ಒಬ್ಬ ಅಜ್ಜ ಮತ್ತವನ ಮೊಮ್ಮಗ 


Team Udayavani, Aug 19, 2018, 6:00 AM IST

z-1.jpg

ಸಂಜೆಯ ತಂಪಾದ ಗಾಳಿಯಲ್ಲಿ ವಾಯುವಿಹಾರಕ್ಕಾಗಿ ತೆರಳುವವರು ಬಹುಮಂದಿ. ಅವರಲ್ಲಿ ನಾನೂ ಒಬ್ಬ. ಸಾಯಂಕಾಲದ ಸಮಯದಲ್ಲಿ ತಂಪಾದ ವಾತಾವರಣದಲ್ಲಿ ಹಸಿರು ಗಿಡಗಳ ನಡುವೆ ಸ್ವತ್ಛಂದ ಗಾಳಿಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಸಾಗುತ್ತಿದ್ದರೆ ಆ ದಿನದ ದಣಿಸು ನೀಗಿ ತನುಮನಕ್ಕೆ ಏನೋ ಒಂದು ರೀತಿಯ ನಿರಾಳ ಭಾವ. ಈ ಒಂದು ಅಥವಾ ಎರಡು ಗಂಟೆಗಳ ಅವಧಿಯಲ್ಲಿ ದೊರೆಯುವ ವಿಶ್ರಾಂತಿ ಮನಸ್ಸಿಗೆ ಆಹ್ಲಾದಕರ. 

ಪ್ರತಿದಿನದಂತೆ ಆ ದಿನವೂ ವಾಯುವಿಹಾರಕ್ಕೆ ತೆರಳಿದೆ. ಹಬ್ಬದ ಹಿಂದಿನ ದಿನವಾದ್ದರಿಂದ ಹಲವು ಸ್ನೇಹಿತರು ವಾಯುವಿಹಾರಕ್ಕೆ ಚಕ್ಕರ್‌ ಹಾಕಿದ್ದರು. ಆ ದಿನ ಒಬ್ಬನೇ ಸಾಗಿದೆ. ಏಕಾಂಗಿಯಾದರೂ ಅರೆಬರೆ ಹಾಡುಗಳನ್ನು ಹಾಡುತ್ತ ಮುಂದೆ ಸಾಗಿದೆ. ಸ್ನೇಹಿತರಿಲ್ಲ ಎನ್ನುವ ಪುಟ್ಟ ಕೊರಗಿದ್ದರೂ ಅದು ಅಂತಹ ಕೊರತೆ ಎನ್ನಿಸಲಿಲ್ಲ.

ದಾರಿಯಲ್ಲಿ ನಡೆಯುವಾಗ ನನ್ನ ಗಮನ ಸೆಳೆದಿದ್ದು ಒಂದು ಸುಂದರವಾದ ಜೋಡಿ. ಅದು ಅಂತಿಂಥ ಜೋಡಿಯಲ್ಲ . ಆ ವಾಯುವಿಹಾರಕ್ಕೆ ಬಂದವರಲ್ಲಿಯೇ ಅಪರೂಪದ ಜೋಡಿ. ಎಪ್ಪತ್ತು ಸಂವಸ್ಸರಗಳನ್ನು ಕಂಡ ಅಜ್ಜನೊಂದಿಗೆ ಆರು ವರ್ಷದ ಪುಟ್ಟ ಬಾಲಕ ತನ್ನ ತಲೆಯಲ್ಲಿ ಬರುವ ಎಲ್ಲಾ ತರಲೆ ಪ್ರಶ್ನೆಗಳನ್ನು ಕೇಳುತ್ತಾ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಆ ಪುಟ್ಟ ಬಾಲಕನ ಪ್ರಶ್ನೆಗಳು ಅಜ್ಜನಿಗೆ ಉತ್ತರಿಸಲು ಸಾಧ್ಯವಾಗದಷ್ಟು ಸೂಕ್ಷ್ಮ ವಾಗಿರುತ್ತಿದ್ದವು. ಆದರೆ, ಅಜ್ಜನ ತಾಳ್ಮೆ ಯುತವಾದ ಉತ್ತರ ಪುಟ್ಟ ಬಾಲಕನನ್ನು ತೃಪ್ತಿಗೊಳಿಸುತ್ತಿತ್ತು.

ಆಕಾಶ ಮೇಲೆ ಯಾಕಿದೆ? ಗಿಡಮರಗಳು ಹೇಗೆ ಊಟಮಾಡುತ್ತವೆ? ಆಕಾಶದಿಂದ ನೀರನ್ನು ಯಾರು ಸುರೀತಾರೆ? ದೇವರು ಎಲ್ಲಿ¨ªಾನೆ? ಹಕ್ಕಿಗಳು ಹಾರುವಾಗ ಯಾಕೆ ಕೆಳಗೆ ಬೀಳುವುದಿಲ್ಲ? ನಮಗೆ ಹಕ್ಕಿಯಂತೆ ಯಾಕೆ ಹಾರಲು ಸಾಧ್ಯವಾಗುವುದಿಲ್ಲ… ಹೀಗೆ ಹಲವಾರು ಪ್ರಶ್ನೆಗಳು ಪುಟ್ಟ ಬಾಲಕನಿಂದ ಬಿರುಸು ಬಾಣಗಳಂತೆ ಬರುತ್ತಿದ್ದರೆ ಅಜ್ಜನ ಉತ್ತರಗಳು ಅಷ್ಟೇ ತಾಳ್ಮೆಯಿಂದ ಕೂಡಿರುತ್ತಿದ್ದವು. ಕಳ್ಳಕಿವಿಯಿಂದ ಕೇಳುತ್ತಿದ್ದ ನನಗೆ ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಭಾಷಣೆ ಕೆಲವೊಮ್ಮೆ ನಗು ತರಿಸುತ್ತಿತ್ತು.  ಮಗುವಿನ ಕೆಲವೊಂದು ಪ್ರಶ್ನೆಗಳು ಅಸಮಂಜಸವೆನಿಸುತ್ತಿದ್ದವು. ಅದು ದೊಡ್ಡವರಾದ ನಮಗೆ ಮಾತ್ರ. ಅವರ ಸ್ಥಾನದಲ್ಲಿ ನಿಂತು ನೋಡಿದರೆ ಅವರ ಜಿಜ್ಞಾಸೆಗೆ ಅರ್ಥವಿದ್ದೇ ಇದೆ. ಅದು ಆ ಅಜ್ಜನಿಗೂ ತಿಳಿದಿತ್ತು. ಹಾಗಾಗಿಯೇ ಆತ ತಾಳ್ಮೆಯಿಂದ ಉತ್ತರ ಕೊಡುತ್ತಿದ್ದರು.

ವಾಯುವಿಹಾರ ಮುಗಿಸಿ ಮನೆಗೆ ಮರಳಿದ ಮೇಲೂ ನನಗೆ ಆ ಅಜ್ಜ ಮತ್ತು ಮೊಮ್ಮಗನ ಆ ಸಂಭಾಷಣೆ ತುಂಬಾನೇ ಕಾಡತೊಡಗಿತು. ಹೌದು, ಮಗು ತಾನು ಬೆಳೆಯುತ್ತಲೇ  ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ.  ಆದರೆ, ಹಿರಿಯರಾದ ನಾವು ಮಕ್ಕಳ ಈ ಗುಣವನ್ನು ಹಲವಾರು ಬಾರಿ ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ಪ್ರಶ್ನೆ ಕೇಳಿದರೆ ಬೈದು ಸುಮ್ಮನಾಗಿಸುತ್ತೇವೆ ಅಥವಾ ಹೀಯಾಳಿಸುವಂಥಹ ಮಾತುಗಳನ್ನಾಡಿ ಅವರ ಕುತೂಹಲಕ್ಕೆ ತಣ್ಣೀರೆರಚಿಬಿಡುತ್ತೇವೆ. 

ಹಾಗೆ ನೋಡಿದರೆ ತಾರ್ಕಿಕವಾಗಿ ಮಕ್ಕಳ ಪ್ರಶ್ನೆ ಅಸಂಗತವೇನೂ ಅಲ್ಲ. ಬುದ್ಧಿವಂತರೆನಿಸಿಕೊಂಡ ನಾವು ಮಾತ್ರ ಕೇಳಿಕೊಳ್ಳುವುದಿಲ್ಲ. ಉದಾಹರಣೆಗೆ ಹಕ್ಕಿ ಯಾಕೆ ಆಕಾಶದಲ್ಲಿ ಹಾರುತ್ತದೆ ಎಂಬ ಬಗ್ಗೆ ನಮಗೂ ಪ್ರಶ್ನೆಯಿಲ್ಲವೆ? ಎಷ್ಟು ಮಂದಿಗೆ ಅದರ ಉತ್ತರ ತಿಳಿದಿದೆ ! ವಿಜ್ಞಾನದ ಪಾಠವನ್ನು ನೆನಪಿಟ್ಟುಕೊಂಡ ಕೆಲವೇ ಮಂದಿಗೆ ತಿಳಿದಿರಬಹುದು. ತಿಳಿಯದವರೇ ಅಧಿಕ. ಆದರೂ ಪ್ರಶ್ನೆ ಕೇಳುವುದಿಲ್ಲ. ಪ್ರಶ್ನೆ ಕೇಳುವುದು ನಮ್ಮ ಘನತೆಗೆ ಕುಂದು ಎಂದು ಭಾವಿಸುತ್ತೇವೆ.

ನಾವು ಮಕ್ಕಳಾಗದ ಹೊರತು ದೊಡ್ಡವರೆನಿಸುವುದಿಲ್ಲ !

ವೆಂಕಟೇಶ ಚಾಗಿ

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.