಳೆದ “ಕಂಪ್ಲಿ’ಯಲ್ಲಿ ಕಂಪಿಲ ರಾಯ ಅಡಗಿ ಕುಳಿತು – ನಾನು ಆಡಿದ್ದು ಬಯಲಲ್ಲೋ? ಕಂಪಿಲ ರಾಯನ ತೊಡೆಯ ಮೇಲೊ? ಎಂಬ ಗೊಂದಲದ ಬೆರಗು. 

ಕಲ್ಲಿನ ರಾಶಿಯೇ ಬಳ್ಳಾರಿಯೇ? ಸ್ಕಂದ ಪುರವೇ ಸಂಡೂರೇ? ಹರಪುಣ್ಯ ಹಳ್ಳಿಯೇ ಹರಪನಹಳ್ಳಿಯೇ!? ನಾರಾಯಣ ದೇವರ ಕೆರೆಯೇ ತುಂಗಭದ್ರಾ ಡ್ಯಾಮಿನಲ್ಲಿ ಮುಳುಗಿ ಅಳಿದುಳಿದ ಪಳೆಯುಳಿಕೆಗಳ ತಂದು ಗುಡ್ಡೆ ಹಾಕಿದ ಜಾಗದಲ್ಲಿ ಕ್ರಿಶ್ಚಿಯನ್ನರ ಮೇರಿಯಮ್ಮನೂ ನೆಲೆನಿಂತು- ಮರಿಯಮ್ಮನ ಹಳ್ಳಿಯೆ?

ನನ್ನ ತಾಯಿಯ ತವರು ಗುಂಜಿಗನೂರಿನ ಆ ಗುಂಜಿಗ ಯಾರು? ಅರಸೀಕೆರೆಯ ಈ ಅರಸಿ ಯಾರು? ಸಿರುಗುಪ್ಪವೋ ಸಿರಿಗುಪ್ಪೆಯೋ? ಕಾಂಚನಗಢವೋ ಕೆಂಚನಗುಡ್ಡವೋ? ಶ್ರೀಧರಗಡ್ಡ ಎಂಬುದು ಶ್ರೀಧರ ಗಢವಲ್ಲವೇ- ಎಂದು ಗಡ್ಡ ಕೆರೆದುದಷ್ಟೇ- ಅರ್ಥ ಹೊಳೆಯಲಿಲ್ಲ ! ಬಾಲ್ಯದ ನನ್ನೆಲ್ಲ ಗೊಂದಲಗಳಿಗೆ ಒಂದು ಪರಿಹಾರ ಇದ್ದುದೆಂದರೆ ಅದು ನನ್ನಪ್ಪನ ಬಳಿ.

“”ಮಗೂ ನೋಡು, ಕನ್ನಡದ ನೆಲವನ್ನ ದೂರದ ಮಹಾರಾಷ್ಟ್ರದಿಂದ ಬಂದು ಆಳಿದವರು ಕಟ್ಟಿದ ಕೋಟೆ ಕಾಲಾನಂತರದಲ್ಲಿ ಮುರಿದಿದೆಯಷ್ಟೇ. ಮುನ್ನ ಶತಕೋಟಿ ರಾಯರಾಳಿದ್ದರೂ ಈ ನೆಲಕ್ಕೆ ಅದರದೇ ಸ್ವಂತಿಕೆ ಇದೆ, ಸೊಗಡಿದೆ. ಅದು ಶತಶತಮಾನಗಳಿಂದ ಕಟ್ಟಿ ತಂದ ಭಾಷೆ ಬದುಕಿನ ಬುತ್ತಿ ಎಂದೂ ಹಳಸುವುದಿಲ್ಲ. ಹಾಗೆಂದೇ ಅವರ ಕಾಂಚನಗಢವನ್ನು ನಮ್ಮ ನೆಲದ ಭಾಷೆ “ಕೆಂಚನ ಗುಡ್ಡ’ ಎಂದು ದಾಖಲಿಸಿಕೊಂಡಿದೆ!” ಅಪ್ಪನ ಈ ಮಾತುಗಳಲ್ಲಿ ಗತ ಇತಿಹಾಸವನ್ನು ಅರಗಿಸಿಕೊಂಡು ಅರಳಿದ ಹೊಸ ಹಗಲಿನ ನಿರುಮ್ಮಳತೆ ಇತ್ತು. ವರ್ತಮಾನ ಇರಬೇಕಾದುದೇ ಹಾಗಲ್ಲವೆ? ಭೂತವನ್ನು ಜೀರ್ಣಿಸಿಕೊಂಡು ಭವಿಷ್ಯವನ್ನು ಕನಸುವ  ಹಾಗೆ?

ಊರೆಂದರೆ ಊರಷ್ಟೇ ಅಲ್ಲ- ಅದು ನಡೆಯದೇ ನಿಂತಂತೆ ಕಾಣುವ- ಕಾಲನ ಗಂಟೆ ಮುಳ್ಳು ಎಂದೆನಿಸುವುದು ಬೆರಗಲ್ಲವೆ? ನೆಲೆ ನಿಂತ ಊರಷ್ಟೇ ಅಲ್ಲ, ಹರಿವ ನೀರೂ ಆ ಕಾಲನ ಚಲನೆಯ ಮಾಪಕವೇ. ಒರತೆಯ ಜಿನುಗು, ಓಯಸಿಸ್‌ನ ಬಸಿ, ಚಿಕ್ಕ ಹರಿವಿನ ತೊರೆ, ಹರಿದು ಅಗಲವಾಗುವ ಹಳ್ಳ, ನಡೆಯುತ್ತ ಸಾವಿರ ಪಾದ ಪಡೆಯುವ ನದಿ- ಎಲ್ಲದರಲ್ಲೂ ಇರುವುದು ಅದೇ ನೀರು. ಆಕಾರವಿಲ್ಲದ ಬಣ್ಣವಿಲ್ಲದ ನೀರಿಗೂ ಆಯಾ ನೆಲದ ನಂಟು ಎಂದೇ ಪ್ರತಿ ಹರಿವಿಗೂ ಬೇರೆ ಬೇರೆ ರುಚಿ ಘಾಟು. ನೀರನ್ನು “ಗಂಗಮ್ಮ’ ಎಂದು ಪೂಜಿಸುವ ಜನ ಅದು ಹರಿವ ನೆಲವ ಆಧರಿಸಿ ಹೆಸರಿಟ್ಟರೆ? ಬಣ್ಣ ರುಚಿಯ ಬೆಡಗಿಗೆ ಹೆಸರ ಬಣ್ಣಿಸಿದರೆ? ಒಂದು ಭಾಷಿಕ ನೆಲದಲ್ಲಿ ಜನಿಸಿ ಭಿನ್ನ ಭಾಷಿಕ ಜನಪದವನ್ನೂ ಸಲಹುವ ಆ ಸಲಿಲ ಮಾತೆಗೆ ಎಲ್ಲೆಡೆಯೂ ಒಂದೇ ಹೆಸರು ಕೊಟ್ಟವರಾರು? ತುಂಗೆ ಭದ್ರೆ ಕೃಷ್ಣೆ ಕಾವೇರಿ ಮಹದಾಯಿ ಭೀಮೆ ಯಮುನೆ, ಅಷ್ಟೇ ಅಲ್ಲದೇ ದೇಶ-ದೇಶಗಳನ್ನೂ ಬೆಸೆಯುವ ಗಂಗೆ ಸಿಂಧೂ ಸಟ್ಲೆàಜ್‌ಗಳಿಗೆ ಹರಿವಿನ  ಆ ತುದಿಯಿಂದ ಈ ತುದಿಯ ವರೆಗೆ ಒಂದೇ ಹೆಸರಿಟ್ಟ ಆ ನಾಮಕರಣಿಯ ಸಮನ್ವಯ ಮನಸ್ಸಿಗೆ ನಮಿಸುವುದಲ್ಲವೇ ನನ್ನೀ ಬೆರಗು!

ಊರು, ಜನಪದ, ಹರಿವ ನೀರಷ್ಟೇ ಅಲ್ಲ, ಜನರ ಹೆಸರುಗಳೂ ನನ್ನ ತಿಳಿವಿಗೆ ನಿಲುಕದೇ ಗೊಂದಲಗೊಂಡಿದ್ದು ಮತ್ತೂಂದು ವಿಸ್ಮಯಕರ ಘಟನೆ. ಸರ್ಕಾರದ ಆರೋಗ್ಯ ಯೋಜನೆಗಾಗಿ ಜನಗಣತಿ ಮಾಡಿಸುತ್ತಿದ್ದ ಅಪ್ಪನೊಂದಿಗೆ ನಾನೂ ಆ ಹೊತ್ತು ಒಂದು ದಮನಿತರ ಕೇರಿ ಹೊಕ್ಕಿದ್ದೆ. ಒಂದು ಮನೆಯಲ್ಲಿ ವಾಸಿಸುತ್ತಿದ್ದವರ ಹೆಸರುಗಳು ಹೀಗಿದ್ದವು- ರಾಘವೇಂದ್ರ ಸ್ವಾಮಿ, ಪಕ್ಕೀರಪ್ಪ, ಮೇರಿಯಮ್ಮ ! ನಾನು ಒಂದು ಕ್ಷಣ ಕಂಗಾಲಾಗಿದ್ದೆ. ಇದು ಹೇಗೆ ಸಾಧ್ಯ? ಸಾಂಸ್ಕೃತಿಕ ಭಿನ್ನ ಪಥಗಳೆಲ್ಲ ಇಲ್ಲಿ ಒಂದೇ ಧಾರೆಯಾಗಿ ಅವಿರ್ಭವಿಸಿವೆಯಲ್ಲ !

ಮತ್ತೆ ಗೊಂದಲಕ್ಕೆ ಪರಿಹಾರ ಅಪ್ಪನೇ ಕೊಡಬೇಕಾಯ್ತು. ನೋಡಯ್ನಾ, ಇಲ್ಲಿ ಒಂದೇ ಮನೆಯಲ್ಲಿ ಸನಾತನತೆ, ಮಧ್ಯಪ್ರಾಚ್ಯ ಹಾಗೂ ಐರೋಪ್ಯ ಸೇರಿಕೊಂಡಿದೆ ಎಂದಲ್ಲವೇ ನಿನ್ನ ಗೊಂದಲ. ಆದರೆ, ಈ ಮನೆಯವರು ಈ ನೆಲದವರೇ. ಅವರಿಗೆ ಊರ ಮನೆಗಳೊಳಗೆ ಪ್ರವೇಶಾವಕಾಶ ಇಲ್ಲದ್ದರಿಂದ ಅಕ್ಕಪಕ್ಕದ ಮನೆ ಹೊಕ್ಕಿದ್ದಾರಷ್ಟೇ. ತಮ್ಮ ದೇವರು ಕಪ್ಪು ಎಂದು ಒಪ್ಪಿ ಆತನಿಗೆ ನೀಲಮೇಘಶ್ಯಾಮ ಎಂದು ಹೆಸರಿಸಿದ ಜನ ಇವರ ಕಪ್ಪು ಮಗುವಿಗೆ ಕರಿಯಪ್ಪ ಎಂದು ಕರೆದಿದ್ದರಲ್ಲ , ಆ  ಯಜಮಾನಿಕೆಗೆ ಈ ಸಮುದಾಯ ತೋರಿದ ಸಾಂಸ್ಕೃತಿಕ ಪ್ರತಿರೋಧ ಇದು! ಆಗ ನನಗರ್ಥವಾಗಿದ್ದು- ಹೆಸರೆಂದರೆ ಹೆಸರಷ್ಟೇ ಅಲ್ಲ ಎಂದು.

ಹೆಸರುಗಳೇ ಬಿಸಿಯೇರಿಸಿ ಬೆಕ್ಕಸ ಬೆರಗಾಗಿಸುತ್ತಿದ್ದ ಆ ದಿನಗಳಲ್ಲೇ  ಹೆಸರರಿಯದ ಏನೋ ಹುಕಿ ಹೊಕ್ಕಿದ್ದು ನನ್ನೊಳಗೆ. ಛಂದ ಪದ್ಯ ಬರೆಯುತ್ತಿದ್ದ ಆಕೆ ಪರಿಚಯವಾಗಿದ್ದು, ಆವರೆಗೆ ಅರ್ಥವಾಗಿಲ್ಲದ ಹಳೆಯ ಪ್ರತಿಮೆ ಹೊಸ ರೂಪಕಗಳು ಅರ್ಥವಾಗದೆಯೂ ಆಪ್ತವಾಗಿದ್ದು ಆಗ. ನಿಬಿಡ ಕಾಡಿನಂತಹ ದಟ್ಟ  ಕತೆ, ನಿಗೂಢ ಕವಿತೆ, ಲಾಲಿತ್ಯದ ಪ್ರಬಂಧಗಳೆಲ್ಲ ಹೃನ್ಮನ ಸೆಳೆದ ಆ ಹೊತ್ತು- ನಾನು ಅವಳಿಗಾಗಿ ಪದ್ಯ ಬರೆಯುತ್ತಿದ್ದೆ. 

ಅವಳ್ಳೋ ತನ್ನ ಇನಿಯನಿಗಾಗಿ ಬರೆದ ಕವಿತೆಯ ಸಾಲು ತೋರಿದ್ದಳು!
ನೀನೆಂಬ ಸಂಜೆ ಮಳೆಗಿನ್ಯಾವ ಹೆಸರಿಡಲಿ?
ಓದುತ್ತಿದ್ದಂತೇ ಧಮನಿಗಳಲ್ಲಿ ಒತ್ತಡ ಹೆಚ್ಚಿ ನನ್ನಲ್ಲಿ ಹೊಮ್ಮಿದ ಆ ಹಲವು ಭಾವಗಳಿಗೆ- ನಾನಾದರೂ ಏನೆಂದು ಹೆಸರಿಡಲಿ?

ಆನಂದ ಋಗ್ವೇದಿ

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.