ಕವಿ ಚಿರಂಜೀವಿ


Team Udayavani, Aug 19, 2018, 6:00 AM IST

c-48.jpg

ಮೃತ್ಯುವಿನೊಂದಿಗೆ ಯುದ್ಧ!
ಅದೆಂಥ ಯುದ್ಧ! ಆದರೂ ನಾನು ಸಿದ್ಧ!
ಆಕೆಯನ್ನು ಎದುರುಗೊಳ್ಳಲು ನಾನು ಯೋಜನೆ ಹಾಕಿರಲಿಲ್ಲ, 
ಆ ತಿರುವಿನಲ್ಲಿ ನಾವಿಬ್ಬರೂ ಮುಖಾಮುಖೀಯಾದೇವೆಂದು ತಿಳಿದಿರಲಿಲ್ಲ. 
ಅಲ್ಲಿದ್ದಳಾಕೆ, ಮೃತ್ಯುದೇವತೆ! 
ನನ್ನ ದಾರಿಗಡ್ಡವಾಗಿ, ನನ್ನ ಬದುಕಿಗಿಂತ ಎತ್ತರವಾಗಿ.
ಹೀಗೆ ಅಕಾಸ್ಮಾತ್ತಾಗಿ ಎದುರುಗೊಂಡು ಕಾಳಗಕ್ಕೆ ಕರೆಯುವುದು ಸರಿಯೇ? 
ಅದೂ ಎದುರಾಳಿ ನಿಶ್ಶಸ್ತ್ರನಾಗಿದ್ದಾಗ, ಯುದ್ಧದ ಯೋಚನೆಯೇ ಇಲ್ಲದಿರುವಾಗ? 
ಹೀಗೆ ಧುತ್ತನೆ ಎದುರಾಗಿ, ಸಮಯ ಕೊಡದೆ ಕೆಳಬೀಳಿಸುವುದು ಜಾಣತನವಲ್ಲ. 
ಧೈರ್ಯವಿದ್ದರೆ ಬರಬೇಕು, ಮೊದಲೇ ಸೂಚನೆ ಕೊಟ್ಟು. 
ಪರೀಕ್ಷಿಸಿ, ಎದುರೆದುರಾಗಿ ನಿಂತು ದಿಟ್ಟಿಸಿ. 
ಬದುಕನ್ನು ಪೂರ್ತಿ ಬಾಳಿರುವ ನನಗೇತರ ಚಿಂತೆ, ಭಯ, ವಿಹ್ವಲತೆ?
ಎದುರಿಸುತ್ತೇನೆ ಎದುರಾಳಿಯಂತೆಯೇ!

– ಇದು 1988ರಲ್ಲಿ, ಅಂದರೆ ಇಂದಿಗೆ 30 ವರ್ಷಗಳ ಹಿಂದೆ ಅಟಲ್‌ ಬಿಹಾರಿ ವಾಜಪೇಯಿಯವರು ತೀವ್ರ ಅಸ್ವಸ್ಥರಾಗಿ ಅಮೆರಿಕದ ನ್ಯೂಯಾರ್ಕ್‌ ಆಸ್ಪತ್ರೆಯಲ್ಲಿ ರೋಗಿಯಾಗಿ ಮಲಗಿದ್ದಾಗ ಬರೆದಿದ್ದ ಕವಿತೆ !
.
ಅಟಲ್‌ ಬಿಹಾರಿ ವಾಜಪೇಯಿ, ಕೇವಲ ರಾಜಕಾರಣಿ, ಮುತ್ಸದ್ದಿ, ರಾಜತಾಂತ್ರಿಕ ಮಾತ್ರವೇ ಆಗಿರಲಿಲ್ಲ. ಅವರು ಒಬ್ಬ ಸಹೃದಯ ಕವಿಯೂ ಆಗಿದ್ದರು. ಜನಪ್ರಿಯತೆಯ ತುತ್ತತುದಿಯಲ್ಲಿ ಮಿಂದೇಳುತ್ತಿರುವಾಗಲೂ ಅಟಲ್‌ಜಿ ತನ್ನ ದಿನನಿತ್ಯದ ಬ್ಯುಸಿ ಕೆಲಸಕಾರ್ಯಗಳ ನಡುವೆ ಒಂದಷ್ಟು ಹೊತ್ತು ಮಾಡಿಕೊಂಡು ಕವಿತೆ ಬರೆಯುತ್ತಿದ್ದರು. 
ಮೇರೇ ಪ್ರಭು!
ಮುಝೆ ಇತ್ನಿ ಊಂಚಾಯಿ ಕಭಿ ಮತ್‌ ದೇನಾ, 
ಗೈರೋನ್‌ ಕೋ ಗಲೇ ನ ಲಗಾ ಸಕೂಂ
ಇತ್ನಿà ರುಖಾನಿ ಕಭೀ ಮತ್‌ ದೇನಾ!
(ಪ್ರಭು, ಇಷ್ಟೊಂದು ಎತ್ತರಕೆ ಏರಿಸಬೇಡ ನನ್ನ!
ಅಪರಿಚಿತರ ಅಪ್ಪಿಕೊಳ್ಳಲು ಆಗದಷ್ಟು
ಅಹಂಕಾರದ ಎತ್ತರಕ್ಕೆ ಏರಿಸಬೇಡ ನನ್ನ!) – ಎಂದು ಅವರು ಜನಪ್ರಿಯತೆಯ ಮೇಲೆಯೂ ಕವಿತೆ ಬರೆದದ್ದುಂಟು! ಅಟಲ್‌ಜೀ ಅವರದ್ದು ಏಳುಬೀಳಿನ ರಾಜಕೀಯ ಯಾತ್ರೆ. 11 ಸಲ ಸಂಸದರಾಗಿ, ಎರಡು ಸಲ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅಟಲ್‌ಜಿ 1984ರಲ್ಲಿ ತನ್ನ ಹುಟ್ಟೂರಾದ ಗ್ವಾಲಿಯರ್‌ನಲ್ಲಿ ಚುನಾವಣೆ ಸೋತರು. ಆಗ ಅವರು ಬರೆದದ್ದು: ಯಹ್‌ ಹಾರ್‌ ಏಕ್‌ ವಿರಾಮ್‌ ಹೈ, ಜೀವನ್‌ ಮಹಾಸಂಗ್ರಾಮ್‌ ಹೈ! ಅಂದರೆ, ಸೋಲು ಕೂಡ ಜೀವನದ ನಡುವೆ ಸಿಗುವ ಒಂದು ಪುಟ್ಟ ವಿರಾಮ; ಜೀವನವೆಂಬ ಮಹಾಸಂಗ್ರಾಮದಲ್ಲಿ ಇಂಥ ಪುಟ್ಟ ಪುಟ್ಟ ವಿರಾಮಗಳು ಸಿಗುವುದು ಒಳ್ಳೆಯದು! ಬೇಟೆಯಾಡುವ ಹುಲಿ ಚಂಗನೆ ನೆಗೆಯುವುದಕ್ಕೆ ಮೊದಲು ಒಂದೆರಡು ಹೆಜ್ಜೆಗಳನ್ನು ಹಿಂದಿಡುವಂತೆ, ಸೋಲಿನ ಕ್ಷಣಗಳನ್ನು ಅಟಲ್‌ಜಿ ಆತ್ಮವಿಮರ್ಶೆಗೆ, ಕವಿತೆ ಬರೆಯಲು ಬಳಸುತ್ತಿದ್ದರು. ಎಮರ್ಜೆನ್ಸಿಯ ಸಮಯದಲ್ಲಿ 19 ತಿಂಗಳ ಕಾಲ ಅವರು ಜೈಲಿನಲ್ಲಿದ್ದಾಗ ಕೂಡ ಸಮಯ ಕಳೆಯಲು ಅವರು ಆಯ್ದುಕೊಂಡದ್ದು ಕವಿತೆಗಳನ್ನೇ. ಆ ಸಮಯದಲ್ಲೇ ಅವರ ಮೇರೀ ಇಕ್ಯಾವನ್‌ ಕವಿತಾಯೇ (ನನ್ನ ಐವತ್ತೂಂದು ಕವಿತೆಗಳು) ಪುಸ್ತಕದ ಬಹಳಷ್ಟು ಕವಿತೆಗಳು ರೂಪುಪಡೆದವು.

ಕವಿ ಎಂದರೆ ಹೆಚ್ಚಾಗಿ ಪ್ರಕೃತಿ, ಸೂರ್ಯೋದಯ ಸೂರ್ಯಾಸ್ತ, ಪ್ರೇಮ-ಪ್ರಣಯ ಇತ್ಯಾದಿಗಳ ಮೇಲೆ ಕವಿತೆ ಬರೆಯುವುದೇ ಹೆಚ್ಚು ಅಲ್ಲವೆ? ಆದರೆ, ವಾಜಪೇಯಿಯವರು ಕವಿತೆಯನ್ನು ತಮ್ಮ ರಾಷ್ಟ್ರಪ್ರೇಮ, ರಾಜಕೀಯ ಆಸಕ್ತಿಗಳ ಪ್ರಚಾರಕ್ಕಾಗಿಯೂ ಬಳಸಿಕೊಂಡರು. ಬಹುಶಃ ಜೀವನದ ಪ್ರತಿ ಹೆಜ್ಜೆಯಲ್ಲೂ ಅಟಲ್‌ಜಿಯವರಿಗೆ ಎರಡು ರಸ್ತೆಗಳ ದ್ವಂದ್ವ ಎದುರಾಗುತ್ತಿತ್ತು. ಪತ್ರಿಕೋದ್ಯಮವೋ ರಾಜಕೀಯವೋ? ಚುನಾವಣೆಯೋ ಸಮಾಜಸೇವೆಯೋ? ಕವಿತ್ವವೋ ಸಮಾಜಮುಖೀ ಜೀವನವೋ? ಈ ದ್ವಂದ್ವವನ್ನೇ ಅವರು ರಾಬರ್ಟ್‌ ಫ್ರಾಸ್ಟ್‌ನ ರೋಡ್‌ ನಾಟ್‌ ಟೇಕನ್‌ ಪದ್ಯದ ಧಾಟಿಯಲ್ಲಿ ಹೀಗೆ ಕಾಣಿಸುತ್ತಾರೆ:
ದೋ ದಿನ್‌ ಮಿಲೇ ಉಧಾರ್‌ ಮೇ
ಘಾತೊನ್‌ ಕೆ ವ್ಯಾಪಾರ್‌ ಮೇ
ಕ್ಷಣ್‌ ಕ್ಷಣ್‌ ಕಾ ಹಿಸಾಬ್‌ ಲೂn
ಯಾ ನಿಧಿ ಶೇಷ್‌ ಲಟಾಊ ಮೈ?
ರಾಹ್‌ ಕೌನ್‌ ಸಿ ಜಾವೂನ್‌ ಮೈ?
(ಸಿಕ್ಕಿತೆರಡು ದಿನಗಳು ಬಹುಕಷ್ಟದಲ್ಲಿ,
ಏನು ಮಾಡಲಿ ಅವನು, ಅಳೆಯಲೇ ಒಂದೊಂದು ಕ್ಷಣವನ್ನೂ ಮುತ್ತಿನಂತೆ,
ಅಥವಾ ಕಳೆದುಬಿಡಲೇ ಯಾವ ಲೆಕ್ಕವಿಡದೆ ಉದಾಸನಂತೆ?
ಯಾವ ದಾರಿಯನ್ನು ಆರಿಸಿಕೊಳ್ಳಲಿ, ಗೊಂದಲದಲ್ಲಿರುವೆ!)

ಈ ಸಂದಿಗ್ಧಕ್ಕೆ ಉತ್ತರವೆಂಬಂತೆ ಅಟಲ್‌ಜಿಯವರ ಕವಿತೆಯ ಎರಡು ಸಾಲುಗಳು ಬರುತ್ತವೆ:
ಕೊ ನಾ ಮೈ ಕ್ಷಣ್‌ ಕ್ಷಣ ಕೋ ಜೀಯೂn?
ಕಣ ಕಣ ಮೇ ಬಿಖರೇ ಸೌಂದರ್ಯ ಕೋ ಪೀಯೂn?
-ಅಂದರೆ ಒಂದೊಂದು ಕ್ಷಣವನ್ನೂ ಅಳೆದು ತೂಗಿ ಜಿಪುಣನಂತೆ ದಿನಗಳನ್ನು ಕಳೆಯುವುದರ ಬದಲಾಗಿ ಒಂದೊಂದು ಕ್ಷಣವನ್ನೂ ಅದರ ಸಂಪೂರ್ಣ ಸುಖವನ್ನು ಅನುಭವಿಸುತ್ತ ಕಳೆದುಬಿಡಬೇಕು ಎಂಬ ತೀರ್ಮಾನಕ್ಕೆ ಕವಿ ಬರುತ್ತಾರೆ. ಪ್ರತಿಕ್ಷಣದಲ್ಲೂ ಅನುಭವ ಇದೆ, ಸುಖ ಇದೆ, ಸೌಂದರ್ಯ ಇದೆ. ಹಾಗಾಗಿ ಪ್ರತಿ ಕ್ಷಣವನ್ನೂ ಅತ್ಯಂತ ಅರ್ಥಪೂರ್ಣವಾಗಿ ಕಳೆದುಬಿಡಬೇಕು; ಜೀವನದ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಬೇಕು- ಎಂಬ ಆಶಾವಾದ ಕವಿ ಅಟಲ್‌ಜೀಯವರದ್ದಾಗುತ್ತದೆ. 
ತನ್ನ ಕವಿಜೀವನದ ಉತ್ತರಾರ್ಧವನ್ನು ಅಟಲ್‌ಜೀ ದೇಶಪ್ರೇಮವನ್ನು ಉಕ್ಕಿಸುವಂಥ ಕವಿತೆಗಳನ್ನು ಬರೆಯುವುದಕ್ಕೆ ಮೀಸಲಿಟ್ಟರು. ಪಾಕಿಸ್ತಾನದ ಒಂದೊಂದು ಕೆಣಕುವಿಕೆಗೂ ಅಟಲ್‌ಜೀಯವರ ಪೆನ್ನು ಕವಿತೆಯ ಮೂಲಕ ಉತ್ತರ ಕೊಟ್ಟಿತು. 
ಸಹಿಸುವಷ್ಟು ಸಹಿಸಿದ್ದೇವೆ, ಇನ್ನೇನಿದ್ದರೂ ನಮ್ಮ ನಡುವೆ ಕಾಳಗವೇ!
ಬಾಗುವಷ್ಟು ಬಗ್ಗಿದ್ದೇವೆ. ಈಗ ಮತ್ತೆ ಬಾಗಲಾಗದು, ಮುರಿದೇವೇನೋ, ಆದರೆ ತಲೆಬಾಗೆವು
ಎಂಬಂಥ ಕ್ರಾಂತಿಕಾರಿ ಕವಿತೆಗಳನ್ನು ಅಟಲ್‌ಜೀ ಹೆಚ್ಚು ಹೆಚ್ಚು ಬರೆದರು. 
ಅವರ ಒಂದು ಕವಿತೆಯಂತೂ,
ವಿಕೋಪಗಳು ಎದುರಾಗಲಿ!
ಪ್ರಳಯವೇ ನಡೆದುಹೋಗಲಿ!
ನಮ್ಮ ಪಾದಗಳ ಕೆಳಗೆ ಕೆಂಡದ ಹಾಸಿಗೆಯೇ ಹಾಸಲಿ!
ಅಥವಾ ನಮ್ಮ ಮೇಲೆ ಬೆಂಕಿಯ ಮಳೆಗರೆಯಲಿ!
ಅಂಥ ಬೆಂಕಿಯನ್ನೂ ಕೈಯಲ್ಲಿ ಹಿಡಿದು,
ನಗುತ್ತ, ಸುಡುತ್ತ ನಡೆಯೋಣ ನಾವೆಲ್ಲರೂ ಒಟ್ಟಿಗೆ!
ಆದರೆ ನಡಿಗೆ ನಿಲ್ಲದಿರಲಿ, ಹೆಜ್ಜೆ ತಪ್ಪದಿರಲಿ!
– ಎನ್ನುತ್ತ ಕ್ರಾಂತಿಕಾರಿಗಳ ಘೋಷಗೀತೆಯೇ ಆಗುತ್ತದೆ.
ಅಟಲ್‌ಜೀಯವರ ರಾಷ್ಟ್ರಪ್ರೇಮದ ಉಜ್ವಲತೆಯನ್ನು ಬಿಂಬಿಸುವ ಒಂದು ಕವಿತೆಯಲ್ಲಿ ಬರುವ ಒಂದು ಸಾಲು: ನಮ್ಮ ಜೀವನ ತೀರಿದ ಮೇಲೆ ಸಂಸ್ಕಾರ ಮಾಡಿ, ಮೃತದೇಹದ ಅಸ್ಥಿಯನ್ನು ಗಂಗೆಯಲ್ಲಿ ಚೆಲ್ಲಿದರೂ, ಆ ಅಸ್ಥಿಯನ್ನು ಕಿವಿಗಿಟ್ಟರೆ ನಿಮಗೆ ಅದರಲ್ಲಿ ಕೇಳಿಸಬಹುದು: ಭಾರತ್‌ ಮಾತಾ ಕೀ ಜೈ! ಭಾರತ್‌ ಮಾತಾ ಕೀ ಜೈ!

ಅಟಲ್‌ ಜೀ ನಮ್ಮನ್ನು ಬಿಟ್ಟುಹೋಗಿದ್ದಾರೆಂದು ಕೊರಗಬೇಕಿಲ್ಲ. ಯಾವ ಕ್ಷಣದಲ್ಲೂ, ಯಾವ ಸಾಲನ್ನು ಓದಿದರೂ ಮೈ ರೋಮಾಂಚನಗೊಳಿಸುವಂಥ ಅದ್ಭುತ, ಸ್ಮರಣೀಯ ಕವಿತೆಗಳನ್ನು ನಮಗಾಗಿ ಬಿಟ್ಟುಹೋಗಿದ್ದಾರೆ. ಅವರ ಆತ್ಮವೇ ಈ ಕವಿತೆಗಳಲ್ಲಿದೆ ಮತ್ತು ಅವು ಪ್ರತಿ ಸಲ ಓದಿದಾಗಲೂ ಹೊಸತು ಎಂದೇ ಅನ್ನಿಸುವಂತಿವೆ. ಹೊಚ್ಚಹೊಸ ಖುಷಿಯೊಂದನ್ನು ಅವು ನಮಗೆ ಕೊಡುತ್ತವೆ. ದೇಶಪ್ರೇಮವನ್ನು ನವೀಕರಿಸುತ್ತವೆ. ಯಾಕೆಂದರೆ ಅಟಲ್‌ಜೀಯವರ ಕಾವ್ಯಧರ್ಮವೇ ಅದು: ಗೀತ್‌ ನಯಾ ಗಾತಾ ಹೂn! ಗೀತ್‌ ನಯಾ ಗಾತಾ ಹೂn!

ಬ್ರಹ್ಮಪುತ್ರ

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.